Tagged: kudlacity

ಕುಡ್ಲದಲ್ಲಿ ನ. 20 ರಂದು ನಂದಿನಿಯ ಈ ಐಟಂಗಳು ಪೂರ್ಣ ಫ್ರೀ !

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಈ ಬಾರಿ ವಿಶೇಷವಾದ ಎರಡು ಐಟಂಗಳನ್ನು ಮಾರ್ಕೆಟ್‌ಗೆ ಇಳಿಸಿದೆ ಇದರ ಪರಿಣಾಮ ಎರಡು ಐಟಂಗಳು ಸ್ಟಾಕ್ ಇರುವ ವರೆಗೆ ಪೂರ್ಣವಾಗಿ ನಾಟ್ ಫಾರ್ ಸೇಲ್ ಎನ್ನುವ ಮುದ್ರೆಯ ಜತೆಯಲ್ಲಿ ನ. 20 ರಂದು ಬೆಳಗ್ಗೆ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.

ಈ ಕುರಿತು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರ ಮಾತು ಕೇಳಿ ನ.20 ರಂದು ದ.ಕದಲ್ಲಿ 11,500 ಸಾವಿರ ಬಾಟಲ್ ನಂದಿನಿ ಕಷಾಯ ಹಾಗೂ ನಂದಿನಿ ಕೋಲ್ಡ್ ಕಾಫಿ ಆಯ್ದ ನಂದಿನಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಅದು ಸ್ಟಾಕ್ ಮುಗಿಯುವರೆಗೆ ಮಾತ್ರ ಉಳಿದಂತೆ ಉಡುಪಿಯಲ್ಲಿ 5,500 ಸಾವಿರ ಬಾಟಲ್ ಕಷಾಯ, ಕೋಲ್ಡ್ ಕಾಫಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಸಿಗಲಿದೆ. ಈ ಮೂಲಕ 17 ಸಾವಿರ ಬಾಟಲಿ ಕಷಾಯ, ಕೋಲ್ಡ್ ಕಾಫಿ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ.

ಕುಡ್ಲದಲ್ಲಿ ನ. 20 ರಂದು ನಂದಿನಿಯ ಈ ಐಟಂಗಳು ಪೂರ್ಣ ಫ್ರೀ !

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಈ ಬಾರಿ ವಿಶೇಷವಾದ ಎರಡು ಐಟಂಗಳನ್ನು ಮಾರ್ಕೆಟ್‌ಗೆ ಇಳಿಸಿದೆ ಇದರ ಪರಿಣಾಮ ಎರಡು ಐಟಂಗಳು ಸ್ಟಾಕ್ ಇರುವ ವರೆಗೆ ಪೂರ್ಣವಾಗಿ ನಾಟ್ ಫಾರ್ ಸೇಲ್ ಎನ್ನುವ ಮುದ್ರೆಯ ಜತೆಯಲ್ಲಿ ನ. 20 ರಂದು ಬೆಳಗ್ಗೆ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.

ಈ ಕುರಿತು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರ ಮಾತು ಕೇಳಿ ನ.20 ರಂದು ದ.ಕದಲ್ಲಿ 11,500 ಸಾವಿರ ಬಾಟಲ್ ನಂದಿನಿ ಕಷಾಯ ಹಾಗೂ ನಂದಿನಿ ಕೋಲ್ಡ್ ಕಾಫಿ ಆಯ್ದ ನಂದಿನಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಅದು ಸ್ಟಾಕ್ ಮುಗಿಯುವರೆಗೆ ಮಾತ್ರ ಉಳಿದಂತೆ ಉಡುಪಿಯಲ್ಲಿ 5,500 ಸಾವಿರ ಬಾಟಲ್ ಕಷಾಯ, ಕೋಲ್ಡ್ ಕಾಫಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಸಿಗಲಿದೆ. ಈ ಮೂಲಕ 17 ಸಾವಿರ ಬಾಟಲಿ ಕಷಾಯ, ಕೋಲ್ಡ್ ಕಾಫಿ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ.

