ಕರಾವಳಿಯ ಪ್ರಮುಖ ಮಾರ್ಕೆಟ್ ಗೆ ತರಕಾರಿ, ಆಡು,ಕೋಳಿ ಯಾವುದು ಕೂಡ ಬೇಡಿಕೆಯಷ್ಟು ಪೂರೈಕೆ ಇಲ್ಲ ಘಾಟ್ ಸೆಕ್ಷನ್ ನಲ್ಲಿ ಸಂಚಾರ ಬಂದ್, ವಿಪರೀತ ಮಳೆಯ ಸಮಸ್ಯೆಯಿಂದ ಎಲ್ಲ ದರಗಳು ಗಗನಕ್ಕೆ ಏಣಿ ಹಾಕಿದೆ. ಒಂದೆಡೆ ಬಕ್ರೀದ್ ಹಬ್ಬದ ಆಚರಣೆ ಗೂ ಈ ವಿಚಾರಗಳು ಅಡ್ಡಿ ಮಾಡಿದೆ.
Author: Team Kudla City
ಕರಾವಳಿಯ ನೆರೆಗೆ ಸಮರ್ಥ ಉತ್ತರ ನೀಡಿದ ಡಿಸಿ ಸೆಂಥಿಲ್
ಕರಾವಳಿಯಲ್ಲಿ ಸುರಿದ ಮಳೆ ಇಡೀ ಜಿಲ್ಲೆಯ ಜನತೆಗೆ ಭಯ ಹುಟ್ಟಿಸಿದ್ದು ನಿಜ. ಆದರೆ ಇಷ್ಟೆಲ್ಲ ಮಳೆ ಬರುತ್ತದೆ ಅದಕ್ಕೆ ಮೊದಲೇ ಎಚ್ಚರಗೊಳ್ಳಬೇಕು ಎನ್ನುವ ಕುರಿತು ಯೋಜನೆ ರೂಪಿಸಿದ ಕೀರ್ತಿ ಪೂರ್ತಿಯಾಗಿ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಾಹೇಬ್ರಿಗೆ ಸಲ್ಲಬೇಕು.
ಕಾರಣ ಕಳೆದ ವರ್ಷದ ಮಳೆಯಿಂದ ಯಾರು ಪಾಠ ಕಲಿಯದೇ ಇದ್ದರೂ ಕೂಡ ಡಿಸಿ ಸೆಂಥಿಲ್ ಪೂರ್ಣ ಪಾಠ ಕಲಿಯುವ ಜತೆಗೆ ಅದಕ್ಕೆ ಬೇಕಾದ ಯೋಜನೆಯನ್ನು ಮಾಡುವ ಮೂಲಕ ಇಂಥ ಸಂಭಾವ್ಯ ದುರ್ಘಟನೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ಸಿದ್ಧತೆ ಮಾಡಿತ್ತು ಎನ್ನುವುದು ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ, ಆಸ್ತಿಪಾಸ್ತಿಗೆ ಹಾನಿಯಾಗುವ ಸಾಧ್ಯತೆಗಳ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲೇ ಆಧುನಿಕ ಉಪಕರಣಗಳನ್ನು ಖರೀದಿಸಿ, ಅಗ್ನಿಶಾಮಕ ದಳಕ್ಕೆ ಒಪ್ಪಿಸಲಾಗಿತ್ತು.
ಮೇ ತಿಂಗಳಲ್ಲೇ ಅಧಿಕಾರಿಗಳ ಸಭೆ ಕರೆದು, ಭಾರಿ ಮಳೆಯಿಂದ ನದಿಗಳು ಉಕ್ಕುವ, ಕಡಲ್ಕೊರೆತ, ಕೈಗಾರಿಕೆಗಳಿಂದ ದುರಂತ, ಗ್ಯಾಸ್ ಟ್ಯಾಂಕರ್ಗಳ ಅವಘಡ, ಘಾಟಿ ರಸ್ತೆಗಳು ಕುಸಿಯುವ ಭೀತಿ ಮೊದಲಾದ ಅಪಾಯದ ಬಗ್ಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿ, ಪೂರಕ ಉಪಕರಣಗಳಿಂದ ಸಜ್ಜುಗೊಳಿಸಿದ್ದರು. ಎಲ್ಲರ ಫೋನ್ ನಂಬರ್ಗಳ ಪಟ್ಟಿ ಮಾಡಲಾಗಿತ್ತು.
ಜಿಲ್ಲಾಧಿಕಾರಿ ನಿಧಿಯಿಂದ ಆರು ಬೋಟ್, ನಾಲ್ಕು ಔಟ್ ಬೋರ್ಡ್ ಬೋಟ್ಗಳನ್ನು ಖರೀದಿಸಿದ್ದು, ಮುಳುಗಿದವರ ರಕ್ಷಣೆಗೆ ಮೂರು ಅಂಡರ್ ವಾಟರ್ ಡೈವಿಂಗ್ ಸೆಟ್, ಸೆಫ್ಟಿ ಬೆಲ್ಟ್, ನೈಲಾನ್ ಹಗ್ಗ, ಪೆಟ್ರೋಲ್ ಚಾಲಿತ ಮರ ಕಡಿಯುವ ಯಂತ್ರಗಳ ಸಹಿತ ಸಾಕಷ್ಟು ಸಲಕರಣೆಗಳ ಖರೀದಿಸಲಾಗಿತ್ತು.
