ಕುಡ್ಲದವರ ಒತ್ತಡಪೂರ್ಣ ಬದುಕಿಗೆ ರಿಲ್ಯಾಕ್ಸ್ ಕೊಡುವ ಕಪ್ಪಿಂಗ್ ಥೆರಪಿ

ಕುಡ್ಲದ ಸಿಟಿ ಮಂದಿ ಪ್ರತಿಯೊಂದು ಕ್ಷಣಕೂಡ ಒತ್ತಡಪೂರ್ಣ ಬದುಕಿನಲ್ಲಿಯೇ ಕಾಲ ಕಳೆಯುತ್ತಾರೆ. ಈ ಒತ್ತಡಪೂರ್ಣ ಬದುಕಿನಿಂದ ನಮ್ಮ ದೇಹಕ್ಕೆ ವಿಪರೀತವಾದ ಹಾನಿಯಾಗುತ್ತದೆ.
ಇದೇ ಹಾನಿಯಿಂದ ಕಾಯಿಲೆ ಬೇಗನೆ ಮುತ್ತಿಕೊಳ್ಳುವ ಜತೆಯಲ್ಲಿ ಸಣ್ಣ ವಯಸ್ಸಿಗೆ ದೇಹ ನಮ್ಮ ಮಾತನ್ನು ಕೇಳದ ಸ್ಥಿತಿಗೆ ಬಂದು ತಲುಪುತ್ತದೆ. ಇಂತಹ ಸಮಸ್ಯೆಯ ನಿವಾರಣೆಗೆ ಹಿಜಾಮಾದ ಕಪ್ಪಿಂಗ್ ಥೆರಪಿ ಉತ್ತಮವಾದ ಪರಿಹಾರ.
ಅದನ್ನು ಪರಿಣತರ ತಂಡದಿಂದ ಮಾಡಿಸಿದರೆ ಮಾತ್ರ ನಿಜವಾಗಿಯೂ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮಂಗಳೂರಿನ ಕುದ್ರೋಳಿಯಲ್ಲಿರುವ ಆಯುರ್ ಹೆಲ್ತ್ ಕ್ಲಿನಿಕ್‌ನ ತಜ್ಞ ವೈದ್ಯರ ತಂಡ ಇಂತಹ ಕಾರ‍್ಯದಲ್ಲಿ ಸಾಕಷ್ಟು ಯಶಸ್ಸು ಪಡೆದಿದ್ದಾರೆ. ರೋಗಿಗಳು ಕೂಡ ಅವರನ್ನು ಹುಡುಕಿಕೊಂಡು ದೂರದ ಊರಿನಿಂದ ಬರುತ್ತಾರೆ.
ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.
ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.

Share