Category: ಹೊಸ ಸುದ್ದಿ

ಮಂಗಳೂರು ಮಲ್ಲಿಗೆಗೆ ಮನಸೋಲದವರಿಲ್ಲ

ಮಲ್ಲಿಗೆ ತುಳುನಾಡಿನ ಮಣ್ಣಿಂದ ಮಿಂದೆದ್ದ ಸುಗಂಧವತಿ. ಇಲ್ಲಿ ಮಲ್ಲಿಗೆ ಇಲ್ಲದೆ ಯಾವುದೇ ಮಂಗಳ ಕಾರ್ಯ ನಡೆಯುವುದಿಲ್ಲ.
ಭೌಗೋಳಿಕ ಚಿಹ್ನೆಯ ಮಾನ್ಯತೆ ಪಡೆದ ಉಡುಪಿ ಮಲ್ಲಿಗೆ ವಹಿವಾಟಿನಲ್ಲಿ ಮುಂಚೂಣಿಯಲ್ಲಿದ್ದರೆ, ಸಾಂಪ್ರದಾಯಿಕ ಹಿನ್ನೆಲೆ ಹಾಗೂ ಘಮಘಮಿಸುವ ಪರಿಮಳದಿಂದ ಮಂಗಳೂರು ಮಲ್ಲಿಗೆ ಇಂದಿಗೂ ತನ್ನದೇ ಆದ ವಿಶೇಷತೆ ಉಳಿಸಿಕೊಂಡಿದೆ.
ಮಂಗಳೂರು ಮಲ್ಲಿಗೆ ಉಡುಪಿ ಮಲ್ಲಿಗೆಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಮೊಗ್ಗಿನ ತುದಿ ಮೊನಚಾಗಿರುತ್ತದೆ. ಉಡುಪಿ ಮಲ್ಲಿಗೆ ಮೊಗ್ಗು ತುದಿ ಸ್ವಲ್ಪ ಮೊಂಡು.
ಮಧುಮಗಳ ಸಿಂಗಾರಕ್ಕೆ ಎರಡು ಚೆಂಡಾದರೂ ಮಂಗಳೂರು ಮಲ್ಲಿಗೆ ಬೇಕು ಎನ್ನುವ ನಂಬಿಕೆಯನ್ನು ಈ ಭಾಗದ ಹೆಚ್ಚಿನ ಜನರು ಬೆಳೆಸಿಕೊಂಡಿದ್ದಾರೆ. ಹಿಂದುಗಳ ಎಲ್ಲ ಮಂಗಳ ಕಾರ್ಯಕ್ರಮಗಳಿಗೆ ಈ ಹೂವು ಬೇಕೇಬೇಕು.
ಬ್ರಾಹ್ಮಣರು, ಬಂಟರು, ಜಿಎಸ್ಬಿ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.ಉಡುಪಿ ಮಲ್ಲಿಗೆ, ಶಂಕರಪುರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಮಂಗಳೂರು ಮಲ್ಲಿಗೆ ಹೀಗೆ ವಿವಿಧ ಹೆಸರುಗಳ ಮಲ್ಲಿಗೆ ಕರಾವಳಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ಸರಕಾರಿ ಪ್ರಾಥಮಿಕ ಶಾಲೆಗೆ ‘ತುಳು’ ಕಲ್ಚರಲ್ ಟಚ್ !

ಸರಕಾರಿ ಪ್ರಾಥಮಿಕ ಶಾಲೆಗೆ ‘ತುಳು’ ಕಲ್ಚರಲ್ ಟಚ್ !

