Kudla City

ನೆರೆಯಲ್ಲೂ ಜನರ ಮನಸ್ಸು ಗೆದ್ದ ಜಲಜಾಕ್ಕ !

ಮನೆಗೆ ನೆಂಟರು ಬಂದರೆ ಸಂಜೆ ವಾಪಾಸ್ ಹೋಗ್ತಾ ರೋ.., ನಾಳೆ ಬೆಳಿಗ್ಗೆ ಹೋಗ್ತಾರಾ ಎಂದು ಲೆಕ್ಕ ಹಾಕುವ ಇಂದಿನ ದಿನಗಳಲ್ಲಿ ಮೊನ್ನೆ ಜಲಪ್ರವಾಹದಲ್ಲಿ ಮನೆ, ತೋಟ, ಗದ್ದೆ ಸರ್ವಸ್ವವನ್ನೂ ಕಳೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ತನ್ನ ಮನೆಯಲ್ಲೇ ನೆಲೆ, ಆಶ್ರಯ, ಊಟಾ ಉಪಚಾರ ಮಾಡುತ್ತಿರುವ ಇವರು ನಿಜಕ್ಕೂ ಶ್ರೇಷ್ಠರು.

ಮೊನ್ನೆ ಬೆಳ್ತಂಗಡಿ ಯ ದಿದುಪೇ, ಕುಕಾವು, ಮಕ್ಕಿ, ದೈಪಿತಿಲು, ಫರ್ಲ ಮುಂತಾದ ಕಡೆ ಮನೆ ಕಳೆದುಕೊಂಡ ಸುಮಾರು 56 ಮಂದಿ ನಿರಾಶ್ರಿತರಿಗೆ ತನ್ನ ಮನೆಯಲ್ಲೇ ( ಮೊನ್ನೆಯಿಂದ ಇಂದಿನವರೆಗೆ ಮತ್ತು ಇನ್ನೂ ಎಷ್ಟು ದಿನಗಳು ಅಂತ ಲೆಕ್ಕ ಹಾಕದೆ ) ಆಶ್ರಯ ನೀಡಿರುವ ಅಗರೀಮಾರ್ ಜಲಜಾಕ್ಷಿ ಎಂಬ ಇವರು ಸಮಾಜದ ಶ್ರೇಷ್ಠ ವ್ಯಕ್ತಿ ಮತ್ತು ಇವರೇ ನಿಜವಾದ ಸೆಲೆಬ್ರಿಟಿ….ಇಂತವರು ನಮ್ಮ ನಿಮ್ಮ ನಡುವೆ ಇದ್ದಾರೆ ಎಂಬುದೇ ಎಲ್ಲಕ್ಕಿಂತ ದೊಡ್ಡ ಕುಶಿ, ಸಂತೃಪ್ತಿಯ ವಿಚಾರ. ವಿಶೇಷ ಎಂದರೆ ಈ ನೆರೆಯಲ್ಲಿ ಅವರ ತೋಟ ಪೂರ್ಣ ಹೋಗಿದೆ. ಆದರೆ ದೊಡ್ಡ ಮನಸ್ಸಿನ ಜಲಜಾಕ್ಕ ಇದರ ಚಿಂತೆ ಮಾಡದೇ ಯಾರು ಬಂದರೂ ಕೂಡ ಹೊಟ್ಟೆ ಪೂರ್ತಿ ಊಟ,ತಿಂಡಿ ನೀಡುವ ಮೂಲಕ ಅಲ್ಲಿನ ಜನರ ಪಾಲಿಗೆ ಅನ್ನದಾತೆಯಾಗಿ ಕಾಣಿಸಿಕೊಂಡಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಕುಡ್ಲಕ್ಕೆ ಫ್ಲೆಕ್ಸ್ ಶಾಸಕರ ಕೊಡುಗೆ ಅಪಾರ

