Tagged: hindu

ಕುಡ್ಲದ ದೇವಳದಲ್ಲಿ ಬಾಳೆಲೆಯಲ್ಲಿ ಪಂಚಕಜ್ಜಾಯ

ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ದಕ್ಷಿಣ ಕನ್ನಡ ಅಥವಾ ಇತರ ಕಡೆಗಳ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ಗಳಲ್ಲಿ ಪ್ರಸಾದ ಕಟ್ಟಿಕೊಡುವ ವಾಡಿಕೆಯಿದೆ. ಆದರೆ ಇವೆಲ್ಲಕ್ಕೂ ಭಿನ್ನವಾಗಿ ಗಂಜಿಮಠದ ದೇವಸ್ಥಾನದ ಪಂಚಕಜ್ಜಾಯದ ಕಟ್ಟು ಹೊಸ ಸಂಚಲನವನ್ನೇ ಮೂಡಿಸಿದೆ.

ಹೌದು ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ನಡುವೆ ಗಂಜಿಮಠ ಜಂಕ್ಷನ್‌ನಲ್ಲಿ ಇರುವ ಪುರಾತನ ಕಾಲದ ಶ್ರೀ ಗಣಪತಿ ದೇವಾಲಯದಲ್ಲಿ ಕುಟುಂಬದ ಹಿರಿ ತಲೆಮಾರಿನಿಂದಲೂ ಇಲ್ಲಿ ಬಾಳೆ ಎಲೆಯಲ್ಲಿ ಪಂಚ ಕಜ್ಜಾಯ ಹಾಕಿ, ಬಾಳೆ ನಾರಿನಲ್ಲಿ ಕಟ್ಟಿಕೊಡುವುದು ಸಂಪ್ರದಾಯವಾಗಿಯೇ ಬೆಳೆದು ಬಂದಿದೆ.

ಈ ರೀತಿಯ ಸಂಪ್ರದಾಯ ಎಲ್ಲ ಕಡೆಯೂ ಆರಂಭವಾಗಬೇಕಾಗಿರುವುದು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕಾದ ಈ ಕಾಲಘಟ್ಟದಲ್ಲಿ ಅಗತ್ಯವಾಗಿದೆ.

ಕೋಮು ಸಾಮರಸ್ಯ ಅರಳಿಸಿದ ವಸ್ತು ಸೂರೆ!

ಕ್ರೈಸ್ತರು ಬೆಳೆಸಿದ ತರಕಾರಿ, ಮುಸ್ಲಿಂಮರು ಬೆಳೆಸಿದ ಹಣ್ಣು ಹಂಪಲು, ಹಿಂದೂಗಳು ಮಾಡಿದ ಕುರುಕಲು ತಿಂಡಿ ತಿನಸು ಜತೆಗೆ ಅದನ್ನು ಹೆಕ್ಕಿ ತೆಗೆದುಕೊಳ್ಳಲು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಪುಟಾಣಿಗಳು ಇದೆಲ್ಲ ಚಿತ್ರಣಗಳು ಕಾಣಿಸಿಕೊಂಡದ್ದು ಭಾನುವಾರ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ವಸ್ತು ಸೂರೆ ಕಾರ‍್ಯಕ್ರಮದಲ್ಲಿ.
ಹೌದು. ಬೋಳೂರಿನ ಶ್ರೀಧರ್ಮಭೂಮಿ ಪ್ರತಿಷ್ಠಾನ ಕಳೆದ 14 ವರ್ಷಗಳಿಂದ ನಿರಂತರವಾಗಿ ಈ ಸಂಘಟನೆ ಇಂತಹ ವಸ್ತುಸೂರೆ ಕಾರ‍್ಯಕ್ರಮದ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಭಾವನೆಯನ್ನು ಅರಳಿಸುವ ಉದಾತ್ತವಾದ ಚಿಂತನೆಯ ಮೂಲಕ ಕಾರ‍್ಯಕ್ರಮವನ್ನು ಸಂಘಟನೆ ಮಾಡುತ್ತಿದೆ. ವಿಶಿಷ್ಟ ಎಂದರೆ ಕುದ್ರೋಳಿ, ಉರ್ವ, ಬೊಕ್ಕಪಟ್ಣ, ಬೆಂಗ್ರೆ, ತಣ್ಣೀರು ಬಾವಿ ಸೇರಿದಂತೆ ಹತ್ತು ಹಲವು ಪ್ರದೇಶದಿಂದ ಈ ಕಾರ‍್ಯಕ್ರಮಕ್ಕೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ತೀರಾ ಬಡ ಕುಟುಂಬದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ವಸ್ತು ಸೂರೆಯಲ್ಲಿ ಸಿಗುವ ವಸ್ತುಗಳನ್ನು ಪಡೆದುಕೊಂಡು ಖುಷಿಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ.

ಕುಡುಪು, ಕುಕ್ಕೆ, ಮಂಜೇಶ್ವರ ದೇವಳದಲ್ಲಿ ನಾಗರ ಪಂಚಮಿಗೆ ಯಾಕೆ ವಿಶೇಷ?

