ತುಳುವರು ಆಟಿ ಕಷಾಯ ಯಾಕೆ ಕುಡಿಯುತ್ತಾರಾ ಗೊತ್ತಾ?

ತುಳುನಾಡಿನ ಜನಕ್ಕೆ ಆಟಿ ಅಮವಾಸ್ಯೆ ಒಂದು ವಿಶೇಷ ಹಬ್ಬ. ಅಂದು ಹಾಲೆ ಮರದ ತೊಗಟೆಯ ರಸ ತೆಗೆದು ಕುಡಿಯುವ ಪದ್ಧತಿ ಪುರಾತನ ಕಾಲದಿಂದ ಹಿಡಿದು ಇಂದಿನವರೆಗೂ ಬೆಳೆದು ಬಂದಿದೆ. ಅಗಸ್ಟ್ 1 ರಂದು ಆಟಿ ಅಮವಾಸ್ಯೆ. ಈ ಅಮವಾಸ್ಯೆಯ ಮದ್ದು ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವೈದ್ಯಲೋಕ ಹೇಳುತ್ತದೆ.

ದೇಹದೊಳಗಿನ ನಂಜಿನ ಅಂಶಗಳನ್ನು ತೆಗೆಯುವ ಶಕ್ತಿ ಹಾಲೆಮರದ ರಸಕ್ಕಿದೆ. ಇದು ಕಿಡ್ನಿ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಆಟಿ ಅಮವಾಸ್ಯೆಯಂದು ಔಷಧೀಯ ಗುಣ ಪೂರ್ಣ ಪ್ರಮಾಣದಲ್ಲಿರುತ್ತದೆ. ಹಾಲೆ ಮರದ ರಸ ಕುಡಿದ ನಂತರ ಮೆಂತೆಯ ಗಂಜಿ ಮಾಡುವ ಕ್ರಮ ಇದೆ. ಮರ ರಸದಿಂದ ದೇಹಕ್ಕಾಗುವ ಉಷ್ಣಬಾದೆಯನ್ನು ಸರಿಪಡಿಸುತ್ತದೆ.

ಹಾಲೆ ಮರದ ಔಷಧಗಳೊಂದಿಗೆ ಮಂತ್ರ, ತಂತ್ರ ಔಷಧ ಪರಿಕಲ್ಪನೆಗಳು ಸೇರಿ ಹೋಗಿವೆ. ಔಷಧೀಯ ಗುಣದ ಬಗ್ಗೆ ವೈಜ್ಞಾನಿಕವಾಗಿ ದೃಢಪಟ್ಟರೂ ಅದನ್ನು ಬೆಳಕು ಹರಿಯುವ ಮೊದಲೇ ಸಂಗ್ರಹಿಸಬೇಕು. ಹಾಲೆ ಮರದ ತೊಗಟೆಯನ್ನು ಕೂಡ ಹೊತ್ತಿನಲ್ಲಿ ತಂದರೆ ಅದರಲ್ಲಿರುವ ಔಷಧೀಯ ಗುಣ ಪೂರ್ತಿಯಾಗಿ ದೊರೆಯುತ್ತದೆ. ಇದರ ಜತೆಯಲ್ಲಿ ಇಂದಿನ ಜನಕ್ಕೆ ಹಾಲೆ ಮರದ ಪರಿಚಯ ಕೂಡಾ ಕಡಿಮೆ ಈ ಕಾರಣದಿಂದ ಹಾಲೆ‌‌ಮರ‌ ಎಂದು ದೃಢಪಟ್ಟ ಬಳಿಕವಷ್ಟೇ ಅದರ ಕೆತ್ತೆಯ ರಸ ಕುಡಿದರೆ ಒಳ್ಳೆಯದು ಎನ್ನುವುದು ಕುಡ್ಲ ಸಿಟಿಯ ಕಾಳಜಿಯ ಮಾತು.

Share