ಕರಾವಳಿಯ ಯಾವುದೇ ಭಾಗದಲ್ಲಿ ನೋಡಿದರೂ ಕೂಡ ಮಳೆ ಅಬ್ಬರ ಕಡಿಮೆಯಾಗುತ್ತಿಲ್ಲ. ನೆರೆ ಜತೆಗೆ ಪರಿಹಾರ ನೀಡುವ ಯುವಕರು, ಸಮಾಜದ ಜಾತಿ ಮತವನ್ನು ಲೆಕ್ಕಿಸದೇ ನೆರವಿಗೆ ಹಸ್ತ ಚಾಚುವ ಮಂದಿಯ ಮುಂದೆ ಈ ಎರಡು ತಂಡಗಳು ವಿಶೇಷವಾಗಿ ಗಮನ ಸೆಳೆದಿದೆ.
ಒಂದು ಎನ್ಡಿಆರ್ಎಫ್( ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ)ದ ಸಮರ್ಥ ಅಧಿಕಾರಿಗಳು ಹಾಗೂ ಉಳ್ಳಾಲದಲ್ಲಿ ಎಸ್ಕೆಎಸ್ಎಸ್ಎಫ್ನ ವಿಖಾಯ ತಂಡದವರು ಮಾಡುತ್ತಿರುವ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆಯ ಮಾತುಗಳು ಕೇಳಿ ಬಂದಿದೆ. ಎನ್ಡಿಆರ್ಎಫ್ ತಂಡದವರು ನಿರಂತರರಾಗಿ ರಾತ್ರಿ ಹಗಲು ಜಿಲ್ಲೆಯ ನಾನಾ ಕಡೆ ಬೋಟಿನಲ್ಲಿ ಹೋಗಿ ನಿರಾಶ್ರಿತರನ್ನು ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ಮುಟ್ಟಿಸುವ ಕೆಲಸ ಕೈಗೊಂಡರೆ ಮತ್ತೊಂದೆಡೆ ಉಳ್ಳಾಲದಲ್ಲಿ ಬಂದ ನೆರೆಗೆ ಎಸ್ಕೆಎಸ್ಎಸ್ಎಫ್ನ ವಿಖಾಯ ತಂಡದ ಸದಸ್ಯರು ಆಂಬುಲೆನ್ಸ್ ಜತೆಗೆ ನಿರಾಶ್ರಿತರ ಸೇವೆ ಮಾಡುವ ದೃಶ್ಯಗಳು ಕಾಣಿಸಿಕೊಂಡಿದೆ.
ಕುಡ್ಲದ ಮಳೆಯಲ್ಲಿ ಮನಸ್ಸು ಗೆದ್ದವರು !
August 10, 2019