ಪ್ರಧಾನಿ ಮೋದಿಗೆ ಕುಡ್ಲದ ಬಸ್ ಚಾಲಕನ ವಿಶಿಷ್ಟ ಸೇವೆ

ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರ ಮೇ 30 ಕ್ಕೆ ನಡೆಯಲಿದೆ. ದೇಶದ ಜನರು ಒಂದೊಂದು ರೀತಿಯಲ್ಲಿ ಸಂಭ್ರಮ ಪಡುತ್ತಿದ್ದಾರೆ. ಮಂಗಳೂರಿನ ಬಸ್ ಚಾಲಕರೊಬ್ಬರು ವಿಶಿಷ್ಟ ರೀತಿಯ ಸೇವೆಗೆ ಮುಂದಾಗಿದ್ದಾರೆ.

30 ರ ಇಡೀ ದಿನ ಮಂಗಳೂರು ಟು ಮೂಡಬಿದಿರೆ,ಕಿನ್ನಿಗೋಳಿ ಹೋಗುವ ಕೋಟ್ಯಾನ್ ಬಸ್ ಪ್ರಯಾಣಿಕರ ನ್ನು ಬೆಳಗ್ಗೆಯಿಂದ ಸಂಜೆಯ ತನಕ ಉಚಿತವಾಗಿ ಪ್ರಯಾಣಿಕರನ್ನು ಸಾಗಿಸಲಿದೆ. ಅಂದಹಾಗೆ ಇಂತಹ ಉಚಿತ ಸೇವೆಯನ್ನು ಬಸ್ ಮಾಲೀಕರು ನೀಡುತ್ತಿಲ್ಲ ಬದಲಾಗಿ ಬಸ್ ಚಾಲಕ ಶ್ರೀಕಾಂತ್ ಬಳವಿನ ಗುಡ್ಡೆ ಮಾಡುತ್ತಿದ್ದಾರೆ.

ಅಂದಹಾಗೆ ಕಳೆದ ಸಲ‌ ಕೂಡ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವಾಗ ಮಂಗಳಾದೇವಿ ಟು ಕಾವೂರು ತನಕ ಬಸ್ ಸೇವೆಯನ್ನು ಉಚಿತವಾಗಿ ನೀಡುವ ಕೆಲಸ ಮಾಡಿದ್ದರು. ಅವರು ಹೇಳುವಂತೆ ಮೋದಿ ದೇಶದ ಜನತೆಗೆ ಇಷ್ಟು ಮಾಡುವಾಗ ನಾನು ಮಾಡುವ ಸೇವೆ ಬಹಳ ಕಡಿಮೆ.

Share