ಪ್ಲಾಸ್ಟಿಕ್ ಮುಕ್ತ ಮಂಗಳೂರು ಕಲ್ಪನೆಯ ಬಹಳ ಸುಂದರ ವಿಶೇಷವಾಗಿ ಬೆಳೆಯುತ್ತಿರುವ ಮಂಗಳೂರಿನ ಜನತೆಯಲ್ಲಿ ಇಂತಹ ಜಾಗೃತಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಆದರೆ ಮಂಗಳೂರು ದಕ್ಷಿಣ ಶಾಸಕರಾದ ಡಿ.ವೇದವ್ಯಾಸ ಕಾಮತರು ಪ್ಲಾಸ್ಟಿಕ್ ಮುಕ್ತ ನಗರದ ಕಲ್ಪನೆಗೆ ಪೂರ್ಣ ಪ್ರಮಾಣದ ವಿರೋಧ ಕಾರ್ಯಗಳನ್ನು ನಿರಂತರವಾಗಿ‌ ಮಾಡಲು ಹೊರಟಿದ್ದಾರೆ.
ನಗರದ ಉರ್ವದ ಸರಕಾರಿ ಕ್ವಾರ್ಟಸ್ ಬಳಿಯ ಒಂದೇ ರಸ್ತೆಯಲ್ಲಿ ನಾಲ್ಕು ಫ್ಲೆಕ್ಸ್ ಗಳನ್ನು ತಮ್ಮ ಆಗಮನದ ಕೆಲಸಕ್ಕೆ ಹಾಕಿಕೊಂಡು ಪರಿಸರ ಪ್ರೇಮವನ್ನು ಮೊಳಗಿಸಿದ್ದಾರೆ. ವಿಶೇಷ ಎಂದರೆ ಶಾಸಕರ ಇಂತಹ‌ ಪ್ರೇಮವೇ ಮಂಗಳೂರಿನ ನಾನಾ ಕಡೆಯಲ್ಲಿ ಇಂತಹ ಫ್ಲೆಕ್ಸ್ ಸಂಸ್ಕೃತಿ ನಿಧಾನವಾಗಿ ತಲೆ ಎತ್ತುತ್ತಿದೆ. ಜನರಿಂದ ಆಯ್ಕೆಯಾದ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರ ಈ ಕೆಲಸ ಬುದ್ದಿವಂತ ಮಂಗಳೂರಿನ ಜನತೆಗೆ ದಕ್ಕೆ ತಂದು ಕೊಡುತ್ತಿದೆ.

ಇಂತಹ ಫ್ಲೆಕ್ಸ್ ಗಳನ್ನು ತೆರವು ಮಾಡಬೇಕಾದ ಮನಪಾ ಅಧಿಕಾರಿಗಳು ಯಾವ ಕೆಲಸಕ್ಕೂ ಮುಂದೆ ಹೋಗದಿರುವುದು ಕುಡ್ಲದ ಜನರಲ್ಲಿ ಸಂದೇಹ ಮೂಡಿಸುವ ಕಾರ್ಯವಾಗುತ್ತಿದೆ. ಶಾಸಕರಿಗೊಂದು ನಿಯಮ ಜನರಿಗೊಂದು ನಿಯಮವೇ ಎಂದು ಕೇಳುವ ಹಂತಕ್ಕೆ ತಲುಪಿದೆ.
ಶಾಸಕರ ಅಭಿವೃದ್ಧಿ ಕಾರ್ಯಗಳು ಜನರಿಗೆ ಒಳ್ಳೆಯದಾಗಬೇಕೆ ಹೊರತು ಜನರಿಗೆ ಸಮಸ್ಯೆ ತಂದು ಹಾಕಕೂಡದು. ಬರೀ ಮಾತಿನ ಕೆಲಸ ಬಿಟ್ಟು ಶಾಸಕರು ತಮ್ಮ ಜವಾಬ್ದಾರಿ ಮೆರೆಯಬೇಕಾದ ಸಮಯವಿದು. ಕ್ಲೀನ್ ಮಂಗಳೂರು ಮಾಡಲು ಶಾಸಕರು ಮೊದಲು ಮನಸ್ಸು ಮಾಡಬೇಕು.

ಬಲೆ ರೆಡಿ ಇನ್ನು ಪರ್ಸಿನ್ ಮೀನುಗಾರಿಕೆ ಆರಂಭ

ಯಾಂತ್ರೀಕೃತ ಮೀನುಗಾರಿಕೆ ಸಮುದ್ರ ಪೂಜೆಯ ಬಳಿಕ ಸೋಮವಾರದಿಂದ ಪರ್ಸಿನ್ ಬೋಟುಗಳು ಮೀನುಗಾರಿಕೆ ಇಳಿಯಲಿದೆ. ಈಗಾಗಲೇ ಲಾರಿಗಳಿಗೆ ಬಲೆಯನ್ನು ತುಂಬಿಸುವ ಕೆಲಸ ಪೂರ್ಣಗೊಂಡಿದೆ. ಸೋಮವಾರ (august 19) ಧಾರ ಮೂಹೂರ್ತ ಬಳಿಕ ಮೀನುಗಾರಿಕೆಗೆ ಪರ್ಸಿನ್ ಬೋಟುಗಳು ಇಳಿಯಲಿದೆ.

ಕೋಮು ಸಾಮರಸ್ಯ ಅರಳಿಸಿದ ವಸ್ತು ಸೂರೆ!

