Tagged: citykudla

ಹೆಗ್ಗಡೆಯವರು ಬರೆದ ಶಾಕಿಂಗ್ ಪತ್ರ!

ಸ್ವಾಮಿ ದಯಮಾಡಿ ಧರ್ಮಸ್ಥಳಕ್ಕೆ ಸಧ್ಯಕ್ಕೆ ಬರಬೇಡಿ. ಇಲ್ಲಿ‌ ನೀರಿನ ಸಮಸ್ಯೆ ತೀವ್ರವಾಗಿದೆ. ನಿಮ್ಮ ಪ್ರವಾಸ ಮುಂದಕ್ಕೆ ಹಾಕಿಬಿಡಿ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಯನ್ನು ಪತ್ರದ ಮೂಲಕ ಬಿಚ್ಚಿಟ್ಟವರು ಧರ್ಮಸ್ಥಳದ‌ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಈ ಮೂಲಕ ಕುಡ್ಲ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲೂ ಸಮಸ್ಯೆ ಯ ಚಿತ್ರಣ ಈ ಪತ್ರದ ಮೂಲಕ ಅನಾವರಣ ಗೊಂಡಿತು.

ಐಟಿ ಓದಿದವರು ಸಿಗ್ತಾರೆ ತೆಂಗಿನ ಕಾಯಿ ಕೀಳುವರಿಲ್ಲ !

ಮಂಗಳೂರು ಮಾತ್ರವಲ್ಲ ಇದು ಎಲ್ಲ ನಗರ, ಗ್ರಾಮಾಂತರ ಪ್ರದೇಶಗಳಲ್ಲಿರುವ ಎಲ್ಲರೂ ಹೇಳುವ ಮಾತು. ಐಟಿ, ಬಿಟಿ ಓದಿ ಬಂದವರು ಎಲ್ಲ ಕಡೆಯಲ್ಲೂ ಸಿಗ್ತಾರೆ ಮಾರಾಯ್ರೆ. ಈ ಕಾಯಿ ಕೀಳುವ ಮಂದಿಯಂತೂ ಸಿಗ್ತಾ ಇಲ್ಲ. ಸಿಕ್ಕರೂ ಕೂಡ ಒಳ್ಳೆಯ ಮೊತ್ತವನ್ನು ಕೀಳುತ್ತಾರೆ ಎನ್ನುವ ಮಾತು ಕಾಮನ್ ಆಗಿ ಸಿಗುತ್ತದೆ.

ಕುಡ್ಲದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೂ ಬರ

ಒಂದೆಡೆ ಶಾಲಾ ಕಾಲೇಜುಗಳಿಗೆ ರಜೆ ಮತ್ತೊಂದು ಕಡೆ ಮುಸ್ಲಿಮರ ಉಪವಾಸ ಎರಡು ಜತೆಯಾದ ಪರಿಣಾಮ ಮಂಗಳೂರಿನ ಪ್ರಮುಖ ಆಸ್ಪತ್ರೆ ಸೇರಿದಂತೆ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಗಳ ಮೂಲಕ ರಕ್ತ‌ನೀಡುತ್ತಿದ್ದರು. ಮುಸ್ಲಿಂ ಸಂಘಟನೆ ಗಳು ಕೂಡ ಇದೇ ರೀತಿಯ ಕೆಲ್ಸ ಮಾಡುತ್ತಿದ್ದರು. ಆದರೆ ಇಬ್ಬರು ಈ ಸಲ ರಕ್ತ ನೀಡದ‌ ಪರಿಣಾಮ ಬ್ಲಡ್ ಬ್ಯಾಂಕ್ ಗಳಲ್ಲಿ ತೀವ್ರ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಮಂಗಳೂರಿಗೆ ಇನ್ನು ನಾಲ್ಕೇ ದಿನ ನೀರು !

ಜಲಕ್ಷಾಮದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಜಾರಿಗೊಳಿಸಿದ ನೀರು ರೇಶನಿಂಗ್ ಮೇ 16ರಿಂದ ಮತ್ತೆ ಪರಿಷ್ಕರಣೆಯಾಗಲಿದೆ.
ಇದೀಗ 4 ದಿನಗಳ ಕಾಲ ಸರಬರಾಜು ಮಾಡುತ್ತಿರುವ ನೀರನ್ನು ಯಾವುದೇ ಬದಲಾವಣೆಯಿಲ್ಲದೆ 4 ದಿನಗಳ ಕಾಲ ನೀಡಿ 2 ದಿನ ಸ್ಥಗಿತಗೊಳಿಸುವ ನೀರನ್ನು 4 ದಿನಗಳಿಗೆ ಏರಿಸಲಾಗಿದೆ.
ಮೇ 16 ರಂದು ಬೆಳಗ್ಗೆ 6 ಗಂಟೆಯಿಂದ ಮೇ 20 ರಂದು ಬೆಳಗ್ಗೆ 6 ಗಂಟೆ ವರೆಗೆ ನಿರಂತರ 96 ತಾಸು ನೀರು ಪೂರೈಕೆ ಇರುವುದು. ಮೇ 20 ರಂದು ಬೆಳಗ್ಗೆ 6 ಗಂಟೆಯಿಂದ ಮೇ 24 ರ ಬೆಳಗ್ಗೆ 6 ಗಂಟೆ ವರೆಗೆ ಸತತ 96 ತಾಸು ನೀರು ಸ್ಥಗಿತಗೊಳ್ಳಲಿದೆ. ಜೂನ್ 1ರ ವರೆಗೆ ಪರಿಷ್ಕೃತ ರೇಶನಿಂಗ್ ಮುಂದುವರಿಯಲಿದೆ.

