Tagged: mangalore

ಹೊಸ ವರ್ಷ ಕುಡ್ಲದ ಯುವಜನತೆಗೆ ಖಡಕ್ ರೂಲ್ಸ್ ಬಂತು

ಹೊಸ ವರ್ಷ ಕುಡ್ಲದ ಯುವಜನತೆಗೆ ಖಡಕ್ ರೂಲ್ಸ್ ಬಂತು 2020ರ ಹೊಸ ವರ್ಷದ ಆಚರಣೆ ಪ್ರಯುಕ್ತ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ.

ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಪಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು/ ವ್ಯವಸ್ಥಾಪಕರು/ಆಡಳಿತ ವರ್ಗ ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಡಿ.24ರಂದು ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆದುಕೊಳ್ಳಬೇಕು ಎನ್ನುವುದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ಮಾಹಿತಿ ನೀಡಿದ್ದಾರೆ.

ಪೂರ್ವಾನುಮತಿ ಪಡೆಯದೆ ನೂತನ ವರ್ಷ ಆಚರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಪಡೆದ ಪರವಾನಗಿಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸ ವರ್ಷ ಆಚರಿಸುವವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅಂಥವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸಲಾಗಿರುವ ಹೊಸ ವರ್ಷಚರಣೆ ಕಾರ್ಯಕ್ರಮ ನೆಪದಲ್ಲಿ ಬಸ್ ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣ, ರೈಲ್ವೆ ಸ್ಟೇಶನ್ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳು ಹಾಗೂ ಯುವಕರು ಡಿ.31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕೂಡ ಸಂಚಾರ ಪೆÇಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಪಡೆಯು ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡುಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ.

ತುಳುನಾಡಿನ ಜನರಿಗೆ ತುಳು ಕ್ಯಾಲೆಂಡರ್

ತುಳುನಾಡಿನ ಜನರಿಗೆ ಎಲ್ಲ ರೀತಿಯ ಕ್ಯಾಲೆಂಡರ್ ಗೊತ್ತು. ಆದರೆ ತುಳು ಭಾಷೆ, ತುಳು ಲಿಪಿಯನ್ನು ಹೊಂದಿರುವ ಕ್ಯಾಲೆಂಡರ್‍ವೊಂದು ಕಳೆದ ಏಳು ವರ್ಷಗಳಿಂದ ಹೊರ ಬರುತ್ತಿದೆ. ಅದರ ಹೆಸರು `ಕಾಲ ಕೋಂದೆ’ ಎಂದರೆ ಇದರ ಅರ್ಥ ಕಾಲ ಗೊಂಚಲು. ಇದರ ವಿಶೇಷವೇನೆಂದರೆ ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಸಮಸ್ತರಿಗೂ ಪ್ರಯೋಜನವಾಗುವ ಈ ಕ್ಯಾಲೆಂಡರ್ ಉಪಯುಕ್ತ ಪಂಚಾಂಗವೂ ಹೌದು.

ತುಳುವರ ವಿಶೇಷ ದಿನಗಳು ತುಳುವರ ಆಚರಣೆ ಹಬ್ಬ,ವಿóಶಿಷ್ಟ ತಿಂಗಳು, ಕಾಲದ ಬಗ್ಗೆ ತಿಳಿಸುವ ಅಂದರೆ ಸಂಕ್ರಾಂದಿ, ಸಿಂಗೊಡೆ, ತಿಥಿ,ನಕ್ಸತ್ರ,ಗಳನ್ನು (ಭರಣಿ, ಕಿರ್ತಿಕೆ) ಕೆಡ್ವಾಸ, ಬಲಿಲೆಪ್ಪುನ ದಿನ, ಪತ್ತನಾಜೆ, ಕೋಲ,ಕೊಡಿ, ತೇರ್,ಆಯನ, ಆಟಿ, ಸೋಣ ತಿಂಗಳ ವಿಷೇಷತೆ, ಜಾತ್ರೆಗಳ ಬಗ್ಗೆ, ಹಾಗೆಯೇ ಗ್ರಹಣ, ಮೌಢ್ಯ ಕಾಲಗಳ ಬಗೆಗೆ ನಿಖರವಾಗಿ ತಿಳಿಸಲಾಗಿದೆ.

