Author: Team Kudla City

ವಿದ್ಯೆಯ ಜತೆಗೆ ಜೀವನ ಮೌಲ್ಯ ಹೇಳುವ ಹಾಸ್ಟೆಲ್

ಕಾವೂರು ಬಿಜಿಎಸ್ ಸಂಸ್ಥೆಯಲ್ಲಿರುವ ವಿಶೇಷತೆ ಎಂದರೆ ಇಲ್ಲಿರುವ ಮೊಂಟೆಸರಿಯಿಂದ ಹಿಡಿದು ಪದವಿ ಕಾಲೇಜಿನ ವರೆಗೂ ಗುಣಮಟ್ಟದ ವಿದ್ಯೆಯ ವಿಚಾರದಲ್ಲಿ ಎಂದಿಗೂ ರಾಜಿ ಇಲ್ಲ.

ಇದೇ ಕಾರಣದಿಂದ ಈ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿರುವ ಜತೆಗೆ ಫಲಿತಾಂಶದಲ್ಲೂ ಎತ್ತಿದ ಕೈ. ಬಿಜಿಎಸ್‌ನ ಹಾಸ್ಟೆಲ್ ವಿಚಾರದಲ್ಲೂ ಅಷ್ಟೇ ಧ್ಯಾನ, ಯೋಗದ ಜತೆಯಲ್ಲಿ ಸಮಾಜದಲ್ಲಿ ಮೌಲ್ಯಯುತ ಬದುಕನ್ನು ಹೇಗೆ ಕಂಡು ಕೊಳ್ಳಬಹುದು ಎನ್ನುವ ವಿಚಾರದಲ್ಲೂ ಈ ಹಾಸ್ಟೆಲ್ ಎಲ್ಲರಿಗೂ ಪಾಠ ಮಾಡುತ್ತದೆ.

ಮಂಗಳೂರು ಸಂಸದರಾಗಿ ನಳಿನ್ ಭರ್ಜರಿ ಆಯ್ಕೆ

ಮಂಗಳೂರು ಸಂಸದರಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆ ಯಾಗುವ ಮೂಲಕ ಮೂರು ಬಾರಿ ಸಂಸದರಾಗಿ ದಾಖಲೆ‌ ನಿರ್ಮಿಸಿದ್ದಾರೆ. ಇದು ನಳಿನ್ ರ ಹ್ಯಾಟ್ರಿಕ್ ಗೆಲುವು ಎನ್ನುವುದು ವಿಶೇಷ. ಪ್ರತಿ ಹಂತದ ಮತ ಎಣಿಕೆಯಲ್ಲೂ ಲೀಡ್ ಉಳಿಸಿಕೊಂಡು ಜಿಲ್ಲೆಯ ಜನತೆ ಮೋದಿ ಅಭಿವೃದ್ಧಿ ಯ ಮಂತ್ರಕ್ಕೆ ಪೂರ್ಣ ಅಂಕ ನೀಡಿದ್ದಾರೆ ಎನ್ನುವುದು ಮತದಾರರ ಅಭಿಪ್ರಾಯ.

ಕುಡ್ಲ ಸಿಟಿ ಕೂಲ್ ಜತೆಗೆ ಮತ ಎಣಿಕೆಯ ಬಿಸಿ !

ಕುಡ್ಲ ಸಿಟಿ ಮತ್ತೆ ಕೂಲ್ ಆಗಿದೆ. ಒಂದೆಡೆ ರಾತ್ರಿ ಸುರಿದ ಮಳೆಗೆ ಇಳೆ ತುಂಬಾನೇ ತಣ್ಣಗಾಗಿ ತಂಪು ಬೀರುತ್ತಿದೆ.
ಇನ್ನೊಂದೆಡೆ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ‍್ಯ ಕೂಡ ಚುರುಕಿನಿಂದ ನಡೆಯುತ್ತಿರುವ ಜತೆಯಲ್ಲಿ ಎರಡು ಸಲ ಸಂಸದರಾಗಿ ಆಯ್ಕೆಯಾಗಿದ್ದ ನಳಿನ್ ಕುಮಾರ್ ಕಟೀಲ್ ಈ ಬಾರಿನೂ ಗೆಲುವ ಎಲ್ಲ ಸೂಚನೆಗಳು ರವಾನೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸುವುದು ಖಾತ್ರಿಯಾಗಿದೆ.

