Kudla City

ನೇರಳೆ ಹಣ್ಣು ಮಾರುವ ಷಣ್ಮುಗ ಬಿಸಿನೆಸ್ ಟೆಕ್ನಿಕ್

ಕುಡ್ಲ ಸಿಟಿಯೊಳಗೆ ನೇರಳೆ ಹಣ್ಣು ಎಂಟ್ರಿಯಾಗಿದೆ. ಸೆಂಟ್ರಲ್ ಮಾರ್ಕೆಟ್ ಹೊರಭಾಗದಲ್ಲಿ ನೇರಳೆಹಣ್ಣು ಮಾರುವ ಮೂರು ನಾಲ್ಕು ಮಂದಿಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವ ವ್ಯಕ್ತಿ ಷಣ್ಮುಗ.

ವರ್ಷ 70 ದಾಟಿದರೂ ಕೂಡ ಬಿಸಿಲಿಗೆ ಕೂತು ನೇರಳೆಹಣ್ಣು ಮಾರುವ ಇವರು ಮಂಗಳೂರಿನ ಕಾರ್‌ಸ್ಟ್ರೀಟ್ ಕಡೆಯವರು ಅವರು 40 ವರ್ಷಗಳಿಂದ ಇಂತಹ ಹಣ್ಣುಗಳನ್ನು ಮಾರಾಟ ಮಾಡುವುದೇ ವ್ಯಾಪಾರ.

ಬರೀ ಒಂದು ತಿಂಗಳ ಕಾಲ ಮಾತ್ರ ಅವರು ನೇರಳೆ ಹಣ್ಣು ಮಾರುತ್ತಾರೆ. ಉಳಿದ ತಿಂಗಳುಗಳ ಕಾಲ ಉಳಿದ ಚಾಕಲೇಟ್ ಸೇರಿದಂತೆ ನಾನಾ ವ್ಯಾಪಾರ ಮಾಡುತ್ತಾರೆ. ತಿಂಗಳಿಗೊಂದು ವ್ಯಾಪಾರ ಷಣ್ಮುಗ ಅವರ ಬಿಸಿನೆಸ್ ಟೆಕ್ನಿಕ್.

ಈಗ ನೇರಳ ಹಣ್ಣಿನ ಸೀಸನ್ ಕಾಲು ಕೆಜಿಗೆ 7೦ ರೂನಂತೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಹುಬ್ಬಳ್ಳಿ, ತಿರುಪತಿಯಿಂದ ಈ ಹಣ್ಣುಗಳು ಬರುತ್ತದೆ. ಕರಾವಳಿಯಲ್ಲಿ ನೇರಳೆ ಹಣ್ಣು ದೊಡ್ಡ ಪ್ರಮಾಣದ್ಲಿ ಸಿಗುವುದಿಲ್ಲವಂತೆ ಕಳೆದ ಆರು ವರ್ಷಗಳಿಂದ ಕರಾವಳಿ ನೇರಳೆಹಣ್ಣು ಮಾರುಕಟ್ಟೆಗೆ ಬಂದಿಲ್ಲ ಎನ್ನುವುದು ಅವರ ಮಾತು.

ಅಂದಹಾಗೆ ನೇರಳೆಹಣ್ಣಿನ ಮಾರಾಟ ಸಮಯದಲ್ಲಿ ಷಣ್ಮುಗ ಅವರು ಹೇಳುವ ಒಂದೇ ಮಾತು ನೇರಳೆಹಣ್ಣು ಔಷಧೀಯ ಗುಣವನ್ನು ಹೊಂದಿದೆ ಎಂದು ಟಿವಿಯಲ್ಲಿ ಬರ‍್ತಾ ಇರುತ್ತದೆ ಎನ್ನುವುದು ಅವರ ಮಾತು.

ಅವರು ಹೇಳುವಂತೆ ನೇರಳೆಹಣ್ಣು ಸಕ್ಕರೆ ಕಾಯಿಲೆಗೆ, ರಕ್ತ ಹೀನತೆ, ರಕ್ತದ ಶುದ್ಧಿಕರಣ, ರಕ್ತದ ಒತ್ತಡ ತಗ್ಗಿಸುವುದು, ಹೊಟ್ಟೆ ಸಂಬಂಧಿಸಿದ ಕಾಯಿಲೆ ಸೇರಿದಂತೆ ಹತ್ತಾರು ರೋಗಗಳಿಗೆ ಇದು ದಿವ್ಯ ಔಷಧವಾಗಿದೆ.

