ಕುಡ್ಲ ಮಾತ್ರವಲ್ಲ ಇಡೀ ಕರಾವಳಿ ನಗರಿಯೇ ಬಿಸಿಲಿನ ಬೇಗೆಯಲ್ಲಿ ನಿತ್ಯನೂ ಸುಡುತ್ತಿದೆ. ಒಂದೆಡೆ ಮಳೆ ಇಲ್ಲದೇ ನೀರಿಗೆ ತಾತ್ವರ ಕಾಣಿಸಿಕೊಂಡರೆ ಇನ್ನು ದೇವಸ್ಥಾನ, ಹೋಟೆಲ್ಗಳಲ್ಲಿಯೂ ನೀರಿನ ಬರ ಕಾಣಿಸಿಕೊಂಡಿದೆ.
ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ನೋಡಿದರೆ ತಕ್ಷಣವೇ ಒಂದು ಬಿಂದಿಗೆ ನೀರನ್ನು ಮೈಗೆ ಹಾಕಿಕೊಂಡು ಬಿಡೋಣ ಎನ್ನುವ ಭಾವನೆ ಕುಡ್ಲದ ಮಂದಿಗೆ ಮೂಡಿದರೆ ಅದರಲ್ಲಿ ಯಾವುದೇ ವಿಶೇಷ ಇಲ್ಲ ಮಾರಾಯ್ರೆ.