Tagged: manglore

ತುಳುನಾಡಿನ ಜನರಿಗೆ ತುಳು ಕ್ಯಾಲೆಂಡರ್

ತುಳುನಾಡಿನ ಜನರಿಗೆ ಎಲ್ಲ ರೀತಿಯ ಕ್ಯಾಲೆಂಡರ್ ಗೊತ್ತು. ಆದರೆ ತುಳು ಭಾಷೆ, ತುಳು ಲಿಪಿಯನ್ನು ಹೊಂದಿರುವ ಕ್ಯಾಲೆಂಡರ್‍ವೊಂದು ಕಳೆದ ಏಳು ವರ್ಷಗಳಿಂದ ಹೊರ ಬರುತ್ತಿದೆ. ಅದರ ಹೆಸರು `ಕಾಲ ಕೋಂದೆ’ ಎಂದರೆ ಇದರ ಅರ್ಥ ಕಾಲ ಗೊಂಚಲು. ಇದರ ವಿಶೇಷವೇನೆಂದರೆ ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಸಮಸ್ತರಿಗೂ ಪ್ರಯೋಜನವಾಗುವ ಈ ಕ್ಯಾಲೆಂಡರ್ ಉಪಯುಕ್ತ ಪಂಚಾಂಗವೂ ಹೌದು.

ತುಳುವರ ವಿಶೇಷ ದಿನಗಳು ತುಳುವರ ಆಚರಣೆ ಹಬ್ಬ,ವಿóಶಿಷ್ಟ ತಿಂಗಳು, ಕಾಲದ ಬಗ್ಗೆ ತಿಳಿಸುವ ಅಂದರೆ ಸಂಕ್ರಾಂದಿ, ಸಿಂಗೊಡೆ, ತಿಥಿ,ನಕ್ಸತ್ರ,ಗಳನ್ನು (ಭರಣಿ, ಕಿರ್ತಿಕೆ) ಕೆಡ್ವಾಸ, ಬಲಿಲೆಪ್ಪುನ ದಿನ, ಪತ್ತನಾಜೆ, ಕೋಲ,ಕೊಡಿ, ತೇರ್,ಆಯನ, ಆಟಿ, ಸೋಣ ತಿಂಗಳ ವಿಷೇಷತೆ, ಜಾತ್ರೆಗಳ ಬಗ್ಗೆ, ಹಾಗೆಯೇ ಗ್ರಹಣ, ಮೌಢ್ಯ ಕಾಲಗಳ ಬಗೆಗೆ ನಿಖರವಾಗಿ ತಿಳಿಸಲಾಗಿದೆ.

ವಾಸ್ತವವಾಗಿ ಈ ತುಳುವಿನ ಕ್ಯಾಲೆಂಡರ್ ಪ್ರಾರಂಭವಾಗುವುದು `ಸೌರಮಾನ ಯುಗಾದಿ’ಯ ದಿನವಾದ `ಬಿಸು’ವಿನಿಂದ ಅಂದರೆ ಈ ಸಲ 2020ರ ಎಪ್ರಿಲ್ 14ರ `ಪಗ್ಗು’ವಿನಿಂದ ಹಾಗೆಯೇ ತುಳು ತಿಂಗಳು ಅಂತ್ಯವಾಗುವುದು 2021ರ ಸುಗ್ಗಿ ತಿಂಗಳಿನಲ್ಲಿ, ಪ್ರತಿ ಸಂಕ್ರಾತಿಯಂದು ತುಳುವರು ದೈವ,ದೇವರುಗಳ ಆಲಯವನ್ನು ತೊಳೆದು,ಒಪ್ಪವಾಗಿರಿಸಿ ಪೂಜೆ, ಪುನಸ್ಕಾರವನ್ನು ಕೈಗೊಳ್ಳುತ್ತಾರೆ. ಅಂದೇ ತುಳು ತಿಂಗಳು ಕೊನೆಗೊಳ್ಳುವುದು ಹಾಗೆಯೇ ಮರುದಿನ ತುಳು ತಿಂಗಳಿನ ಆರಂಭ. ಆ ದಿನವನ್ನು `ಸಿಂಗೊಡೆ’ ಎಂದು ಕರೆಯುತ್ತಾರೆ. ಅಂದಹಾಗೆ ಪ್ರತಿ ತಿಂಗಳ ಈ ದಿನ ತುಳುವರಿಗೆ ವಿಶಿಷ್ಟವಾದದ್ದು. ತುಳುನಾಡಿನ ರೈತರಿಗೂ ರಜೆಯ ದಿನ.ಅಂದು ಅವರು ಯಾವೊಂದು ಹೊಸ ಕೆಲಸವನ್ನು ಪ್ರಾರಂಭ ಮಾಡುವುದಿಲ್ಲ.ಆದುದರಿಂದ ಅವರ ಪಾಲಿಗೆ `ಸಿಂಗೊಡೆ’ ಕಾದಿರಿಸಲ್ಪಟ್ಟ ವಿಶೇಷ ದಿನ.