ನೇರಳೆ ಹಣ್ಣು ಮಾರುವ ಷಣ್ಮುಗ ಬಿಸಿನೆಸ್ ಟೆಕ್ನಿಕ್

ಕುಡ್ಲ ಸಿಟಿಯೊಳಗೆ ನೇರಳೆ ಹಣ್ಣು ಎಂಟ್ರಿಯಾಗಿದೆ. ಸೆಂಟ್ರಲ್ ಮಾರ್ಕೆಟ್ ಹೊರಭಾಗದಲ್ಲಿ ನೇರಳೆಹಣ್ಣು ಮಾರುವ ಮೂರು ನಾಲ್ಕು ಮಂದಿಗಳಲ್ಲಿ ವಿಶೇಷವಾಗಿ ಗಮನ ಸೆಳೆಯುವ ವ್ಯಕ್ತಿ ಷಣ್ಮುಗ.

ವರ್ಷ 70 ದಾಟಿದರೂ ಕೂಡ ಬಿಸಿಲಿಗೆ ಕೂತು ನೇರಳೆಹಣ್ಣು ಮಾರುವ ಇವರು ಮಂಗಳೂರಿನ ಕಾರ್‌ಸ್ಟ್ರೀಟ್ ಕಡೆಯವರು ಅವರು 40 ವರ್ಷಗಳಿಂದ ಇಂತಹ ಹಣ್ಣುಗಳನ್ನು ಮಾರಾಟ ಮಾಡುವುದೇ ವ್ಯಾಪಾರ.

ಬರೀ ಒಂದು ತಿಂಗಳ ಕಾಲ ಮಾತ್ರ ಅವರು ನೇರಳೆ ಹಣ್ಣು ಮಾರುತ್ತಾರೆ. ಉಳಿದ ತಿಂಗಳುಗಳ ಕಾಲ ಉಳಿದ ಚಾಕಲೇಟ್ ಸೇರಿದಂತೆ ನಾನಾ ವ್ಯಾಪಾರ ಮಾಡುತ್ತಾರೆ. ತಿಂಗಳಿಗೊಂದು ವ್ಯಾಪಾರ ಷಣ್ಮುಗ ಅವರ ಬಿಸಿನೆಸ್ ಟೆಕ್ನಿಕ್.

ಈಗ ನೇರಳ ಹಣ್ಣಿನ ಸೀಸನ್ ಕಾಲು ಕೆಜಿಗೆ 7೦ ರೂನಂತೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಹುಬ್ಬಳ್ಳಿ, ತಿರುಪತಿಯಿಂದ ಈ ಹಣ್ಣುಗಳು ಬರುತ್ತದೆ. ಕರಾವಳಿಯಲ್ಲಿ ನೇರಳೆ ಹಣ್ಣು ದೊಡ್ಡ ಪ್ರಮಾಣದ್ಲಿ ಸಿಗುವುದಿಲ್ಲವಂತೆ ಕಳೆದ ಆರು ವರ್ಷಗಳಿಂದ ಕರಾವಳಿ ನೇರಳೆಹಣ್ಣು ಮಾರುಕಟ್ಟೆಗೆ ಬಂದಿಲ್ಲ ಎನ್ನುವುದು ಅವರ ಮಾತು.

ಅಂದಹಾಗೆ ನೇರಳೆಹಣ್ಣಿನ ಮಾರಾಟ ಸಮಯದಲ್ಲಿ ಷಣ್ಮುಗ ಅವರು ಹೇಳುವ ಒಂದೇ ಮಾತು ನೇರಳೆಹಣ್ಣು ಔಷಧೀಯ ಗುಣವನ್ನು ಹೊಂದಿದೆ ಎಂದು ಟಿವಿಯಲ್ಲಿ ಬರ‍್ತಾ ಇರುತ್ತದೆ ಎನ್ನುವುದು ಅವರ ಮಾತು.

ಅವರು ಹೇಳುವಂತೆ ನೇರಳೆಹಣ್ಣು ಸಕ್ಕರೆ ಕಾಯಿಲೆಗೆ, ರಕ್ತ ಹೀನತೆ, ರಕ್ತದ ಶುದ್ಧಿಕರಣ, ರಕ್ತದ ಒತ್ತಡ ತಗ್ಗಿಸುವುದು, ಹೊಟ್ಟೆ ಸಂಬಂಧಿಸಿದ ಕಾಯಿಲೆ ಸೇರಿದಂತೆ ಹತ್ತಾರು ರೋಗಗಳಿಗೆ ಇದು ದಿವ್ಯ ಔಷಧವಾಗಿದೆ.

ವಿಮಾನ ನಿಲ್ದಾಣ ದುರಂತಕ್ಕೆ ಭರ್ತಿ 9

ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿದ ಮಂಗಳೂರು ವಿಮಾನ ದುರಂತಕ್ಕೆ ಇದೀಗ 9 ವರ್ಷ ಕಳೆದಿದೆ. 2010 ಮೇ 22ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರಸ್ ವಿಮಾನ ದುರಂತಕ್ಕೀಡಾಗಿತ್ತು.

ವಿಮಾನ ದುಬೈಯಿಂದ ಮಂಗಳೂರಿಗೆ ಆಗಮಿಸಿತ್ತು. ಇನ್ನೇನು ವಿಮಾನ ಲ್ಯಾಂಡ್ ಆಗಲಿದೆ ಎನ್ನುವಷ್ಟರಲ್ಲಿ ರನ್ ವೇಯಿಂದ ಜಿಗಿದು ಇಬ್ಭಾಗವಾಗಿತ್ತು. ವಿಮಾನದಲ್ಲಿದ್ದ 166 ಮಂದಿಯಲ್ಲಿ 158 ಮಂದಿ ಸುಟ್ಟು ಕರಕಲಾಗಿದ್ದರು. ಸತ್ತವರಲ್ಲಿ ಏರ್ ಇಂಡಿಯಾದ ಪೈಲಟ್ ಸೇರಿದಂತೆ ಎಂಟು ಸಿಬ್ಬಂದಿಗಳಿದ್ದರು. ವಿಮಾನದಿಂದ ಜಿಗಿದು 8 ಮಂದಿ ಪವಾಡಸದೃಶ ಪಾರಾಗಿದ್ದರು.

ಸಾವಿಗೀಡಾದವರಲ್ಲಿ 135 ಮಂದಿ ವಯಸ್ಕರು, 19 ಮಂದಿ ಮಕ್ಕಳು ಹಾಗೂ 4 ಮಂದಿ ಪುಟಾಣಿಗಳಿದ್ದರು. ದುರಂತದ ಭೀಕರತೆ ಎಷ್ಟಿತೆಂದರೆ ಕೇವಲ 22 ಮೃತದೇಹಗಳ ಗುರುತು ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿತ್ತು. ಡಿಎನ್‌ಎ ಪರೀಕ್ಷೆಯ ಬಳಿಕವೂ 12 ಮೃತದೇಹಗಳು ಅನಾಥವಾಗಿದ್ದವು.

ನಂತರ ಕೂಳೂರು- ತಣ್ಣೀರುಬಾವಿ ರಸ್ತೆಯ ಪಕ್ಕದಲ್ಲೇ ಇರುವ ಸರಕಾರಿ ಜಾಗದಲ್ಲಿ ಅನಾಥ ಮೃತದೇಹಗಳಿಗೆ ಸರ್ವಧರ್ಮ ಪ್ರಾರ್ಥನೆ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ನಂತರ ಆ ಸ್ಥಳಕ್ಕೆ ವಿಮಾನ ದುರಂತ ಉದ್ಯಾನವನ ಎಂದು ಹೆಸರಿಟ್ಟು ದುರಂತದಲ್ಲಿ ಮಡಿದವರ ಸ್ಮರಣಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಯಿತು.