ಮಳೆರಾಯನ ಆಗಮನಕ್ಕೆ ಕಾದು ಕೂತಿದ್ದ ಕುಡ್ಲದ ಜನರು ಈಗ ಫುಲ್ ಚಂಡಿ ಮುದ್ದೆ ಆಗಿದ್ದಾರೆ. ಎರಡು ದಿನಗಳಿಂದ ನಿಧಾನವಾಗಿ ಇಳೆಗೆ ಬಂದ ಮಳೆರಾಯ ಪೂರ್ಣ ಪ್ರಮಾಣದಲ್ಲಿ ತನ್ನ ಕೆಲಸ ಆರಂಭ ಮಾಡಿದ್ಸಾನೆ. ವಿಶೇಷ ಎಂದರೆ ಮಳೆರಾಯನ ಆಗಮನದ ನಿರೀಕ್ಷೆ ಇಟ್ಟು ಕೊಳ್ಳ ದ ಸ್ಥಳೀಯ ಆಡಳಿತ ತನ್ನ ಕೆಲಸವನ್ನು ಪೂರ್ಣ ಗೊಳಿಸದೇ ಇರುವುದರಿಂದ ರಸ್ತೆ ಎಲ್ಲವೂ ತೋಡುಗಳಾಗಿ ಬದಲಾಗಿದೆ. ತೋಡುಗಳು ಪೂರ್ಣ ಪ್ರಮಾಣದಲ್ಲಿ ಹೂಳು ತೆಗೆಯದ ಪರಿಣಾಮ ಪೂರ್ತಿ ತುಂಬಿ ನೀರು ರಸ್ತೆಯಲ್ಲಿ ಹರಿದಾಡುತ್ತಿದೆ.