Tagged: Kudla

ಕುಡ್ಲ ಸಿಟಿ ಇಂಪ್ಯಾಕ್ಟ್: ‘ಫ್ಲೆಕ್ಸ್’ ಶಾಸಕರ ಅಭಿಮಾನಿಗಳಿಂದ ತೆರವು

ಕುಡ್ಲ ಸಿಟಿಯಲ್ಲಿ ಆ.19ರಂದು ‘ಫ್ಲಾಸ್ಟಿಕ್ ಮುಕ್ತ ಕುಡ್ಲಕ್ಕೆ ಫ್ಲೆಕ್ಸ್ ಶಾಸಕರ ಕೊಡುಗೆ ಅಪಾರ’ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವ ಜತೆಯಲ್ಲಿ ಪರ-ವಿರೋಧಗಳ ಅಲೆಗಳಿಂದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಪರವಾಗಿ ನಗರದ ಉರ್ವ ಸೇರಿದಂತೆ ಕೆಲವು ಭಾಗದಲ್ಲಿ ಹಾಕಲಾಗಿರುವ ಫ್ಲೆಕ್ಸ್‌ವನ್ನು ಆ. 20 ರಂದು ಪೂರ್ಣ ಪ್ರಮಾಣದಲ್ಲಿ ತೆರವಿನ ಮೂಲಕ ನಗರ ಸ್ವಚ್ಛತೆಯಲ್ಲಿ ತಮ್ಮ ಜವಾಬ್ದಾರಿ ಏನೂ ಎನ್ನುವ ಮಾತನ್ನು ಶಾಸಕರ ಜತೆಗೆ ಅಭಿಮಾನಿಗಳು ಕಲಿತುಕೊಂಡಿದ್ದಾರೆ ಎನ್ನುವ ಮಾತು ಈ ತೆರವಿನ ಮೂಲಕ ರುಜುವಾತು ಆಗಿದೆ.

ಜನರಿಂದ ಆಯ್ಕೆಯಾದ ಮಂಗಳೂರಿನ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಇತರರಿಗೆ ಮಾದರಿಯಾಗಬೇಕು ಎನ್ನುವ ಸಂದೇಶ ನೀಡಲು ಹೊರಟ ಕುಡ್ಲಸಿಟಿಯ ಕಾಳಜಿ ಗೆದ್ದಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಇದರ ಜತೆಯಲ್ಲಿ ನಗರದ ಕೆಲವು ಭಾಗದಲ್ಲಿ ಹಬ್ಬಕ್ಕೆ, ಸಾವಿಗೂ ಫ್ಲೆಕ್ಸ್ ಹಾಕಿ ಗಮನ ಸೆಳೆಯುವ ಕಾರ‍್ಯಕ್ಕೆ ಶಾಸಕರು ಬುನಾದಿ ಹಾಕುವ ಮೂಲಕ ಮತ್ತಷ್ಟು ಸಮಸ್ಯೆಗೆ ಕಾಮತ್ ಅವರ ಅಭಿಮಾನಿಗಳು ಕಾರಣವಾಗುತ್ತಿರುವುದು ಬುದ್ದಿವಂತ ಕುಡ್ಲದ ಜನರಿಗೆ ಸಮಸ್ಯೆಯಾಗಿದೆ.

ಈ ಕುರಿತು ಈಗಾಗಲೇ ಮಹಾನಗರ ಪಾಲಿಕೆಯ ಜತೆಯಲ್ಲಿ ಇತರ ಅಧಿಕಾರಿ, ಇಲಾಖೆಗಳು ಎಚ್ಚರಗೊಳ್ಳದೇ ಹೋದರೆ ಕುಡ್ಲ ಸಿಟಿಯಲ್ಲಿ ಮತ್ತೆ ಫ್ಲೆಕ್ಸ್ ಸಂಸ್ಕೃತಿ ಗೆಲ್ಲುವ ಸಾಧ್ಯತೆಯಿದೆ.

ನೆರೆಯಲ್ಲೂ ಜನರ ಮನಸ್ಸು ಗೆದ್ದ ಜಲಜಾಕ್ಕ !

ಮನೆಗೆ ನೆಂಟರು ಬಂದರೆ ಸಂಜೆ ವಾಪಾಸ್ ಹೋಗ್ತಾ ರೋ.., ನಾಳೆ ಬೆಳಿಗ್ಗೆ ಹೋಗ್ತಾರಾ ಎಂದು ಲೆಕ್ಕ ಹಾಕುವ ಇಂದಿನ ದಿನಗಳಲ್ಲಿ ಮೊನ್ನೆ ಜಲಪ್ರವಾಹದಲ್ಲಿ ಮನೆ, ತೋಟ, ಗದ್ದೆ ಸರ್ವಸ್ವವನ್ನೂ ಕಳೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ತನ್ನ ಮನೆಯಲ್ಲೇ ನೆಲೆ, ಆಶ್ರಯ, ಊಟಾ ಉಪಚಾರ ಮಾಡುತ್ತಿರುವ ಇವರು ನಿಜಕ್ಕೂ ಶ್ರೇಷ್ಠರು.