ತುಳು ತಿಂಗಳು ಪ್ರತಿ ವರುಷ ಪಗ್ಗು ತಿಂಗಳಿನಿಂದ ಆರಂಭವಾಗಿ ಬೇಶ, ಕಾರ್ತೆಲ್, ಆಟಿ,ಸೋಣ, ನಿರ್ನಾಲ, ಬೊಂತೆಲ್, ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ, ಸುಗ್ಗಿ ವರೆಗೆ ಒಟ್ಟು 12 ತಿಂಗಳುಗಳಿಂದ ಕೂಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಅಧಿಕ ಮಾಸದ ಪ್ರಭಾವದಿಂದಾಗಿ ತುಳುವಿನ ಕ್ಯಾಲೆಂಡರ್‍ನಲ್ಲಿ ಸಹ ಅಧಿಕ ಮಾಸದ ದಿನಗಳು ಕಂಡುಬರುತ್ತದೆ. ಅದೆಂದರೆ `ಕಾರ್ತೆಲ್’ತಿಂಗಳು ಅಂದರೆ 2020 ಜೂನ್ ತಿಂಗಳು 15 ರಿಂದ ಜುಲೈ 16 ತಾರೀಕಿನ ವರೆಗಿನ. ಈ ಅವಧಿಯು ಸುಧೀರ್ಘವಾಗಿದ್ದು ಒಟ್ಟು 32 ದಿನಗಳಿಂದ ಕೂಡಿರುತ್ತದೆ. ಇದೇ ವರ್ಷದಲ್ಲಿ ಎರಡು ತಿಂಗಳು ಕಿರು ಅವಧಿಯ ತಿಂಗಳಾಗಿರುತ್ತದೆ. ಅವುಗಳೆಂದರೆ ಪೆರಾರ್ದೆ ತುಳು ತಿಂಗಳಿನ ಅಂದರೆ 2019 ಡಿಸೆಂಬರ್ ತಿಂಗಳಿನ 17 ರಿಂದ 2019 ರ ಜನವರಿಯ 14 ರವರೆಗೆ ಹಾಗೂ 2020ರ ನವೆಂಬರ್ 17ರಿಂದ 2021 ಡಿಸೆಂಬರ್15 ವರೆಗಿನ `ಜಾರ್ದೆ’ ತುಳು ತಿಂಗಳಿನ ಈ ಅವಧಿಯು 29 ದಿನಗಳಿಂದ ಮಾತ್ರವೇ ಕೂಡಿರುವುದು ಒಂದು ವಿಶೇಷವಾಗಿದೆ.

ನವ ಮಂಗಳೂರಿನ ರೂವಾರಿ ಉಳ್ಳಾಲ ಶ್ರೀನಿವಾಸ್ ಮಲ್ಯರು

ಉಳ್ಳಾಲ ಶ್ರೀನಿವಾಸ್ ಮಲ್ಯ ಆಧುನಿಕ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಾಣದ ರೂವಾರಿ. 18 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಮೂರು ಬಾರಿ ಸಂಸದರಾಗಿದ್ದರು. 1951,1957 ಹಾಗೂ 1962 ಸಂಸದರಾಗಿ ಅವರು ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಕೆಲಸವಂತೂ ಶ್ಲಾಘನೀಯ.

ಎನ್‍ಐಟಿಕೆ, ನವಮಂಗಳೂರು ಬಂದರು, ಮಂಗಳೂರು ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ 66, ಉಳ್ಳಾಲ ಸೇತುವೆ ಅವರ ಕಾಲದಲ್ಲಿ ಮಾಡಿದ ಕಾರ್ಯಗಳನ್ನು ಇಂದಿನ ದಕ್ಷಿಣ ಕನ್ನಡ ಜಿಲ್ಲೆ ಜನರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಂದು( ನ.21)ರಂದು ಅವರ 117ನೇ ಹುಟ್ಟುಹಬ್ಬ. ಮಂಗಳೂರಿನ ನಂಬರ್ ವನ್ ಸಂಸದ ಉಳ್ಳಾಲ ಶ್ರೀನಿವಾಸ್ ಮಲ್ಯ ಎನ್ನುವುದರಲ್ಲಿ ಯಾವುದೇ ಸಂದೇಹ ಮಂಗಳೂರಿನ ಜನತೆಗೆ ಇಲ್ಲ.

