ಇಂದು ರಾಜ್ಯವ್ಯಾಪಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದೆ. ರಾಜ್ಯದ ಬೆಂಗಳೂರಿನಲ್ಲಿ ಈ ಬಾರಿ 84 ಸಿಇಟಿ ಪರೀಕ್ಷಾ ಸೆಂಟರ್ಗಳಿದ್ದರೆ ಅದರ ನಂತರದ ಸ್ಥಾನ ಮಂಗಳೂರಿನಲ್ಲಿ 26 ಸಿಇಟಿ ಪರೀಕ್ಷಾ ಸೆಂಟರ್ಗಳನ್ನು ಹೊಂದುವ ಮೂಲಕ ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಪರೀಕ್ಷಾ ಸೆಂಟರ್ಗಳನ್ನು ಹೊಂದಿರುವ ಜಿಲ್ಲೆ ಎನ್ನುವ ಖ್ಯಾತಿಗೆ ಭಾಜನವಾಗಿದೆ.
ಅದರಲ್ಲೂ ಮುಖ್ಯವಾಗಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲೇ ಭರ್ತಿ 13 ಪರೀಕ್ಷಾ ಕೇಂದ್ರಗಳು ಇವೆ. ಮೂಡುಬಿದಿರೆಯಲ್ಲಿ 8, ಬೆಳ್ತಂಗಡಿಯಲ್ಲಿ 2, ಪುತ್ತೂರಿನ 3 ಕೇಂದ್ರಗಳು ಸೇರಿದಂತೆ ಒಟ್ಟು 26 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಸರಿಸುಮಾರು 13,290ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ 771 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸೆಂಟರ್ ಆಗಿ ಗುರುತಿಸಿಕೊಂಡಿದೆ.
Tagged: mangalore
ಸಾಕು ಪ್ರಾಣಿಗಳಿಂದ ವಿಶೇಷ ಮಕ್ಕಳಿಗೆ ಭಿನ್ನ ಟ್ರೀಟ್ಮೆಂಟ್
ಸಾಕು ಪ್ರಾಣಿಗಳಾದ ಕುದುರೆ, ನಾಯಿ, ಬೆಕ್ಕುಗಳ ಸಹಾಯದಿಂದ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳಿಗೆ ಚಿಕಿತ್ಸೆ ನೀಡುವಂಥ ಅನಿಮಲ್ ಅಸಿಸ್ಟೆಡ್ ಥೆರಪಿ ಎಂಬ ಹೊಸ ಪರಿಕಲ್ಪನೆಯೊಂದು ಮಂಗಳೂರಿನಲ್ಲಿ ಮೂಡಿಬರುತ್ತಿದೆ.
ವಿದೇಶ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಇಂತಹ ಚಿಕಿತ್ಸಾ ವಿಧಾನ ಇತ್ತು. ದೇಶದ ನಾನಾ ಕಡೆಯಲ್ಲಿ ಇದು ನಿಧಾನವಾಗಿ ಮೊಳಕೆಯೊಡೆಯುತ್ತಿದೆ. ಆದ್ರೆ ಮಂಗಳೂರಿನಲ್ಲಿ ಈಗ ತಲೆ ಎತ್ತುತ್ತಿರುವ ಚಿಕಿತ್ಸಾ ವಿಧಾನ.
ಈ ಮೂಲಕ ವಿಶೇಷ ಮಕ್ಕಳು ಮಾತ್ರವಲ್ಲ, ಜನಸಮಾನ್ಯರು ಕೂಡಾ ಪ್ರಾಣಿಗಳ ಒಡನಾಟ ಇಟ್ಟುಕೊಂಡು ಬದುಕಿದರೆ, ಶಕ್ತಿ ಸಾಮರ್ಥ್ಯ ಹೆಚ್ಚುವ ಜತೆಗೆ ಭಾವನಾತ್ಮಕ ಸಂಬಂಧಗಳು ವೃದ್ಧಿಯಾಗುತ್ತವೆ ಎನ್ನುವುದು ವೈದ್ಯಲೋಕ ಹೇಳುವ ಮಾತು.
