Kudla City

ಮೋದಿಗಾಗಿ 500 ಚೆಂಡು ಮಲ್ಲಿಗೆ ಕೊಟ್ಟ ಮುಸ್ಲಿಂ ಹೂ ವ್ಯಾಪಾರಿ

ಕುಡ್ಲದಲ್ಲಿ ಶ್ರೀಮಂತ ಮಾತ್ರವಲ್ಲ ಸಾಮಾನ್ಯ ಬಡವ ಕೂಡ ಪ್ರಧಾನಿ ನರೇಂದ್ರ ಮೋದಿಯಾಗಬೇಕು ಎಂದು ಕನಸ್ಸು ಕಾಣುತ್ತಾನೆ ಎನ್ನುವ ಮಾತಿಗೆ ಮತ್ತಷ್ಟು ಉದಾಹರಣೆ ಕಾಣಸಿಗುತ್ತಿದೆ.

ಹೌದು. ಕುಡ್ಲದ ಸಿಟಿ ಸೆಂಟರ್ ಮುಂಭಾಗದಲ್ಲಿರುವ ಲಲಿತ್ ಮಹಲ್ ಹೋಟೆಲ್ ಪಕ್ಕದಲ್ಲಿ ಹೂ ಮಾರಾಟ ಮಾಡುವ ಪಕೀರಬ್ಬ ಬೇಸಿಕಲಿ ದೊಡ್ಡ ಶ್ರೀಮಂತ ರಲ್ಲ ಹೂ ವ್ಯಾಪಾರ ಮಾಡುತ್ತಾ ಬದುಕು ಕಟ್ಟುವ ಮನುಷ್ಯ ಆದರೆ ಮೋದಿ ಪ್ರಧಾನಿ ಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದಾಕ್ಷಣ ತಾನು ಕೂಡ ಸೇವೆ ಮಾಡಲು ಇಳಿದು ಬಿಡುತ್ತಾರೆ.

ಗುರುವಾರ ಸಂಜೆ ಯಿಂದ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ತನಕ ಬರೋಬರಿ 500 ಚೆಂಡು ಮಲ್ಲಿಗೆಯನ್ನು ಉಚಿತವಾಗಿ ಮಹಿಳೆಯರಿಗೆ ನೀಡುವ ಕೆಲಸ ಮಾಡಿದ್ದಾರೆ. ಈ ಸೇವೆಗೆ ಹೆಚ್ಚು ಕಡಿಮೆ 50 ಸಾವಿರ ದಷ್ಟು ಖರ್ಚು ತಗಲಬಹುದು ಮೋದಿ‌ ದೇಶದ ಉದ್ದಾರಕ್ಕೆ ಸಾಕಷ್ಟು ಮಾಡಿದ್ದಾರೆ ನಾನು ಕೊಂಚ ಸೇವೆ ಮಾಡಬೇಕು ಎನ್ನುವ ಮೂಲಕ ಪಕೀರಬ್ಬ ಅಭಿಮಾನಿ ತೋರಿಸುತ್ತಾರೆ. ಅಂದಹಾಗೆ ಇವರು ಬೆಳ್ತಂಗಡಿಯವರು ಈಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಜಾನ್ ವೃತದಲ್ಲಿರವ ಪಕೀರಬ್ಬರಿಗೆ ಮೋದಿ ಮೇಲೆ ಅಪಾರ ನಂಬಿಕೆ.

ಪ್ರಧಾನಿ ಮೋದಿಗಾಗಿ ಸಾವಿರ ಮಂದಿಗೆ ಊಟ ಬಡಿಸಿದರು

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣ ಗುರುವಾರ ಮಧ್ಯಾಹ್ನ ಬಸ್‌ಗಳ ತಾಣದ ಬದಲಾಗಿ ಊಟೋಪಚಾರದ ತಾಣವಾಗಿ ಬದಲಾಗಿತ್ತು.

ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಮೀನು ಮಾರಾಟದ ಮಹಿಳೆಯರು, ಬಸ್ ಸಿಬ್ಬಂದಿಗಳು ಹೀಗೆ ಸ್ಟೇಟ್ ಬ್ಯಾಂಕ್ ಸುತ್ತಮುತ್ತ ಇರುವ 1250 ಕ್ಕೂ ಅಧಿಕ ಮಂದಿ ಊಟಕ್ಕೆ ಹಾಜರಾಗಿದ್ದರು. ಅನ್ನ, ಸಾರು, ಸಾಂಬಾರು, ಪಲ್ಯ,ಉಪ್ಪಿನ ಕಾಯಿ, ಪಾಯಸದಂತಹ ವಸ್ತುಗಳು ಊಟದಲ್ಲಿ ಕಾಣಿಸಿಕೊಂಡಿತು.

ಮಧ್ಯಾಹ್ನ 12.30ರಿಂದ 2.30 ರ ವರೆಗೆ ನಡೆದ ಉಚಿತ ಊಟೋಪಾಚಾರ ಸೇವೆ ನಡೆಯಿತು. ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಕಿಶೋರ್ ಕುಮಾರ್ ಶಕ್ತಿನಗರ, ಗುಣಕರ ಪೂಜಾರಿ ಪೆರ್ಮಂಕಿ ಸೇರಿದಂತೆ ಹತ್ತಾರು ಬಸ್ ಏಜೆಂಟ್‌ಗಳು ಈ ಕಾರ‍್ಯದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.

