ಮಂಗಳೂರಿನ ಕಾವೂರಿನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟ ಇಡೀ ಮಂಗಳೂರಿನ ಕಾಲೇಜುಗಳಲ್ಲಿ ವಿಭಿನ್ನ ಎನ್ನುವ ಮಾತಿದೆ. ಇದಕ್ಕೆ ಈ ಬಾರಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ವೈಸ್ ಪ್ರಿನ್ಸಿಪಾಲ್ ರೊನಾಲ್ಡ್ ಪಿಂಟೋ ಅವರು ಮತ್ತೆ ಸಾಕ್ಷಿ ನೀಡಿದ್ದಾರೆ.
ಬಿಜಿಎಸ್ ಪದವಿ ಕಾಲೇಜಿನಲ್ಲಿ ಅವರು ಸೋಮವಾರ ಬಿಕಾಂ ವಿದ್ಯಾರ್ಥಿಗಳಿಗೆ ಕೇರಿಯರ್ ಗೈಡೆನ್ಸ್ ಕುರಿತು ಉಪನ್ಯಾಸ ನೀಡಿದ್ದರು. ಈ ಸಮಯದಲ್ಲಿ ಅವರ ಉಪನ್ಯಾಸ ವನ್ನು ಬಹಳ ಶಿಸ್ತಿನಿಂದ ಕೇಳಿದರು ಇಂತಹ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯೇ ಇಲ್ಲ ಎಂದು ಬಿಟ್ಟರು. ಬರೀ ಮಾತಿಗೆ ಮಾತ್ರ ಈ ಮಾತು ಬಂದಿಲ್ಲ ತಮ್ಮ ಭಾವನೆಗಳನ್ನು ಕೂಡ ಫೇಸ್ ಬುಕ್ ನಲ್ಲಿ ಹಾಕಿ ಸಂಭ್ರಮ ಪಟ್ಟಿದ್ದಾರೆ.
Tagged: mangalore
ಒಣಮೀನು ಎಂದರೆ ಕುಡ್ಲದ ಬ್ರ್ಯಾಂಡ್
ಒಣಮೀನು ಕುಡ್ಲದ ಭಾಷೆಯಲ್ಲಿ ಹೇಳುವುದಾದರೆ ನುಂಗೆಲ್ ಮೀನ್. ಕುಡ್ಲ ಅರ್ಥಾತ್ ಕರಾವಳಿಯ ಬ್ರ್ಯಾಂಡ್ ಪಟ್ಟಿಯಲ್ಲಿ ಒಂದಾಗಿದೆ. ಕಾರಣ ಮಂಗಳೂರಿನ ಬೆಂಗ್ರೆ, ಹೊಯಿಗೆ ಬಜಾರ್, ಬೊಂಬು ಬಜಾರ್ ಎಲ್ಲವೂ ನುಂಗೇಲ್ ಮೀನಿಗೆ ಫೇಮಸ್ ಸ್ಥಳಗಳು.
ಗುಜರಾತ್ ಹಾಗೂ ಉಡುಪಿಯ ಮಲ್ಪೆಯಿಂದಲೂ ಒಣಮೀನು ಮಂಗಳೂರಿನ ಬೊಂಬು ಬಜಾರ್ ನ ಗೋದಾಮುಗಳಲ್ಲಿ ತುಂಬಿಸಲಾಗುತ್ತದೆ. ಆದರೆ ಎಲ್ಲಿಂದಲ್ಲೂ ಒಣಮೀನು ತಂದರೂಕೂಡ ಕರಾವಳಿಯ ಒಣಮೀನಿನ ಮುಂದೆ ಯಾವುದು ಇಲ್ಲ ಕಾರಣ ಇಲ್ಲಿನ ಬಿಸಿಲು ಜತೆಗೆ ಕಡಲಿನ ನೀರು ಸೇರುವ ಉಪ್ಪು ಎಲ್ಲವೂ ಒಣಮೀನಿಗೆ ಉತ್ತಮ ವ್ಯಾಲು ತಂದು ಕೊಡುತ್ತದೆ. ಇಲ್ಲಿಂದ ಹೊರರಾಜ್ಯಗಳಿಗೆ ಸೇರಿದಂತೆ ವಿದೇಶಗಳಿಗೂ ಕುಡ್ಲದ ನುಂಗೆಲ್ ಮೀನ್ ರಫ್ತು ಅಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರ.
ಕುಡ್ಲದ ಮೊದಲ ಸ್ಟಾರ್ ಹೋಟೆಲ್ ಗೊತ್ತಾ..?
ಕುಡ್ಲದ ಮೊದಲ ಸ್ಟಾರ್ ಹೋಟೆಲ್ ಯಾವುದು ಎಂದು ಹುಡುಕಾಡಿದರೆ ಸಿಗುವ ಮೊದಲ ಹೆಸರು ವುಡ್ ಲ್ಯಾಂಡ್. ಜ್ಯೋತಿ ಯಿಂದ ಇಳಿದು ಕೊಂಚ ಕೆಳಗೆ ಬಂದರೆ ಸಾಕು ವುಡ್ ಲ್ಯಾಂಡ್ ಸಿಗುತ್ತದೆ ಮುಖ್ಯ ವಾಗಿ ಸಿಟಿಯೊಳಗೆ ಇಷ್ಟೊಂದು ಪಾರ್ಕಿಂಗ್ ಗೆ ವ್ಯವಸ್ಥೆ ಇರುವ ಹೋಟೆಲ್ ಯಾವುದು ಇಲ್ಲ. ಇಲ್ಲಿನ ಫುಡ್ ಕುರಿತು ಎರಡು ಮಾತಿಲ್ಲ ದೀ ಬೆಸ್ಟ್ ಎನ್ನುತ್ತಾರೆ ಕುಡ್ಲದ ಜನ. ಹೋಟೆಲ್ ಒಳಗೆ ಹೋಗದೇ ನೀವು ಪಾರ್ಕಿಂಗ್ ನಲ್ಲಿಯೇ ಕೂತು ತಿನ್ನುವ ಕಲ್ಚರ್ ಬೆಳೆಸಿದ ಕುಡ್ಲದ ಮೊದಲ ಹೋಟೆಲ್ ಎನ್ನುವುದು ಗ್ರಾಹಕರ ಅಭಿಪ್ರಾಯ.
ಏಕಾಗ್ರತೆ ಸಾಧಿಸಲು ಯೋಗ ಅಗತ್ಯ
ಪ್ರಾಚೀನ ಕಾಲದಿಂದಲ್ಲೂ ಋಷಿಮುನಿಗಳು ಯೋಗದಿಂದ ಸತ್ಯದರ್ಶನವನ್ನು ಕಂಡುಕೊಂಡು ಬಂದಿದ್ದಾರೆ. ಆರೋಗ್ಯಕ್ಕೂ, ಯೋಗಕ್ಕೂ ಅವಿನಾಭಾವ ಸಂಬಂಧವಿದೆ. ಓಂಕಾರಕ್ಕೆ ಅಗಾಧವಾದ ಶಕ್ತಿಯಿದೆ. ಓಂಕಾರವನ್ನು ನಮ್ಮದಾಗಿಸಿಕೊಂಡರೆ ಏಕಾಗ್ರತೆ ಸಾಧಿಸಲು ಸಾಧ್ಯ. ಯೋಗ ನಿಜವಾದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಇದರಿಂದ ಬದುಕನ್ನು ಸುಂದರಗೊಳಿಸಲು ಸಾಧ್ಯ ಎಂದು ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬಿಜಿಎಸ್ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿ, ಯೋಗದ ಅಸ್ಮಿತೆಯನ್ನು ತಾಯಿಯ ಗರ್ಭದಿಂದಲೇ ಗುರುತಿಸಬಹುದು. ಯೋಗ ಎಂದರೆ ದೈಹಿಕ ಮಾನಸಿಕ ಆಚರಣೆಗಳ ಬೋಧನಾ ಶಾಲೆ ಎಂದು ಕರೆಯಬಹುದು. ವ್ಯಕ್ತಿಯು ತನ್ನನ್ನು ತಾನು ಅರ್ಥಮಾಡಿಕೊಂಡು ಅನುಭೂತಿಯನ್ನು ಪಡೆಯಲು ಯೋಗ ಅಗತ್ಯವಾಗಿದೆ. ಜೀವನದೊಂದಿಗೆ ಪರಮಾತ್ಮನನ್ನು ಲೀನವಾಗಿಸುವುದೇ ಯೋಗ, ಮಾನವ ಪ್ರತಿ ದಿನ ಮನೋಗ್ಲಾನಿಯಾಗಿ ಬದುಕುತ್ತಿದ್ದಾನೆ. ಅವನು ತಿನ್ನುವ ಆಹಾರ, ಬದುಕುವ ಪರಿಸರ ಶರೀರವನ್ನು ಜಾಡ್ಯವಾಗಿಸಿದೆ. ಈ ಶಾರೀರಿಕ ಬಾಧೆಯನ್ನು ಮೀರಲು ಯೋಗಸಾಧನಗಳು ಸಹಕಾರಿಯಾಗಿದೆ ಎಂದರು.
ಹೊಸ್ಮಾರು ಬಲ್ಯೊಟ್ಟು ಗುರುಕುಲ ಆಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ ಅವರು ಯೋಗವು ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದೆ. ಭಗವದ್ಗೀತೆಯ ೧೮ನೇ ಅಧ್ಯಾಯವು ಯೋಗದ ಬಗ್ಗೆ ಮಾತನಾಡುತ್ತದೆ ಎಂದರಲ್ಲದೇ ತಪಸ್ವಿಯಾಗಲು ಯೋಗ ಪ್ರಧಾನವಾದ ಅಸ್ತ್ರ ಎಂದರು. ಕಾರ್ಯಕ್ರಮದಲ್ಲಿ ಬಿಜಿಎಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಸುಬ್ಬಕಾರಡ್ಕ, ಬಿಜಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಲತಾ ರಾಜಾರಾಮ್, ಬಿಜಿಎಸ್ ಎಜುಕೇಷನ್ ಸೆಂಟರ್ನ ಪ್ರಾಂಶುಪಾಲರಾದ ರೇಷ್ಮಾ ಸಿ ನಾಯರ್, ಬಿಜಿಎಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಶ್ಮಿ ಉಪಸ್ಥಿತರಿದ್ದರು. ನರಸಿಂಹ ಕುಲಕರ್ಣಿ ಹಾಗೂ ಜಗದೀಶ ಮುರ ಅವರು ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರು , ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಾರಂಭವನ್ನು ವಿದ್ಯಾರ್ಥಿಗಳಾದ ಸ್ನೇಹ ನಿರೂಪಿಸಿ, ಕಾವ್ಯ ಭಟ್ ಸ್ವಾಗತಿಸಿ ಪ್ರತೀಕ್ಷಾ ಕೆ ವಂದಿಸಿದರು.
ಏಕಾಗ್ರತೆ ಸಾಧಿಸಲು ಯೋಗ ಅಗತ್ಯ
ಪ್ರಾಚೀನ ಕಾಲದಿಂದಲ್ಲೂ ಋಷಿಮುನಿಗಳು ಯೋಗದಿಂದ ಸತ್ಯದರ್ಶನವನ್ನು ಕಂಡುಕೊಂಡು ಬಂದಿದ್ದಾರೆ. ಆರೋಗ್ಯಕ್ಕೂ, ಯೋಗಕ್ಕೂ ಅವಿನಾಭಾವ ಸಂಬಂಧವಿದೆ. ಓಂಕಾರಕ್ಕೆ ಅಗಾಧವಾದ ಶಕ್ತಿಯಿದೆ. ಓಂಕಾರವನ್ನು ನಮ್ಮದಾಗಿಸಿಕೊಂಡರೆ ಏಕಾಗ್ರತೆ ಸಾಧಿಸಲು ಸಾಧ್ಯ. ಯೋಗ ನಿಜವಾದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಇದರಿಂದ ಬದುಕನ್ನು ಸುಂದರಗೊಳಿಸಲು ಸಾಧ್ಯ ಎಂದು ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬಿಜಿಎಸ್ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿ, ಯೋಗದ ಅಸ್ಮಿತೆಯನ್ನು ತಾಯಿಯ ಗರ್ಭದಿಂದಲೇ ಗುರುತಿಸಬಹುದು. ಯೋಗ ಎಂದರೆ ದೈಹಿಕ ಮಾನಸಿಕ ಆಚರಣೆಗಳ ಬೋಧನಾ ಶಾಲೆ ಎಂದು ಕರೆಯಬಹುದು. ವ್ಯಕ್ತಿಯು ತನ್ನನ್ನು ತಾನು ಅರ್ಥಮಾಡಿಕೊಂಡು ಅನುಭೂತಿಯನ್ನು ಪಡೆಯಲು ಯೋಗ ಅಗತ್ಯವಾಗಿದೆ. ಜೀವನದೊಂದಿಗೆ ಪರಮಾತ್ಮನನ್ನು ಲೀನವಾಗಿಸುವುದೇ ಯೋಗ, ಮಾನವ ಪ್ರತಿ ದಿನ ಮನೋಗ್ಲಾನಿಯಾಗಿ ಬದುಕುತ್ತಿದ್ದಾನೆ. ಅವನು ತಿನ್ನುವ ಆಹಾರ, ಬದುಕುವ ಪರಿಸರ ಶರೀರವನ್ನು ಜಾಡ್ಯವಾಗಿಸಿದೆ. ಈ ಶಾರೀರಿಕ ಬಾಧೆಯನ್ನು ಮೀರಲು ಯೋಗಸಾಧನಗಳು ಸಹಕಾರಿಯಾಗಿದೆ ಎಂದರು.
ಹೊಸ್ಮಾರು ಬಲ್ಯೊಟ್ಟು ಗುರುಕುಲ ಆಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ ಅವರು ಯೋಗವು ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದೆ. ಭಗವದ್ಗೀತೆಯ ೧೮ನೇ ಅಧ್ಯಾಯವು ಯೋಗದ ಬಗ್ಗೆ ಮಾತನಾಡುತ್ತದೆ ಎಂದರಲ್ಲದೇ ತಪಸ್ವಿಯಾಗಲು ಯೋಗ ಪ್ರಧಾನವಾದ ಅಸ್ತ್ರ ಎಂದರು. ಕಾರ್ಯಕ್ರಮದಲ್ಲಿ ಬಿಜಿಎಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಸುಬ್ಬಕಾರಡ್ಕ, ಬಿಜಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಲತಾ ರಾಜಾರಾಮ್, ಬಿಜಿಎಸ್ ಎಜುಕೇಷನ್ ಸೆಂಟರ್ನ ಪ್ರಾಂಶುಪಾಲರಾದ ರೇಷ್ಮಾ ಸಿ ನಾಯರ್, ಬಿಜಿಎಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಶ್ಮಿ ಉಪಸ್ಥಿತರಿದ್ದರು. ನರಸಿಂಹ ಕುಲಕರ್ಣಿ ಹಾಗೂ ಜಗದೀಶ ಮುರ ಅವರು ವಿದ್ಯಾರ್ಥಿಗಳಿಗೆ ಯೋಗಾಸನಗಳನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರು , ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಾರಂಭವನ್ನು ವಿದ್ಯಾರ್ಥಿಗಳಾದ ಸ್ನೇಹ ನಿರೂಪಿಸಿ, ಕಾವ್ಯ ಭಟ್ ಸ್ವಾಗತಿಸಿ ಪ್ರತೀಕ್ಷಾ ಕೆ ವಂದಿಸಿದರು.