ವಾಸ್ತವವಾಗಿ ಈ ತುಳುವಿನ ಕ್ಯಾಲೆಂಡರ್ ಪ್ರಾರಂಭವಾಗುವುದು `ಸೌರಮಾನ ಯುಗಾದಿ’ಯ ದಿನವಾದ `ಬಿಸು’ವಿನಿಂದ ಅಂದರೆ ಈ ಸಲ 2020ರ ಎಪ್ರಿಲ್ 14ರ `ಪಗ್ಗು’ವಿನಿಂದ ಹಾಗೆಯೇ ತುಳು ತಿಂಗಳು ಅಂತ್ಯವಾಗುವುದು 2021ರ ಸುಗ್ಗಿ ತಿಂಗಳಿನಲ್ಲಿ, ಪ್ರತಿ ಸಂಕ್ರಾತಿಯಂದು ತುಳುವರು ದೈವ,ದೇವರುಗಳ ಆಲಯವನ್ನು ತೊಳೆದು,ಒಪ್ಪವಾಗಿರಿಸಿ ಪೂಜೆ, ಪುನಸ್ಕಾರವನ್ನು ಕೈಗೊಳ್ಳುತ್ತಾರೆ. ಅಂದೇ ತುಳು ತಿಂಗಳು ಕೊನೆಗೊಳ್ಳುವುದು ಹಾಗೆಯೇ ಮರುದಿನ ತುಳು ತಿಂಗಳಿನ ಆರಂಭ. ಆ ದಿನವನ್ನು `ಸಿಂಗೊಡೆ’ ಎಂದು ಕರೆಯುತ್ತಾರೆ. ಅಂದಹಾಗೆ ಪ್ರತಿ ತಿಂಗಳ ಈ ದಿನ ತುಳುವರಿಗೆ ವಿಶಿಷ್ಟವಾದದ್ದು. ತುಳುನಾಡಿನ ರೈತರಿಗೂ ರಜೆಯ ದಿನ.ಅಂದು ಅವರು ಯಾವೊಂದು ಹೊಸ ಕೆಲಸವನ್ನು ಪ್ರಾರಂಭ ಮಾಡುವುದಿಲ್ಲ.ಆದುದರಿಂದ ಅವರ ಪಾಲಿಗೆ `ಸಿಂಗೊಡೆ’ ಕಾದಿರಿಸಲ್ಪಟ್ಟ ವಿಶೇಷ ದಿನ.

ತುಳು ತಿಂಗಳು ಪ್ರತಿ ವರುಷ ಪಗ್ಗು ತಿಂಗಳಿನಿಂದ ಆರಂಭವಾಗಿ ಬೇಶ, ಕಾರ್ತೆಲ್, ಆಟಿ,ಸೋಣ, ನಿರ್ನಾಲ, ಬೊಂತೆಲ್, ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ, ಸುಗ್ಗಿ ವರೆಗೆ ಒಟ್ಟು 12 ತಿಂಗಳುಗಳಿಂದ ಕೂಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಅಧಿಕ ಮಾಸದ ಪ್ರಭಾವದಿಂದಾಗಿ ತುಳುವಿನ ಕ್ಯಾಲೆಂಡರ್‍ನಲ್ಲಿ ಸಹ ಅಧಿಕ ಮಾಸದ ದಿನಗಳು ಕಂಡುಬರುತ್ತದೆ. ಅದೆಂದರೆ `ಕಾರ್ತೆಲ್’ತಿಂಗಳು ಅಂದರೆ 2020 ಜೂನ್ ತಿಂಗಳು 15 ರಿಂದ ಜುಲೈ 16 ತಾರೀಕಿನ ವರೆಗಿನ. ಈ ಅವಧಿಯು ಸುಧೀರ್ಘವಾಗಿದ್ದು ಒಟ್ಟು 32 ದಿನಗಳಿಂದ ಕೂಡಿರುತ್ತದೆ. ಇದೇ ವರ್ಷದಲ್ಲಿ ಎರಡು ತಿಂಗಳು ಕಿರು ಅವಧಿಯ ತಿಂಗಳಾಗಿರುತ್ತದೆ. ಅವುಗಳೆಂದರೆ ಪೆರಾರ್ದೆ ತುಳು ತಿಂಗಳಿನ ಅಂದರೆ 2019 ಡಿಸೆಂಬರ್ ತಿಂಗಳಿನ 17 ರಿಂದ 2019 ರ ಜನವರಿಯ 14 ರವರೆಗೆ ಹಾಗೂ 2020ರ ನವೆಂಬರ್ 17ರಿಂದ 2021 ಡಿಸೆಂಬರ್15 ವರೆಗಿನ `ಜಾರ್ದೆ’ ತುಳು ತಿಂಗಳಿನ ಈ ಅವಧಿಯು 29 ದಿನಗಳಿಂದ ಮಾತ್ರವೇ ಕೂಡಿರುವುದು ಒಂದು ವಿಶೇಷವಾಗಿದೆ.

