ಕುಡ್ಲದ ದೇವಳದಲ್ಲಿ ಬಾಳೆಲೆಯಲ್ಲಿ ಪಂಚಕಜ್ಜಾಯ

ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ದಕ್ಷಿಣ ಕನ್ನಡ ಅಥವಾ ಇತರ ಕಡೆಗಳ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ಗಳಲ್ಲಿ ಪ್ರಸಾದ ಕಟ್ಟಿಕೊಡುವ ವಾಡಿಕೆಯಿದೆ. ಆದರೆ ಇವೆಲ್ಲಕ್ಕೂ ಭಿನ್ನವಾಗಿ ಗಂಜಿಮಠದ ದೇವಸ್ಥಾನದ ಪಂಚಕಜ್ಜಾಯದ ಕಟ್ಟು ಹೊಸ ಸಂಚಲನವನ್ನೇ ಮೂಡಿಸಿದೆ.

ಹೌದು ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ನಡುವೆ ಗಂಜಿಮಠ ಜಂಕ್ಷನ್‌ನಲ್ಲಿ ಇರುವ ಪುರಾತನ ಕಾಲದ ಶ್ರೀ ಗಣಪತಿ ದೇವಾಲಯದಲ್ಲಿ ಕುಟುಂಬದ ಹಿರಿ ತಲೆಮಾರಿನಿಂದಲೂ ಇಲ್ಲಿ ಬಾಳೆ ಎಲೆಯಲ್ಲಿ ಪಂಚ ಕಜ್ಜಾಯ ಹಾಕಿ, ಬಾಳೆ ನಾರಿನಲ್ಲಿ ಕಟ್ಟಿಕೊಡುವುದು ಸಂಪ್ರದಾಯವಾಗಿಯೇ ಬೆಳೆದು ಬಂದಿದೆ.

ಈ ರೀತಿಯ ಸಂಪ್ರದಾಯ ಎಲ್ಲ ಕಡೆಯೂ ಆರಂಭವಾಗಬೇಕಾಗಿರುವುದು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕಾದ ಈ ಕಾಲಘಟ್ಟದಲ್ಲಿ ಅಗತ್ಯವಾಗಿದೆ.

Share