ವಿಮಾನ ನಿಲ್ದಾಣ ದುರಂತಕ್ಕೆ ಭರ್ತಿ 9

ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿದ ಮಂಗಳೂರು ವಿಮಾನ ದುರಂತಕ್ಕೆ ಇದೀಗ 9 ವರ್ಷ ಕಳೆದಿದೆ. 2010 ಮೇ 22ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರಸ್ ವಿಮಾನ ದುರಂತಕ್ಕೀಡಾಗಿತ್ತು.

ವಿಮಾನ ದುಬೈಯಿಂದ ಮಂಗಳೂರಿಗೆ ಆಗಮಿಸಿತ್ತು. ಇನ್ನೇನು ವಿಮಾನ ಲ್ಯಾಂಡ್ ಆಗಲಿದೆ ಎನ್ನುವಷ್ಟರಲ್ಲಿ ರನ್ ವೇಯಿಂದ ಜಿಗಿದು ಇಬ್ಭಾಗವಾಗಿತ್ತು. ವಿಮಾನದಲ್ಲಿದ್ದ 166 ಮಂದಿಯಲ್ಲಿ 158 ಮಂದಿ ಸುಟ್ಟು ಕರಕಲಾಗಿದ್ದರು. ಸತ್ತವರಲ್ಲಿ ಏರ್ ಇಂಡಿಯಾದ ಪೈಲಟ್ ಸೇರಿದಂತೆ ಎಂಟು ಸಿಬ್ಬಂದಿಗಳಿದ್ದರು. ವಿಮಾನದಿಂದ ಜಿಗಿದು 8 ಮಂದಿ ಪವಾಡಸದೃಶ ಪಾರಾಗಿದ್ದರು.

ಸಾವಿಗೀಡಾದವರಲ್ಲಿ 135 ಮಂದಿ ವಯಸ್ಕರು, 19 ಮಂದಿ ಮಕ್ಕಳು ಹಾಗೂ 4 ಮಂದಿ ಪುಟಾಣಿಗಳಿದ್ದರು. ದುರಂತದ ಭೀಕರತೆ ಎಷ್ಟಿತೆಂದರೆ ಕೇವಲ 22 ಮೃತದೇಹಗಳ ಗುರುತು ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿತ್ತು. ಡಿಎನ್‌ಎ ಪರೀಕ್ಷೆಯ ಬಳಿಕವೂ 12 ಮೃತದೇಹಗಳು ಅನಾಥವಾಗಿದ್ದವು.

ನಂತರ ಕೂಳೂರು- ತಣ್ಣೀರುಬಾವಿ ರಸ್ತೆಯ ಪಕ್ಕದಲ್ಲೇ ಇರುವ ಸರಕಾರಿ ಜಾಗದಲ್ಲಿ ಅನಾಥ ಮೃತದೇಹಗಳಿಗೆ ಸರ್ವಧರ್ಮ ಪ್ರಾರ್ಥನೆ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ನಂತರ ಆ ಸ್ಥಳಕ್ಕೆ ವಿಮಾನ ದುರಂತ ಉದ್ಯಾನವನ ಎಂದು ಹೆಸರಿಟ್ಟು ದುರಂತದಲ್ಲಿ ಮಡಿದವರ ಸ್ಮರಣಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಯಿತು.

ನೆಟ್ ಇದ್ರೆ ತೆಂಗಿನ ಕಾಯಿ ಬೀಳೋದಿಲ್ಲ !

ಮಂಗಳೂರು ಮಾತ್ರವಲ್ಲ ಇಡೀ ಸಿಟಿಯಲ್ಲಿರುವವರ ಒಂದೇ ಸಮಸ್ಯೆ ಎಂದರೆ ತೆಂಗಿನ ಕಾಯಿ ಕೀಳುವ ಮಂದಿ ಸಿಗೋದಿಲ್ಲ ಸಿಕ್ಕರೂ ದೊಡ್ಡ ಮೊತ್ತವೇ ಕೊಡಬೇಕು.

