Kudla City

ಕುಡ್ಲದ ಫಸ್ಟ್ ಜೈವಿಕ ಇಂಧನದ ಸಿಟಿ ಬಸ್ !

ಕುಡ್ಲದ ಫಸ್ಟ್ ಜೈವಿಕ ಇಂಧನದ ಸಿಟಿ ಬಸ್ ! ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿ ಈಗಾಗಲೇ ಜೈವಿಕ ಇಂಧನದ ಬಸ್‌ಗಳು ಓಡಾಡುತ್ತಿದೆ. ಆದರೆ ಮೊದಲ ಬಾರಿಗೆ ಮಂಗಳೂರಿನ ಸಿಟಿ ಬಸ್‌ನಲ್ಲಿ ಜೈವಿಕ ಇಂಧನದ ಬಳಕೆಯ ಮೂಲಕ ಮಾಲಿನ್ಯತೆ, ಇಂಧನ ಉಳಿಕೆ ಹಾಗೂ ಹಣದ ಉಳಿತಾಯಕ್ಕೂ ಇದು ಸಹಕಾರಿಯಾಗಲಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್- ಮಂಗಳಾದೇವಿ ಕಡೆಗೆ ಓಡುವ ಸಿಟಿ ಬಸ್‌ನಲ್ಲಿ ಶೇ.೮೦ ಡಿಸೇಲ್ ಜತೆಗೆ ಶೇ.೨೦ ಜೈವಿಕ ಈಂಧನ ಬಳಕೆ ಮಾಡಲಾಗುತ್ತಿದೆ. ಮುಂದೆ ಇದರ ಪ್ರಮಾಣ ಜಾಸ್ತಿಯಾಗಲಿದೆ ಎನ್ನುವುದು ಮಂಗಳೂರು ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳುತ್ತಾರೆ. ಜೈವಿಕ ಇಂಧನಗಳೆಂದರೆ ಜೈವಿಕ ಎಥೆನಾಲ ಹಾಗೂ ಬಯೋ ಡೀಸೆಲ. ಎಥೆನಾಲ್‌ನ್ನು ಪೆಟ್ರೋಲ್ ನೊಂದಿಗೆ ಬೆರೆಸಿದರೆ, ಬಯೋ ಡೀಸೆಲ್‌ನ್ನು ಡೀಸೆಲ್‌ನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಎಥೆನಾಲ್ ವಾಹನ ಇಂಧನಕ್ಕೆ ಪೂರಕವಾಗಿ ಬಳಸಬಹುದಾದ ಇಂಧನವಾದರೆ, ಬಯೋ ಡೀಸೆಲ ಪೆಟ್ರೋಲಿಯಂಗೆ ಪರ್ಯಾಯವಾಗಿ ಬಳಸಬಹುದಾದ ಇಂಧನ. ಬಯೋ ಎಥೆನಾಲ ಯುಎಸ್‌ಎ ಮತ್ತು ಬ್ರೆಜಿಲ್‌ನಲ್ಲಿ ಹೆಚ್ಚು ಬಳಕೆಯಾಗುತ್ತದೆ. ಸಕ್ಕರೆ ಅಂಶವಿರುವ ಸಸ್ಯೋತ್ಪನ್ನ ಕಬ್ಬು, ಕಬ್ಬಿನ ತ್ಯಾಜ್ಯವಾದ ಕಾಕಂಬಿ, ಜೋಳ, ಬೀಟ್‌ರೂಟ್, ಮೆಕ್ಕೆ ಜೋಳ, ತಾಳೆ ಮೊದಲಾದವುಗಳಿಂದ ಎಥೆನಾಲ್ ಉತ್ಪಾದನೆ ಮಾಡಬಹುದಾಗಿದೆ. ನಗರದ ಸಿಟಿ ಬಸ್‌ಗಳಿಗೆ ಉಪಯೋಗಿಸುವ ಬಯೋ ಡೀಸೆಲ್ ಹೋಟೆಲ್ ಗಳಲ್ಲಿ ಬಳಕೆ ಮಾಡಿದ ಅಡುಗೆ ಅನಿಲದಿಂದ ತಯಾರಿಸಲಾಗುತ್ತಿದೆ. ನಿಟ್ಟೆಯ ಎನ್‌ಎಂಎಎಂಐಟಿ ಸಂಸ್ಥೆಯು ಬಿಆರ್‌ಐಡಿಸಿ ವಿಭಾಗದಲ್ಲಿ ಬಯೋ ಡೀಸೆಲ್ ತಯಾರಿಸುತ್ತಿದೆ. ಈ ಯುನಿಟ್‌ನಲ್ಲಿ ತಿಂಗಳಿಗೆ 600 ರಿಂದ 700 ಲೀ. ಬಯೋ ಡೀಸೆಲ್ ತಯಾರಿಸಲಾಗುತ್ತಿದೆ.

