Tagged: mangalore

ಕುಡ್ಲದವರ ಒತ್ತಡಪೂರ್ಣ ಬದುಕಿಗೆ ರಿಲ್ಯಾಕ್ಸ್ ಕೊಡುವ ಕಪ್ಪಿಂಗ್ ಥೆರಪಿ

ಕುಡ್ಲದ ಸಿಟಿ ಮಂದಿ ಪ್ರತಿಯೊಂದು ಕ್ಷಣಕೂಡ ಒತ್ತಡಪೂರ್ಣ ಬದುಕಿನಲ್ಲಿಯೇ ಕಾಲ ಕಳೆಯುತ್ತಾರೆ. ಈ ಒತ್ತಡಪೂರ್ಣ ಬದುಕಿನಿಂದ ನಮ್ಮ ದೇಹಕ್ಕೆ ವಿಪರೀತವಾದ ಹಾನಿಯಾಗುತ್ತದೆ.
ಇದೇ ಹಾನಿಯಿಂದ ಕಾಯಿಲೆ ಬೇಗನೆ ಮುತ್ತಿಕೊಳ್ಳುವ ಜತೆಯಲ್ಲಿ ಸಣ್ಣ ವಯಸ್ಸಿಗೆ ದೇಹ ನಮ್ಮ ಮಾತನ್ನು ಕೇಳದ ಸ್ಥಿತಿಗೆ ಬಂದು ತಲುಪುತ್ತದೆ. ಇಂತಹ ಸಮಸ್ಯೆಯ ನಿವಾರಣೆಗೆ ಹಿಜಾಮಾದ ಕಪ್ಪಿಂಗ್ ಥೆರಪಿ ಉತ್ತಮವಾದ ಪರಿಹಾರ.
ಅದನ್ನು ಪರಿಣತರ ತಂಡದಿಂದ ಮಾಡಿಸಿದರೆ ಮಾತ್ರ ನಿಜವಾಗಿಯೂ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮಂಗಳೂರಿನ ಕುದ್ರೋಳಿಯಲ್ಲಿರುವ ಆಯುರ್ ಹೆಲ್ತ್ ಕ್ಲಿನಿಕ್‌ನ ತಜ್ಞ ವೈದ್ಯರ ತಂಡ ಇಂತಹ ಕಾರ‍್ಯದಲ್ಲಿ ಸಾಕಷ್ಟು ಯಶಸ್ಸು ಪಡೆದಿದ್ದಾರೆ. ರೋಗಿಗಳು ಕೂಡ ಅವರನ್ನು ಹುಡುಕಿಕೊಂಡು ದೂರದ ಊರಿನಿಂದ ಬರುತ್ತಾರೆ.
ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.
ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.

ಸತ್ಯನಾರಾಯಣ ಪೂಜೆ ತುಳುವರ ಪ್ರತಿ ಶುಭಕಾರ್ಯಕ್ಕೂ ಬೇಕು

ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ತುಳುನಾಡಿನಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಕ್ರಮ ಅಥವಾ ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ವಿಚಾರದಲ್ಲೂ ಸತ್ಯನಾರಾಯಣ ದೇವರ ಪೂಜೆ ಯಂತೂ ಕಡ್ಡಾಯವಾಗಿ ಇರುತ್ತದೆ.
ವಿಶೇಷ ಎಂದರೆ ಕರಾವಳಿಯ ಭೂತರಾಧನೆ, ನಾಗಾರಾಧನೆಯಂತೇ ಸತ್ಯನಾರಾಯಣ ಪೂಜೆ ಕೂಡ ವಿಶಿಷ್ಟ ಪೂಜೆ,ಆರಾಧನೆಯಾಗಿ ಗಮನ ಸೆಳೆಯುತ್ತದೆ. ಪೂಜೆಯ ಸಮಯದಲ್ಲಿ‌ ಮಾಡುವ ಪ್ರಸಾದವಂತೂ ಎಲ್ಲರಿಗೂ ಬಹಳ‌ ಪ್ರಿಯ.