ಪ್ರಧಾನಿ ಮೋದಿಗೆ ಕುಡ್ಲದ ಬಸ್ ಚಾಲಕನ ವಿಶಿಷ್ಟ ಸೇವೆ

ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರ ಮೇ 30 ಕ್ಕೆ ನಡೆಯಲಿದೆ. ದೇಶದ ಜನರು ಒಂದೊಂದು ರೀತಿಯಲ್ಲಿ ಸಂಭ್ರಮ ಪಡುತ್ತಿದ್ದಾರೆ. ಮಂಗಳೂರಿನ ಬಸ್ ಚಾಲಕರೊಬ್ಬರು ವಿಶಿಷ್ಟ ರೀತಿಯ ಸೇವೆಗೆ ಮುಂದಾಗಿದ್ದಾರೆ.

30 ರ ಇಡೀ ದಿನ ಮಂಗಳೂರು ಟು ಮೂಡಬಿದಿರೆ,ಕಿನ್ನಿಗೋಳಿ ಹೋಗುವ ಕೋಟ್ಯಾನ್ ಬಸ್ ಪ್ರಯಾಣಿಕರ ನ್ನು ಬೆಳಗ್ಗೆಯಿಂದ ಸಂಜೆಯ ತನಕ ಉಚಿತವಾಗಿ ಪ್ರಯಾಣಿಕರನ್ನು ಸಾಗಿಸಲಿದೆ. ಅಂದಹಾಗೆ ಇಂತಹ ಉಚಿತ ಸೇವೆಯನ್ನು ಬಸ್ ಮಾಲೀಕರು ನೀಡುತ್ತಿಲ್ಲ ಬದಲಾಗಿ ಬಸ್ ಚಾಲಕ ಶ್ರೀಕಾಂತ್ ಬಳವಿನ ಗುಡ್ಡೆ ಮಾಡುತ್ತಿದ್ದಾರೆ.

ಅಂದಹಾಗೆ ಕಳೆದ ಸಲ‌ ಕೂಡ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವಾಗ ಮಂಗಳಾದೇವಿ ಟು ಕಾವೂರು ತನಕ ಬಸ್ ಸೇವೆಯನ್ನು ಉಚಿತವಾಗಿ ನೀಡುವ ಕೆಲಸ ಮಾಡಿದ್ದರು. ಅವರು ಹೇಳುವಂತೆ ಮೋದಿ ದೇಶದ ಜನತೆಗೆ ಇಷ್ಟು ಮಾಡುವಾಗ ನಾನು ಮಾಡುವ ಸೇವೆ ಬಹಳ ಕಡಿಮೆ.

ಕುಡ್ಲದವರಿಗೆ ಮಾತ್ರ ಗೊತ್ತು ಎಂಕುನ ಕತೆ !

ತುಳುನಾಡಿನ ಪ್ರತಿಯೊಬ್ಬನಲ್ಲಿಯೂ ಕೇಳಿ ನೋಡಿ. ಎಂಕು ಯಾಕೆ ಪಣಂಬೂರಿಗೆ ಹೋದ ಅರ್ಥಾತ್‌ ಎಂಕು ಪಣಂಬೂರು ಹೋದ ಕತೆಯನ್ನು ಪೂರ್ತಿಯಾಗಿ ಕೇಳಬೇಕಾದರೆ ಕುಡ್ಲದ ವ್ಯಕ್ತಿಗಳನ್ನು ಹಿಡಿದು ಕೇಳಿ ಎಂಕು ನ ಪೂರ್ತಿ ಕತೆ ಹೊರಬರುತ್ತದೆ.

ಕುಡ್ಲದ ಮಂದಿ ಜಾಸ್ತಿಯಾಗಿ ಈ ಪದವನ್ನು ಪದೇ ಪದೇ‌ ಪ್ರಯೋಗ ಮಾಡುತ್ತಾರೆ. ಯಾಕೆ ಅಂತಾ ಅವರಲ್ಲಿ ಕೇಳಿ‌ ತಿಳಿದುಕೊಳ್ಳಿ.

ಇನ್ನು ಸ್ಕೂಲ್ ಗೆ ಹೊರಡುವ ಸಮಯ

ಇಂದಿನಿಂದ ಸರಕಾರ ಶಾಲೆಗಳಲ್ಲಿ ವಿದ್ಯಾರ್ಥಿ ಗಳು ಬರಲಿದ್ದಾರೆ. ಹೌದು. ಇಂದಿನಿಂದ ಶಾಲಾ ಆರಂಭ ನಡೆಯಲಿದೆ.
ಒಂದೆಡೆ ಬಿರು ಬಿಸಿಲು ಜತೆಗೆ ಮಳೆರಾಯ ಕೃಪೆ ತೋರಿಸದ ಪರಿಣಾಮ ಪುಟಾಣಿ ಮಕ್ಕಳು ಶಾಲೆಯ ದಾರಿ ಹಿಡಿಯಲೇ ಬೇಕಾಗುತ್ತದೆ.

ಮುಖ್ಯವಾಗಿ ಕೆಲವೊಂದು ಖಾಸಗಿ ಶಾಲೆಗಳು ಆರಂಭ ಕೊಂಚ ತಡವಾಗುವ ಸಾಧ್ಯತೆಯಿದೆ. ಉಳಿದಂತೆ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕ ಬೇಗನೆ ಬಂದು ತಲುಪಿದೆ.