Tagged: onion

ಕರಾವಳಿಯಲ್ಲಿ ನೀರುಳ್ಳಿ ದರ ಇಳಿಯಲು ಕಾರಣ ಏನೂ ಗೊತ್ತಾ?

ಕಳೆದ ಎರಡು ವಾರಗಳಿಂದ ನಿರಂತರವಾಗಿ ಗ್ರಾಹಕರಿಗೆ ಕಣ್ಣೀರು ತರಿಸಿದ ನೀರುಳ್ಳಿಯ ರೇಟ್ ನಿಧಾನವಾಗಿ ಇಳಿಮುಖವಾಗುತ್ತಾ ಸಾಗುತ್ತಿದೆ. ಎರಡು ವಾರಗಳಲ್ಲಿ 150 ರೂ. ದಾಖಲಿಸಿದ ರೇಟ್ ಈಗ 70ರಿಂದ 80 ರೂ.ಗೆ ಬಂದು ನಿಂತಿದೆ. ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಎರಡು ವಾರಗಳಿಂದ ರೇಟ್ ಏರುಗತಿಯಲ್ಲಿಯೇ ಸಾಗುತ್ತಿತ್ತು.
ಆದರೆ ಸೋಮವಾರದಿಂದ ನಿಧಾನವಾಗಿ ನೀರುಳ್ಳಿಯ ದರ ಇಳಿಕೆಯ ಕಡೆಗೆ ಸಾಗಿದೆ. ಸೋಮವಾರ ಒಂದೇ ದಿನ 50 ರೂ. ಇಳಿಕೆಯಾದರೆ ಮತ್ತೆ ಉಳಿದ ದಿನಗಳಲ್ಲಿ ಸಾಧಾರಣವಾಗಿ 10 ರೂ. ನಂತೆ ಇಳಿಯುತ್ತಾ ಈಗ ಕೆಜಿ ನೀರುಳ್ಳಿಗೆ ಭರ್ತಿ 70ರಿಂದ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಹಾಗೂ ಪುಣೆಯಿಂದ ನೀರುಳ್ಳಿ ಜಾಸ್ತಿಯಾಗಿ ಪೂರೈಕೆಯಾಗುತ್ತಿದ್ದಂತೆ ಇಲ್ಲಿ ದರ ಕುಸಿತ ಕಾಣುತ್ತಿದೆ. ಮುಂದಿನ ವಾರ ಮತ್ತಷ್ಟೂ ದರ ಕುಸಿತವಾಗುವ ನಿರೀಕ್ಷೆಯಿದೆ.

ಡೆಂಗೆ ರೋಗಿಗೆ ಬೆಲ್ಲ, ಈರುಳ್ಳಿ ಮದ್ದಿನ ಪ್ರಯೋಗ

ಕರಾವಳಿಯ ಡೆಂಗೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕುಡ್ಲದಲ್ಲಿ ಡೆಂಗೆ ಜ್ವರದಿಂದ ಬಳಲುವ ಸಂಖ್ಯೆ 450 ಕ್ಕೆ ಮೀರಿ ನಿಂತಿದೆ. ಐವರು ಈಗಾಗಲೇ ಸಾವನ್ನು ಅಪ್ಪಿದ್ದಾರೆ. ಆದರೂ ಡೆಂಗೆ ಜ್ವರದ ಪ್ರಮಾಣ ತಗ್ಗುತ್ತಿಲ್ಲ.

ಖಾಸಗಿ, ಸರಕಾರಿ ಎರಡರಲ್ಲೂ ರೋಗಿಗಳು ಮಲಗುತ್ತಿದ್ದಾರೆ. ಡೆಂಗೆ ಜ್ವರದ ಬಳಿಕ ರೋಗಿಯ ರಕ್ತದ ಕಿರುಬಿಲ್ಲೆ(ಪ್ಲೇಟ್ಲೆಟ್)ಗಳ ಸಂಖ್ಯೆ ಕುಸಿತ ಕಾಣುತ್ತದೆ. ಇದಕ್ಕೆ ಔಷಧದ ಜತೆಯಲ್ಲಿ ಬೆಲ್ಲ ಹಾಗೂ ಹಸಿ ಈರುಳ್ಳಿಯನ್ನು ತಿನ್ನಬೇಕು. ಇದು ರಕ್ತದ ಕಿರುಬಿಲ್ಲೆಯ ಪ್ರಮಾಣವನ್ನು ಜಾಸ್ತಿ ಮಾಡುತ್ತದೆ. ಜತೆಗೆ ರೋಗ ನಿರೊಧಕ ಶಕ್ತಿ ಕೂಡ ಗಟ್ಟಿಯಾಗುತ್ತದೆ. ಆರ್ಯುವೇದದಲ್ಲೂ ಈ ಕುರಿತು ಉಲ್ಲೇಖವಿದೆ.