Tagged: citykudla

ಬಿಜಿಎಸ್‌ನಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಹೈಟೆಕ್ ಸವಲತ್ತು !

ಕಾವೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷತೆಗಳಲ್ಲಿ ಬಹಳ ಮುಖ್ಯವಾದದ್ದು ಗುಣಮಟ್ಟದ ಶಿಕ್ಷಣ ಇದರ ಜತೆಗೆ ವಿದ್ಯಾರ್ಥಿಗಳಿಗೆ ಸಿಗುವ ಶೈಕ್ಷಣಿಕ ಬದುಕಿಗೆ ಸಂಬಂಧಪಟ್ಟಂತಹ ಹೈಟೆಕ್ ಸವಲತ್ತು.

ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಾನವೀಯ ಗುಣಗಳಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಸಮಾಜದಲ್ಲಿ ಬಹಳ ಎತ್ತರಕ್ಕೆ ಸಾಗಿದ ಉದಾಹರಣೆಗಳೇ ಜಾಸ್ತಿ.
ಹೆತ್ತವರಿಗೆ ಮಕ್ಕಳು ಅಮೂಲ್ಯವಾದ ಸಂಪತ್ತು ಎಂದು ಪರಿಗಣಿಸಿದರೆ ಇಂತಹ ಸಂಪತ್ತನ್ನು ಸಮಾಜದಲ್ಲಿ ಉತ್ತಮವಾಗಿ ಬೆಳೆಸುವ ಕೆಲಸವನ್ನು ಕಾವೂರಿನ ಬಿಜಿಎಸ್ ಸಂಸ್ಥೆ ಮಾಡುತ್ತದೆ. ಹೆಚ್ಚಿನ ಮಾಹಿತಿಗೆ 0824 -248 4749

ಮೋದಿಗಾಗಿ 500 ಚೆಂಡು ಮಲ್ಲಿಗೆ ಕೊಟ್ಟ ಮುಸ್ಲಿಂ ಹೂ ವ್ಯಾಪಾರಿ

ಕುಡ್ಲದಲ್ಲಿ ಶ್ರೀಮಂತ ಮಾತ್ರವಲ್ಲ ಸಾಮಾನ್ಯ ಬಡವ ಕೂಡ ಪ್ರಧಾನಿ ನರೇಂದ್ರ ಮೋದಿಯಾಗಬೇಕು ಎಂದು ಕನಸ್ಸು ಕಾಣುತ್ತಾನೆ ಎನ್ನುವ ಮಾತಿಗೆ ಮತ್ತಷ್ಟು ಉದಾಹರಣೆ ಕಾಣಸಿಗುತ್ತಿದೆ.

ಹೌದು. ಕುಡ್ಲದ ಸಿಟಿ ಸೆಂಟರ್ ಮುಂಭಾಗದಲ್ಲಿರುವ ಲಲಿತ್ ಮಹಲ್ ಹೋಟೆಲ್ ಪಕ್ಕದಲ್ಲಿ ಹೂ ಮಾರಾಟ ಮಾಡುವ ಪಕೀರಬ್ಬ ಬೇಸಿಕಲಿ ದೊಡ್ಡ ಶ್ರೀಮಂತ ರಲ್ಲ ಹೂ ವ್ಯಾಪಾರ ಮಾಡುತ್ತಾ ಬದುಕು ಕಟ್ಟುವ ಮನುಷ್ಯ ಆದರೆ ಮೋದಿ ಪ್ರಧಾನಿ ಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದಾಕ್ಷಣ ತಾನು ಕೂಡ ಸೇವೆ ಮಾಡಲು ಇಳಿದು ಬಿಡುತ್ತಾರೆ.

ಗುರುವಾರ ಸಂಜೆ ಯಿಂದ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ತನಕ ಬರೋಬರಿ 500 ಚೆಂಡು ಮಲ್ಲಿಗೆಯನ್ನು ಉಚಿತವಾಗಿ ಮಹಿಳೆಯರಿಗೆ ನೀಡುವ ಕೆಲಸ ಮಾಡಿದ್ದಾರೆ. ಈ ಸೇವೆಗೆ ಹೆಚ್ಚು ಕಡಿಮೆ 50 ಸಾವಿರ ದಷ್ಟು ಖರ್ಚು ತಗಲಬಹುದು ಮೋದಿ‌ ದೇಶದ ಉದ್ದಾರಕ್ಕೆ ಸಾಕಷ್ಟು ಮಾಡಿದ್ದಾರೆ ನಾನು ಕೊಂಚ ಸೇವೆ ಮಾಡಬೇಕು ಎನ್ನುವ ಮೂಲಕ ಪಕೀರಬ್ಬ ಅಭಿಮಾನಿ ತೋರಿಸುತ್ತಾರೆ. ಅಂದಹಾಗೆ ಇವರು ಬೆಳ್ತಂಗಡಿಯವರು ಈಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಜಾನ್ ವೃತದಲ್ಲಿರವ ಪಕೀರಬ್ಬರಿಗೆ ಮೋದಿ ಮೇಲೆ ಅಪಾರ ನಂಬಿಕೆ.