ಶಾಲೆ,ಕಾಲೇಜಿಗೆ ಮತ್ತೆ ಮಳೆಯ ರಜೆ ಆರಂಭ

ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಜು.23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಡ್ಲದಲ್ಲಿ ಸೊಳ್ಳೆ ಉತ್ಪಾದನೆ ಗೆ ಭರ್ಜರಿ ದಂಡ

ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ – ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮಹಾನಗರಪಾಲಿಕೆ ಅಧಿಕಾರಿಗಳು, ಶನಿವಾರ ಹಳೇ ಟಯರ್‍ಗಳಲ್ಲಿ ನೀರು ನಿಂತು ರೋಗಕ್ಕೆ ನೀಡುತ್ತಿದ್ದ ವ್ಯಕ್ತಿಗೆ ರೂ. 5000 ದಂಡ ವಿಧಿಸಿದೆ.
ಕಣ್ಣೂರಿನ ವ್ಯಕ್ತಿಯೊಬ್ಬರು ತನ್ನ ಆವರಣದಲ್ಲ ಹಳೆಯ ಟಯರ್‍ಗಳನ್ನು ಇಟ್ಟಿದ್ದು, ಇದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹಾನಗರಪಾಲಿಕೆ ಅಧಿಕಾರಿಗಳು, ವ್ಯಕ್ತಿಗೆ ರೂ. 5000 ದಂಡ ಸ್ಥಳದಲ್ಲೇ ವಿಧಿಸಿ, ಎಚ್ಚರಿಕೆ ನೀಡಿದರು.

ಮನೆಯ ಕಿಚನ್ ವೇಸ್ಟ್ ಇಲ್ಲಿ ಲಿಕ್ವೀಡ್ ಗೊಬ್ಬರ

ತ್ಯಾಜ್ಯ ನಿರ್ವಹಣೆ ಈಗ ಎಲ್ಲೆಡೆ ಸಮಸ್ಯೆ ಆಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಯಂತೂ ನಿಮ್ಮ ತ್ಯಾಜ್ಯ ನಿಮ್ಮ ಜವಾಬ್ದಾರಿ ಎನ್ನುವ ಮಾತನ್ನು ಹೇಳುತ್ತಿದೆ. ಕುಡ್ಲದಲ್ಲಿ ಬದುಕುವ ಮುಕ್ಕಾಲು ಮಂದಿ ಪ್ಲ್ಯಾಟ್ ನಲ್ಲಿಯೇ ಉಳಿದು ಬಿಟ್ಟಿದ್ದಾರೆ. ಇವರಿಗೆ‌ ತಮ್ಮ ಮನೆಯ ತ್ಯಾಜ್ಯ ನಿರ್ವಹಣೆ ಮಾಡಲು ಇಲ್ಲೊಂದು ಸರಳ ಉಪಾಯದ ಮೂಲಕ ಉತ್ತಮವಾದ ತರಕಾರಿಯನ್ನು ಬೆಳೆಸಬಹುದು.

ಮಂಗಳಾದೇವಿ ನಗರದ ಬ್ಲ್ಯಾನಿ ಡಿಸೋಜ ತಾರಸಿ ಕೃಷಿಯಲ್ಲಿ ದೊಡ್ಡ ಹೆಸರು ಇದೇ ಕೃಷಿಯಿಂದ ವರ್ಷಕ್ಕೆ ಬರೋಬರಿ ಆದಾಯ ಪಡೆಯುತ್ತಿದ್ದಾರೆ. ಆದರೆ ಈ ಕೃಷಿಗೆ ತಮ್ಮ ಮನೆಯ ಕಿಚನ್ ವೇಸ್ಟ್ ವನ್ನು ಮಾತ್ರ ಬಳಸುತ್ತಾರೆ. ದಿನ ನಿತ್ಯ ಕಿಚನ್ ನಲ್ಲಿ ಉಳಿದ ಹಸಿ ತ್ಯಾಜ್ಯವನ್ನು ಮಿಕ್ಸಿಯಲ್ಲಿ ಹಾಕಿ ಬಳಿಕ ಅದನ್ನು ನೀರಿಗೆ ಸೇರಿಸುವ‌ ಕೆಲಸ ಮಾಡುತ್ತಾರೆ. ಈ ನೀರನ್ನು ಅವರು ತಮ್ಮ ತರಕಾರಿ, ಹಣ್ಣುಹಂಪಲು ಹೀಗೆ ಎಲ್ಲ ಕೃಷಿಗೆ ಬಳಸುತ್ತಾರೆ ಇದು ಬಹಳ ಒಳ್ಳೆಯ ಗೊಬ್ಬರವಂತೆ ವಾಸನೆಯೂ ಬರೋದಿಲ್ಲ. ಆದರೆ ನಾನ್ ವೆಜ್ ಐಟಂಗಳನ್ನು ಮಾತ್ರ ಈ ರೀತಿ ಮಾಡಲು ಸಾಧ್ಯವಿಲ್ಲ ಆದರೆ ಉಳಿದ ಬಹಳಷ್ಟು ವಸ್ತುಗಳನ್ನು ಗೊಬ್ಬರ ಮಾಡಬಹುದು.