ಅವೇಂಜರ್ಸ್ ದಿ ಎಂಡ್ ಸುಚಿತ್ರಾದಲ್ಲಿ ಮಾತ್ರ ನೋಡಿ
ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿರುವ ಸುಚಿತ್ರಾ ಹಾಗೂ ಪ್ರಭಾತ್ ಸಿನಿಮಾ ಮಂದಿರಗಳು ತಮ್ಮಚಹರೆ ಬದಲಾಯಿಸಿಕೊಂಡು ಹೊಸ ತಂತ್ರಜ್ಞಾನ ಹಾಗೂ ವಿಶೇಷ ಆಸನ ವ್ಯವಸ್ಥೆ ಯಿಂದ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಅದರಲ್ಲೂ ವಿಶೇಷವಾಗಿ ಈ ಚಿತ್ರಮಂದಿರದಲ್ಲಿರುವ ತಂತ್ರಜ್ಞಾನ ಮಂಗಳೂರು ಬಿಡಿ ಆಸುಪಾಸಿನಲ್ಲಿರುವ ಯಾವುದೇ ಸಿನಿಮಾ ಮಂದಿರದಲ್ಲಿ ಇಲ್ಲ ಎನ್ನಬಹುದು. ಆದರೆ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರ ದ ಎರಡು ಪಟ್ಟು ಸವಲತ್ತುಗಳನ್ನು ಹೊಂದಿರುವ ಸುಚಿತ್ರಾ ಹಾಗೂ ಪ್ರಭಾತ್ ನ ಟಿಕೆಟ್ ರೇಟು ಕೂಡಾ ಕಡಿಮೆ ಯಿದೆ. ಹಾಲಿವುಡ್ ಚಿತ್ರವಾದ ಅವೇಂಜರ್ಸ್ ದೀ ಎಂಡ್ ಗೇಮ್ ಸಿನಿಮಾ ವನ್ನು ತ್ರೀಡಿ ಯಲ್ಲಿ ನೋಡಬೇಕಾದರೆ ನೀವು ಇಲ್ಲಿಗೆ ಬರಬೇಕು. ಚಿತ್ರದ ನೈಜತೆಯ ಜತೆಯಲ್ಲಿ ಸೌಂಡ್ ಎಫೆಕ್ಟ್ ನಿಂದ ನೀವೇ ಸಿನಿಮಾದೊಳಗೆ ಎಂಟ್ರಿ ಪಡೆದುಕೊಂಡ ಅನುಭವ ಸಿಗಲಿದೆ. ನವೀಕೃತ ಈ ಸಿನಿಮಾ ಮಂದಿರದ ಉದ್ಘಾಟನೆಯಂದು ಸಿನಿಮಾಮಂದಿರಲ್ಲಿ ಆವೇಂಜರ್ಸ್ ದೀ ಇನ್ಪಿನಿಟಿ ಪ್ರದರ್ಶನ ಮಾಡಲಾಗಿತ್ತು. ಈಗ ಸುಚಿತ್ರಾ ಕ್ಕೆ ಒಂದು ವರ್ಷ ತುಂಬಿದೆ ಈಗ ಆವೇಂಜರ್ಸ್ ನ ಹೊಸ ಸರಣಿಯ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.
ಮಂಗಳೂರು ಟೈಲ್ಸ್ ಎಂದರೆ ಅದು ವರ್ಲ್ಡ್ ಫೇಮಸ್
ಕರ್ನಾಟಕದಲ್ಲಿ ಹೊಸ ಮಾದರಿಯ “ಮಂಗಳೂರು ಹಂಚು”ಗಳೆಂದು ವಿಶ್ವದಾದ್ಯಂತ ಪ್ರಖ್ಯಾತಗೊಂಡಿರುವ ಹಂಚುಗಳನ್ನು ಪ್ರಥಮವಾಗಿ ತಯಾರಿಸಿದ ಕೀರ್ತಿ “ಬಾಸೆಲ್ ಮಿಷನ್” ಸಂಸ್ಥೆಗೆ ಸಲ್ಲುತ್ತದೆ.