ತುಳುನಾಡಿನ ಗೇರು ಹಣ್ಣಿಗೂ ಫಾರಿನ್ ನಲ್ಲಿ ಸೂಪರ್ ಡಿಮ್ಯಾಂಡ್ !

ಎಳೆಯದರಲ್ಲಿ ಗೇರುಹಣ್ಣಿನಿಂದ ಬೀಜ ತೆಗೆದು ಹಣ್ಣನ್ನು ಬಿಸಾಡುತ್ತಿದ್ದೆವು. ಈಗ ಹಾಗಲ್ಲ. ಬೀಜಕ್ಕಿಂತಲೂ ಗೇರುಹಣ್ಣಿಗೆ ಭಯಂಕರ ಡಿಮ್ಯಾಂಡು. ವಿದೇಶದಲ್ಲಿ ಕೇವಲ ಮೂರು ಗೇರು ಹಣ್ಣಿನ ಬೆಲೆ ಬರೋಬ್ಬರಿ 480/- ರೂಪಾಯಿ..! ಅಂದರೆ 23.95 AED. ಗೇರುಹಣ್ಣನ್ನು ತಿಂದು ತೇಗಿ ಕೋಲಲ್ಲಿ ಪೋಣಿಸಿ ಆಟವಾಡುತ್ತಿದ್ದ ಒಂದು ಕಾಲವಿತ್ತು. ಆದರೀಗ ಅಪರೂಪ. ಗೇರು ಮರಗಳು ಕಣ್ಮರೆಯಾಗುತ್ತಿವೆ. ಗೇರುಬೀಜ ಶೇಖರಣೆ ಮರೀಚಿಕೆಯಾಗುತ್ತಿದೆ. ಆದರೆ ಹಳ್ಳಿ ಪ್ರದೇಶದಲ್ಲಿ ಈಗಲೂ ಇದೆ. ಗೇರುಮರದ ಕೂಪು ಮಾಡುವವರೂ ಇದ್ದಾರೆ. ಏನೇ ಇದ್ದರೂ ಬೀಜಕ್ಕಷ್ಟೇ ಮೌಲ್ಯವಿತ್ತು. ಮುಂದಿನ ದಿನಗಳಲ್ಲಿ ಗೇರುಹಣ್ಣನ್ನೂ ವಿದೇಶದ ಮಾರುಕಟ್ಟೆಗೆ ರಫ್ತು ಮಾಡಬಹುದು. ಅದಕ್ಕೂ ಮಾನ ಬಂದಿದೆ.

ಮಣ್ಣಗುಡ್ಡೆಯ ಗುರ್ಜಿಗೆ 150ರ ಸಂಭ್ರಮ

ಮಂಗಳೂರಿಗೆ ಬರುವ ಮಂದಿಗೆ ಗುರ್ಜಿಯ ವಿಚಾರ ಗೊತ್ತಿರಲು ಸಾಧ್ಯವಿಲ್ಲ. ಅಂದಹಾಗೆ ಮಂಗಳೂರಿನ ಮಂಗಳಾದೇವಿ, ಉರ್ವಸ್ಟೋರ್, ಉರ್ವ ಮಾರ್ಕೆಟ್, ಬಳ್ಳಾಲ್ ಬಾಗ್ ಹಾಗೂ ಮಣ್ಣಗುಡ್ಡೆ‌ ಇಲ್ಲಿ ಪ್ರತಿ ವರ್ಷ ಗುರ್ಜಿ ಸಂಭ್ರಮ ನಡೆಯುತ್ತದೆ. ವಿಶೇಷವಾಗಿ ಮಣ್ಣಗುಡ್ಡೆ ಗುರ್ಜಿಗೆ 150 ವರ್ಷ ತುಂಬಿದೆ.

ಇದರ ವಿಶೇಷತೆ ಏನೂ ಅಂದರೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ರೋಚಕವಾದುದು. ಭಕ್ತಿಗೆ ದೇವರು ಒಲಿಯುತ್ತಾನೆ ಎನ್ನುವುದಕ್ಕೆ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ಸಾಕ್ಷಿ. ಏನಿದು ಇತಿಹಾಸ ಮುಂದೆ ಓದಿ…

