Kudla City

ಪಂಪ್‌ವೆಲ್ ಸರ್ಕಲ್ ನಿರ್ಮಾಣಕ್ಕೆ ಎಷ್ಟು ವರ್ಷ ಬೇಕು ?

ಪಂಪ್‌ವೆಲ್ ಸರ್ಕಲ್ ಮಂಗಳೂರಿನ ಹೆಬ್ಬಾಗಿಲು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಇಡೀ ಕುಡ್ಲದ ಇತಿಹಾಸದಲ್ಲಿ ಇಂತಹ ಒಂದು ಸರ್ಕಲ್ ನಿರ್ಮಾಣ ಮಾಡುವ ಕನಸ್ಸು ಇನ್ನು ಕೂಡ ಪೂರ್ಣವಾಗಿಲ್ಲ.
ಜನಪ್ರತಿನಿಧಿಗಳನ್ನು ನೇರವಾಗಿಲ್ಲ ಕೇಳುವ ಧೈರ್ಯ ಇಲ್ಲದ ಜನರ ದಿವ್ಯ ನಿರ್ಲಕ್ಷ್ಯಕ್ಕೆ ಪಂಪ್‌ವೆಲ್ ಸರ್ಕಲ್ ಕನಸ್ಸು ಇನ್ನು ಪೂರ್ಣವಾಗಲು ಅದೆಷ್ಟೋ ವರ್ಷಗಳೇ ಬೇಕು ಮಾರಾಯ್ರೆ. ಎಂಜಿನಿಯರ್ ಡೇ ಆಚರಣೆ ಮಾಡುವಾಗ ಪಂಪ್‌ವೆಲ್ ಸರ್ಕಲ್ ಮಾಡಲು ಶ್ರಮ ಪಟ್ಟ ಎಂಜಿನಿಯರ್‌ಗಳನ್ನು ಬಿಟ್ಟು ಉಳಿದವರಿಗೆ ಹ್ಯಾಪಿ ಎಂಜಿನಿಯರ‍್ಸ್ ಡೇ.

ನಿಗರ್ತಿಕರ ಆಶಾಕಿರಣ ಜೆಪ್ಪು ಸಂತ ಆಂತೋನಿ ಆಶ್ರಮ

ಮಂಗಳೂರಿನ ಜೆಪ್ಪು ಸಂತ ಆಂತೋನಿ ಆಶ್ರಮ ಸಮಾಜದ ದುರ್ಬಲ ಹಾಗೂ ದೀನ ದಲಿತರಿಗೆ ನೆಮ್ಮದಿಯ ಬದುಕು ನೀಡುವ ನಿಟ್ಟಿನಲ್ಲಿ ಆಶ್ರಮ ಕಳೆದ 120 ವರ್ಷಗಳಿಗಿಂತಲೂ ನಿರಂತರವಾಗಿ ದುಡಿಯುತ್ತಿದೆ. ನಗರದ ಜೆಪ್ಪುವಿನಲ್ಲಿರುವ ಆಶ್ರಮದ ವಠಾರಕ್ಕೆ ಹೋದಂತೆ ಸದ್ದಗದ್ದಲದ ಪ್ರಪಂಚದಿಂದ ನೆಮ್ಮದಿ, ಶಾಂತಿ- ಸಮಾಧಾನ ತಾಣಕ್ಕೆ ಹೋಗುತ್ತಿದ್ದೇವೆ ಎನ್ನುವ ಭಾವ ಪ್ರತಿಯೊಬ್ಬನಲ್ಲಿಯೂ ಬೆಳೆಯುತ್ತದೆ. ಹಸಿರು ತೋಟ, ಮರಗಿಡ, ಹೂಗಳಿಂದ ಆಶ್ರಮದ ವಠಾರ ಹಸಿರು ಪ್ರೀತಿಗೆ ಮುನ್ನುಡಿ ಬರೆದಂತೆ ಭಾಸವಾಗುತ್ತದೆ.
ಆಶ್ರಮದಲ್ಲಿ 400ಕ್ಕೂ ಅಧಿಕ ಪುರುಷರು ಹಾಗೂ ಮಹಿಳೆಯರು ಬದುಕು ಕಟ್ಟುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಯುವಕರ ಶೈಕ್ಷಣಿಕ ಬದುಕು ಕೂಡ ಇಲ್ಲಿಯೇ ರೂಪುಗೊಳ್ಳುತ್ತಿದೆ. ಆಶ್ರಮವಾಸಿಗಳಲ್ಲಿ ಕಾಣಿಸಿಕೊಳ್ಳುವ ಶಿಸ್ತು ಅವರ ಬದುಕಿನ ಪ್ರಯಾಣಕ್ಕೊಂದು ಸುಲಭ ರಹದಾರಿಯನ್ನು ಕಲ್ಪಿಸಿಕೊಡುತ್ತದೆ. ತಮಗೆ ಬೇಕಾದ ತರಕಾರಿಯನ್ನು ತಾವೇ ಬೆಳೆಯುವ ಮೂಲಕ ಆಶ್ರಮದ ನಿವಾಸಿಗಳು ಬದುಕಿನಲ್ಲಿ ಸ್ವಾವಲಂಬನೆಯ ಪಾಠವನ್ನು ದಿನಾಲೂ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ.
ತೀರಾ ವಯಸ್ಸಾದ ಹಿರಿಯರು ಕೆಲಸ ಮಾಡಲು ಕೂಡದವರು ಕೂಡ ತಮ್ಮಲ್ಲಿ ಆಗುವ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿ ಬದುಕು ಕಲಿಸುತ್ತಿದ್ದಾರೆ. ಕಳೆದ ವರ್ಷ ಆಶ್ರಮ 120ವರ್ಷಗಳ ಆಚರಣೆಗೆ ಸಂಬಂಧಪಟ್ಟಂತೆ ನಾನಾ ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ‍್ಯಗತ ಮಾಡುವ ಕೆಲಸದಲ್ಲಿ ಮುಂದಾಗಿದೆ. ಮಾನಸಿಕ ರೋಗಿಗಳ ಚಿಕಿತ್ಸೆ ಹಾಗೂ ವಾಸಕ್ಕೆ 100 ಬೆಡ್‌ಗಳ ಸುಸಜ್ಜಿತ ಕಟ್ಟಡದ ನಿರ್ಮಾಣ ಕೆಲಸ ಸಾಗುತ್ತಿದೆ.