ಬಾಸೆಲ್ ಮಿಷನ್ ಎಂಬುದು ಕ್ರಿ.ಶ. 1815 ರಲ್ಲಿ ಸ್ವಿಝರ್ಲೆಂಡ್ ದೇಶದ ಬಾಸೆಲ್ ಎಂಬ ಪಟ್ಟಣದಲ್ಲಿ ಪ್ರಾರಂಭವಾಗಿ ಕ್ರಿ ಶ. 1834 ರಲ್ಲಿ ದಕ್ಷಿಣಕನ್ನಡದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ ಒಂದು ಸೇವಾ ಸಂಸ್ಥೆ. ಅದು ಹಿಂದಿನ ದಕ್ಷಿಣಕನ್ನಡ ಜಿಲ್ಲೆಯ (ಉಡುಪಿ ಜಿಲ್ಲೆ ಸಹಿತ) ಮಂಗಳೂರಿನ ಜಪ್ಪು ಎಂಬಲ್ಲಿ ಕ್ರಿ.ಶ. 1865 ರಲ್ಲಿ ಪ್ರಥಮ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ 135 ವರ್ಷಗಳಷ್ಟು ದೀರ್ಘಕಾಲದ ಇತಿಹಾಸವುಳ್ಳ ಒಂದು ಹಿರಿಯ ಕೈಗಾರಿಕೆಯು ಕರ್ನಾಟಕದಲ್ಲಿ ಪ್ರಾರಂಭವಾಗಲು ಕಾರಣವಾಗಿದೆ.
ಜೆಪ್ಪುವಿನಲ್ಲಿ ಪ್ರಾರಂಭಿಸಿದ ಹಂಚಿನ ಕಾರ್ಖಾನೆಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿ ಜನರ ಬೇಡಿಕೆಯನ್ನು ಪೂರೈಸಲು ಬಾಸೆಲ್ ಮಿಷನ್ಗೆ ಅಸಾಧ್ಯವಾದಾಗ ಕ್ರಿ.ಶ. 1882ರಲ್ಲಿ ಆರ್ ಹೌರೀ ಮತ್ತು ಜಿ. ಫ್ರಾಂಕೇ ಎಂಬವರ ಹಿರಿತನದಲ್ಲಿ ಮಂಗಳೂರಿನ ಕುದ್ರೋಳಿ ಎಂಬಲ್ಲಿ ಬಾಸೆಲ್ ಮಿಷನ್ ತನ್ನ ಎರಡನೆ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿತು.
ಮುಂದೇ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿದಾಗ ಸಹಿತ) ಉತ್ತರಭಾಗದಲ್ಲಿ ಬಾಸೆಲ್ ಮಿಷನ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದಾಗ ಉಡಿಪಿಯ ಮಲ್ಪೆ ಎಂಬಲ್ಲಿ ಬೌಮನ್ ಮತ್ತು ಗ್ಲೇಟ್ ಫೀಲ್ಡರ್ ರ ಮುಂದಾಳುತನದಲ್ಲಿ ಕ್ರಿ.ಶ. 1886 ರಲ್ಲಿ ಬಾಸೆಲ್ ಮಿಷನ್ ತನ್ನ 3ನೇ ಕಾರ್ಖಾನೆಯನ್ನು ಪ್ರಾರಂಭಿಸಿತು. ಆದರೆ ಇದು ಕ್ರಿ.ಶ. 1888 ರಲ್ಲಿ ತನ್ನ ಉತ್ಪಾದನೆ ಪ್ರಾರಂಭಿಸಿತು.
90 ದಾಟಿದರೂ ರುಕ್ಮಯ್ಯ ಕೃಷಿ ಪ್ರೀತಿ ಬಿಟ್ಟಿಲ್ಲ
ರುಕ್ಮಯ್ಯ ಮೂಲ್ಯ ಅವರು ಮಂಗಳೂರು ಸುರತ್ಕಲ್ ನ ಪಾವಂಜೆ ಅವರು ಈಗ ಅವರಿಗೆ 9೦ರ ಹರೆಯ ಇನ್ನು ಅವರ ಕೃಷಿ ಪ್ರೀತಿ ಕುಗ್ಗಿಲ್ಲ. ಈಗಲೂ ಮುಂಜಾನೆ 4ಕ್ಕೆ ಎದ್ದು ಗದ್ದೆಯ ಕೆಲಸದಲ್ಲಿ ತಲ್ಲೀನರಾಗುತ್ತಾರೆ. ಇವರ ಕೃಷಿ ಪ್ರೀತಿಗೊಂದು ಸಲಾಂ