ಮಂಗಳೂರಿನ ಹಂಪನಕಟ್ಟೆ ಎನ್ನುವ ಹೆಸರು ಬಹಳಷ್ಟು ಮಂದಿಗೆ ಗೊತ್ತಿರಬಹುದು. ಆದರೆ ಇದರ ಹಿಂದಿರುವ ಇತಿಹಾಸ ಕೂಡ ಬಹಳಷ್ಟು ಸೊಗಸು.
ಅಲ್ಲಿ ಅಪ್ಪಣ್ಣ ಎನ್ನುವ ಪರೋಪರಿ ವ್ಯಕ್ತಿಯೊಬ್ಬರು ಯಾರಾದರೂ ಬಿಸಿಲಿನಲ್ಲಿ ದಣಿದು ಬಂದವರಿಗೆ ಬೀದಿಯಲ್ಲಿ ನಿಂತು ನೀರು ಹಾಗೂ ಬೆಲ್ಲವನ್ನು ನೀಡಿ ಕಳುಹಿಸುತ್ತಿದ್ದರು. ಇದು ಪರಿಪಾಟ ಮತ್ತೆ ಮಂಗಳೂರಿನಲ್ಲಿ ಮುಂದುವರಿದಿದೆ.
ಕದ್ರಿಯಲ್ಲಿರುವ ಕದ್ರಿ ರಾಕ್ಸ್ ಆರ್ಟ್ ಗ್ಯಾಲರಿಗೆ ಭೇಟಿ ನೀಡಿದಾಗ ಅಲ್ಲಿ ಮೊದಲು ಇದೇ ಮಣ್ಣಿನ ಮಡಕೆಯಲ್ಲಿರುವ ತಂಪು ನೀರು ಹಾಗೂ ಬೆಲ್ಲವನ್ನು ನೀಡಿ ಸ್ವಾಗತಿಸುವ ಪರಿಪಾಟವನ್ನು ಬೆಳೆಸಿಕೊಂಡಿದ್ದಾರೆ.
ತೀರಾ ಇತ್ತೀಚೆಗೆ ಉದ್ಘಾಟನೆಯಾದ ಕದ್ರಿ ರಾಕ್ಸ್ ಆರ್ಟ್ ಗ್ಯಾಲರಿ ಮಾಲೀಕ ಹರ್ಷ ಡಿಸೋಜ ಅವರು ಈ ಹೊಸ ಕಲ್ಪನೆಯನ್ನು ಹುಟ್ಟು ಹಾಕಿ ಗಮನಸೆಳೆಯುವ ಕೆಲಸ ಮಾಡುತ್ತಿದ್ದಾರೆ.
ಹಂಪನಕಟ್ಟೆಯ ಇತಿಹಾಸ ನೆನಪಿಸಿದ ಕದ್ರಿ ರಾಕ್ಸ್
May 2, 2019