Tagged: second

ಹಣಕಾಸು ಸಚಿವರಿಂದ ಪದಕ ಪಡೆದ ಕುಡ್ಲದ ಮಿಶೆಲ್ !

ಕುಡ್ಲದ ನೀರುಡೆ ಕಲ್ಲಮುಂಡ್ಕೂರಿನ ಮಿಶೆಲ್ ಕ್ವೀನಿ ಡಿಕೋಸ್ತಾ ಅವರ ಕೆಲಸವನ್ನು ನೋಡಿ ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪದಕ ನೀಡಿ ಗೌರವಿಸಿದ್ದಾರೆ.

ಅರೇ ಯಾರಿದು ಮಿಶೆಲ್ ಎನ್ನುತ್ತೀರಾ..? ಮಿಶೆಲ್ ನೀರುಡೆಯ ಕಲ್ಲಮುಂಡ್ಕೂರಿನ ಲಾಜರಸ್ ಡಿ ಕೋಸ್ತಾ ಮತ್ತು ನ್ಯಾನ್ಸಿ ಡಿ ಕೋಸ್ತಾ ದಂಪತಿಗಳ ಎರಡನೇ ಮಗಳು. ಮೂಲತಃ ಕೃಷಿ ಕುಟುಂಬದಿಂದ ಬೆಳೆದು ಬಂದ ಹುಡುಗಿ ಮಿಶೆಲ್ 2015ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೇ ರ‍್ಯಾಂಕ್‌ಗಳಿಸಿಕೊಂಡು ನಾಗರಿಕ ಸೇವೆಯಲ್ಲಿ ಐಆರ್‌ಎಸ್ ಮಾಡುತ್ತಿದ್ದಾರೆ.

ಇದರ ಪಾಸಿಂಗ್ ಔಟ್ ಕಾರ‍್ಯಕ್ರಮದಲ್ಲಿ ವಿಶೇಸ ಸಾಧನೆ ಮಾಡಿದ ಮಿಶೆಲ್‌ಗೆ ಖುದ್ದು ಹಣಕಾಸು ಸಚಿವರು ಪದಕ ನೀಡಿ ಗೌರವಿಸಿದ್ದಾರೆ. ಇದು ಕುಡ್ಲದ ಪ್ರತಿಯೊಬ್ಬ ಹೆಣ್ಣು ಮಗಳು ಸಾಧನೆಗೆ ಸಂದ ಗೆಲುವು ಎನ್ನಬೇಕು. ಮಿಶೆಲ್ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಮುಗಿಸಿದವರು.

ಸಿಇಟಿ ಪರೀಕ್ಷಾ ಸೆಂಟರ್ ದ.ಕವೇ ರಾಜ್ಯಕ್ಕೆ ಸೆಕೆಂಡ್ !

ಇಂದು ರಾಜ್ಯವ್ಯಾಪಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯಲಿದೆ. ರಾಜ್ಯದ ಬೆಂಗಳೂರಿನಲ್ಲಿ ಈ ಬಾರಿ 84 ಸಿಇಟಿ ಪರೀಕ್ಷಾ ಸೆಂಟರ್‌ಗಳಿದ್ದರೆ ಅದರ ನಂತರದ ಸ್ಥಾನ ಮಂಗಳೂರಿನಲ್ಲಿ 26 ಸಿಇಟಿ ಪರೀಕ್ಷಾ ಸೆಂಟರ್‌ಗಳನ್ನು ಹೊಂದುವ ಮೂಲಕ ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಪರೀಕ್ಷಾ ಸೆಂಟರ್‌ಗಳನ್ನು ಹೊಂದಿರುವ ಜಿಲ್ಲೆ ಎನ್ನುವ ಖ್ಯಾತಿಗೆ ಭಾಜನವಾಗಿದೆ.
ಅದರಲ್ಲೂ ಮುಖ್ಯವಾಗಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲೇ ಭರ್ತಿ 13 ಪರೀಕ್ಷಾ ಕೇಂದ್ರಗಳು ಇವೆ. ಮೂಡುಬಿದಿರೆಯಲ್ಲಿ 8, ಬೆಳ್ತಂಗಡಿಯಲ್ಲಿ 2, ಪುತ್ತೂರಿನ 3 ಕೇಂದ್ರಗಳು ಸೇರಿದಂತೆ ಒಟ್ಟು 26 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಸರಿಸುಮಾರು 13,290ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ 771 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸೆಂಟರ್ ಆಗಿ ಗುರುತಿಸಿಕೊಂಡಿದೆ.