Tagged: mangalore

ಪಾಕೆಟ್‌ಮನಿಯಿಂದ ‘ಹನಿ’ಯ ಪರಿಸರ ಹೋರಾಟ !

ಒಂದಲ್ಲ ಎರಡಲ್ಲ ಭರ್ತಿ 3 ವರ್ಷದಲ್ಲಿ 3೦೦ಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಕಾಳಜಿಯನ್ನು ಹುಟ್ಟುಹಾಕಿದ ವಿದ್ಯಾರ್ಥಿನಿ ಹನಿ ಎಚ್. ಆರ್ ಅವರು ಇಂತಹ ಕೆಲಸವನ್ನು ಬರೀ ಹೆತ್ತವರು ಕೊಟ್ಟ ಪಾಕೆಟ್ ಮನಿಯನ್ನು ಇಟ್ಟುಕೊಂಡು ರಜಾ ದಿನಗಳಲ್ಲಿ ಮಾಡುತ್ತಿದ್ದಾರೆ.

ಪರಿಸರದ ಮೇಲೆ ಪ್ರೀತಿ ಹುಟ್ಟಲು ಯಾವುದೇ ವಯಸ್ಸಿನ ಹಂಗಿಲ್ಲ. ಯಾರು ಕೂಡ ಪರಿಸರವನ್ನು ಪ್ರೀತಿಸಬಹುದು, ಕಾಳಜಿಯನ್ನು ತೋರಿಸಬಹುದು ಎನ್ನುವುದಕ್ಕೆ ಅವರೇ ಬೆಸ್ಟ್ ಉದಾಹರಣೆ. ಮುಡಿಪಿನ ಜವಾಹರ್ ನವೋದಯ ವಿದ್ಯಾಲಯದ 7 ನೇ ತರಗತಿಯಲ್ಲಿ ಓದುತ್ತಿರುವ ಹನಿಗೆ ಪರಿಸರದ ಮೇಲೆ ವಿಶೇಷ ವ್ಯಾವೋಹ.

ಇದೇ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಅವಳು ತನ್ನದೇ ಗ್ರೀನ್ ವಾರಿಯರ್ಸ್ ತಂಡ ಕಟ್ಟಿಕೊಂಡು ಜಪ್ಪಿನಮೊಗರು, ಕಡೆಕಾರು, ಚಿಕ್ಕಮಗಳೂರು, ಬಾಳೆಹೊನ್ನೂರು ಹೀಗೆ ಹತ್ತಾರು ಕಡೆಯಲ್ಲಿ 3೦೦ಕ್ಕೂ ಅಧಿಕ ಗಿಡಗಳನ್ನು ನೆಡುತ್ತಾ ಹಸಿರು ಉಳಿಸಿ ಎನ್ನುವ ಅಭಿಯಾನವನ್ನು ಯಾರಿಗೂ ಹೇಳದೇ ಹುಟ್ಟುಹಾಕಿದ್ದಾರೆ.

ಅದು ಕೂಡ ತನ್ನ ಶಾಲಾ ರಜಾ ದಿನಗಳಲ್ಲಿ ಎನ್ನುವುದು ವಿಶೇಷ. ಮಕ್ಕಳಿಗೆ ರಜೆ ಎಂದಾಕ್ಷಣ ಪ್ರವಾಸಕ್ಕೆ ಹೋಗುವುದು, ಆಟವಾಡುವುದು ಹೀಗೆ ಹತ್ತಾರು ಚಟುವಟಿಕೆಗಳಲ್ಲಿಯೇ ಮಗ್ನರಾಗುವುದು ಕಾಮನ್. ಆದರೆ ಹನಿ ಕೊಂಚ ಭಿನ್ನ ಹುಡುಗಿ ಅವಳಿಗೆ ರಜಾ ದಿನಗಳಲ್ಲಿ ಪರಿಸರದ ಬಗ್ಗೆಯೇ ಹೆಚ್ಚು ಕಾಳಜಿ ಬರುತ್ತದೆ.

ಕುಡ್ಲದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೂ ಬರ

ಒಂದೆಡೆ ಶಾಲಾ ಕಾಲೇಜುಗಳಿಗೆ ರಜೆ ಮತ್ತೊಂದು ಕಡೆ ಮುಸ್ಲಿಮರ ಉಪವಾಸ ಎರಡು ಜತೆಯಾದ ಪರಿಣಾಮ ಮಂಗಳೂರಿನ ಪ್ರಮುಖ ಆಸ್ಪತ್ರೆ ಸೇರಿದಂತೆ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಗಳ ಮೂಲಕ ರಕ್ತ‌ನೀಡುತ್ತಿದ್ದರು. ಮುಸ್ಲಿಂ ಸಂಘಟನೆ ಗಳು ಕೂಡ ಇದೇ ರೀತಿಯ ಕೆಲ್ಸ ಮಾಡುತ್ತಿದ್ದರು. ಆದರೆ ಇಬ್ಬರು ಈ ಸಲ ರಕ್ತ ನೀಡದ‌ ಪರಿಣಾಮ ಬ್ಲಡ್ ಬ್ಯಾಂಕ್ ಗಳಲ್ಲಿ ತೀವ್ರ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಕುಡ್ಲದ ಮೋಡಗಳು ಮಳೆ ಸುರಿಸೋದಿಲ್ಲ !