ಬಿಜಿಎಸ್‌ನಲ್ಲಿ ಗಮನ ಸೆಳೆಯುವ ಬೆಳದಿಂಗಳ ಚಿಂತನ ಚಾವಡಿ

ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು ಇಂತಹ ಪುಣ್ಯಭೂಮಿ ಭಾರತದಲ್ಲಿ ಜನ್ಮ ತಾಳಿರುವುದು ನಮ್ಮ ಸುಕೃತದ ಫಲ. ಪೂರ್ವಿಕರು, ಋಷಿಮುನಿ, ಸಂತರು ಹಾಕಿ ಕೊಟ್ಟ ಶ್ರೇಷ್ಠ ಪರಂಪರೆ ನಮ್ಮ ಭರತಖಂಡವನ್ನು ಇತರೆಲ್ಲರಿಗಿಂತ ವಿಶಿಷ್ಟವಾಗಿಸಿ, ವಿಶ್ವಗುರು ಸ್ಥಾನದಲ್ಲಿರುವಂತೆ ಮಾಡಿದೆ. ಇದಕ್ಕೆ ನಮ್ಮ ಸಂಸ್ಕಾರ, ಸಂಸ್ಕೃತಿಯೇ ಮೂಲ ಕಾರಣ ಎಂದು ಶ್ರೀಆದಿಚುಂಚನ ಗಿರಿ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಅವರು ಶಾಖಾಮಠದಲ್ಲಿ ನಡೆದ ಬೆಳದಿಂಗಳ ಚಿಂತನ ಚಾವಡಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಜನ್ಮದಿಂದ ಮರಣದವರೆಗೂ ಆಚರಿಸಲ್ಪಡುವ ನಮ್ಮ ಆಚಾರಗಳು ವಿಶ್ವದಲ್ಲೆಲ್ಲೂ ಕಾಣ ಸಿಗದು. ಇಂತಹ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೆತ್ತವರು ಗುರುಗಳು, ಅತಿಥಿಗಳನ್ನು ದೇವರೆಂದು ಪೂಜಿಸಿದ ಈ ದೇಶದಲ್ಲಿ ಇಂದು ಆಗುತ್ತಿರುವ ಬದಲಾವಣೆಗಳು ಶುಭ ಸಂಕೇತವಲ್ಲ. ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವುದು ಭಾರತೀಯ ಸಂಸ್ಕೃತಿ ಅಲ್ಲ ಎಂಬುದನ್ನು ಯುವ ಪೀಳಿಗೆ ಮನಗಾಣಬೇಕು. ಈ ತಪೋ ಭೂಮಿಯ ಭವ್ಯ ಸಂಸ್ಕೃತಿಯನ್ನು ಉಳಿಸಲು ನಾವೆಲ್ಲರು ಪಣತೊಡಬೇಕು ಎಂದರು.
ವಿದ್ವಾಂಸ ಮುನಿರಾಜ ರೆಂಜಾಳ ಅವರು ಭಾರತೀಯ ಸಾಂಸ್ಕೃತಿಕ ಪರಂಪರೆ ಬಗ್ಗೆ ಉಪನ್ಯಾಸ ನೀಡಿದರು. ಕಾವೂರು ಬಂಟರ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಪ್ರಾಧ್ಯಾಪಕ ಸುಬ್ರಹ್ಮಣ್ಯ ಸ್ವಾಗತಿಸಿದರು. ಸಂಸ್ಥೆಯ ಮ್ಯಾನೇಜರ್ ಸುಬ್ಬಕಾರಡ್ಕ ವಂದಿಸಿದರು. ನರಸಿಂಹ ಕುಲಕರ್ಣಿ ನಿರೂಪಿಸಿದರು.