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ನೋಡಿದ ಬಹಳಷ್ಟು ಮಂದಿಗೆ ಬೇಸಿಕಲಿ ಈ ಚಿತ್ರದ ಚಿತ್ರೀಕರಣವಾದ ಶಾಲೆ ಹೇಗಿರಬಹುದು ಎನ್ನುವ ಕುತೂಹಲ ಬಂದಿರಬಹುದು. ಚಿತ್ರತಂಡವೇನೂ ಈ ಶಾಲೆಯ ಉದ್ಧಾರಕ್ಕೆ ಏನಾದರೂ ಮಾಡಿದೆಯಾ ಎನ್ನುವ ಕೌತುಕದ ಪ್ರಶ್ನೆ ಬಹಳಷ್ಟು ಮಂದಿಯಲ್ಲಿ ಮೂಡಿರಬಹುದು.
ಇದಕ್ಕೆಲ್ಲ ಉತ್ತರವನ್ನು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶಾಲೆಯ ಚಿತ್ರಗಳನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ಸಂಪಾದಿಸಿಕೊಂಡಿದ್ದಾರೆ.
ಚಿತ್ರೀಕರಣಗೊಂಡ ಶಾಲೆಯ ಗೋಡೆಯಲ್ಲಿ ಈಗ ತುಳುನಾಡಿನ ಸಂಸ್ಕೃತಿ, ಕಲೆ ಜತೆಗೆ ಇಲ್ಲಿನ ಇತಿಹಾಸದ ತುಣುಕುಗಳ ದರ್ಶನವನ್ನು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮಾಡಿಸುವ ಕೆಲಸಕ್ಕೆ ಇಳಿದು ಬಿಟ್ಟು ಸಕ್ಸಸ್ ಆದ ಚಿತ್ರಗಳನ್ನು ರಿಷಬ್ ಶೆಟ್ಟಿ ತಮ್ಮ ಫೇಸ್ ಬುಕ್‌ನಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದಾರೆ.

ಮಲ್ಟಿಫ್ಲೆಕ್ಸ್ ಸವಲತ್ತು, ಕಡಿಮೆ ರೇಟು ಸುಚಿತ್ರಾ ಥಿಯೇಟರು !