ಪೋಲಿಸ್ ಠಾಣೆಯಲ್ಲಿ ನಡೆಯಿತು ಸೀಮಂತ !

ತುಳುನಾಡ ಕಟ್ಟು ಕಟ್ಟಳೆಗಳಲ್ಲಿ ಸೀಮಂತ ಕೂಡಾ ಒಂದು. ಮದುವೆಯಾದ ಹೆಣ್ಮಗಳು ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಸೀಮಂತ ಹಾಕುವ ಕ್ರಮವಿದೆ.

ಇಂತಹುದೇ ಒಂದು ಸೀಮಂತ ವಿಟ್ಲ ಪೊಲೀಸ್ ಠಾಣೆಯಲ್ಲಿ ಅದ್ಧೂರಿಯಾಗಿಯೇ ನಡೆಯಿತು. ಅಂದ ಹಾಗೆ ಸೀಮಂತದ ನಾಯಕಿ ಬೇರಾರೂ ಅಲ್ಲ..! ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷದಿಂದ ಹೋಮ್ ಗಾರ್ಡ್ ಸಿಬ್ಬಂದಿ ಆಗಿರುವ ಪ್ರಸ್ತುತ ತುಂಬು ಗರ್ಬಿಣಿ ಶ್ರೀಮತಿ ಮಲ್ಲಿಕಾ ಅವರು.

ಕೊಡಂಗಾಯಿ ಪಳ್ಳಿಗದ್ದೆ ಕೊರಗಪ್ಪ ಗೌಡ ಇಂದಿರಾ ದಂಪತಿ ಪುತ್ರಿಯಾಗಿರುವ ಮಲ್ಲಿಕಾ ಅವರನ್ನು ಪುತ್ತೂರು ಕೆಮ್ಮಾಯಿಯ ಕೇಶವರಿಗೆ ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಲ್ಲಿ ಕಳೆದ ತಿಂಗಳೇ ಸೀಮಂತವಾಗಿತ್ತು. ಆದರೆ ವಿಟ್ಲ ಪೊಲೀಸರು ತುಂಬು ಗರ್ಬಿಣಿ ಮಲ್ಲಿಕಾರಿಗೆ ಠಾಣೆಯಲ್ಲೇ ಸೀಮಂತ ಮಾಡುವ ಮೂಲಕ ವೈಶಿಷ್ಟ್ಯತೆ ಮೆರೆದಿದ್ದಾರೆ.

ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ಹಾಗೂ ಸಿಬ್ಬಂದಿಗಳು ಮಲ್ಲಿಕಾ ಅವರಿಗೆ ಅದ್ದೂರಿ ಸೀಮಂತ ಮಾಡಿಸಿದರು. ಮಹಿಳಾ ಪೊಲೀಸರು ಹಣೆಗೆ ಕುಂಕುಮದ ತಿಲಕವಿಟ್ಟು ತಲೆಗೆ ಚೆಂಡು ಮಲ್ಲಿಗೆ ತೊಡಿಸಿದರು. ಹೂವು ಸೀರೆ ಕೊಟ್ಟರು. ಎಲೆ ಅಡಿಕೆಯನ್ನು ಕೈಗೆ ನೀಡಿದರು. ಸಿಹಿ ವಿತರಿಸಿದರು. ಗೌಜಿಯ ಸೀಮಂತಕ್ಕೆ ಠಾಣೆ ಸಾಕ್ಷಿಯಾಯಿತು.