ಪವಾಡ ಪುರುಷ ಸಂತ ಅಂತೋನಿ ಹಬ್ಬದ ಸಂಭ್ರಮ

ಕ್ರೈಸ್ತ ಸಮುದಾಯದ ಧಾರ್ಮಿಕ ನಂಬಿಕೆಯಲ್ಲಿ ವಿಶಿಷ್ಟ ಸ್ಥಾನದಲ್ಲಿರುವ ಸಂತರ ಪಟ್ಟಿಯಲ್ಲಿ ಸಂತ ಅಂತೋನಿ ಅವರ ಹೆಸರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.
ವಿಶೇಷ ಎಂದರೆ ಮಂಗಳೂರು ಧರ್ಮಪ್ರಾಂತ್ಯದ ಬನ್ನೂರು, ಅಲ್ಲಿಪಾದೆ, ನಾರಾವಿ, ಉಜಿರೆ, ಕೂಳೂರು, ಪೆರ್ಮಾಯಿ ಚರ್ಚ್‌ಗಳ ಜತೆಗೆ ಮಿಲಾಗ್ರಿಸ್‌ನಲ್ಲೂ ಇವರ ಪುಣ್ಯ ಕ್ಷೇತ್ರವಿದೆ. ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಕೂಡ ಪವಾಡ ಪುರುಷ ಸಂತ ಅಂತೋನಿ ಅವರ ಭಕ್ತಿಗೆ ಪೂರಕವಾದ ಸಾಕ್ಷ್ಯಗಳು.
ವಿಶೇಷ ಎಂದರೆ ಸಂತ ಅಂತೋನಿ ಅವರ ಹಬ್ಬ ಪ್ರತಿ ವರ್ಷನೂ ಮಳೆಗಾಲದಲ್ಲಿಯೇ ಬರುತ್ತದೆ. ಈ ಹಬ್ಬದ ಆಚರಣೆಯ ಸಮಯದಲ್ಲಿ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆ ಬಹಳಷ್ಟು ಮಂದಿಯಲ್ಲಿ ಇರುತ್ತದೆ.
ಪವಾಡ ಪುರುಷನ ಕೃಪೆಗೆ ಪಾತ್ರರಾದರೆ ಎಲ್ಲ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎನ್ನುವ ಭಕ್ತ ಸಮೂಹ ಹಬ್ಬವನ್ನು ಜೂ.೧೩ರಂದು ಆಚರಿಸುತ್ತಾರೆ.

ಕುಡ್ಲದ ರಿಕ್ಷಾ ಚಾಲಕರ ಸಿಟಿ ಇನ್ಪೋ ಟ್ಯಾಬ್ !

ಕುಡ್ಲದ ರಿಕ್ಷಾ ಚಾಲಕರು ಡಿಜಿಟಲ್ ವಿಚಾರದಲ್ಲೂ ಸಾಕಷ್ಟು ಸ್ಮಾರ್ಟ್ ಆಗಿರುವುದು ಗೊತ್ತಿರುವ ವಿಚಾರ. ಈ ಹಿಂದೆ ರಿಕ್ಷಾಗಳಿಗೆ ಪೇಟಿಎಂ ಮಾಡುವ ಮೂಲಕ ಮಾದರಿಯಾದ ಕುಡ್ಲದ ರಿಕ್ಷಾ ಚಾಲಕರು ಟ್ಯಾಬ್ ಅಳವಡಿಸುವ ಕೆಲಸದಿಂದಲ್ಲೂ ದೇಶದಲ್ಲಿ ಮೊದಲ ಟ್ಯಾಬ್ ಅಳವಡಿಸಿದ ಕೆಲಸಕ್ಕೆ ಭಾಜನರಾಗಿದ್ದಾರೆ. ಕುಡ್ಲದ ಕೆಲವು ರಿಕ್ಷಾಗಳು ಈಗಾಗಲೇ ಟ್ಯಾಬ್ ಆಳವಡಿಸಿಕೊಂಡಿದ್ದಾರೆ.
ರಿಕ್ಷಾದಲ್ಲಿ ಅಳವಡಿಸಿಕೊಂಡಿರುವ ಟ್ಯಾಬ್‌ನಲ್ಲಿ ಕರಾವಳಿಯ ದೇವಸ್ಥಾನ, ಮಸೀದಿ, ಚರ್ಚ್, ಹೋಟೆಲ್‌ಗಳ ವಿವರ, ಮಾಲ್, ಪ್ರವಾಸಿ ತಾಣಗಳು ಸೇರಿದಂತೆ ಸಂಪೂರ್ಣ ಮಾಹಿತಿಗಳು ಸಿಗಲಿದೆ. ದೇವಸ್ಥಾನ ಕ್ಲಿಕ್ ಮಾಡಿದಾಕ್ಷಣ ದೇವಸ್ಥಾನದ ಇತಿಹಾಸ, ಪ್ರಯಾಣದ ವಿವರ, ತಂಗಲು ಇರುವ ವ್ಯವಸ್ಥೆ, ಪೂಜಾ ಸಮಯದ ಟೈಮ್ ಟೇಬಲ್ ಇತ್ಯಾದಿಗಳನ್ನು ನೀಡಲಾಗಿದೆ.