ಮಂಗಳೂರಿನ ಕೆಎಸ್‌ರಾವ್ ರಸ್ತೆಯಲ್ಲಿರುವ ಖ್ಯಾತ ಸಿನಿಮಾ ಮಂದಿರಗಳಲ್ಲಿ ಒಂದಾಗಿರುವ ಸುಚಿತ್ರಾ ಚಿತ್ರಮಂದಿರ ನವೀಕೃತಗೊಂಡು ಏ.26 ರಂದು ಒಂದು ವರ್ಷವನ್ನು ಪೂರೈಸಿದೆ.
ಇಡೀ ಜಿಲ್ಲೆಯ ಸಿನಿಮಾ ಮಂದಿರಗಳಲ್ಲಿಯೇ ವಿಭಿನ್ನ ತಾಂತ್ರಿಕ ವ್ಯವಸ್ಥೆ ಹಾಗೂ ಕಡಿಮೆ ದರದಲ್ಲಿ ಪ್ರೇಕ್ಷಕರಿಗೆ ಮಲ್ಟಿ ಫ್ಲೆಕ್ಸ್ ಮಟ್ಟದ ಮನರಂಜನೆ ನೀಡುವ ಕೆಲಸವನ್ನು ಸುಚಿತ್ರಾ ಸಿನಿಮಾ ಮಂದಿರ ನೀಡುತ್ತಾ ಬಂದಿದೆ.
ನವೀಕೃತಗೊಂಡ ಬಳಿಕ ಸುಚಿತ್ರಾ ಸಿನಿಮಾ ಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಈಗ ಏರುಗತಿಯಲ್ಲಿದೆ. ಯುವಜನತೆಯ ಫೇವರಿಟ್ ಸಿನಿಮಾ ಮಂದಿರ ಎನ್ನುವ ಹೆಗ್ಗಳಿಕೆಯ ಜತೆಗೆ ಫ್ಯಾಮಿಲಿ ಆಡಿಯನ್ಸ್‌ಗೂ ಈ ಥಿಯೇಟರ್ ಇಷ್ಟವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಬಜೆಟ್ ಆಧಾರಿತ ಸಿನಿಮಾ ಮಂದಿರ ಎನ್ನಬಹುದು.
ಕಾರಣ ಇಲ್ಲಿ ಟಿಕೇಟು ದರದಲ್ಲಿಯೂ ನಗರದ ಮಲ್ಟಿಫ್ಲೆಕ್ಸ್ ಟಿಕೇಟ್ ದರಕ್ಕಿಂತ ಕಡಿಮೆಯಿದೆ. ಮುಖ್ಯವಾಗಿ ಇಲ್ಲಿ ಸಿನಿಮಾ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಕೋಲ್ಡ್ ಡ್ರಿಂಕ್ಸ್, ಪಾಪ್ ಕಾರ್ನ್‌ಗಳ ದರನೂ ಬಹಳಷ್ಟು ಕಡಿಮೆ ಎನ್ನುತ್ತಾರೆ ಸುಚಿತ್ರಾ ಸಿನಿಮಾ ಮಂದಿರದ ಎಂಜಿನಿಯರ್ ಸುಧೀಂದ್ರ ಅವರು.
806 ಸೀಟುಗಳನ್ನು ಹೊಂದಿರುವ ಸುಚಿತ್ರಾ ಸಿನಿಮಾ ಮಂದಿರದಲ್ಲಿ ಪಾರ್ಕಿಂಗ್‌ಗೆ ಯಾವುದೇ ದರವನ್ನು ವಿಧಿಸಲಾಗುವುದಿಲ್ಲ. ಜತೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ಇಲ್ಲಿ ಪ್ರೇಕ್ಷಕರು ಜಾಸ್ತಿಯಾಗುತ್ತಿದ್ದಾರೆ. ಅದರಲ್ಲೂ ಕಡಿಮೆ ದರದಲ್ಲೂ ಹವಾನಿಯಂತ್ರಿತ ವ್ಯವಸ್ಥೆಯ ಜತೆಗೆ ಸಿನಿಮಾ ನೋಡುವ ಅನುಭವವಂತೂ ಪ್ರೇಕ್ಷಕರಿಗೆ ಖುಷಿ ಕೊಡುತ್ತಿದೆ ಎನ್ನುವುದು ಅವರ ಮಾತು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ನಾರಾಯಣ್, ಮ್ಯಾನೇಜರ್ ಸುಬ್ರಾಯ ಪೈ ಅವರ ಉಸ್ತುವಾರಿಯಲ್ಲಿ ಸುಚಿತ್ರಾ ಸಿನಿಮಾ ಮಂದಿರ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಬೆಂಗಳೂರಿನ ಡಿ.ಎನ್.ಗೋಪಾಲಕೃಷ್ಣ ಅವರು ಸ್ಥಾಪಿಸಿರುವ ಲಕ್ಷ್ಮೀ ನಾರಾಯಣ ಎಂಟರ್ ಪ್ರೈಸಸ್ ಸುಚಿತ್ರಾ, ಪ್ರಭಾತ್ ಚಿತ್ರಮಂದಿರವನ್ನು ನಡೆಸುತ್ತಿದೆ.
Suchitra And Prabhath Theatre in Ks Rao Road, Mangalore is a top player in the category Cinema Halls in the Mangalore

ಬಾಲಿವುಡ್ ಬಿಗ್ ಬಿ ಗೂ ಪ್ರೇರಣೆಯಾದ ಸಬಿತಾ

ಬೆಳ್ತಂಗಡಿಯ ಸಬಿತಾ ಮೋನಿಸ್ ಅವರ ಬದುಕು ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೂ ಪ್ರೇರಣೆಯ ಶಕ್ತಿ ಎನ್ನುವುದಕ್ಕೆ ಅವರ ಟ್ವೀಟ್‌ಯೇ ದಾಖಲೆ.
ಸಬಿತಾ ಮತದಾನದಲ್ಲಿ ಭಾಗವಹಿಸುವ ರೀತಿ ಇದೆಯಲ್ಲ ಅದು ಎಲ್ಲರಿಗೂ ಪ್ರೇರಣೆ ನೀಡುವಂತದ್ದು, ಅಂದಹಾಗೆ ಸಬಿತಾ ಮೋನಿಸ್‌ಗೆ ಕೈಗಳಿಲ್ಲ ಆದರೆ ಇಡೀ ಬದುಕಿನಲ್ಲಿ ಕಾಲುಗಳೇ ಅವರಿಗೆ ಕೈಗಳಂತೆ ಸಾಥ್ ಕೊಟ್ಟಿದೆ.
ಇದೇ ವಿಚಾರವನ್ನು ಅಮಿತಾಭ್ ಬಹಳ ಹಿಂದೆ ತಮ್ಮ ಟ್ವಿಟ್ಟರ್‌ನಲ್ಲಿ ಹೇಳುವ ಮೂಲಕ ಇಡೀ ದೇಶದ ಜನರಿಗೆ ಸಬಿತಾ ಅವರ ಪರಿಚಯ ಮಾಡಿಕೊಟ್ಟರು. ಅಂದಹಾಗೆ ಸಬಿತಾ ವಿದ್ಯಾವಂತೆ ಜತೆಗೆ ಕಾಲೇಜು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ತಮಗೆ ಕೈಗಳಿಲ್ಲ ಎಂದು ಎಂದಿಗೂ ಬೇಸರ ಪಡದ ಮಹಿಳೆ. ದೇವರು ಕೊಟ್ಟದ್ದು ತನಗೆ ಇಷ್ಟೇ ಎಂದೇ ಮನಸ್ಸು ಕುಗ್ಗದೇ ಇರುವುದರಲ್ಲಿಯೇ ಸಾಧನೆ ಮಾಡುವ ಛಾತಿ ಇಟ್ಟುಕೊಂಡಿರುವವರು.

ಶೈಕ್ಷಣಿಕ ಬದುಕಿನ ಯಶಸ್ಸಿಗೆ ರೊಸಾರಿಯೋ ಬೆಸ್ಟ್

ರೊಸಾರಿಯೋ ಕಾಲೇಜು ವಿದ್ಯಾರ್ಥಿಗಳ ಎಲ್ಲ ದೃಷ್ಟಿಯಿಂದಲ್ಲೂ ಸಮರ್ಥವಾದ ಶಿಕ್ಷಣ ಸಂಸ್ಥೆ ಮುಖ್ಯವಾಗಿ ಜಿಲ್ಲೆಯ ಬಹಳ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಇದಕ್ಕೊಂದು ಜಾಸ್ತಿ ಮಹತ್ವವಿದೆ.
ಇದರ ಜತೆಗೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ, ಅವರ ಫೀಸ್ ವಿಚಾರದಲ್ಲೂ ಸೆಮಿಸ್ಟರ್ ವೈಸ್ 5500 ರೂ ಮಾತ್ರ ಕಟ್ಟಿದರೆ ಸಾಕು. ಉತ್ತಮವಾದ ಗ್ರಂಥಾಲಯ ವ್ಯವಸ್ಥೆ, ಜಿಮ್, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಎಲ್ಲವೂ ಪೂರಕವಾಗಿದೆ.
ವಾಹನ ವಿಚಾರದಲ್ಲೂ ಇದು ಸ್ಟೇಟ್ ಬ್ಯಾಂಕ್‌ಗೆ ಬಹಳ ಹತ್ತಿರದ ಕಾಲೇಜು. ಉತ್ತಮ ಉಪನ್ಯಾಸಕರ ವರ್ಗ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ನಿರಂತರವಾಗಿ ದುಡಿಯುವ ಪ್ರಿನ್ಸಿಪಾಲರು, ಒಂದೇ ಕ್ಯಾಂಪಸ್‌ನಲ್ಲಿ ಎಲ್ಲ ಶಿಕ್ಷಣ ನೀಡುವ ತಾಣ. ಒಂದೇ ಮಾತಿನಲ್ಲಿ ಕುಡ್ಲದ ಬೆಸ್ಟ್ ಕಾಲೇಜುಗಳಲ್ಲಿ ರೊಸಾರಿಯೋ ಫಸ್ಟ್.