ಮಂಗಳೂರಿನ ಕುಡುಪು ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ಜತೆಯಲ್ಲಿ ಮಂಜೇಶ್ವರದ ಅನಂತೇಶ್ವರ ದೇವಸ್ಥಾನ ಮೂರು ದೇವಳದಲ್ಲಿ ನಾಗರ ಪಂಚಮಿ ಎಂದಾಕ್ಷಣ ಬಹಳಷ್ಟು ವಿಶೇಷತೆಗಳಿರುತ್ತದೆ. ಈ ಮೂರು ದೇವಳಗಳು ಕೂಡ ನಾಗನಿಗೆ ವಿಶಿಷ್ಟವಾದ ಸ್ಥಾನಮಾನವಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಎಂಬ ಗ್ರಾಮದಲ್ಲಿ ಈ ಪ್ರಸಿದ್ಧ ದೇವಾಲಯ ನೆಲೆಸಿದೆ. ಸರ್ಪ ದೋಷ ನಿವಾರಣೆಗಾಗಿ ಈ ದೇವಾಲಯ ದೇಶದಲ್ಲೆ ಪ್ರಖ್ಯಾತವಾಗಿದೆ. ದೇಶದ ನಾನಾ ಮೂಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸರ್ಪ ದೋಷದಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸರ್ಪಗಳ ದೇವರಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಸರ್ಪ ದೇವತೆಗಳಾದ ವಾಸುಕಿ ಮತ್ತು ಶೇಷ ನಾಗ ಪ್ರಮುಖ.

ಕುಡುಪು ಶ್ರೀ ಅನಂತ ಪದ್ಮನಾಭ ದೇವಳ ಸರ್ಪ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಕರಾವಳಿಯ ಪ್ರಮುಖ ನಾಗ ಕ್ಷೇತ್ರಗಳಲ್ಲಿ ಒಂದಾಗಿದೆ. ನಾಗರ ಪಂಚಮಿಯಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸೇವೆಗಳೆಲ್ಲವನ್ನೂ ಮಂಜೇಶ್ವರ ಶ್ರಿಮದ್‌ ಅನಂತೇಶ್ವರ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ವಿಷ್ಣು, ಈಶ್ವರ ಹಾಗೂ ನಾಗ ದೇವರ ಸಾನಿಧ್ಯವಿದೆ. ನಾಗರ ಪಂಚಮಿ ಹಾಗೂ ಷಷ್ಠಿ ಮಹೋತ್ಸವ ಇಲ್ಲಿನ ಪ್ರಧಾನ ಆಚರಣೆಗಳು.

ಕ್ರಿಶ್ಚಿಯನ್ ಮದುವೆಯಲ್ಲಿ ಎರಡು ಫುಡ್ ಗ್ಯಾರಂಟಿ

ಕ್ರಿಶ್ಚಿಯನ್ ಅದರಲ್ಲೂ ಮಂಗಳೂರಿನ ಕ್ರೈಸ್ತ ರ ಮದುವೆ ಸಮಾರಂಭ ದಲ್ಲಿ ಎರಡು ರೀತಿಯ ಫುಡ್ ಗಳು ಸಿಕ್ಕೇ ಸಿಗುತ್ತದೆ. ಒಂದು ವೆಜ್ ಹಾಗೂ ಇನ್ನೊಂದು ನಾನ್ ವೆಜ್. ಇತರ ಯಾವುದೇ ಮಂಗಳೂರಿನ ಸಮುದಾಯದ ಮದುವೆಯಲ್ಲಿ ಇಂತಹ ಸಂಸ್ಕೃತಿ ಕಾಣುವುದು ಕಷ್ಟ.

ಹಿಂದೂಗಳಲ್ಲಿ ಧಾರ್ಮಿಕ ವಿಧಿವಿಧಾನಗಳು ಇದ್ದಾಗ ಅಲ್ಲಿ ವೆಜ್ ಮುಖ್ಯ. ಆದರೆ ಧಾರ್ಮಿಕ ಕಾರ್ಯ ಮುಗಿದ ಬಳಿಕ ನಾನ್ ವೆಜ್ ನೀಡುವ ಪರಂಪರೆ ಅಲ್ಲಿದೆ. ಮುಸ್ಲಿಂ ಸಮುದಾಯದಲ್ಲಿ ಜಾಸ್ತಿ ನಾನ್ ವೆಜ್ ಇರುತ್ತದೆ. ವೆಜ್ ಗೆ ಕೆಲವೊಂದು ಸಲ ಅಸ್ಪಧ ನೀಡಲಾಗುತ್ತದೆ.

ಆದರೆ ಕ್ರೈಸ್ತ ರ ಯಾವುದೇ ಮದುವೆ ಸಮಾರಂಭಗಳಿರಲಿ ಅಲ್ಲಿ ವೆಜ್, ನಾನ್ ವೆಜ್ ಎನ್ನುವ ಪ್ರತ್ಯೇಕ ಫುಡ್ ಕೌಂಟರ್ ಇರುತ್ತದೆ. ಜತೆಗೆ ವೈನ್, ಡ್ಯಾನ್ಸ್ ,ಎಂಸಿ ಬೇಕೇ ಬೇಕು.

ಕರಾವಳಿಯ ದೇವಸ್ಥಾನಕ್ಕೆ ಗರ್ಭಗುಡಿಯೇ ಇಲ್ಲ !

ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ.

ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ. ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ 2 ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು.

ಹೌದು ಇದು ಬೆಳ್ತಂಗಡಿ ಕೊಕ್ಕಡದ ಸೌತಡ್ಕ ಗಣಪತಿ ದೇವಳದ ವಿಶೇಷತೆ. ಇದು ಬರೀ ದೇವಳ ಮಾತ್ರವಲ್ಲ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ.