Tagged: kudlacity

ಕುಡ್ಲದ ಹಾಟ್ ವೆದರ್‌ಗೆ ಹೀಗೊಂದು ತಂತ್ರ !

ಕುಡ್ಲ ಮಾತ್ರವಲ್ಲ ಇಡೀ ಕರಾವಳಿ ನಗರಿಯೇ ಬಿಸಿಲಿನ ಬೇಗೆಯಲ್ಲಿ ನಿತ್ಯನೂ ಸುಡುತ್ತಿದೆ. ಒಂದೆಡೆ ಮಳೆ ಇಲ್ಲದೇ ನೀರಿಗೆ ತಾತ್ವರ ಕಾಣಿಸಿಕೊಂಡರೆ ಇನ್ನು ದೇವಸ್ಥಾನ, ಹೋಟೆಲ್‌ಗಳಲ್ಲಿಯೂ ನೀರಿನ ಬರ ಕಾಣಿಸಿಕೊಂಡಿದೆ.

ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ನೋಡಿದರೆ ತಕ್ಷಣವೇ ಒಂದು ಬಿಂದಿಗೆ ನೀರನ್ನು ಮೈಗೆ ಹಾಕಿಕೊಂಡು ಬಿಡೋಣ ಎನ್ನುವ ಭಾವನೆ ಕುಡ್ಲದ ಮಂದಿಗೆ ಮೂಡಿದರೆ ಅದರಲ್ಲಿ ಯಾವುದೇ ವಿಶೇಷ ಇಲ್ಲ ಮಾರಾಯ್ರೆ.

ಕರಾವಳಿ ಮೀನುಗಾರರ ಹೆಸರು ಕೆಡಿಸಿದ ಕ್ಲಾತಿ!

ಕೆಲವು ತಿಂಗಳ ಹಿಂದೆ ಕೇರಳ ಸೇರಿದಂತೆ ನೆರೆಯ ರಾಜ್ಯಗಳಿಗೆ ಅಪ್ಪಳಿಸಿದ ಓಖಿ ಚಂಡಮಾರುತದ ಪ್ರಭಾವ ಕಡಿಮೆಯಾದರೂ ಕರಾವಳಿಯ ಮೀನುಗಾರರು ಮಾತ್ರ ಇನ್ನು ಕೂಡ ಅದರ ಪ್ರಭಾವದಿಂದ ಹೊರಬಂದಿಲ್ಲ.

ಈ ಚಂಡಮಾರುತದ ಬಳಿಕ ಕರಾವಳಿ ಗೆ ಹೊಸ ಮೀನೊಂದು ಎಂಟ್ರಿ‌ಪಡೆದುಕೊಂಡಿದೆ ಇದು ಬರೀ ಫಿಶ್ ಮಿಲ್ ಗೆ ಮಾತ್ರ ಸಾಗಬೇಕಾದ ಕ್ಲಾತಿ ಮೀನು ಅತಿಯಾದ ವಾಸನೆ ಇರುವ ಈ ಮೀನು ಕರಾವಳಿಯ ಮೀನುಗಾರರ ಬಲೆಗೆ ದಿನಕ್ಕೆ 60 ಟನ್ ಗಳ ಬೀಳುತ್ತಿದೆ. ಇದರ ಪರಿಣಾಮ ಇತರ ಮೀನು ರುಚಿ ಕಳೆದು ಕೊಳ್ಳುತ್ತಿಕೊಳ್ಳುತ್ತಿದೆ ಎನ್ನುವುಮೀನುಗಾರರ ವಾದ.

ಹೆಗ್ಗಡೆಯವರು ಬರೆದ ಶಾಕಿಂಗ್ ಪತ್ರ!

ಸ್ವಾಮಿ ದಯಮಾಡಿ ಧರ್ಮಸ್ಥಳಕ್ಕೆ ಸಧ್ಯಕ್ಕೆ ಬರಬೇಡಿ. ಇಲ್ಲಿ‌ ನೀರಿನ ಸಮಸ್ಯೆ ತೀವ್ರವಾಗಿದೆ. ನಿಮ್ಮ ಪ್ರವಾಸ ಮುಂದಕ್ಕೆ ಹಾಕಿಬಿಡಿ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಯನ್ನು ಪತ್ರದ ಮೂಲಕ ಬಿಚ್ಚಿಟ್ಟವರು ಧರ್ಮಸ್ಥಳದ‌ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಈ ಮೂಲಕ ಕುಡ್ಲ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲೂ ಸಮಸ್ಯೆ ಯ ಚಿತ್ರಣ ಈ ಪತ್ರದ ಮೂಲಕ ಅನಾವರಣ ಗೊಂಡಿತು.

ಐಟಿ ಓದಿದವರು ಸಿಗ್ತಾರೆ ತೆಂಗಿನ ಕಾಯಿ ಕೀಳುವರಿಲ್ಲ !