ಗುರ್ಜಿ ಅಂದ್ರೆ ಚಲಿಸದ ರಥ ಎಂದರ್ಥ. ರಥದಂತೆ ಶೃಂಗರಿಸಿದ ತಾತ್ಕಾಲಿಕ ದೇವರ ಕಟ್ಟೆ ಇದು. ಮಣ್ಣಗುಡ್ಡೆ ಗುರ್ಜಿ ಆರಂಭಿಸಿದವರು ಕೋಟೇಶ್ವರ ಬ್ರಾಹ್ಮಣ ಮನೆತನದ ಹಿರಿಯ ವಾದಿರಾಜರು. ಕುಲೋದ್ಧಾರಕ ಇಲ್ಲದ ಚಿಂತೆಯಿಂದ ಶರವು ಮಹಾಗಣಪತಿಯನು ಪ್ರಾರ್ಥಿಸಿ ಪುತ್ರ ಸಂತಾನ ಕರುಣಿಸಿದರೆ ಪ್ರತಿ ವರ್ಷ ತಮ್ಮ ಮನೆಗೆ ಕರೆಸಿ ದೀಪಾರಾಧನೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು.

ಅದರಂತೆ ದೇವರು ಆಶೀರ್ವಾದ ಮಾಡಿದ್ದಾರೆ. 1870ನೇ ಇಸವಿಯಲ್ಲಿ ಇಷ್ಟಾರ್ಥ ಸಿದ್ದಿ ನೆರವೇರಿಸಿದ ಶ್ರೀ ಶರವು ಮಹಾಗಣತಿಗೆ ಕದ್ರಿ ಕಂಬ್ಳದಲ್ಲಿದ್ದ ಮನೆಯಲ್ಲಿ ಉತ್ಸವ ಆರಂಭಿಸಿದರು. ಕ್ರಮೇಣ ಮಂಗಳೂರಿನ ಪ್ರಮುಖ ಧಾರ್ಮಿಕ ದೀಪಾರಾಧನೆ ಉತ್ಸವವಾಯಿತು. ಈ ಬಾರಿ 2019ನೇ ನವೆಂಬರ್ 24ರಂದು ಮಣ್ಣಗುಡ್ಡೆ ಗುರ್ಜಿ 150ನೇ ವರ್ಷವನ್ನು ಆಚರಿಸುತ್ತಿದೆ.

ತುಳುನಾಡಿನ ಈಂದ್ ಹುಡಿ ಗೊತ್ತಾಂಟಾ ಮಾರಾಯ್ರೆ

ತುಳುನಾಡಿನ ಗ್ರಾಮೀಣ ಊರುಗಳಲ್ಲಿ ನೀವು ಭೇಟಿ ನೀಡಿದಾಗ ಅಲ್ಲಿಯ ಪುಟ್ಟ ಗೂಡಂಗಡಿಯ ಮುಂಭಾಗದಲ್ಲಿ ಇಲ್ಲಿ ಈಂದ್ ಹುಡಿ ಸಿಗುತ್ತದೆ ಎನ್ನುವ ನಾಮಫಲಕ ಕಾಣ ಸಿಗುತ್ತದೆ. ಬಹುತೇಕ ಮಂದಿಗೆ ಇದು ಏನೂ, ಇದರ ಲಾಭವೇನು ಎನ್ನುವ ವಿಚಾರವೇ ಗೊತ್ತಿರಲು ಸಾಧ್ಯವಿಲ್ಲ.

ಆದರೆ ತುಳುನಾಡಿನಲ್ಲಿ ಬದುಕುವ ಪ್ರತಿಯೊಬ್ಬರಿಗೂ ಈಂದ್ ಹುಡಿಯ ಪರಿಚಯವಿದೆ. ಬೈನೆ ಅಥವಾ ತಾಳೆ ಮರದಿಂದ ಈಂದ್ ಹುಡಿಯನ್ನು ಮಾಡಲಾಗುತ್ತದೆ. ಇದರ ಗುಣವಿಶೇಷತೆಯಂತೂ ಬಹಳಷ್ಟು ಇದೆ. ಒಂದು ಚಮಚ ಈಂದ್ ಹುಡಿಯನ್ನು ನೀರಿಗೆ ಅಥವಾ ಹಾಲಿಗೆ ಹಾಕಿ ಕುಡಿಯಬೇಕು. ಹೊಟ್ಟೆನೋವು, ದೇಹದ ಬಳಲಿಕೆ ಸೇರಿದಂತೆ ಹತ್ತು ಹಲವು ರೋಗಕ್ಕೆ ಇದು ಮದ್ದು. ನಾವು ಜಾಹೀರಾತು ತೋರಿಸುವ ವಸ್ತುಗಳನ್ನು ತೆಗೆದುಕೊಂಡು ಬಂದ ಪರಿಣಾಮ ಬಹಳಷ್ಟು ಇಂತಹ ಮದ್ದುಗಳ ಪರಿಚಯ ಇಲ್ಲ.