ಇನ್ನು ಸ್ಕೂಲ್ ಗೆ ಹೊರಡುವ ಸಮಯ

ಇಂದಿನಿಂದ ಸರಕಾರ ಶಾಲೆಗಳಲ್ಲಿ ವಿದ್ಯಾರ್ಥಿ ಗಳು ಬರಲಿದ್ದಾರೆ. ಹೌದು. ಇಂದಿನಿಂದ ಶಾಲಾ ಆರಂಭ ನಡೆಯಲಿದೆ.
ಒಂದೆಡೆ ಬಿರು ಬಿಸಿಲು ಜತೆಗೆ ಮಳೆರಾಯ ಕೃಪೆ ತೋರಿಸದ ಪರಿಣಾಮ ಪುಟಾಣಿ ಮಕ್ಕಳು ಶಾಲೆಯ ದಾರಿ ಹಿಡಿಯಲೇ ಬೇಕಾಗುತ್ತದೆ.

ಮುಖ್ಯವಾಗಿ ಕೆಲವೊಂದು ಖಾಸಗಿ ಶಾಲೆಗಳು ಆರಂಭ ಕೊಂಚ ತಡವಾಗುವ ಸಾಧ್ಯತೆಯಿದೆ. ಉಳಿದಂತೆ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕ ಬೇಗನೆ ಬಂದು ತಲುಪಿದೆ.

ಕುಡ್ಲದಲ್ಲಿ ಯಕ್ಷಗಾನ ಕಲಾವಿದರು ಓಡಿದರು !

ಮಂಗಳೂರಿನ ಮಂಗಳಾ ಕ್ರೀಡಾಂಗಣ ಯಕ್ಷಗಾನ ಕಲಾವಿದರಿಂದ ತುಂಬಿ ಹೋಗಿತ್ತು. ದ.ಕ, ಉಡುಪಿ, ಉ.ಕ. ಕಾಸರಗೋಡಿನ ಹೆಚ್ಚಿನ ಎಲ್ಲ ಮೇಳಗಳ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿದ್ದರು.

ಅಲ್ಲಿ ಯಕ್ಷಗಾನವಿರಲಿಲ್ಲ ಬದಲಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇಳಗಳ ಯಕ್ಷಗಾನ ಕಲಾವಿದರಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.

24 ಮೇಳಗಳ ಸದಸ್ಯರು ಕಾಣಿಸಿಕೊಂಡಿದ್ದಾರೆ. ಮಂದಾರ್ತಿ ಮೇಳ (ಎ)(ಬಿ), ಸಾಲಿಗ್ರಾಮ, ಕಟೀಲಿನ 6 ಮೇಳ, ಬಪ್ಪನಾಡು, ಸಸಿಹಿತ್ಲು , ಎಡನೀರು, ಕೂಡ್ಲು, ಮಲ್ಲ, ಕುತ್ಯಾಳ, ಬೆಂಕಿನಾಥೇಶ್ವರ ಮೇಳ, ಸುಂಕದಕಟ್ಟೆ ಮೇಳ, ಸೌಕೂರು, ಅಮೃತೇಶ್ವರಿ ಕೋಟ, ಮಾರಣಕಟ್ಟೆ ಮೇಳ, ಗೋಳಿಗರಡಿ,ಹಿರಿಯಡ್ಕ, ಮಡಾಮಕ್ಕಿ, ಧರ್ಮಸ್ಥಳ ಮೇಳಗಳ ಕಲಾವಿದರು ಭಾಗವಹಿಸಿದ್ದರು.

ಓಟ, ಉದ್ದಜಿಗಿತ, ಗುಂಡು ಎಸೆತ, ಬಾಂಬ್ ಇನ್‌ದ ಸಿಟಿ, ಸಂಗೀತ ಕುರ್ಚಿ, ರಿಲೇ, ಕ್ರಿಕೆಟ್, ಹಗ್ಗಜಗ್ಗಾಟ ಮೊದಲಾದ ಆಟಗಳಿದ್ದವು. ಸುಮಾರು 400 ಮಂದಿ ಕಲಾವಿದರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತರಾದ ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.

ಮೀನುಗಾರರಿಗೆ ಇನ್ನು ಎರಡು ತಿಂಗಳು ರಜೆ

ಮತ್ತೇ ಮೀನುಗಾರರಿಗೆ ಎರಡು ತಿಂಗಳ ರಜೆ ಘೋಷಣೆಯಾಗಿದೆ. ಜೂನ್1 ರಿಂದ ಜುಲೈ ಕೊನೆಯ ವರೆಗೆ ಯಾಂತ್ರಿಕೃತ ಬೋಟ್ ಗಳು ಮೀನು ಹಿಡಿಯುವ ಆಗಿಲ್ಲ. ಈ ಸಮಯದಲ್ಲಿ ನಾಡದೋಣಿಗಳಿಗೆ ಮಾತ್ರ ಅವಕಾಶವಿದೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಪರ್ಸಿನ್ ಬೋಟುಗಳು ಐದು ತಿಂಗಳ ಮೊದಲೇ ಮೀನುಗಾರಿಕೆ ಹೋಗಿಲ್ಲ. ಒಟ್ಟಾರೆ ಈ ಬಾರಿಯಂತೂ ಮೀನುಗಾರರಿಗೆ ನಷ್ಟದ ವರ್ಷ ಎಂದೇ ಪರಿಗಣಿಸಬಹುದು.