ಮಂಗಳೂರು ಮಾತ್ರವಲ್ಲ ಇದು ಎಲ್ಲ ನಗರ, ಗ್ರಾಮಾಂತರ ಪ್ರದೇಶಗಳಲ್ಲಿರುವ ಎಲ್ಲರೂ ಹೇಳುವ ಮಾತು. ಐಟಿ, ಬಿಟಿ ಓದಿ ಬಂದವರು ಎಲ್ಲ ಕಡೆಯಲ್ಲೂ ಸಿಗ್ತಾರೆ ಮಾರಾಯ್ರೆ. ಈ ಕಾಯಿ ಕೀಳುವ ಮಂದಿಯಂತೂ ಸಿಗ್ತಾ ಇಲ್ಲ. ಸಿಕ್ಕರೂ ಕೂಡ ಒಳ್ಳೆಯ ಮೊತ್ತವನ್ನು ಕೀಳುತ್ತಾರೆ ಎನ್ನುವ ಮಾತು ಕಾಮನ್ ಆಗಿ ಸಿಗುತ್ತದೆ.

ಪಾಕೆಟ್‌ಮನಿಯಿಂದ ‘ಹನಿ’ಯ ಪರಿಸರ ಹೋರಾಟ !

ಒಂದಲ್ಲ ಎರಡಲ್ಲ ಭರ್ತಿ 3 ವರ್ಷದಲ್ಲಿ 3೦೦ಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಕಾಳಜಿಯನ್ನು ಹುಟ್ಟುಹಾಕಿದ ವಿದ್ಯಾರ್ಥಿನಿ ಹನಿ ಎಚ್. ಆರ್ ಅವರು ಇಂತಹ ಕೆಲಸವನ್ನು ಬರೀ ಹೆತ್ತವರು ಕೊಟ್ಟ ಪಾಕೆಟ್ ಮನಿಯನ್ನು ಇಟ್ಟುಕೊಂಡು ರಜಾ ದಿನಗಳಲ್ಲಿ ಮಾಡುತ್ತಿದ್ದಾರೆ.

ಪರಿಸರದ ಮೇಲೆ ಪ್ರೀತಿ ಹುಟ್ಟಲು ಯಾವುದೇ ವಯಸ್ಸಿನ ಹಂಗಿಲ್ಲ. ಯಾರು ಕೂಡ ಪರಿಸರವನ್ನು ಪ್ರೀತಿಸಬಹುದು, ಕಾಳಜಿಯನ್ನು ತೋರಿಸಬಹುದು ಎನ್ನುವುದಕ್ಕೆ ಅವರೇ ಬೆಸ್ಟ್ ಉದಾಹರಣೆ. ಮುಡಿಪಿನ ಜವಾಹರ್ ನವೋದಯ ವಿದ್ಯಾಲಯದ 7 ನೇ ತರಗತಿಯಲ್ಲಿ ಓದುತ್ತಿರುವ ಹನಿಗೆ ಪರಿಸರದ ಮೇಲೆ ವಿಶೇಷ ವ್ಯಾವೋಹ.

ಇದೇ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಅವಳು ತನ್ನದೇ ಗ್ರೀನ್ ವಾರಿಯರ್ಸ್ ತಂಡ ಕಟ್ಟಿಕೊಂಡು ಜಪ್ಪಿನಮೊಗರು, ಕಡೆಕಾರು, ಚಿಕ್ಕಮಗಳೂರು, ಬಾಳೆಹೊನ್ನೂರು ಹೀಗೆ ಹತ್ತಾರು ಕಡೆಯಲ್ಲಿ 3೦೦ಕ್ಕೂ ಅಧಿಕ ಗಿಡಗಳನ್ನು ನೆಡುತ್ತಾ ಹಸಿರು ಉಳಿಸಿ ಎನ್ನುವ ಅಭಿಯಾನವನ್ನು ಯಾರಿಗೂ ಹೇಳದೇ ಹುಟ್ಟುಹಾಕಿದ್ದಾರೆ.

ಅದು ಕೂಡ ತನ್ನ ಶಾಲಾ ರಜಾ ದಿನಗಳಲ್ಲಿ ಎನ್ನುವುದು ವಿಶೇಷ. ಮಕ್ಕಳಿಗೆ ರಜೆ ಎಂದಾಕ್ಷಣ ಪ್ರವಾಸಕ್ಕೆ ಹೋಗುವುದು, ಆಟವಾಡುವುದು ಹೀಗೆ ಹತ್ತಾರು ಚಟುವಟಿಕೆಗಳಲ್ಲಿಯೇ ಮಗ್ನರಾಗುವುದು ಕಾಮನ್. ಆದರೆ ಹನಿ ಕೊಂಚ ಭಿನ್ನ ಹುಡುಗಿ ಅವಳಿಗೆ ರಜಾ ದಿನಗಳಲ್ಲಿ ಪರಿಸರದ ಬಗ್ಗೆಯೇ ಹೆಚ್ಚು ಕಾಳಜಿ ಬರುತ್ತದೆ.