ಚಿತ್ರ,ಮಾಹಿತಿ: ರಶೀದ್ ವಿಟ್ಲ

ವಿಶ್ವ ಚಾಂಪಿಯನ್ ಶಿಪ್ ತಂಡದಲ್ಲಿ ಕುಡ್ಲದ ಪೊಣ್ಣು !

ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಭಾರತ ತಂಡದ 25 ಸದಸ್ಯರಲ್ಲಿ ಕುಡ್ಲದ ಓಟಗಾರ್ತಿ ಎಂ.ಆರ್.ಪೂವಮ್ಮ ಆಯ್ಕೆಯಾಗಿದ್ದಾರೆ. ಈಗಾಗಲೇ ಹಲವು ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ಪೂವಮ್ಮ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾ ಬದುಕು ಆರಂಭಿಸಿದವರು.

ಮದರ್ ತೆರೇಸಾ ಶಾಲೆ ಕಟ್ಟಿದ ಶಿಕ್ಷಕಿಯರು !

ಕುಂದಾಪುರದ ಶಂಕರನಾರಾಯಣದಲ್ಲಿ ಮದರ್ ತೆರೇಸಾ ಎನ್ನುವ ಶಾಲೆಯ ನಿರ್ಮಾಣದಲ್ಲಿ ದುಡಿದವರು ಇಬ್ಬರು ಶಿಕ್ಷಕಿಯರು ರೆನಿಟಾ ಹಾಗೂ ಶಮಿತಾ. ಶಿಕ್ಷಕರ ದಿನಾಚರಣೆಯಲ್ಲಿ ಇಬ್ಬರ ಸಾಹಸ ಕತೆ ನಿಮ್ಮ ಮುಂದೆ ಇಡಲಾಗುತ್ತಿದೆ. ರೆನಿಟಾ ಮತ್ತು ಶಮಿತಾ 1995 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಿಂದ ಪದವಿ ಪಡೆದರು.
ಈ ಇಬ್ಬರು ಯುವತಿಯರು 1996ರಲ್ಲಿ ಬೆಂಗಳೂರಿನ ರಾಮನಗರದಲ್ಲಿರುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ಆದರೆ ಈ ಶಾಲೆಯನ್ನು ಕಾಲಕ್ರಮೇಣ ಮುಚ್ಚಲಾಯಿತು. ಅಲ್ಲಿಂದ ಅವರು ಕುಂದಾಪುರಕ್ಕೆ ಬಂದರು.
ಅಲ್ಲಿನ ಶಂಕರನಾರಾಯಣ ಎಂಬ ಹಳ್ಳಿಯಲ್ಲಿ ಎಲ್.ಕೆ.ಜಿ ಮತ್ತು ಒಂದನೇ ತರಗತಿಯನ್ನು ಪ್ರಾರಂಭಿಸಲು ಅವರು ನಿರ್ಧರಿಸಿದರು. ಹಳ್ಳಿಯಲ್ಲಿ ಸ್ಥಳಾವಕಾಶದ ತೊಂದರೆ ಇದ್ದುದರಿಂದ, ಅವರು ಶಂಕರನಾರಾಯಣ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ಭೇಟಿಯಾದರು. ನಂತರ ಅವರು ತಮ್ಮ ಶಾಲೆಯನ್ನು ಜಿಎಸ್ ಆಚಾರ್ಯ ರಂಗಮಂದಿರದಲ್ಲಿ ಮಾಸಿಕ 300 ರೂ. ಬಾಡಿಗೆಗೆ ಪ್ರಾರಂಭಿಸಲು ಅನುವು ಮಾಡಿಕೊಟ್ಟರು.

