ಮಳೆ ಬಂದ್ರೆ ಮಾತ್ರ ಕುಡ್ಲ ಸೇಫ್ ಮಾರಾಯ್ರೆ!

ಮಂಗಳೂರಿನ ಜನತೆಗೆ ಜೀವ ಜಲ‌ ಸಿಗುತ್ತಿರುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ‌ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಮಂಗಳೂರಿನಲ್ಲಿ ನೀರಿನ‌ ರೇಶನಿಂಗ್ ನಡೆದರೂ ಕೂಡ ಡ್ಯಾಂ ನಲ್ಲಿ ನೀರಿನ ಇಳಿಕೆ ಮುಂದೆ ಸಾಗುತ್ತಿದೆ.

ಒಂದು ಲೆಕ್ಕಾಚಾರ ದ ಪ್ರಕಾರ ಇನ್ನು ಒಂದು ವಾರದಲ್ಲಿ ಮಳೆ ಬರದೇ ಹೋದರೆ ಕುಡ್ಲದ ಜನತೆಗೆ ಈ ಬಾರಿ ನೀರಿನ ಮಹತ್ವದ ಕುರಿತು ಅರಿವಾಗುವ ಜತೆಯಲ್ಲಿ ನೀರಿಗಾಗಿ ಹೊಡೆದಾಡುವ ಸ್ಥಿತಿ ನಿರ್ಮಾಣ ವಾಗಲಿದೆ. ಕಾರಣ ಇನ್ನು ಡ್ಯಾಂ ನಲ್ಲಿ ಹತ್ತರಿಂದ ಹದಿನೈದು ದಿನಕ್ಕೆ ಮಾತ್ರ ನೀರು ಉಳಿದಿದೆ.

Share