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲಮಳೆಯಾಗುವ ಸಾಧ್ಯತೆಗಳಿಲ್ಲ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಾತ್ರ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಭಾಗಶ: ಮೋಡ ಕವಿದ ವಾತಾವರಣ ನೆಲೆಸಿದರೂ ರಾತ್ರಿಯಾಗುತ್ತಿದ್ದಂತೆ ಮೋಡ ಚದುರಿ ಹೋಗುತ್ತಿದೆ. ಫೋನಿ ಚಂಡಮಾರುತದ ಮಳೆ ನಿರೀಕ್ಷೆ ಕೂಡ ಜಿಲ್ಲೆಯ ಮಟ್ಟಿಗೆ ಹುಸಿಯಾಗಿದೆ. ಈ ನಡುವೆ ಚಂಡಮಾರುತ ಬಳಿಕ ಇಳಿಕೆಯಾದ ತಾಪಮಾನ ಜಿಲ್ಲೆಯಲ್ಲಿ ಮತ್ತೆ ಏರುತ್ತಿದೆ.

ಮಂಗಳೂರಿಗೆ ಇನ್ನು ನಾಲ್ಕೇ ದಿನ ನೀರು !

ಜಲಕ್ಷಾಮದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಜಾರಿಗೊಳಿಸಿದ ನೀರು ರೇಶನಿಂಗ್ ಮೇ 16ರಿಂದ ಮತ್ತೆ ಪರಿಷ್ಕರಣೆಯಾಗಲಿದೆ.
ಇದೀಗ 4 ದಿನಗಳ ಕಾಲ ಸರಬರಾಜು ಮಾಡುತ್ತಿರುವ ನೀರನ್ನು ಯಾವುದೇ ಬದಲಾವಣೆಯಿಲ್ಲದೆ 4 ದಿನಗಳ ಕಾಲ ನೀಡಿ 2 ದಿನ ಸ್ಥಗಿತಗೊಳಿಸುವ ನೀರನ್ನು 4 ದಿನಗಳಿಗೆ ಏರಿಸಲಾಗಿದೆ.
ಮೇ 16 ರಂದು ಬೆಳಗ್ಗೆ 6 ಗಂಟೆಯಿಂದ ಮೇ 20 ರಂದು ಬೆಳಗ್ಗೆ 6 ಗಂಟೆ ವರೆಗೆ ನಿರಂತರ 96 ತಾಸು ನೀರು ಪೂರೈಕೆ ಇರುವುದು. ಮೇ 20 ರಂದು ಬೆಳಗ್ಗೆ 6 ಗಂಟೆಯಿಂದ ಮೇ 24 ರ ಬೆಳಗ್ಗೆ 6 ಗಂಟೆ ವರೆಗೆ ಸತತ 96 ತಾಸು ನೀರು ಸ್ಥಗಿತಗೊಳ್ಳಲಿದೆ. ಜೂನ್ 1ರ ವರೆಗೆ ಪರಿಷ್ಕೃತ ರೇಶನಿಂಗ್ ಮುಂದುವರಿಯಲಿದೆ.

ಉದ್ಯೋಗ ಹುಡುಕುವ ಮಹಿಳೆಯರಿಗೆ ಫ್ರೀ ಹಾಸ್ಟೆಲ್

208-19ನೇ ಸಾಲಿನ ಆಯವ್ಯಯ ಘೋಷಣೆಯಂತೆ ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ ಪ್ರವೇಶ ಪರೀಕ್ಷೆಗಳಿಗೆ ಒಂಟಿಯಾಗಿ ಬರುವಂತಹ ಎಲ್ಲಾ ವರ್ಗದ ಮಹಿಳೆಯರಿಗೆ ವರಮಾನ ಮಿತಿಯಿಲ್ಲದೇ ೩ ದಿನಗಳವರೆಗೂ ಉಚಿತ ಊಟೋಪಹಾರ ಮತ್ತು ಸುರಕ್ಷಿತ ವಾಸ್ತವ್ಯವನ್ನು ಟ್ರಾನ್ಸಿಟ್ ಹಾಸ್ಟೆಲ್‌ಗಳಲ್ಲಿ ಕಲ್ಪಿಸಲಾಗುತ್ತದೆ.
ಬೆಂಗಳೂರಿನಲ್ಲಿ ಲಭ್ಯವಿರುವ 13 ಟ್ರಾನ್ಸಿಟ್ ಹಾಸ್ಟೆಲ್‌ಗಳು : ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&23330846, 22925898.
ಶ್ರೀ ಶಾರದಾ ಕುಟೀರ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಶಂಕರಾಪುರ ದೂರವಾಣಿ ಸಂಖ್ಯೆ: 08026674697.
ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&22238574,

ಯುನಿವರ್ಸಿಟಿ ವುಮೆನ್ಸ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&22223314, 26631838, 9845023783.

ಮಹಾತ್ಮಾಗಾಂಧಿ ವಿದ್ಯಾಪೀಠ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26662226,
ಜಯನಗರ ಸ್ತ್ರೀ ಸಮಾಜ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26674697,
ಆಲ್ ಇಂಡಿಯಾ ವುಮೆನ್ಸ್ ಕಾನ್ಫೋರೆನ್ಸ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26349676.
ಬಸವ ಸಮಿತಿ, ಬಸವ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ:080&22723355,
ವಿಶಾಲ್ ವಿದ್ಯಾ ಸಂಸ್ಥೆ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ:9341289653.
ಕರ್ನಾಟಕ ರೂರಲ್ ಪೂರ್ ಆಂಡ್ ಹ್ಯಾಂಡಿಕ್ಯಾಪ್ಡ್ ಡೆವೆಲಪ್ ಮೆಂಟ್ ಸೊಸೈಟಿ, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್, ಪೀನ್ಯಾ. ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯುನಿವರ್ಸಿಟಿ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&231604331,
ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&25634813,
ರೀಜಿನಲ್ ಇಂಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸೌತ್ ಇಂಡಿಯಾ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&23213243, 23218452.