ಮೊನ್ನೆ ಬೆಳ್ತಂಗಡಿ ಯ ದಿದುಪೇ, ಕುಕಾವು, ಮಕ್ಕಿ, ದೈಪಿತಿಲು, ಫರ್ಲ ಮುಂತಾದ ಕಡೆ ಮನೆ ಕಳೆದುಕೊಂಡ ಸುಮಾರು 56 ಮಂದಿ ನಿರಾಶ್ರಿತರಿಗೆ ತನ್ನ ಮನೆಯಲ್ಲೇ ( ಮೊನ್ನೆಯಿಂದ ಇಂದಿನವರೆಗೆ ಮತ್ತು ಇನ್ನೂ ಎಷ್ಟು ದಿನಗಳು ಅಂತ ಲೆಕ್ಕ ಹಾಕದೆ ) ಆಶ್ರಯ ನೀಡಿರುವ ಅಗರೀಮಾರ್ ಜಲಜಾಕ್ಷಿ ಎಂಬ ಇವರು ಸಮಾಜದ ಶ್ರೇಷ್ಠ ವ್ಯಕ್ತಿ ಮತ್ತು ಇವರೇ ನಿಜವಾದ ಸೆಲೆಬ್ರಿಟಿ….ಇಂತವರು ನಮ್ಮ ನಿಮ್ಮ ನಡುವೆ ಇದ್ದಾರೆ ಎಂಬುದೇ ಎಲ್ಲಕ್ಕಿಂತ ದೊಡ್ಡ ಕುಶಿ, ಸಂತೃಪ್ತಿಯ ವಿಚಾರ. ವಿಶೇಷ ಎಂದರೆ ಈ ನೆರೆಯಲ್ಲಿ ಅವರ ತೋಟ ಪೂರ್ಣ ಹೋಗಿದೆ. ಆದರೆ ದೊಡ್ಡ ಮನಸ್ಸಿನ ಜಲಜಾಕ್ಕ ಇದರ ಚಿಂತೆ ಮಾಡದೇ ಯಾರು ಬಂದರೂ ಕೂಡ ಹೊಟ್ಟೆ ಪೂರ್ತಿ ಊಟ,ತಿಂಡಿ ನೀಡುವ ಮೂಲಕ ಅಲ್ಲಿನ ಜನರ ಪಾಲಿಗೆ ಅನ್ನದಾತೆಯಾಗಿ ಕಾಣಿಸಿಕೊಂಡಿದ್ದಾರೆ.

ಕೋಮು ಸಾಮರಸ್ಯ ಅರಳಿಸಿದ ವಸ್ತು ಸೂರೆ!

ಕ್ರೈಸ್ತರು ಬೆಳೆಸಿದ ತರಕಾರಿ, ಮುಸ್ಲಿಂಮರು ಬೆಳೆಸಿದ ಹಣ್ಣು ಹಂಪಲು, ಹಿಂದೂಗಳು ಮಾಡಿದ ಕುರುಕಲು ತಿಂಡಿ ತಿನಸು ಜತೆಗೆ ಅದನ್ನು ಹೆಕ್ಕಿ ತೆಗೆದುಕೊಳ್ಳಲು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಪುಟಾಣಿಗಳು ಇದೆಲ್ಲ ಚಿತ್ರಣಗಳು ಕಾಣಿಸಿಕೊಂಡದ್ದು ಭಾನುವಾರ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ವಸ್ತು ಸೂರೆ ಕಾರ‍್ಯಕ್ರಮದಲ್ಲಿ.
ಹೌದು. ಬೋಳೂರಿನ ಶ್ರೀಧರ್ಮಭೂಮಿ ಪ್ರತಿಷ್ಠಾನ ಕಳೆದ 14 ವರ್ಷಗಳಿಂದ ನಿರಂತರವಾಗಿ ಈ ಸಂಘಟನೆ ಇಂತಹ ವಸ್ತುಸೂರೆ ಕಾರ‍್ಯಕ್ರಮದ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಭಾವನೆಯನ್ನು ಅರಳಿಸುವ ಉದಾತ್ತವಾದ ಚಿಂತನೆಯ ಮೂಲಕ ಕಾರ‍್ಯಕ್ರಮವನ್ನು ಸಂಘಟನೆ ಮಾಡುತ್ತಿದೆ. ವಿಶಿಷ್ಟ ಎಂದರೆ ಕುದ್ರೋಳಿ, ಉರ್ವ, ಬೊಕ್ಕಪಟ್ಣ, ಬೆಂಗ್ರೆ, ತಣ್ಣೀರು ಬಾವಿ ಸೇರಿದಂತೆ ಹತ್ತು ಹಲವು ಪ್ರದೇಶದಿಂದ ಈ ಕಾರ‍್ಯಕ್ರಮಕ್ಕೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ತೀರಾ ಬಡ ಕುಟುಂಬದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ವಸ್ತು ಸೂರೆಯಲ್ಲಿ ಸಿಗುವ ವಸ್ತುಗಳನ್ನು ಪಡೆದುಕೊಂಡು ಖುಷಿಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ.