ತಾಮ್ರದ ಪಾತ್ರೆಯಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು !

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯೋದು ಹಳೇ ಕಾಲದ ಪದ್ಧತಿ. ಆಯುರ್ವೇದದಲ್ಲೂ ಇದರ ಉಲ್ಲೇಖವಿದೆ. ಈ ಹಳೆ ಕಾಲದ ಪದ್ಧತಿಯಿಂದಲೇ ಬೆರಗಾಗುವಂಥ ಆರೋಗ್ಯಕರ ಪರಿಣಾಮಗಳಿವೆ.
ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ 8 ಗಂಟೆಗಳ ಬಳಿಕ ಕುಡಿಯಬೇಕು. ಇದರಿಂದ ವಾತ, ಕಫ, ಪಿತ್ತ ನಿವಾರಣೆಯಾಗುತ್ತದೆ. ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಅತಿಸಾರ, ಭೇದಿ, ಕಾಮಾಲೆ ವಿರುದ್ಧವೂ ಹೋರಾಡುತ್ತದೆ.ತಾಮ್ರ ಜೀರ್ಣಕ್ರಿಯೆಗೆ ಸಹಕಾರಿ. ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
ತಾಮ್ರ ಕ್ಯಾನ್ಸರ್ ಹಾಗೂ ಅಧಿಕ ರಕ್ತದೊತ್ತಡ ತಡೆಗೂ ಉತ್ತಮ.ತಾಮ್ರ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಇದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು.ತಾಮ್ರದ ಪಾತ್ರೆಯಲ್ಲಿನ ನೀರನ್ನು ದಿನವೂ ಕುಡಿದಲ್ಲಿ ಇದು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ.
ತಾಮ್ರ ರಕ್ತಹೀನತೆಯನ್ನೂ ತಡೆಯುತ್ತದೆ.ದೇಹದಲ್ಲಿನ ಕೊಬ್ಬನ್ನು ಕರಗಿಸಲೂ ತಾಮ್ರ ಸಹಕಾರಿ. ಹೀಗಾಗಿ ತಾಮ್ರ ಉಪಯೋಗಿಸುವಿಕೆಯಿಂದ ತೂಕವೂ ಇಳಿಯುತ್ತದೆ. ತಾಮ್ರದಲ್ಲಿ ನಂಜುನಿರೋಧಕ ಗುಣಗಳಿದ್ದು ಇದು ಗಾಯಗಳನ್ನು ಗುಣಪಡಿಸುವಲ್ಲಿ ಸಹಕಾರಿ.

