Tagged: mangalore

ಎಂಕ್ಲೆಗ್ ಸೆಂಚುರಿ ಬೋಡು?

ಭಾರತ- ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಮ್ಯಾಂಚೆಸ್ಟರ್ ಸ್ಟೇಡಿಯಂನಲ್ಲಿ ತುಳು ಡೈಲಾಗ್ ಕೇಳಿ ಬಂದಿದೆ. ಪಂದ್ಯ ನೋಡಲು ಬಂದ ಮಂಗ ಳೂರಿನ ಇಬ್ಬರು ಗ್ಯಾಲರಿಯಲ್ಲಿ ಕೂತು ರಾಹುಲ್ ಅವರನ್ನು ಉಲ್ಲೇ ಖೀಸಿ ತುಳುವಿನಲ್ಲೇ ಮಾತನಾಡಿ ಸಂಭ್ರಮಿಸಿದ್ದಾರೆ.

ಮಲೇಶ್ಯದಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಮಂಗಳೂರಿನ ಕದ್ರಿಯ ರೋಹನ್ ಶೆಟ್ಟಿ ಮತ್ತು ಉರ್ವಾದ ಸುಶಾಂತ್ ಅವರು ಕ್ರಿಕೆಟ್ ವೀಕ್ಷಣೆಗೆ ಮ್ಯಾಂಚೆಸ್ಟರ್‌ಗೆ ತೆರಳಿದ್ದರು. ಡೀಪ್ ಸ್ಕೆ ರ್‌ಲೆಗ್ ಸ್ಟಾಂಡ್‌ನಲ್ಲಿ ಕ್ರಿಕೆಟ್ ವೀಕ್ಷಿಸುವಾಗ ಅಲ್ಲೇ ಕೂಗಳತೆ ದೂರದಲ್ಲಿ ರಾಹುಲ್ ಅವರು ಕ್ಷೇತ್ರರಕ್ಷಣೆ ಮಾಡುತ್ತಿದ್ದರು. ರಾಹುಲ್ ಕೂಡ ಮಂಗಳೂರಿನವರಾದ್ದರಿಂದ ಅವರನ್ನು ಉಲ್ಲೇಖೀಸಿ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ.

ರಾಹುಲ್ ಎಂಚ ಉಲ್ಲರ್ .. ರಾಹುಲ್ ಎಂಕ್ಲೆಗ್ ಸೆಂಚುರಿ ಬೋಡು .. ಎಂಕ್ಲ್ ಕುಡ್ಲಡ್ದ್ ಬೈದ’ (ರಾಹುಲ್ ಹೇಗಿದ್ದೀರಿ, ರಾಹುಲ್ ನಮಗೆ ನಿಮ್ಮ ಶತಕ ನೋಡಬೇಕು .. ನಾವು ಮಂಗಳೂರಿನಿಂದ ಬಂದಿದ್ದೇವೆ) ಎಂದು ರೋಹನ್ ಶೆಟ್ಟಿ ಅವರು ರಾಹುಲ್ ಅವರಿಗೆ ಕೇಳುವಂತೆ ಹೇಳಿದ್ದಾರೆ. ಸುಶಾಂತ್ ಅವರು ವೀಡಿಯೊ ಮಾಡಿದ್ದಾರೆ. ಇವರ ಮಾತು ಕೇಳಿದ ರಾಹುಲ್ ಇವರತ್ತ ಕೈ ಬೀಸಿದ್ದಾರೆ.

ಆಹಾರ ಪಾರ್ಸೆಲ್ ಗೆ ಕುಡ್ಲದ ಹುಡುಗಿಯರ ಲಗ್ಗೆ

ಕುಡ್ಲದಲ್ಲಿ ಆಹಾರ ಪಾರ್ಸೆಲ್ ಅಥವಾ ಫುಡ್ ಡೆಲಿವರಿ ವ್ಯಾಪಾರ ಸಿಕ್ಕಾಪಟ್ಟೆ ಜೋರಾಗಿ ನಡೆಯುತ್ತಿದೆ ಅದರಲ್ಲೂ ಮೆಟ್ರೋಪಾಲಿಟನ್ ಸಿಟಿಯಲ್ಲಿ ಈಗಾಗಲೇ ಹುಡುಗರ ಜತೆಯಲ್ಲಿ ಹುಡುಗಿಯರು ಕೂಡ ಫುಡ್ ಡೆಲಿವರಿ ವ್ಯವಸ್ಥೆ ಯೊಳಗೆ ಬಂದು ನಿಂತಿದ್ದಾರೆ ಕುಡ್ಲದ ಲ್ಲೂ ಈಗ ಡೆಲಿವರಿ ಬಾಯ್ಸ್ ಜತೆಯಲ್ಲಿ ಡೆಲಿವರಿ ಗರ್ಲ್ಸ್ ಕೂಡ ಸೇರಿಕೊಳ್ಳುತ್ತಿದ್ದಾರೆ.