ಮದರ್ ಥೆರೆಸಾ ಅವರ ಹೆಸರಿನ ಈ ಶಾಲೆ ಪ್ರಾರಂಭವಾಯಿತು. 1998 ರಲ್ಲಿ 12 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶಾಲೆ ಈಗ ಎಲ್‌ಕೆಜಿಯಿಂದ ಪಿಯು ತರಗತಿಯವರೆಗೆ 1050ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯಾಗಿ ಬೆಳೆದಿದೆ. ಶಂಕರನಾರಾಯಣ ಸುತ್ತಮುತ್ತಲಿನ 42 ಹಳ್ಳಿಗಳ ವಿದ್ಯಾರ್ಥಿಗಳು ಮತ್ತು ನಾನಾ ಸ್ಥಳಗಳಿಂದ ಇಲ್ಲಿ ಕೆಲಸಕ್ಕೆ ಬಂದ ಕೂಲಿಗಳ ಮಕ್ಕಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿಶೇಷ ಎಂದರೆ ಈ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುವ ಎಲ್ಲರೂ ಮಹಿಳಾ ಮಣಿಗಳೇ ಆಗಿದ್ದಾರೆ.

ತುಳುನಾಡಿನ ಓಲೆ ಬೆಲ್ಲ ಸಿಹಿಯಲ್ಲೂ ಪೂರ್ಣ ಆರೋಗ್ಯ

ಜಗತ್ತಿನ ಬಹುತೇಕ ಹಣ್ಣುಗಳ ರಸ, ಸುವಾಸನೆ ಗಳನ್ನು ಕೃತಕವಾಗಿ ತಯಾರಿಸಬಹುದು. ಆದರೆ, ಓಲೆ ಬೆಲ್ಲ ಮಾತ್ರ ಯಾವುದೇ ಕೃತಕ ವಿಧಾನಗಳಿಂದಲೂ ಸೃಷ್ಟಿಸಲಾಗದ ಅಪ್ಪಟ ದೇಸೀ ಉತ್ಪನ್ನ. ಅಚ್ಚುಬೆಲ್ಲ ಮತ್ತು ನೀರು ನೀಡಿ ಅತಿಥಿಗಳನ್ನು ಸ್ವಾಗತಿಸುವುದು ತುಳುನಾಡಿನ ಜನರ ಸಂಪ್ರದಾಯದ ಒಂದು ಭಾಗವಾದರೆ ಓಲೆಬೆಲ್ಲ ಶಾರೀರಿಕ ಆರೋಗ್ಯದ ವಿಚಾರದಲ್ಲಿ ವಿಶೇಷ ಮಹತ್ವ, ಸ್ಥಾನಮಾನ ಪಡೆದುಕೊಂಡಿದೆ. ಹೆರಿಗೆಯ ಬಳಿಕ ನಡೆಸಬೇಕಾದ ಬಾಣಂತನದಲ್ಲಂತೂ ಓಲೆ ಬೆಲ್ಲವೇ ಪ್ರಧಾನ.
ಅದೂ ಆಧುನಿಕತೆಯ ಈ ಕಾಲದಲ್ಲಯೂ ಸಹ ಉಳಿದುಕೊಂಡಿದೆ. ಕ್ಯಾಲ್ಸಿಯಂ ಹೇರಳವಾಗಿರುವ ಓಲೆಬೆಲ್ಲ ದೇಹದ ಹಲವಾರು ಸಮಸ್ಯೆಗಳಿಗೆ ನಾಟಿ ಹಾಗೂ ಆಯುರ್ವೇದ ಔಷಧಿಯ ರೂಪದಲ್ಲಿ ಬಳಸಲ್ಪಡುತ್ತದೆ. ಬಾಯಿ ಸಿಹಿ ಮಾಡಿಕೊಂಡೇ ಆರೋಗ್ಯ ನೀಡುವ ಓಲೆಬೆಲ್ಲ ನಮಗೆ ಅವಶ್ಯಕವೆನಿಸಿದೆ.