ಶಂಕರಪುರ ಮಲ್ಲಿಗೆ ರೇಟ್ ಭರ್ಜರಿ !

ಸುಗಂಧಯುಕ್ತ ಶ್ವೇತಪುಷ್ಪ ಶಂಕರಪುರ ಮಲ್ಲಿಗೆಗೆ ಈಗ ಚಿನ್ನದ ಬೆಲೆ ಬಂದಿದೆ. ಕಳೆದ 6 ದಿನಗಳಲ್ಲಿ 4 ಬಾರಿ ಕಟ್ಟೆಯ ಗರಿಷ್ಠ ಬೆಲೆ 1250 ರೂ. ತಲುಪಿದೆ.ವಾಡಿಕೆಗಿಂತ ಅತಿಯಾಗಿ ಸುರಿದ ನಿರಂತರ ಮಳೆಯಿಂದಾಗಿಮಲ್ಲಿಗೆ ಇಳುವರಿಯಲ್ಲಾದ ಕೊರತೆಯಿಂದ ಬೇಡಿಕೆಯಿದ್ದಷ್ಟುಹೂ ಸಿಗದ ಕಾರಣಮಾರುಕಟ್ಟೆಯಲ್ಲಿ ದರ ಏರುತ್ತಿದೆ.

ಆದರೆ ಮಾರುಕಟ್ಟೆಯಲ್ಲಿ ಹೂವಿಗೆ ಎಷ್ಟೇ ಬೇಡಿಕೆಹೆಚ್ಚಾದರೂ ಬೆಳೆಗಾರರಿಗೆ ಮಾತ್ರ 1250 ರೂ.ಗಿಂತ ಹೆಚ್ಚುಬೆಲೆ ಸಿಗುವುದಿಲ್ಲ. ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿ ದರಏರಿಕೆಯಾದಾಗ ಇದರ ಲಾಭ ಬೆಳೆಗಾರರಿಗಿಂತ ಹೆಚ್ಚಾಗಿವ್ಯಾಪಾರಿಗಳಿಗೆ ಹೋಗುತ್ತದೆ.ಕಳೆದ ಒಂದು ತಿಂಗಳಲ್ಲಿ ಕಟ್ಟೆಯಲ್ಲಿ 12 ಬಾರಿ ಮಲ್ಲಿಗೆಬೆಲೆ ನಾಲ್ಕಂಕಿ ತಲುಪಿದ್ದು 6 ಬಾರಿ ಬೆಳೆಗಾರರಿಗೆ ಗರಿಷ್ಠ ದರ 1250 ರೂ. ಸಿಕ್ಕಿದೆ. ಈ ಅವಧಿಯಲ್ಲಿ ಕನಿಷ್ಠ ದರ 280 ರೂ. ಆಗಿತ್ತು. ಕಳೆದ 30 ದಿನಗಳಲ್ಲಿ ಬೆಳೆಗಾರರಿಗೆ ಸರಾಸರಿಅಟ್ಟೆಗೆ 818ರೂ. ಬೆಲೆ ಸಿಕ್ಕಿದೆ.

ಚಂದ್ರನ ಅಂಗಳದ ಸಾಹಸದಲ್ಲಿ ಕಾರ್ಲದ ವಿಜ್ಞಾನಿ

ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಡರ್ ನ ಸಾಹಸದಲ್ಲಿ‌ ಇಸ್ರೋದ ವಿಜ್ಞಾನಿಗಳ ಸಾಲಿನಲ್ಲಿ ಕಾರ್ಲದ ಮೂಲದ ವಿಜ್ಞಾನಿ ವೈ.ದೇವದಾಸ್ ಶೆಣೈ ಕೂಡ ಒಬ್ಬರು. ಅವರು ಸರಕಾರಿ ಶಾಲೆಯಲ್ಲಿ ಓದಿದವರು. ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿಕೊಂಡು ಈಗ ಇಸ್ರೋದ ವಿಜ್ಞಾನಿಗಳ ಸಾಲಿನಲ್ಲಿ ನಿಂತಿರೋದು ಹೆಮ್ಮೆಯ ವಿಚಾರ.