ಕ್ರೈಸ್ತರು ಬೆಳೆಸಿದ ತರಕಾರಿ, ಮುಸ್ಲಿಂಮರು ಬೆಳೆಸಿದ ಹಣ್ಣು ಹಂಪಲು, ಹಿಂದೂಗಳು ಮಾಡಿದ ಕುರುಕಲು ತಿಂಡಿ ತಿನಸು ಜತೆಗೆ ಅದನ್ನು ಹೆಕ್ಕಿ ತೆಗೆದುಕೊಳ್ಳಲು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಪುಟಾಣಿಗಳು ಇದೆಲ್ಲ ಚಿತ್ರಣಗಳು ಕಾಣಿಸಿಕೊಂಡದ್ದು ಭಾನುವಾರ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ವಸ್ತು ಸೂರೆ ಕಾರ‍್ಯಕ್ರಮದಲ್ಲಿ.
ಹೌದು. ಬೋಳೂರಿನ ಶ್ರೀಧರ್ಮಭೂಮಿ ಪ್ರತಿಷ್ಠಾನ ಕಳೆದ 14 ವರ್ಷಗಳಿಂದ ನಿರಂತರವಾಗಿ ಈ ಸಂಘಟನೆ ಇಂತಹ ವಸ್ತುಸೂರೆ ಕಾರ‍್ಯಕ್ರಮದ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಭಾವನೆಯನ್ನು ಅರಳಿಸುವ ಉದಾತ್ತವಾದ ಚಿಂತನೆಯ ಮೂಲಕ ಕಾರ‍್ಯಕ್ರಮವನ್ನು ಸಂಘಟನೆ ಮಾಡುತ್ತಿದೆ. ವಿಶಿಷ್ಟ ಎಂದರೆ ಕುದ್ರೋಳಿ, ಉರ್ವ, ಬೊಕ್ಕಪಟ್ಣ, ಬೆಂಗ್ರೆ, ತಣ್ಣೀರು ಬಾವಿ ಸೇರಿದಂತೆ ಹತ್ತು ಹಲವು ಪ್ರದೇಶದಿಂದ ಈ ಕಾರ‍್ಯಕ್ರಮಕ್ಕೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ತೀರಾ ಬಡ ಕುಟುಂಬದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ವಸ್ತು ಸೂರೆಯಲ್ಲಿ ಸಿಗುವ ವಸ್ತುಗಳನ್ನು ಪಡೆದುಕೊಂಡು ಖುಷಿಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ.

ಇವರು ವೈದ್ಯರಲ್ಲ ಬಟ್ ಬಡವರ ಪಾಲಿನ ದೇವರು !

ಪುತ್ತೂರಿನ ಡಾ.ಶಿವರಾಮ ಭಟ್ ಅವರ ಕ್ಲಿನಿಕ್‌ನಲ್ಲಿರುವ ಕಂಪೌಂಡರ್ ಭಟ್ಟರು ಪುತ್ತೂರಿನ ಮಂದಿಗೆ ಚಿರಪರಿಚಿತ ಮುಖ. ಯಾವುದೇ ಕಾಯಿಲೆ ಇರಲಿ ಅವರು ನೀಡುವ ಮದ್ದು ರೋಗಿಯ ಕಾಯಿಲೆಗೆ ಗುಣಪಡಿಸುವ ಶಕ್ತಿಯಿದೆ. ಅವರ ನಗು ಮೊಗದ ಮಾತು ರೋಗಿಗೆ ಕಾಯಿಲೆಯಲ್ಲೂ ಹೊಸ ಚೈತನ್ಯ ನೀಡುತ್ತದೆ.
ಅವರ ಮದ್ದಿನ ರೇಟು ಕೂಡ ಬಹಳ ಕಡಿಮೆ. ಕೆಲವೊಂದು ಸಲ ಬಡವರು ಬಂದರೆ ಉಚಿತವಾಗಿ ಮದ್ದು ನೀಡಿದ ಉದಾಹರಣೆಗಳು ಸಾಕಷ್ಟಿದೆ. ಡಾ. ಶಿವರಾಮ ಭಟ್ ಅವರ ಕಾಲದಿಂದಲ್ಲೂ ಪುತ್ತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಡಾ. ಶಿವರಾಮ ಭಟ್ ಕ್ಲಿನಿಕ್‌ನಲ್ಲಿ ಕಂಪೌಂಡರ್ ಆಗಿದ್ದಾರೆ.
ಈಗ ಡಾ.ಶಿವರಾಮ ಭಟ್ಟರು ಇಲ್ಲ ಆದರೆ ಅವರ ಪುತ್ರ ಡಾ. ಶ್ಯಾಮ್ ಭಟ್ ಇದ್ದರೆ ಅವರಿಗೂ ಕಂಪೌಂಡರ್ ಭಟ್ಟರು ಎಂದರೆ ಅದೇ ಪ್ರೀತಿ. ರೋಗಿಗಳಿಗೂ ಅವರು ಎಂದರೆ ವಿಶೇಷ ಗೌರವ ಜತೆಗೆ ಅಪಾರ ಪ್ರೀತಿ.