ಅದರಲ್ಲೂ ಮುಖ್ಯವಾಗಿ ತೆಂಗಿನ ಕಾಯಿ ಮರಕ್ಕೆ ನೆಟ್ ವ್ಯವಸ್ಥೆ ಮಾಡಿದ್ರೆ ನೆಟ್‌ಗೆ ಕಾಯಿ ಬಿದ್ದಾಗ ತೆಗೆಯಬಹುದು ಜತೆಯಲ್ಲಿ ಅಪ್ಪಿತಪ್ಪಿ ತಲೆಗೆ ಬೀಳುವ ಕಾಯಿಯಿಂದಲ್ಲೂ ಭದ್ರತೆ ಸಿಗುತ್ತದೆ. ಇಂತಹ ನೆಟ್ ವ್ಯವಸ್ಥೆಗೆ ದೂರದವರನ್ನು ಕರೆಸಿಕೊಂಡು ಕೈ ತುಂಬಾ ಹಣ ಕೊಡಬೇಕಾಗಿಲ್ಲ.

ಉತ್ತಮ ಗುಣಮಟ್ಟದ ನೆಟ್ ಜತೆಗೆ ಕಾರ್ಮಿಕರು ನಿಮ್ಮ ಮನೆಗೆ ಬಂದು ಅದನ್ನು ಅಳವಡಿಸಿಕೊಂಡು ಹೋಗುವ ವ್ಯವಸ್ಥೆಯಿದೆ. ಮಂಗಳೂರು ಮಾತ್ರವಲ್ಲ ನಿಮ್ಮ ಊರು ಯಾವುದೇ ಇರಲಿ ಅಲ್ಲಿಗೆ ಬಂದು ಅಳವಡಿಸುವ ತಂಡವಿದೆ.

ಮುಖ್ಯವಾಗಿ ಬಾಲ್ಕನಿ ನೆಟ್, ಗ್ಲಾಸ್ ಸೇಫ್ಟಿ ನೆಟ್,ಬರ್ಡ್ಸ್ ಪ್ರೋಟೆಕ್ಷನ್ ನೆಟ್, ಸ್ಪೋಟ್ಸ್ ನೆಟ್, ಸ್ಟೇರ್‌ಕೇಸ್ ನೆಟ್ ಹೀಗೆ ಹತ್ತಾರು ಬಗೆಯ ನೆಟ್ ಅಳವಡಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಾಗರಾಜ್ ಅವರನ್ನು ಸಂಪರ್ಕ ಮಾಡಿ 8453356106, 6362978916.

ಮಂಗಳೂರಿನ ಮತ ಏಣಿಕೆ ಕೇಂದ್ರ ಹೇಗಿದೆ ಗೊತ್ತಾ?

