Tagged: traffic

ರಸ್ತೆಯ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸ್ ಪುಟ್ಟರಾಮ

ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಕೂಡ ಅಲ್ಲಿ ಹೊಂಡಗಳೇ ಕಾಣಿಸಿಕೊಳ್ಳುತ್ತಿದೆ. ಸವಾರರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಸ್ಥಿತಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ವಿಶೇಷ ಎಂದರೆ ಈ ರಸ್ತೆಯಲ್ಲಿ ಹೊಂಡಗಳು ಸ್ಮಾರ್ಟ್ ಸಿಟಿ ಕುಡ್ಲದಲ್ಲೂ ಭರ್ಜರಿಯಾಗಿದೆ.

ಮಂಗಳೂರಿನ ಬಂಟ್ಸ್‌ಹಾಸ್ಟೆಲ್ ಸರ್ಕಲ್ ಸಮೀಪ ರಸ್ತೆಯಂಚಿನಲ್ಲಿದ್ದ ಗುಂಡಿಯೊಂದು ದ್ವಿಚಕ್ರ ಸವಾರರಾಗಿ ಕಂಟಕವಾಗಿದ್ದು ಈ ಬಗ್ಗೆ ಮನಪಾ ಅಧಿಕಾರಿಗಳ ಗಮನಕ್ಕೆ ತಂದರೂ ಸುಧಾರಣೆಯಾಗದಿರುವುದರಿಂದ ಬೇಸತ್ತ ಪೂರ್ವ ಸಂಚಾರಿ ಠಾಣೆ (ಕದ್ರಿ) ಯ ಸಿಬ್ಬಂದಿ ಪುಟ್ಟರಾಮ ತಾನೇ ಕಲ್ಲು, ಮಣ್ಣು ಹಾಕಿಕೊಂಡು ಮುಚ್ಚುವ ಮೂಲಕ ವಿಶೇಷವಾದ ಕೆಲಸವನ್ನು ಮಾಡಿ ವಾಹನ ಸವಾರರ ಮನಸ್ಸು ಗೆದ್ದುಬಿಟ್ಟಿದ್ದಾರೆ.

ಚಾರ್ಮಾಡಿಯಲ್ಲಿ ಒಂದು ತಿಂಗಳು ಹೋಗಲೇ ಬೇಡಿ ಮಾರಾಯ್ರೆ

ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ಸೆಕ್ಷನ್‌ನಲ್ಲಿ ಅಪಾರ ಮಳೆಯಿಂದಾಗಿ ಗುಡ್ಡ ಕುಸಿತಗೊಂಡು ಸಂಚಾರ ಪೂರ್ಣವಾಗಿ ಒಂದು ತಿಂಗಳ ಕಾಲ ಎಲ್ಲ ವಾಹನಗಳ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಆ.14 ರಂದು ಮಧ್ಯ ರಾತ್ರಿ 12ಗಂಟೆಯಿಂದ ಸೆಪ್ಟೆಂಬರ್ 14ರ ಮಧ್ಯ ರಾತ್ರಿ 12 ವರೆಗೆ ಸಂಚಾರ ಸ್ಥಗಿತಗೊಂಡಿದೆ.
ಇದರ ಬದಲು ಉಜಿರೆ- ಧರ್ಮಸ್ಥಳ- ಕೊಕ್ಕಡ-ಗುಂಡ್ಯ- ಶಿರಾಡಿ ಮೂಲಕ ಸಂಚಾರ ಮಾಡಬೇಕು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ಜನ್ನಾಪುರ- ಆನೆಮಹಲ್- ಶಿರಾಡಿ- ಗುಂಡ್ಯ ಮೂಲಕ ಸಂಚರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.

ಕುಡ್ಲ ಸಿಟಿಯ ಟ್ರಾಫಿಕ್ ನಿಯಂತ್ರಕ ರವೂಫ್ ಭಾಯಿಗೊಂದು ಸಲಾಂ !

ಅಬ್ದುಲ್ ರವೂಫ್ ಎಂದರೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಟ್ರಾಫಿಕ್‌ನ ರವೂಫ್ ಭಾಯಿ ಎಂದರೆ ತಕ್ಷಣ ಮಂಗಳೂರಿನಲ್ಲಿ ವಾಹನ ಓಡಿಸುವವರಿಗೆ ಗೊತ್ತಿರುವ ಮನುಷ್ಯ.

ಕಳೆದ 26 ವರ್ಷಗಳಿಂದ ಕುಡ್ಲ ಸಿಟಿಯ ಸಂಚಾರ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ ರವೂಫ್ ಈಗ ಹೋಮ್ ಗಾರ್ಡ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಈಗ ರಂಜಾನ್ ಉಪವಾಸದ ಸಮಯದಲ್ಲಿ ನಮಾಜ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಹೆಚ್ಚಾಗಿ ಸಂಜೆಯ ಹೊತ್ತು ಮಸೀದಿ ಸುತ್ತಮುತ್ತ ಹೆಚ್ಚು ವಾಹನಗಳ ಜತೆಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ.

ಈಗ ರವೂಫ್ ಮಾಡುತ್ತಿರುವ ಮುಖ್ಯ ಕೆಲಸ ಎಂದರೆ ನಗರದ ಪ್ರಮುಖ ನಾಲ್ಕು ಮಸೀದಿಗಳ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಸಿಲು, ಮಳೆ ಎನ್ನದೇ ಕಡಿಮೆ ಸಂಬಳದಲ್ಲಿ ದುಡಿಯುವ ಟ್ರಾಫಿಕ್‌ನ ಅಬ್ದುಲ್ ರವೂಫ್ ನಿಜವಾಗಿಯೂ ‘ಕುಡ್ಲ ಸಿಟಿ’ಯ ಹೆಮ್ಮೆಯ ನಾಗರಿಕ ಎನ್ನಬಹುದು.

ಮಂಗಳೂರಿನ ಮೊದಲ ರಿಕ್ಷಾ ಚಾಲಕ ಮೊಂತು‌

ಇಳಿ ವಯಸ್ಸಲ್ಲೂ ಎಳೆಯರಂತಹ ಉತ್ಸಾಹ. 62 ವರ್ಷಗಳಿಂದ ಆಟೋ ರಿಕ್ಷಾ ಚಾಲಕ. ಈ ವರೆಗೆ ಒಂದೇ ಒಂದು ಪೊಲೀಸ್‌ ಕೇಸ್‌ ಇಲ್ಲದೆ, ಅಪಘಾತ ಎಸಗದೆ ನಿಷ್ಠೆಯಿಂದ ದುಡಿಯುತ್ತಿರುವ ಕಾಯಕಯೋಗಿ. ವಿಶೇಷವೆಂದರೆ ಮಂಗಳೂರಿನಲ್ಲಿ ಪ್ರಪ್ರಥಮವಾಗಿ ಓಡಾಟ ನಡೆಸಿದ ರಿಕ್ಷಾದ ಚಾಲಕ ಮೊಂತು‌ ಲೋಬೊ ಎನ್ನುವುದು ವಿಶೇಷ. ಈಗಲೂ ಮಂಗಳೂರಿನ ಪಡೀಲ್, ನಾಗುರಿ, ಕಂಕನಾಡಿ ಅಸುಪಾಸಿನ ರಿಕ್ಷಾ ನಿಲ್ದಾಣ ದಲ್ಲಿ ಅವರ ರಿಕ್ಷಾ ಕಾಣ ಸಿಗುತ್ತದೆ.