ಒಂದು ಲೆಕ್ಕದ ಪ್ರಕಾರ ಮೂರು ಮಂದಿ ಹುಡುಗಿಯರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಅದರಲ್ಲಿ ಉರ್ವದ ಮೇಘನಾ ಕೂಡ ಒಬ್ಬರು. ಅವರು ಬೇಸಿಕಲಿ ಬಿಎ ಸಾಹಿತ್ಯ ಓದಿದವರು ವಿದೇಶದಲ್ಲಿ ದುಡಿದು ಬಂದವರು ಆದರೂ ಈ ಫುಡ್ ಡೆಲಿವರಿ ಗರ್ಲ್ಸ್ ವ್ಯವಸ್ಥೆ ಯ ಪಾತ್ರವಾಗಬೇಕೆಂದು ಮುಂದೆ ಬಂದಿದ್ದಾರೆ. ಹುಡುಗಿಯರು ಯಾವುದಕ್ಕೂ ಕಮ್ಮಿ ಇಲ್ಲ ಎನ್ನುಎನ್ನುವುದಕ್ಕೆ ಇದೊಂದು‌ ಉತ್ತಮ ಸ್ಯಾಂಪಲ್ ಎನ್ನಲು ಯಾವುದೇ ಅಡ್ಡಿ ಮಾತು ಇಲ್ಲ.

ಕುಡ್ಲದಲ್ಲಿ ಇವರದ್ದೇ ಹೈ ಜೋಶ್‌ ಮಾರಾಯ್ರೆ

ಕುಡ್ಲದಲ್ಲಿ ಜೀತ್ ಮಿಲಾನ್ ರೋಚ್ ಅವರದ್ದೇ ಸುದ್ದಿ. ಕಾರಣ ಇಷ್ಟೇ ಜೂನ್ 15 ರಂದು ನಂದಿಗುಡ್ಡೆ ಸಶ್ಮಾನದಲ್ಲಿ ಪೂರ್ತಿ ಹತ್ತು ಗಂಟೆ ಬರೀ ಗುಂಡಿ ತೋಡಿ ಭರ್ತಿ 1052 ಗಿಡಗಳನ್ನು ನೆಟ್ಟಿದ್ದಾರೆ.

ಇದಕ್ಕೆ ಅವರ ಪತ್ನಿ ಸೆಲ್ಮಾ ಹಾಗೂ ಅವರ ಮಕ್ಕಳಾದ ಇತಾನ್, ನತಾನ್ ಹಾಗೂ ಸಹೋದರ ಸುಮಂತ್ ಸಾಥ್ ನೀಡಿದ್ದಾರೆ. ಇದೊಂದು ಅಪರೂಪದ ಕ್ಷಣ ಎಂದರೂ ತಪ್ಪಾಗಲಾರದು. ಕುಡ್ಲದಲ್ಲಿ ಹಸಿರು ಕ್ರಾಂತಿ ಇಂತಹ ಜನರಿಂದ ನಿರೀಕ್ಷೆ ಮಾಡಬಹುದು.

ಕುಡ್ಲ ಎಂದರೆ ಬೀಚ್ ಸಿಟಿ

ಕುಡ್ಲ ದಲ್ಲಿ ಒಂದಲ್ಲ ಎರಡಲ್ಲ ಭರ್ತಿ 10 ಕ್ಕೂ ಅಧಿಕ ಬೀಚ್ ಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ವಿಶೇಷ ಎಂದರೆ ಕರ್ನಾಟಕ ದ ಯಾವುದೇ ಊರಲ್ಲಿ ಇಷ್ಟು ಬೀಚ್ ಗಳಿರುವ ನಗರಗಳಿಲ್ಲ ಅದಕ್ಕೂ ಮುಖ್ಯವಾಗಿ ಇಲ್ಲಿರುವ ಎಲ್ಲ ಬೀಚ್ ಗಳು ಸಿಟಿಯ 20 ಕಿಮೀ ದೂರದಲ್ಲಿದೆ.

ಕುಡ್ಲದಲ್ಲಿ ಮಳೆರಾಯನ ಆಟಕ್ಕೆ ರಸ್ತೆಯಲ್ಲ ತೋಡು

ಮಳೆರಾಯನ ಆಗಮನಕ್ಕೆ ಕಾದು ಕೂತಿದ್ದ ಕುಡ್ಲದ ಜನರು ಈಗ ಫುಲ್ ಚಂಡಿ ಮುದ್ದೆ ಆಗಿದ್ದಾರೆ. ಎರಡು ದಿನಗಳಿಂದ ನಿಧಾನವಾಗಿ ಇಳೆಗೆ ಬಂದ ಮಳೆರಾಯ ಪೂರ್ಣ ಪ್ರಮಾಣದಲ್ಲಿ ತನ್ನ ಕೆಲಸ ಆರಂಭ ಮಾಡಿದ್ಸಾನೆ. ವಿಶೇಷ ಎಂದರೆ ಮಳೆರಾಯನ ಆಗಮನದ ನಿರೀಕ್ಷೆ ಇಟ್ಟು ಕೊಳ್ಳ ದ ಸ್ಥಳೀಯ ಆಡಳಿತ ತನ್ನ ಕೆಲಸವನ್ನು ಪೂರ್ಣ ಗೊಳಿಸದೇ ಇರುವುದರಿಂದ ರಸ್ತೆ ಎಲ್ಲವೂ ತೋಡುಗಳಾಗಿ ಬದಲಾಗಿದೆ. ತೋಡುಗಳು ಪೂರ್ಣ ಪ್ರಮಾಣದಲ್ಲಿ ಹೂಳು ತೆಗೆಯದ ಪರಿಣಾಮ ಪೂರ್ತಿ ತುಂಬಿ ನೀರು ರಸ್ತೆಯಲ್ಲಿ ಹರಿದಾಡುತ್ತಿದೆ.