ಇವರು ವೈದ್ಯರಲ್ಲ ಬಟ್ ಬಡವರ ಪಾಲಿನ ದೇವರು !

ಪುತ್ತೂರಿನ ಡಾ.ಶಿವರಾಮ ಭಟ್ ಅವರ ಕ್ಲಿನಿಕ್‌ನಲ್ಲಿರುವ ಕಂಪೌಂಡರ್ ಭಟ್ಟರು ಪುತ್ತೂರಿನ ಮಂದಿಗೆ ಚಿರಪರಿಚಿತ ಮುಖ. ಯಾವುದೇ ಕಾಯಿಲೆ ಇರಲಿ ಅವರು ನೀಡುವ ಮದ್ದು ರೋಗಿಯ ಕಾಯಿಲೆಗೆ ಗುಣಪಡಿಸುವ ಶಕ್ತಿಯಿದೆ. ಅವರ ನಗು ಮೊಗದ ಮಾತು ರೋಗಿಗೆ ಕಾಯಿಲೆಯಲ್ಲೂ ಹೊಸ ಚೈತನ್ಯ ನೀಡುತ್ತದೆ.
ಅವರ ಮದ್ದಿನ ರೇಟು ಕೂಡ ಬಹಳ ಕಡಿಮೆ. ಕೆಲವೊಂದು ಸಲ ಬಡವರು ಬಂದರೆ ಉಚಿತವಾಗಿ ಮದ್ದು ನೀಡಿದ ಉದಾಹರಣೆಗಳು ಸಾಕಷ್ಟಿದೆ. ಡಾ. ಶಿವರಾಮ ಭಟ್ ಅವರ ಕಾಲದಿಂದಲ್ಲೂ ಪುತ್ತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಡಾ. ಶಿವರಾಮ ಭಟ್ ಕ್ಲಿನಿಕ್‌ನಲ್ಲಿ ಕಂಪೌಂಡರ್ ಆಗಿದ್ದಾರೆ.
ಈಗ ಡಾ.ಶಿವರಾಮ ಭಟ್ಟರು ಇಲ್ಲ ಆದರೆ ಅವರ ಪುತ್ರ ಡಾ. ಶ್ಯಾಮ್ ಭಟ್ ಇದ್ದರೆ ಅವರಿಗೂ ಕಂಪೌಂಡರ್ ಭಟ್ಟರು ಎಂದರೆ ಅದೇ ಪ್ರೀತಿ. ರೋಗಿಗಳಿಗೂ ಅವರು ಎಂದರೆ ವಿಶೇಷ ಗೌರವ ಜತೆಗೆ ಅಪಾರ ಪ್ರೀತಿ.

Share