ಲೋಕಸಭೆಯ ಚುನಾವಣೆ ಮುಗಿದು ಇನ್ನು ಒಂದೇ ದಿನದಲ್ಲಿ ಫಲಿತಾಂಶ ಹೊರಬರಲಿದೆ. ಸಾಕಷ್ಟು ಕುತೂಹಲ ಕಾತರದ ಜತೆಯಲ್ಲಿ ಇಷ್ಟು ದಿನ ಮಂಗಳೂರಿನ ಲೋಕಸಭೆಯ ಮತದಾರ ಹಾಕಿದ ಮತಗಳನ್ನು ಯಾವ ರೀತಿಯಲ್ಲಿ ಜೋಪಾನ ಮಾಡಲಾಗಿದೆ ಹಾಗೂ ಅದರ ಭದ್ರತೆಯ ವಿಚಾರವಂತೂ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ಮಂಗಳೂರಿನ ಎನ್‌ಐಟಿಕೆಯಲ್ಲಿ ವಿಶಿಷ್ಟ ಭದ್ರತೆಯ ಜತೆಯಲ್ಲಿ ಈ ಮತ ಏಣಿಕೆಯ ಕಾರ‍್ಯಗಳು ಸಾಗಲಿದೆ. ಮೇ 22ರ ಸಂಜೆ 6ರಿಂದ ಮೇ 24ರ ಸಂಜೆ 6 ಗಂಟೆಯ ತನಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಶಿಕ್ಷಣ ರಂಗದ ಮೇರು ಶಿಖರ ಬಿಜಿಎಸ್ ಶಿಕ್ಷಣ ಸಂಸ್ಥೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೌಲ್ಯಯುತ ಮತ್ತು ಸಂಸ್ಕಾರಯುಕ್ತ ಶಿಕ್ಷಣ ನೀಡಿದ ಹೆಗ್ಗಳಿಕೆ ಬಿಜಿಎಸ್ ಶಿಕ್ಷಣ ಸಂಸ್ಥೆಗಳದ್ದು, ಮಂಗಳೂರಿನ ಕಾವೂರು ಗಾಂಧಿ ನಗರದ ಬಿಜಿಎಸ್ ಸಂಸ್ಥೆಯು ವಿದ್ಯಾರ್ಥಿಗಳನ್ನು ಕೇವಲ ಜ್ಞಾನವಂತರನ್ನಾಗಿ ಮಾಡುವುದಲ್ಲದೇ ಪ್ರತಿಭಾವಂತರನ್ನಾಗಿಯೂ ಮಾಡುತ್ತದೆ.

ಕಾವೂರಿನ ದೋಟದ ಗುಡ್ಡದಲ್ಲಿ ಬಿಜಿಎಸ್ ವಿದ್ಯಾಗಿರಿ ತಲೆ ಎತ್ತಿ ನಿಂತಿದೆ. ಸುಮಾರು 8 ಎಕರೆಯ ಬೃಹತ್ ಕ್ಯಾಂಪಸ್‌ನ ವಿದ್ಯಾಗಿರಿಯಲ್ಲಿ ಅತ್ಯಾಧುನಿಕ ವ್ಯವಸ್ಥೆವುಳ್ಳ ಬಿಜಿಎಸ್ ಪಿಯು ಕಾಲೇಜ್ ಹಾಗೂ ಪ್ರಥಮದರ್ಜೆ ಕಾಲೇಜನ್ನು ಹೊಂದಿದೆ. ಪಿಯು ವಿಭಾಗದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ತೆರೆದಿದ್ದು, ಪಿಸಿಎಂಬಿ, ಪಿಸಿಎಂಸಿ ಹಾಗೂ ಪಿಸಿಎಂಎಸ್, ಹಾಗೂ ವಾಣಿಜ್ಯ ವಿಭಾಗದಲ್ಲಿ ಇಬಿಈಸ್, ಇಬಿಎಸಿ ತರಗತಿಗಳು ಅನುಭವಿ ಉಪನ್ಯಾಸಕರಿಂದ ನಡೆಯುತ್ತಿದೆ.

ಇದರೊಂದಿಗೆ ಸಿಇಟಿ, ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಪದವಿ ಹಂತದಲ್ಲಿ ಸಿಎ, ಸಿಪಿಟಿ ಕೋಚಿಂಗ್ ತರಬೇತಿಗಳನ್ನು ನಡೆಸಲಾಗುತ್ತದೆ.

ಕಾವೂರಿನಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾಮಠದ ಆವರಣದಲ್ಲಿ ಸುಸಜ್ಜಿತವಾದ ಕಟ್ಟಡ ಹೊಂದಿದ್ದು, ಅಲ್ಲಿ ರಾಜ್ಯ ಪಠ್ಯಕ್ರಮದ ಬಿಜಿಎಸ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ನಡೆಸಲಾಗುತ್ತಿದೆ. ಉತ್ತಮ ಪರಿಸರ, ಪ್ರಾಣಿ, ಪಕ್ಷಿಗಳ ನಡುವೆ ಮನೋಹರವಾದ ವಾತಾವರಣದೊಂದಿಗೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಹೊಂದಿದ್ದು ಮಕ್ಕಳ ಸರ್ವಾಂಗೀಣ ಅಭಿವೃದಿ ಪಥಕ್ಕೆ ನಾಂದಿಯನ್ನುಂಟು ಮಾಡುತ್ತಿದೆ.