ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ. ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ 2 ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು. ಹೌದು ಇದು ಬೆಳ್ತಂಗಡಿ ಕೊಕ್ಕಡದ ಸೌತಡ್ಕ ಗಣಪತಿ ದೇವಳದ ವಿಶೇಷತೆ. ಇದು ಬರೀ ದೇವಳ ಮಾತ್ರವಲ್ಲ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ.
This is an 800 year old temple.The idol of Ganesha, worshipped in this temple, was found by cow herd boys. These innocent boys carried this idol with bhajan, pooja all along the way to the present place of worship and placed the idol under the tree. Everyday they offered Ganesha with tender cucumber as naivedya, performed prayers, chanted bhajans. Hence from then, this shrine derived the name SOWTHADKA. (In kannada Southe(Cucumber) + Adka (A vast plain). As per the hindu vasthu tradition, Temples are built with Gopuras facing towards east, idols of diety are installed. Southadka’ is a pilgrimage centre located at a distance of 3 km from Kokkada in Belthangadi Taluk of Dakshina Kannda district. The uniqueness of the place is Lord Maha Ganapathi is out in the open field without a ‘Garbha gudi’ and temple structure. It is surrounded by fascinating greeneries and open round the clock for offering prayers.
Author: Team Kudla City
ಬುರ್ಜ್ ಖಲೀಫಾದಲ್ಲಿ ಕುಡ್ಲದ ಎಂಜಿನಿಯರ್