ಇವರು ವೈದ್ಯರಲ್ಲ ಬಟ್ ಬಡವರ ಪಾಲಿನ ದೇವರು !

ಪುತ್ತೂರಿನ ಡಾ.ಶಿವರಾಮ ಭಟ್ ಅವರ ಕ್ಲಿನಿಕ್‌ನಲ್ಲಿರುವ ಕಂಪೌಂಡರ್ ಭಟ್ಟರು ಪುತ್ತೂರಿನ ಮಂದಿಗೆ ಚಿರಪರಿಚಿತ ಮುಖ. ಯಾವುದೇ ಕಾಯಿಲೆ ಇರಲಿ ಅವರು ನೀಡುವ ಮದ್ದು ರೋಗಿಯ ಕಾಯಿಲೆಗೆ ಗುಣಪಡಿಸುವ ಶಕ್ತಿಯಿದೆ. ಅವರ ನಗು ಮೊಗದ ಮಾತು ರೋಗಿಗೆ ಕಾಯಿಲೆಯಲ್ಲೂ ಹೊಸ ಚೈತನ್ಯ ನೀಡುತ್ತದೆ.
ಅವರ ಮದ್ದಿನ ರೇಟು ಕೂಡ ಬಹಳ ಕಡಿಮೆ. ಕೆಲವೊಂದು ಸಲ ಬಡವರು ಬಂದರೆ ಉಚಿತವಾಗಿ ಮದ್ದು ನೀಡಿದ ಉದಾಹರಣೆಗಳು ಸಾಕಷ್ಟಿದೆ. ಡಾ. ಶಿವರಾಮ ಭಟ್ ಅವರ ಕಾಲದಿಂದಲ್ಲೂ ಪುತ್ತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಡಾ. ಶಿವರಾಮ ಭಟ್ ಕ್ಲಿನಿಕ್‌ನಲ್ಲಿ ಕಂಪೌಂಡರ್ ಆಗಿದ್ದಾರೆ.
ಈಗ ಡಾ.ಶಿವರಾಮ ಭಟ್ಟರು ಇಲ್ಲ ಆದರೆ ಅವರ ಪುತ್ರ ಡಾ. ಶ್ಯಾಮ್ ಭಟ್ ಇದ್ದರೆ ಅವರಿಗೂ ಕಂಪೌಂಡರ್ ಭಟ್ಟರು ಎಂದರೆ ಅದೇ ಪ್ರೀತಿ. ರೋಗಿಗಳಿಗೂ ಅವರು ಎಂದರೆ ವಿಶೇಷ ಗೌರವ ಜತೆಗೆ ಅಪಾರ ಪ್ರೀತಿ.

ಸಿಟಿ ಲೈಫ್‌ನವರ ಕೊಬ್ಬು ಕರಗಿಸುವ ಸುಲಭ ವಿಧಾನ

ಕುಡ್ಲ ಮಾತ್ರವಲ್ಲ ದೇಶದ ಯಾವುದೇ ಮೂಲೆಗೆ ಹೋದರೂ ಕೂಡ ಅತ್ತಿಯಾದ ಒತ್ತಡ, ವ್ಯಾಯಾಮ ಕೊರತೆಯ ಜತೆಯಲ್ಲಿ ಮೈಯಲ್ಲಿ ಕೊಲೆಸ್ಟ್ರಾಲ್ ಗೊತ್ತಿಲ್ಲದೇ ಜಾಗ ಪಡೆದುಕೊಂಡು ದುಡೂತಿತನ ಬೆಳೆದುಬಿಡುತ್ತದೆ. ಇಂತಹ ಕೊಲೆಸ್ಟ್ರಾಲ್‌ವನ್ನು ಸುಲಭದಲ್ಲಿ ತೆಗೆಯಲು ಹಿಜಾಮಾ ದಿ ಬೆಸ್ಟ್ ಟ್ರೀಟ್‌ಮೆಂಟ್. ಅದನ್ನು ನುರಿತ ವೈದ್ಯರು ಮಾತ್ರ ಮಾಡಿದರೆ ಇದಕ್ಕೆಲ್ಲ ಪರಿಹಾರ ಸಿಗುತ್ತದೆ.
ಕುದ್ರೋಳಿಯ ಆಯುರ್ ಹೆಲ್ತ್ ಕೇರ್‌ನಲ್ಲಿ ಇಂತಹ ಟ್ರೀಟ್‌ಮೆಂಟ್ ತಜ್ಞ ವೈದ್ಯರಿಂದ ನಡೆಯುತ್ತದೆ. ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.
ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.