ಕುಡ್ಲದ ಮಳೆಯಲ್ಲಿ ಮನಸ್ಸು ಗೆದ್ದವರು !
ಕರಾವಳಿಯ ಯಾವುದೇ ಭಾಗದಲ್ಲಿ ನೋಡಿದರೂ ಕೂಡ ಮಳೆ ಅಬ್ಬರ ಕಡಿಮೆಯಾಗುತ್ತಿಲ್ಲ. ನೆರೆ ಜತೆಗೆ ಪರಿಹಾರ ನೀಡುವ ಯುವಕರು, ಸಮಾಜದ ಜಾತಿ ಮತವನ್ನು ಲೆಕ್ಕಿಸದೇ ನೆರವಿಗೆ ಹಸ್ತ ಚಾಚುವ ಮಂದಿಯ ಮುಂದೆ ಈ ಎರಡು ತಂಡಗಳು ವಿಶೇಷವಾಗಿ ಗಮನ ಸೆಳೆದಿದೆ.
ಒಂದು ಎನ್ಡಿಆರ್ಎಫ್( ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ)ದ ಸಮರ್ಥ ಅಧಿಕಾರಿಗಳು ಹಾಗೂ ಉಳ್ಳಾಲದಲ್ಲಿ ಎಸ್ಕೆಎಸ್ಎಸ್ಎಫ್ನ ವಿಖಾಯ ತಂಡದವರು ಮಾಡುತ್ತಿರುವ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆಯ ಮಾತುಗಳು ಕೇಳಿ ಬಂದಿದೆ. ಎನ್ಡಿಆರ್ಎಫ್ ತಂಡದವರು ನಿರಂತರರಾಗಿ ರಾತ್ರಿ ಹಗಲು ಜಿಲ್ಲೆಯ ನಾನಾ ಕಡೆ ಬೋಟಿನಲ್ಲಿ ಹೋಗಿ ನಿರಾಶ್ರಿತರನ್ನು ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ಮುಟ್ಟಿಸುವ ಕೆಲಸ ಕೈಗೊಂಡರೆ ಮತ್ತೊಂದೆಡೆ ಉಳ್ಳಾಲದಲ್ಲಿ ಬಂದ ನೆರೆಗೆ ಎಸ್ಕೆಎಸ್ಎಸ್ಎಫ್ನ ವಿಖಾಯ ತಂಡದ ಸದಸ್ಯರು ಆಂಬುಲೆನ್ಸ್ ಜತೆಗೆ ನಿರಾಶ್ರಿತರ ಸೇವೆ ಮಾಡುವ ದೃಶ್ಯಗಳು ಕಾಣಿಸಿಕೊಂಡಿದೆ.
ದ.ಕದಲ್ಲಿ ಇನ್ನು ಆ.13ಕ್ಕೆ ಶಾಲಾ ಕಾಲೇಜು ಆರಂಭ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.10ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ. ಇದರ ಜತೆಯಲ್ಲಿ ಆ.11 ಭಾನುವಾರ ಹಾಗೂ ಆ.12ರಂದು ಬಕ್ರೀದ್ ಹಬ್ಬದ ಗೌಜಿ ಇರುವುದರಿಂದ ಎಲ್ಲವೂ ಮಕ್ಕಳಿಗೆ ರಜೆಯಾಗಿ ಪರಿವರ್ತನೆಯಾಗಿದೆ ಈ ಮೂಲಕ ಆ.13ರ ಬಳಿಕ ಸರಿಯಾಗಿ ಮಳೆ ಬಿಟ್ಟರೆ ಶಾಲಾ ಕಾಲೇಜು ಆರಂಭವಾಗುವ ನಿರೀಕ್ಷೆಯಿದೆ.
ಶಾಸಕರೇ ಕ್ಲೀನ್ ಮಂಗಳೂರಿಗೆ ನೀವು ಸಹಕರಿಸಿ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಅನಧಿಕೃತ ಪ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ತೆರವುಗೊಳಿಸುವಂತೆ ಹಾಗೂ ತಪ್ಪಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವ ವಿಚಾರದಲ್ಲಿ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಆದರೆ ಮಂಗಳೂರಿನ ಉರ್ವಸ್ಟೋರ್ ಸರಕಾರಿ ಕ್ವಾಟ್ರರ್ಸ್ ಬಳಿಯಲ್ಲಿ ಸಾಗಿದಾಗ ಭರ್ತಿ ಮೂರು ಫ್ಲೆಕ್ಸ್ಗಳ ಮೂಲಕ ಶಾಸಕ ಡಿ.ವೇದವ್ಯಾಸ ಕಾಮತ್ ರಾರಾಜಿಸುತ್ತಿದ್ದಾರೆ. ಈ ಮೂಲಕ ಸ್ವಚ್ಛತೆಯ ಪಾಠ ಹೇಳುವ ಶಾಸಕರು ಪರೋಕ್ಷ ರೀತಿಯಲ್ಲಿ ಫ್ಲೆಕ್ಸ್ ಸಂಸ್ಕೃತಿಗೆ ಮಣೆ ಹಾಕುವ ಮೂಲಕ ಕ್ಲೀನ್ ಮಂಗಳೂರು ಅಭಿಯಾನಕ್ಕೆ ತಡೆಯಾಗುತ್ತಿದೆ. ದಯವಿಟ್ಟು ಶಾಸಕರೇ ಸ್ವಚ್ಛತೆಯ ಕಡೆಗೆ ನೀವು ಗಮನ ಮೊದಲು ಕೊಡಿ.