ಅರಬ್ ಡೆಸಾರ್ಟ್ ಲ್ಯಾಂಡ್ನಲ್ಲಿ ಬುರ್ಜ್ ಖಲೀಫಾ ಎದ್ದು ನಿಂತಾಗ ಇಡೀ ವಿಶ್ವವೇ ಸಣ್ಣದಾಗಿ ಹೋಗಿತ್ತು. ತಲೆ ಎತ್ತಿಕೊಂಡು ಈ ಕಟ್ಟಡವನ್ನು ನೋಡಿ ನೂತನ ತಂತ್ರಜ್ಞಾನ ರಂಗಕ್ಕೆ ಸಲಾಮ್ ಹೊಡೆದವರು ಬಹಳಷ್ಟು ಮಂದಿ ಇರಬಹುದು. ಆದರೆ ಈ ಕಟ್ಟಡದ ಬುನಾದಿ ಕಲ್ಲಿನಿಂದ ಹಿಡಿದು ತಲೆ ಎತ್ತಿ ನಿಂತ ಸಮಯದ ವರೆಗೂ ಮಂಗಳೂರಿನ ಯಂಗ್ ಎಂಜಿನಿಯರ್ ಈ ಕೆಲಸದ ಹಿಂದೆ ಇದ್ದರು. ಸುರತ್ಕಲ್ ಹೊಸಬೆಟ್ಟುವಿನ ಎಂಜಿನಿಯರ್ ಸಂದೀಪ್ ಕುಮಾರ್ ಶೆಟ್ಟಿ ಈ ಎಂಜಿನಿಯರ್. ಬುರ್ಜ್ ಖಲೀಫಾದ ವಿನ್ಯಾಸದ ಕೆಲಸವನ್ನು ಅಮೆರಿಕಾದ ಸ್ಕಿಡ್ಮೋರ್ ಓವಿಂಗ್ಸ್ ಮಿರಿಲ್( ಎಸ್ಒಎಂ)ಕಂಪನಿಗೆ ಲಭಿಸಿತ್ತು. ಅವರಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಾಮರ್ಥ್ಯವಿತ್ತು. ಆದರೆ ದುಬಾಯಿ ಸರಕಾರದ ರೂಲ್ ಎಂದರೆ ಮಧ್ಯಪ್ರಾಚ್ಯ ದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವ ಕಂಪನಿಗೆ ಈ ಕೆಲಸವನ್ನು ವಹಿಸಬೇಕಿತ್ತು. ದುಬಾಯಿಯ ಮೂರು ಖ್ಯಾತ ಕಟ್ಟಡ ನಿರ್ಮಾಣ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಹೈದಾರ್ ಕನ್ಸಲ್ಟೆನ್ಸಿ ಮಿಡಲ್ ಈಸ್ಟ್ ಲಿಮಿಟೆಡ್ನ ಬೆನ್ನಿಗೆ ಬಿತ್ತು. ಯಾರು ಊಹಿಸಲು ಸಾಧ್ಯವಾಗದ ಬುರ್ಜ್ ಖಲೀಫಾವನ್ನು ಕಟ್ಟಿ ಕೂರಿಸಿದ್ದು ಹೈದಾರ್ ಕನ್ಸಲ್ಟೆನ್ಸಿ ತಂಡ. ಇದರಲ್ಲಿ ಯುಕೆ, ಅಮೆರಿಕ,ಸ್ವಿಜರ್ಲ್ಯಾಂಡ್ ದೇಶಗಳ ಎಂಜಿನಿಯರ್ಗಳು ಸೇರಿದಂತೆ ಕೇರಳದ 8 ಮಂದಿಯ ಜತೆಯಲ್ಲಿ ಕುಡ್ಲದ ಸಂದೀಪ್ ಏಕೈಕ ಎಂಜಿನಿಯರ್.
ಕುಡ್ಲ ಸಿಟಿಯ ಎತ್ತರದ ಕೂಳೂರು ಚರ್ಚ್
ಮಂಗಳೂರು ಸಿಟಿಯೊಳಗಿನ ಚರ್ಚ್ಗಳಲ್ಲಿ ಸಂತ ಅಂತೋನಿ ಚರ್ಚ್ ಕೂಳೂರು ಸಾಕಷ್ಟು ವಿಶೇಷತೆಯನ್ನು ಒಳಗೊಂಡಿದೆ. ನಗರ ಪ್ರದೇಶದೊಳಗೆ ಎತ್ತರದಲ್ಲಿ ಇರುವ ಚರ್ಚ್ನಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮುಖ್ಯವಾಗಿ ಹಳೆಯ ಕಾಲದಲ್ಲಿ ಕೂಳೂರು ಅಸುಪಾಸಿನಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವಂತಹ ಸಮಯದಲ್ಲಿ ಈ ಚರ್ಚ್ ಎಲ್ಲರಿಗೂ ಉಳಿಯಲು ನೆರವಾಗುತ್ತಿತ್ತು. ಇದರ ಜತೆಗೆ ಈ ಚರ್ಚ್ಗೆ ಹೋಗಿ ನಿಂತು ನೋಡಿದರೆ ಮಂಗಳೂರು ಸುಂದರವಾದ ನೋಟವನ್ನು ಸವಿಯಬಹುದು. ಅಂದಹಾಗೆ ಕೂಳೂರು ಹಳೆಯ ಚರ್ಚ್ ಕಟ್ಟಡ ಹಾಗೂ ಹೊಸ ಕಟ್ಟಡ ಎರಡು ಕೂಡ ಅದ್ಭುತವಾದ ಕಲಾ ಶೈಲಿಯನ್ನು ಒಳಗೊಂಡಿದೆ.