ಕುಡ್ಲದ ದೇವಳದಲ್ಲಿ ಬಾಳೆಲೆಯಲ್ಲಿ ಪಂಚಕಜ್ಜಾಯ

ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ದಕ್ಷಿಣ ಕನ್ನಡ ಅಥವಾ ಇತರ ಕಡೆಗಳ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ಗಳಲ್ಲಿ ಪ್ರಸಾದ ಕಟ್ಟಿಕೊಡುವ ವಾಡಿಕೆಯಿದೆ. ಆದರೆ ಇವೆಲ್ಲಕ್ಕೂ ಭಿನ್ನವಾಗಿ ಗಂಜಿಮಠದ ದೇವಸ್ಥಾನದ ಪಂಚಕಜ್ಜಾಯದ ಕಟ್ಟು ಹೊಸ ಸಂಚಲನವನ್ನೇ ಮೂಡಿಸಿದೆ.

ಹೌದು ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ನಡುವೆ ಗಂಜಿಮಠ ಜಂಕ್ಷನ್‌ನಲ್ಲಿ ಇರುವ ಪುರಾತನ ಕಾಲದ ಶ್ರೀ ಗಣಪತಿ ದೇವಾಲಯದಲ್ಲಿ ಕುಟುಂಬದ ಹಿರಿ ತಲೆಮಾರಿನಿಂದಲೂ ಇಲ್ಲಿ ಬಾಳೆ ಎಲೆಯಲ್ಲಿ ಪಂಚ ಕಜ್ಜಾಯ ಹಾಕಿ, ಬಾಳೆ ನಾರಿನಲ್ಲಿ ಕಟ್ಟಿಕೊಡುವುದು ಸಂಪ್ರದಾಯವಾಗಿಯೇ ಬೆಳೆದು ಬಂದಿದೆ.

ಈ ರೀತಿಯ ಸಂಪ್ರದಾಯ ಎಲ್ಲ ಕಡೆಯೂ ಆರಂಭವಾಗಬೇಕಾಗಿರುವುದು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕಾದ ಈ ಕಾಲಘಟ್ಟದಲ್ಲಿ ಅಗತ್ಯವಾಗಿದೆ.

ಬಳಸಿದ ಪ್ಲಾಸ್ಟಿಕ್ ಗೆ ದುಡ್ಡು ಕೊಡುವ ಜಯಣ್ಣ!

ಇಡೀ ವಿಶ್ವವೇ ಪ್ಲಾಸ್ಟಿಕ್ ಕುರಿತು ತಲೆ ಕಡೆಸಿಕೊಂಡಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ನಮ್ಮ ಅವಿಭಾಜ್ಯ ಅಂಗವಾಗಿ ಹೋಗುತ್ತಿದೆ. ಇಂತಹ ಪ್ಲಾಸ್ಟಿಕ್ ಬಳಕೆಯ ವಿರುದ್ದ ಶ್ರೀಸಾಮಾನ್ಯರೊಬ್ಬರು ಡಿಫರೆಂಟ್ ಶೈಲಿಯಲ್ಲಿ ಹೋರಾಟ ಮಾಡಿದ್ದಾರೆ. ಇವರ ಹೆಸರು ಜಯಪ್ರಕಾಶ್ ಎಕ್ಕೂರು .

ಕಂಕನಾಡಿ ಹತ್ತಿರ ಪುಟ್ಟದಾದ ಲಾಂಡ್ರಿ ಶಾಫ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಜತೆಯಲ್ಲಿ ಅವರು ಪ್ಲಾಸ್ಟಿಕ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರು ಒಂದು ಬಳಸಿದ ಪ್ಲಾಸ್ಟಿಕ್ ಗೆ ಐವತ್ತು ಪೈಸೆ ನೀಡುತ್ತಾರೆ. ಒಬ್ಬರು ಎರಡು ಪ್ಲಾಸ್ಟಿಕ್ ಮಾತ್ರ ನೀಡಬಹುದು. ಎರಡು ಪ್ಲಾಸ್ಟಿಕ್ ಗೆ ಒಂದು ರೂಪಾಯಿ ಕೊಟ್ಟು ಖರೀದಿ ಮಾಡಿ ಅದನ್ನು ನಗರಪಾಲಿಕೆ ಗೆ ಕೊಟ್ಟು ಬಿಡುತ್ತಾರೆ ಅದರಿಂದ ಅವರಿಗೆ ಏನೂ ಲಾಭ ವಿಲ್ಲ. ಇದರ ಜತೆಯಲ್ಲಿ ಅವರ ಪರಿಸರ ಸ್ನೇಹಿ ಪೆನ್, ಬಟ್ಟೆ ಚೀಲ ಹೀಗೆ ಪರಿಸರ ಪೂರಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಇದು ಅವರ ಲಾಭದ ಬ್ಯುಸಿನೆಸ್ ಅಲ್ಲ. ಆದರೆ ಇಂತಹ ವಿಚಾರದಿಂದ ಜನರಲ್ಲಿ ಪರಿಸರ ಕಾಳಜಿ ಬೆಳೆಸುವುದು ಅವರ ಉದ್ದೇಶ. ಅವರಲ್ಲಿ ನೂರು ರೂಪಾಯಿ ಯ ಐಟಂ ತೆಗೆದುಕೊಂಡರೆ ಶೇ.10ರಷ್ಟು ಬಳಸಿದ ಪ್ಲಾಸ್ಟಿಕ್ ಕೊಟ್ಟರೆ ಸಾಕು ನಂತರ 90 ರೂ ಕೊಟ್ಟು ಐಟಂ ತೆಗೆದುಕೊಳ್ಳಬಹುದು. ಕುಡ್ಲದ ಕದ್ರಿ ಪಾರ್ಕ್ ಮುಂಭಾಗ ಪ್ರತಿ ಭಾನುವಾರ ಸಂಜೆ ಹೊತ್ತು ಕಾಣಿಸಿಕೊಳ್ಳಲಿದ್ದಾರೆ.

ಆನ್‌ಲೈನ್‌ನ ಸೆಕೆಂಡ್ ಸೇಲ್‌ನಲ್ಲಿ ಹಣ ಮಂಗಮಾಯ

ಆನ್‌ಲೈನ್‌ನಲ್ಲಿ ಸೆಕೆಂಡ್ ಸೇಲ್ ಪೀಠೋಪಕರಣಗಳನ್ನು ಮಾರಾಟ ಮಾಡುವುದಾಗಿ ಕುಡ್ಲದ ವ್ಯಕ್ತಿಯೊಬ್ಬರು ಬ್ರೋಕರ್ ಮುಖೇನ ಜಾಹೀರಾತು ಹಾಕಿದ್ದರು. ಇದಕ್ಕೆ ತಮಗೆ ಬೇಕು ಎಂದು ವ್ಯಕ್ತಿಯೊಬ್ಬರು ಕರೆ ಮಾಡಿ ಸಾಮಗ್ರಿಯನ್ನು ಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ಪೀಠೋಪಕರಣ ಖರೀದಿ ಮೊತ್ತವನ್ನು ಆನ್‌ಲೈನ್ ಮೂಲಕ ಕಳುಹಿಸುವುದಾಗಿ ಹೇಳಿ ಲಿಂಕ್ ಕಳುಹಿಸಿದ್ದ. ಅದರಂತೆ ಪಿರ್ಯಾದಿದಾರರು ಲಿಂಕ್ ಒತ್ತಿದ್ದು, ತಕ್ಷಣ ಕ್ರಮವಾಗಿ ಅವರ ಖಾತೆಯಿಂದ 80 ಸಾವಿರಕ್ಕೂ ಅಧಿಕ ಮೊತ್ತವನ್ನು ಪೀಠೋಪಕರಣ ಸೇಲ್ ಮಾಡುವ ವ್ಯಕ್ತಿ ಕಳೆದುಕೊಂಡು ಮೂರು ನಾಮಹಾಕಿದ ಘಟನೆಯೊಂದು ವರದಿಯಾಗಿದೆ.