ಇದು ದ.ಕ.ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ಬಹಳ ಅಪರೂಪದ ಶಾಲೆಯಿದು. ಈ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಫೀಸ್ ಕಟ್ಟಲು ಇಲ್ಲ. ಜತೆಯಲ್ಲಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳೆಲ್ಲರೂ ಕೆಲಸ ಮಾಡಿಕೊಂಡು ಉಳಿದ ರಾತ್ರಿ ಸಮಯದಲ್ಲಿ ವಿದ್ಯಾಭ್ಯಾಸ ಮಾಡಬಹುದು.
ಹೌದು. ಕಳೆದ 76 ವರ್ಷಗಳಿಂದ ನಿರಂತರವಾಗಿ ಮಂಗಳೂರಿನ ಬಿಇಎಂ ಸ್ಕೂಲ್ನ ನೇರ ಮುಂಭಾಗದಲ್ಲಿ ಸಾಗುವ ಗಾಯತ್ರಿ ದೇವಸ್ಥಾನದ ರಸ್ತೆಯಲ್ಲಿ ನವಭಾರತ ರಾತ್ರಿ ಹೈಸ್ಕೂಲ್ ನಡೆಯುತ್ತದೆ. ಮುಖ್ಯವಾಗಿ ಇಲ್ಲಿ ಒಂದನೇ ತರಗತಿಯಿಂದ ೧೦ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.
ಸಂಜೆ 6ರಿಂದ ಆರಂಭವಾಗುವ ತರಗತಿಗಳು 9ರ ವರೆಗೆ ಸಾಗುತ್ತದೆ. ಮುಖ್ಯವಾಗಿ ಕಲಿಯಲು ಯಾವುದೇ ವಯಸ್ಸು ಬೇಕಾಗಿಲ್ಲ ಎನ್ನುವುದಕ್ಕೆ ಇಲ್ಲಿಗೆ ಬರುವ ವಿದ್ಯಾರ್ಥಿಗಳೇ ಸಾಕ್ಷಿ. ಗುಮಾಸ್ತರು, ಗೃಹಿಣಿಯರು, ರಿಕ್ಷಾ ಚಾಲಕರು, ಹೋಟೆಲ್ನಲ್ಲಿ ದುಡಿಯುವ ಸಿಬ್ಬಂದಿಗಳು ಹೀಗೆ ತರೇವಾರಿ ವಿದ್ಯಾರ್ಥಿಗಳಿಂದ ಈ ಶಾಲೆ ನಡೆಯುತ್ತಿದೆ.
Kudla City
ಮಂಗಳೂರು ಮಂದಿಗೆ ಕುಚಲಕ್ಕಿ ಪ್ರೀತಿ ಜಾಸ್ತಿ
ಮಂಗಳೂರಿನವರು ದೇಶದ ಯಾವುದೇ ಮೂಲೆಗೆ ಹೋದರೂ ಕೂಡ ಊಟಕ್ಕೆ ಕುಚಲಕ್ಕಿ (ಬೊಯಿಲ್ಡ್ ರೈಸ್) ಉಂಟಾ ಎಂದೇ ಪ್ರಶ್ನೆ ಕೇಳುತ್ತಾರೆ ಊಟ ಸೇರೋದಿಲ್ಲ. ಇದೇ ಕಾರಣ ಮಂಗಳೂರಿನ ಮಂದಿಗೆ ಕುಚಲಕ್ಕಿ ಮೇಲೆ ಪ್ರೀತಿ ಜಾಸ್ತಿ ಮಾರಾಯ್ರೆ.
ಮಂಗಳೂರು ಮಂದಿಗೆ ಕುಚಲಕ್ಕಿ ಪ್ರೀತಿ ಜಾಸ್ತಿ
ಮಂಗಳೂರಿನವರು ದೇಶದ ಯಾವುದೇ ಮೂಲೆಗೆ ಹೋದರೂ ಕೂಡ ಊಟಕ್ಕೆ ಕುಚಲಕ್ಕಿ (ಬೊಯಿಲ್ಡ್ ರೈಸ್) ಉಂಟಾ ಎಂದೇ ಪ್ರಶ್ನೆ ಕೇಳುತ್ತಾರೆ ಊಟ ಸೇರೋದಿಲ್ಲ. ಇದೇ ಕಾರಣ ಮಂಗಳೂರಿನ ಮಂದಿಗೆ ಕುಚಲಕ್ಕಿ ಮೇಲೆ ಪ್ರೀತಿ ಜಾಸ್ತಿ ಮಾರಾಯ್ರೆ.
ಕುಡ್ಲ ಸಿಟಿಯ ಕ್ಲೀನ್ ಗಾಗಿ ದುಡಿಯುವ ಜಗನ್
ಮಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ರಾಮಕೃಷ್ಣ ಮಿಷನ್ ಪ್ರತಿ ಭಾನುವಾರ ಸಿಟಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತಿದೆ.
ವಿಶೇಷವಾಗಿ ಈ ಅಭಿಯಾನದಲ್ಲಿ ಜಗನ್ ಕೋಡಿಕಲ್ ಎಲ್ಲರಿಗೂ ಸ್ಫೂರ್ತಿಯಾಗುತ್ತಾರೆ. ಬೇಸಿಕಲಿ ತಮಿಳುನಾಡು ಮೂಲದ ಜಗನ್, ಮಂಗಳೂರಿನ ಕೋಡಿಕಲ್ನಲ್ಲಿ ವಾಸ.
ವಿಶೇಷ ಅಂದರೆ ಅವರಿಗೆ ಎರಡೂ ಕಾಲುಗಳಿಲ್ಲ. ಆದರೂ ತಮ್ಮ ಮೂರು ಚಕ್ರದ ಸ್ಕೂಟರ್ನಲ್ಲಿ ಪ್ರತಿ ಭಾನುವಾರ ಸ್ವಯಂಸ್ಫೂರ್ತಿಯಿಂದ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ.
ಕುಡ್ಲ ಸಿಟಿಯ ಕ್ಲೀನ್ ಗಾಗಿ ದುಡಿಯುವ ಜಗನ್
ಮಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ರಾಮಕೃಷ್ಣ ಮಿಷನ್ ಪ್ರತಿ ಭಾನುವಾರ ಸಿಟಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತಿದೆ.
ವಿಶೇಷವಾಗಿ ಈ ಅಭಿಯಾನದಲ್ಲಿ ಜಗನ್ ಕೋಡಿಕಲ್ ಎಲ್ಲರಿಗೂ ಸ್ಫೂರ್ತಿಯಾಗುತ್ತಾರೆ. ಬೇಸಿಕಲಿ ತಮಿಳುನಾಡು ಮೂಲದ ಜಗನ್, ಮಂಗಳೂರಿನ ಕೋಡಿಕಲ್ನಲ್ಲಿ ವಾಸ.
ವಿಶೇಷ ಅಂದರೆ ಅವರಿಗೆ ಎರಡೂ ಕಾಲುಗಳಿಲ್ಲ. ಆದರೂ ತಮ್ಮ ಮೂರು ಚಕ್ರದ ಸ್ಕೂಟರ್ನಲ್ಲಿ ಪ್ರತಿ ಭಾನುವಾರ ಸ್ವಯಂಸ್ಫೂರ್ತಿಯಿಂದ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ.




