Kudla City

ಕುಡ್ಲದಲ್ಲಿ ಯಕ್ಷಗಾನ ಕಲಾವಿದರು ಓಡಿದರು !

ಮಂಗಳೂರಿನ ಮಂಗಳಾ ಕ್ರೀಡಾಂಗಣ ಯಕ್ಷಗಾನ ಕಲಾವಿದರಿಂದ ತುಂಬಿ ಹೋಗಿತ್ತು. ದ.ಕ, ಉಡುಪಿ, ಉ.ಕ. ಕಾಸರಗೋಡಿನ ಹೆಚ್ಚಿನ ಎಲ್ಲ ಮೇಳಗಳ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿದ್ದರು.

ಅಲ್ಲಿ ಯಕ್ಷಗಾನವಿರಲಿಲ್ಲ ಬದಲಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇಳಗಳ ಯಕ್ಷಗಾನ ಕಲಾವಿದರಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.

24 ಮೇಳಗಳ ಸದಸ್ಯರು ಕಾಣಿಸಿಕೊಂಡಿದ್ದಾರೆ. ಮಂದಾರ್ತಿ ಮೇಳ (ಎ)(ಬಿ), ಸಾಲಿಗ್ರಾಮ, ಕಟೀಲಿನ 6 ಮೇಳ, ಬಪ್ಪನಾಡು, ಸಸಿಹಿತ್ಲು , ಎಡನೀರು, ಕೂಡ್ಲು, ಮಲ್ಲ, ಕುತ್ಯಾಳ, ಬೆಂಕಿನಾಥೇಶ್ವರ ಮೇಳ, ಸುಂಕದಕಟ್ಟೆ ಮೇಳ, ಸೌಕೂರು, ಅಮೃತೇಶ್ವರಿ ಕೋಟ, ಮಾರಣಕಟ್ಟೆ ಮೇಳ, ಗೋಳಿಗರಡಿ,ಹಿರಿಯಡ್ಕ, ಮಡಾಮಕ್ಕಿ, ಧರ್ಮಸ್ಥಳ ಮೇಳಗಳ ಕಲಾವಿದರು ಭಾಗವಹಿಸಿದ್ದರು.

ಓಟ, ಉದ್ದಜಿಗಿತ, ಗುಂಡು ಎಸೆತ, ಬಾಂಬ್ ಇನ್‌ದ ಸಿಟಿ, ಸಂಗೀತ ಕುರ್ಚಿ, ರಿಲೇ, ಕ್ರಿಕೆಟ್, ಹಗ್ಗಜಗ್ಗಾಟ ಮೊದಲಾದ ಆಟಗಳಿದ್ದವು. ಸುಮಾರು 400 ಮಂದಿ ಕಲಾವಿದರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತರಾದ ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.

ಮೀನುಗಾರರಿಗೆ ಇನ್ನು ಎರಡು ತಿಂಗಳು ರಜೆ

ಮತ್ತೇ ಮೀನುಗಾರರಿಗೆ ಎರಡು ತಿಂಗಳ ರಜೆ ಘೋಷಣೆಯಾಗಿದೆ. ಜೂನ್1 ರಿಂದ ಜುಲೈ ಕೊನೆಯ ವರೆಗೆ ಯಾಂತ್ರಿಕೃತ ಬೋಟ್ ಗಳು ಮೀನು ಹಿಡಿಯುವ ಆಗಿಲ್ಲ. ಈ ಸಮಯದಲ್ಲಿ ನಾಡದೋಣಿಗಳಿಗೆ ಮಾತ್ರ ಅವಕಾಶವಿದೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಪರ್ಸಿನ್ ಬೋಟುಗಳು ಐದು ತಿಂಗಳ ಮೊದಲೇ ಮೀನುಗಾರಿಕೆ ಹೋಗಿಲ್ಲ. ಒಟ್ಟಾರೆ ಈ ಬಾರಿಯಂತೂ ಮೀನುಗಾರರಿಗೆ ನಷ್ಟದ ವರ್ಷ ಎಂದೇ ಪರಿಗಣಿಸಬಹುದು.

ಕರಾವಳಿಯ 65 ಸರಕಾರಿ ಶಾಲೆಯಲ್ಲಿ ಇನ್ನು ಫುಲ್ ಇಂಗ್ಲಿಷ್

ಒಂದಲ್ಲ ಎರಡಲ್ಲ ದ.ಕ ಹಾಗೂ ಉಡುಪಿಯ 65 ಶಾಲೆಗಳಲ್ಲಿ ಇನ್ನು ಫುಲ್ ಇಂಗ್ಲೀಷ್ ಕಾಣಿಸಿಕೊಳ್ಳಲಿದೆ. ಮುಖ್ಯವಾಗಿ ದ.ಕದ 43 ಹಾಗೂ ಉಡುಪಿ ಯ 22 ಶಾಲೆಗಳು ಈ ಸರ್ತಿ ಎಲ್ ಕೆಜಿಯಿಂದ ಹತ್ತನೇಯ ತರಗತಿಯ ವರೆಗೆ ಇಂಗ್ಲೀಷ್ ಮಾಧ್ಯಮ ವಾಗಿ ಬದಲಾಗಲಿದೆ. ಈಗಾಗಲೇ 63 ದ.ಕದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಕುಡ್ಲದ ಪ್ರತಿಯೊಬ್ಬರು ಕೇಳುವ‌ ಮಾತು ಇಲ್ಲಡ್ ನೀರ್ ಉಂಡಾ?

ಕುಡ್ಲದ ಯಾವುದೇ ಮನೆ,ಕಚೇರಿ, ಹೋಟೆಲ್, ಬಸ್ ನಿಲ್ದಾಣ, ಮಾರುಕಟ್ಟೆ, ಮಾಲ್ ಎಲ್ಲಿ ಬೇಕಾದರೂ ಹೋಗಿ ಕೇಳುವ‌ ಮಾತು ಒಂದೇ ಇಲ್ಲಡ್ ನೀರ್ ಉಂಡಾ? ( ಮನೆಯಲ್ಲಿ ನೀರು ಉಂಟಾ), ಮನೆಗೆ ಸರಿಯಾಗಿ ನೀರು ಬರುತ್ತಾ, ಟ್ಯಾಂಕರ್ ನೀರು ತರಿಸುತ್ತಿರಾ? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳುವ ಮಂದಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಇದ್ದಾರೆ.

ಸಿಇಟಿಯಲ್ಲಿ ಕುಡ್ಲದ ವಿದ್ಯಾರ್ಥಿಗಳು ಹೇಗೆ ರ‍್ಯಾಂಕ್ ಪಡೆಯುತ್ತಾರೆ?

ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಟಾಪ್ 10 ನಲ್ಲಿ ಒಟ್ಟು 9 ರ‍್ಯಾಂಕ್‌ಗಳು ಬಂದಿವೆ. ಇದರಲ್ಲಿ ಮಂಗಳೂರಿನ ಎಕ್ಸ್‌ಫರ್ಟ್ ಕಾಲೇಜಿಗೆ 8 ರ‍್ಯಾಂಕ್ ಮತ್ತು ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ಒಂದು ರ‍್ಯಾಂಕ್ ಬಂದಿದೆ.

ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳಾದ ಆರ್.ಚಿನ್ಮಯ್ ಎಂಜಿನಿಯರಿಂಗ್ 2ನೇ ಮತ್ತು ಫಾರ್ಮಸಿಯಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ. ಭುವನ್ ವಿ.ಬಿ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 3ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ.

ಸಮರ್ಥ್ ಮಯ್ಯ ಎಂಜಿನಿಯರಿಂಗ್‌ನಲ್ಲಿ 5ನೇ ರ‍್ಯಾಂಕ್, ಆಶಯ್ ಜೈನ್ ಸಿ.ಎ. ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 7ನೇ ರ‍್ಯಾಂಕ್, ಸುದೇಶ್ ಗೌಡ ಜೆ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 7ನೇ ರ‍್ಯಾಂಕ್, ಯಶ್ ಬನ್ನೂರು ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 9ನೇ ರ‍್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಎಸ್.ದರ್ಶನ್ ಸಮರ್ಥ ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ.