Tagged: newskudla

ಮೀನುಗಾರರಿಗೆ ಇನ್ನು ಎರಡು ತಿಂಗಳು ರಜೆ

ಮತ್ತೇ ಮೀನುಗಾರರಿಗೆ ಎರಡು ತಿಂಗಳ ರಜೆ ಘೋಷಣೆಯಾಗಿದೆ. ಜೂನ್1 ರಿಂದ ಜುಲೈ ಕೊನೆಯ ವರೆಗೆ ಯಾಂತ್ರಿಕೃತ ಬೋಟ್ ಗಳು ಮೀನು ಹಿಡಿಯುವ ಆಗಿಲ್ಲ. ಈ ಸಮಯದಲ್ಲಿ ನಾಡದೋಣಿಗಳಿಗೆ ಮಾತ್ರ ಅವಕಾಶವಿದೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಪರ್ಸಿನ್ ಬೋಟುಗಳು ಐದು ತಿಂಗಳ ಮೊದಲೇ ಮೀನುಗಾರಿಕೆ ಹೋಗಿಲ್ಲ. ಒಟ್ಟಾರೆ ಈ ಬಾರಿಯಂತೂ ಮೀನುಗಾರರಿಗೆ ನಷ್ಟದ ವರ್ಷ ಎಂದೇ ಪರಿಗಣಿಸಬಹುದು.

ಸಿಇಟಿಯಲ್ಲಿ ಕುಡ್ಲದ ವಿದ್ಯಾರ್ಥಿಗಳು ಹೇಗೆ ರ‍್ಯಾಂಕ್ ಪಡೆಯುತ್ತಾರೆ?

ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಟಾಪ್ 10 ನಲ್ಲಿ ಒಟ್ಟು 9 ರ‍್ಯಾಂಕ್‌ಗಳು ಬಂದಿವೆ. ಇದರಲ್ಲಿ ಮಂಗಳೂರಿನ ಎಕ್ಸ್‌ಫರ್ಟ್ ಕಾಲೇಜಿಗೆ 8 ರ‍್ಯಾಂಕ್ ಮತ್ತು ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ಒಂದು ರ‍್ಯಾಂಕ್ ಬಂದಿದೆ.

ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳಾದ ಆರ್.ಚಿನ್ಮಯ್ ಎಂಜಿನಿಯರಿಂಗ್ 2ನೇ ಮತ್ತು ಫಾರ್ಮಸಿಯಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ. ಭುವನ್ ವಿ.ಬಿ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 3ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ.

ಸಮರ್ಥ್ ಮಯ್ಯ ಎಂಜಿನಿಯರಿಂಗ್‌ನಲ್ಲಿ 5ನೇ ರ‍್ಯಾಂಕ್, ಆಶಯ್ ಜೈನ್ ಸಿ.ಎ. ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 7ನೇ ರ‍್ಯಾಂಕ್, ಸುದೇಶ್ ಗೌಡ ಜೆ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 7ನೇ ರ‍್ಯಾಂಕ್, ಯಶ್ ಬನ್ನೂರು ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 9ನೇ ರ‍್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಎಸ್.ದರ್ಶನ್ ಸಮರ್ಥ ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ.

ಮಂಗಳೂರಿಗೆ ಇನ್ನು ನಾಲ್ಕೇ ದಿನ ನೀರು !

ಜಲಕ್ಷಾಮದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಜಾರಿಗೊಳಿಸಿದ ನೀರು ರೇಶನಿಂಗ್ ಮೇ 16ರಿಂದ ಮತ್ತೆ ಪರಿಷ್ಕರಣೆಯಾಗಲಿದೆ.
ಇದೀಗ 4 ದಿನಗಳ ಕಾಲ ಸರಬರಾಜು ಮಾಡುತ್ತಿರುವ ನೀರನ್ನು ಯಾವುದೇ ಬದಲಾವಣೆಯಿಲ್ಲದೆ 4 ದಿನಗಳ ಕಾಲ ನೀಡಿ 2 ದಿನ ಸ್ಥಗಿತಗೊಳಿಸುವ ನೀರನ್ನು 4 ದಿನಗಳಿಗೆ ಏರಿಸಲಾಗಿದೆ.
ಮೇ 16 ರಂದು ಬೆಳಗ್ಗೆ 6 ಗಂಟೆಯಿಂದ ಮೇ 20 ರಂದು ಬೆಳಗ್ಗೆ 6 ಗಂಟೆ ವರೆಗೆ ನಿರಂತರ 96 ತಾಸು ನೀರು ಪೂರೈಕೆ ಇರುವುದು. ಮೇ 20 ರಂದು ಬೆಳಗ್ಗೆ 6 ಗಂಟೆಯಿಂದ ಮೇ 24 ರ ಬೆಳಗ್ಗೆ 6 ಗಂಟೆ ವರೆಗೆ ಸತತ 96 ತಾಸು ನೀರು ಸ್ಥಗಿತಗೊಳ್ಳಲಿದೆ. ಜೂನ್ 1ರ ವರೆಗೆ ಪರಿಷ್ಕೃತ ರೇಶನಿಂಗ್ ಮುಂದುವರಿಯಲಿದೆ.

ತಣ್ಣೀರು ಬಾವಿಯಲ್ಲಿ ಸಮುದ್ರ ಜೀವಿಗಳ ಮ್ಯೂಸಿಯಂ ಸ್ಕೆಚ್ !

ಮಂಗಳೂರು ಸಮೀಪದ ತಣ್ಣೀರುಬಾವಿ ಬೀಚ್‌ನಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಟ್ರೀ ಪಾರ್ಕ್‌ನಲ್ಲಿ ಮೆರೈನ್ ಮ್ಯೂಸಿಯಂ ಯೋಜನೆಯೊಂದು ರೂಪುಗೊಳ್ಳುತ್ತಿದೆ.
ರಾಜ್ಯದಲ್ಲಿ ಎಲ್ಲೂ ಇಲ್ಲದ ಮೆರೈನ್ ಮ್ಯೂಸಿಯಂ ಸ್ಥಾಪಿಸಲು ಸುಮಾರು 36 ಕೋಟಿ ರೂ. ಅಗತ್ಯವಿದೆ. ಅಂಡಮಾನ್‌ನಲ್ಲಿ ಐದು ಕೋಟಿ ರೂ. ಮೊತ್ತದ ಸಣ್ಣ ಪ್ರಮಾಣದ ಮ್ಯೂಸಿಯಂ ನಿರ್ಮಿಸಿದ್ದು, ಇದೇ ಮಾದರಿಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.
ಟ್ರೀ ಪಾರ್ಕ್ ಸಮುದ್ರ ಕಿನಾರೆಯಲ್ಲಿದ್ದು, ಮ್ಯೂಸಿಯಂ ಮೂಲಕ ಸಂದರ್ಶಕರು, ಪ್ರವಾಸಿಗರು ಸಮುದ್ರದ ಒಳಗಿನ ಅನುಭವ ಪಡೆಯಲಿದ್ದಾರೆ. ಸಮುದ್ರದೊಳಗಿನ ಮೀನುಗಳ ಸಹಿತ ಜಲಚರಗಳನ್ನು ವೀಕ್ಷಿಸುವ ಅವಕಾಶ ಸಿಗಲಿದೆ. ಇದರ ಜತೆಯಲ್ಲಿ ಟ್ರೀ ಪಾರ್ಕ್‌ನಲ್ಲಿ ಎಂಆರ್‌ಪಿಎಲ್‌ನಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಸೆಲ್ಫಿ ಟರ್ಟಲ್ ನಿರ್ಮಾಣದ ಉದ್ದೇಶ ಕೂಡ ಇಟ್ಟುಕೊಳ್ಳಲಾಗಿದೆ.

ಸ್ವಚ್ಛ ಮನಸ್ಸಿನಿಂದ ಮೂಡಿತು ಮಕ್ಕಳ ಪಾರ್ಕ್

ಪಾಂಡೇಶ್ವರ ಪೋಲಿಸ್ ಲೇನ್ ನಲ್ಲಿರುವ ಚಿಣ್ಣರ ಪಾರ್ಕ್ ಹಲವು ದಿನಗಳಿಂದ ಸೂಕ್ತ ನಿರ್ವಹಣೆ ಇಲ್ಲದೇ ಪಾಳು ಬಿದ್ದ ಸ್ಥಿತಿಯಲ್ಲಿತ್ತು.
ಇದೀಗ ಅದನ್ನು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಅಡಿಯಲ್ಲಿ ಇದನ್ನು ನವೀಕರಣಗೊಳಿಸಲಾಗಿದೆ. ಇಲ್ಲಿ ಒಂದು ಕಾಲದಲ್ಲಿ ಕಸವೇ ಹಾಕಿ ಈ ಪ್ಲೇಸ್ ಗಬ್ಬು ನಾರುತ್ತಿತ್ತು. ಈಗ ಅದು ಮಕ್ಕಳ ಪಾರ್ಕ್ ಆಗಿ ಬದಲಾಗಿದೆ. ಮಂಗಳೂರಿನ ಸ್ವಚ್ಛ ಮನಸ್ಸಿನಿಂದ ಈಗ ಉತ್ತಮ ಪಾರ್ಕ್‌ವೊಂದು ನಿರ್ಮಾಣವಾಗಿದೆ ಎನ್ನೋದು ಖುಷಿಯ ವಿಷ್ಯಾ.