ಕುಡ್ಲದ ಮೊದಲ ರಿಕ್ಷಾ ಚಾಲಕಿ ವಿಜಯಕ್ಕ
ಸುರತ್ಕಲ್ ಪಾರ್ಕ್ನಲ್ಲಿ ಸುಮಾರು 10 ವರ್ಷದಿಂದ ರಿಕ್ಷಾ ಚಲಾಯಿಸುತ್ತಿದ್ದ ಹೊಸಬೆಟ್ಟು ನಿವಾಸಿ ದಿ.ಎಚ್.ಟಿ.ಮೂರ್ತಿ ಅವರ ಪತ್ನಿ ಈ ವಿಜಯಲಕ್ಷ್ಮಿ. ಅವರದ್ದು ಬಡ ಕುಟುಂಬ ಬಾಡಿಗೆ ಮನೆಯಲ್ಲಿ ವಾಸ. ಇಬ್ಬರು ಮಕ್ಕಳಿದ್ದಾರೆ. ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರು ತಾನು ನಿಧನರಾಗುವ ಮೊದಲೇ ಪತ್ನಿಗೆ ರಿಕ್ಷಾ ಚಲಾಯಿಸಲು ಕಲಿಸಿ, ಲೈಸನ್ಸ್ ಕೂಡಾ ಮಾಡಿಸಿಕೊಟ್ಟಿದ್ದರು. ಈಗ ರಿಕ್ಷಾದ ಮೂಲಕ ವಿಜಯಕ್ಕ ಬದುಕು ಕಟ್ಟುತ್ತಿದ್ದಾರೆ. ರಿಕ್ಷಾ ಬಿಡುವ ಪುರುಷರ ನಡುವೆ ಇಂತಹ ಕ್ಷೇತ್ರದಲ್ಲಿ ವಿಜಯಕ್ಕ ನೆಲೆ ನಿಂತಿರೋದು ಮಾತ್ರ ಖುಷಿಯ ವಿಚಾರ. ವಿಜಯಕ್ಕನ ಬದುಕು ಈ ರಿಕ್ಷಾದಿಂದ ಗಟ್ಟಿಯಾದರೆ ಸಾವಿರಾರು ಮಹಿಳೆಯರು ಇಂತಹ ಕೆಲಸಕ್ಕೆ ಮುಂದಾಗುತ್ತಾರೆ. #vijayalakshmi #rickshaw #driver #mangalore #surathkal
ಅಕ್ಷರ ಪ್ರೇಮಿ ಹರೇಕಳ ಹಾಜಬ್ಬ ಗ್ರೇಟ್ ಮಾರಾಯ್ರೆ
ಇವರು ಕೋಟ್ಯಾಧಿಪತಿಯಲ್ಲ. ಉನ್ನತ ವಿದ್ಯಾಭ್ಯಾಸವಂತೂ ಅವರಿಗೆ ದೂರದ ಬೆಟ್ಟವಾದರೂ ಪಕ್ಕಾ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು. ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 150 ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸು ಕಂಡ ಅವರು ತನ್ನೂರಾದ ಹರೇಕಳ ನ್ಯೂಪಡು ಎಂಬ ಪುಟ್ಟ ಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ಕೊನೆಗೂ ಪ್ರಾಥಮಿಕ ಶಾಲೆಗೆ ಅನುದಾನ ತಂದು ಕೊಡುವ ಕೆಲಸದಲ್ಲಿ ಯಶಸ್ಸು ಪಡೆದವರು. ವಿಶೇಷ ಎಂದರೆ ಈ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರನ್ನಾಗಿ ಹಾಜಬ್ಬ ಅವರನ್ನು ಆಯ್ಕೆ ಮಾಡಿದ ನಂತರ ಅವರು ನಾನಾ ಇಲಾಖೆಗಳಿಗೆ ಭೇಟಿ ಕೊಟ್ಟು ಅನುದಾನ ಕೊಡುವ ತನಕನೂ ಅಲ್ಲಿಂದ ಕದಲದೇ ಅಧಿಕಾರಿಗಳು ಕೊನೆಗೆ ಅನುದಾನ ಮಂಜೂರು ಮಾಡುವಂತಹ ಸ್ಥಿತಿಗೆ ತಂದು ಬಿಟ್ಟಿದ್ದರು. ನಿಜವಾಗಿಯೂ ಅವರ ಹೋರಾಟದ ಬದುಕು ಈಗ ಜಗತ್ತು ಅರಿತಿದೆ. #Harekala_Hajabba #Fruit #vendor #Newpadpu #Village, #selling #oranges #city #Mangaluru.