ಕುಡ್ಲದವರು ಕೇಳುವ ಮೊದಲ ಮಾತು !

ಮಂಗಳೂರಿನ ಜನ ಎಲ್ಲಿ ಬೇಕಾದರೂ ನೋಡಿ ಎಳೆನೀರು ನೋಡಿದಾಕ್ಷಣ ಮೊದಲು ಕೇಳುವ ಮಾತು ಈ ಎಳೆನೀರು ಊರಿದ್ದ ( ಬೊಂಡ ಊರ್ದನಾ…?) ಅಲ್ಲ ಎಂದಾಗ ಇರ್ಲಿ ಒಂದು ಕೊಡಿ ಎನ್ನುತ್ತಾರೆ. ಹೌದು ಎಂದ್ರೆ ಬಹಳ ಖುಷಿಯಿಂದ ಕುಡಿದು ಒಳ್ಳೆಯ ನೀರಿತ್ತು ಎಂದು ಬಿಡುತ್ತಾರೆ.

ಎಳೆನೀರಿನಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು ಈ ರೀತಿ ಇವೆ: ಇದರಲ್ಲಿ ಆಂಟಿ ಏಜಿಂಗ್ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳಿದ್ದು, ಚರ್ಮ ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಎಳೆನೀರು ಕುಡಿದರೆ ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಶುಗರ್ ಅಂಶವನ್ನು ಕರಗಿಸುತ್ತದೆ ಹಾಗೂ ಕೊಬ್ಬಿನಂಶವು ಕಡಿಮೆಯಾಗುತ್ತದೆ.

ಕಿಡ್ನಿ ಸ್ಟೋನ್ಸ್ ಅನ್ನು ಕರಗಿಸಲು ನೆರವಾಗುತ್ತದೆ. ಇದರಲ್ಲಿರುವ ಪೊಟಾಶಿಯಂ ಅಂಶವು ಮೂತ್ರದ ಕ್ಷಾರದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಕಿಡ್ನಿ ಸ್ಟೋನ್ ಉತ್ಪಾದನೆಯನ್ನು ತಡೆಯುತ್ತದೆ.

ಜೀರ್ಣ ಕ್ರಿಯೆಯನ್ನು ಸುಲಭವಾಗಿಸುತ್ತದೆ. ನೀರಿನಲ್ಲಿ ಮಿನರಲ್ ಅಂಶಗಳಾದ ಕ್ಯಾಲ್ಷಿಯಂ, ಮ್ಯಾಂಗನೀಸ್ ಮತ್ತು ಸತು ಇದೆ. ಇವು ದೇಹವನ್ನು ಮರುಪೂರಣ ಮಾಡಲು ನೆರವಾಗುತ್ತದೆ. ಎಳೆನೀರಲ್ಲಿ ಸಕ್ಕರೆ ಮತ್ತು ಸೋಡಿಯಂ ಅಂಶ ಕಡಿಮೆ ಇದೆ ಮತ್ತು ಪೋಟಾಶಿಯಂ ಅಂಶ ಅಧಿಕವಾಗಿದೆ. ಕ್ಯಾಲ್ಷಿಯಂ ಮತ್ತು ಕ್ಲೋರೈಡ್ ನೀರಿನ ಅಂಶವನ್ನು ಹೆಚ್ಚಿಸಿ ದೇಹವನ್ನು ಪುನರ್ ಯೌನಗೊಳಿಸುತ್ತದೆ.

ಕ್ಯಾಲ್ಷಿಯಂ ಅಧಿಕವಾಗಿದೆ. ಆರೋಗ್ಯಕರ ಮೂಳೆ, ಮಾಂಸಖಂಡಗಳಿಗೆ ಇದು ಅಗತ್ಯವಾಗಿ ಬೇಕು. ಮಧುಮೇಹ ನಿಯಂತ್ರಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಕೂಡ ಇದು ನೆರವಾಗುತ್ತದೆ.