Tagged: kudlacity

ಸಾಕು ಪ್ರಾಣಿಗಳಿಂದ ವಿಶೇಷ ಮಕ್ಕಳಿಗೆ ಭಿನ್ನ ಟ್ರೀಟ್‌ಮೆಂಟ್

ಸಾಕು ಪ್ರಾಣಿಗಳಾದ ಕುದುರೆ, ನಾಯಿ, ಬೆಕ್ಕುಗಳ ಸಹಾಯದಿಂದ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳಿಗೆ ಚಿಕಿತ್ಸೆ ನೀಡುವಂಥ ಅನಿಮಲ್ ಅಸಿಸ್ಟೆಡ್ ಥೆರಪಿ ಎಂಬ ಹೊಸ ಪರಿಕಲ್ಪನೆಯೊಂದು ಮಂಗಳೂರಿನಲ್ಲಿ ಮೂಡಿಬರುತ್ತಿದೆ.

ವಿದೇಶ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಇಂತಹ ಚಿಕಿತ್ಸಾ ವಿಧಾನ ಇತ್ತು. ದೇಶದ ನಾನಾ ಕಡೆಯಲ್ಲಿ ಇದು ನಿಧಾನವಾಗಿ ಮೊಳಕೆಯೊಡೆಯುತ್ತಿದೆ. ಆದ್ರೆ ಮಂಗಳೂರಿನಲ್ಲಿ ಈಗ ತಲೆ ಎತ್ತುತ್ತಿರುವ ಚಿಕಿತ್ಸಾ ವಿಧಾನ.

ಈ ಮೂಲಕ ವಿಶೇಷ ಮಕ್ಕಳು ಮಾತ್ರವಲ್ಲ, ಜನಸಮಾನ್ಯರು ಕೂಡಾ ಪ್ರಾಣಿಗಳ ಒಡನಾಟ ಇಟ್ಟುಕೊಂಡು ಬದುಕಿದರೆ, ಶಕ್ತಿ ಸಾಮರ್ಥ್ಯ ಹೆಚ್ಚುವ ಜತೆಗೆ ಭಾವನಾತ್ಮಕ ಸಂಬಂಧಗಳು ವೃದ್ಧಿಯಾಗುತ್ತವೆ ಎನ್ನುವುದು ವೈದ್ಯಲೋಕ ಹೇಳುವ ಮಾತು.

ಅವೇಂಜರ್ಸ್ ದಿ ಎಂಡ್ ಸುಚಿತ್ರಾದಲ್ಲಿ ಮಾತ್ರ ನೋಡಿ

ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿರುವ ಸುಚಿತ್ರಾ ಹಾಗೂ ಪ್ರಭಾತ್ ಸಿನಿಮಾ ಮಂದಿರಗಳು ತಮ್ಮಚಹರೆ ಬದಲಾಯಿಸಿಕೊಂಡು ಹೊಸ ತಂತ್ರಜ್ಞಾನ ಹಾಗೂ ವಿಶೇಷ ಆಸನ ವ್ಯವಸ್ಥೆ ಯಿಂದ ಸಿನಿಮಾ‌ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಅದರಲ್ಲೂ ವಿಶೇಷವಾಗಿ ಈ ಚಿತ್ರಮಂದಿರದಲ್ಲಿರುವ ತಂತ್ರಜ್ಞಾನ ಮಂಗಳೂರು ಬಿಡಿ ಆಸುಪಾಸಿನಲ್ಲಿರುವ ಯಾವುದೇ ಸಿನಿಮಾ ಮಂದಿರದಲ್ಲಿ ಇಲ್ಲ ಎನ್ನಬಹುದು. ಆದರೆ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರ ದ ಎರಡು ಪಟ್ಟು ಸವಲತ್ತುಗಳನ್ನು ಹೊಂದಿರುವ ಸುಚಿತ್ರಾ ಹಾಗೂ ಪ್ರಭಾತ್ ನ ಟಿಕೆಟ್ ರೇಟು ಕೂಡಾ ಕಡಿಮೆ ಯಿದೆ. ಹಾಲಿವುಡ್ ಚಿತ್ರವಾದ ಅವೇಂಜರ್ಸ್ ದೀ ಎಂಡ್ ಗೇಮ್ ಸಿನಿಮಾ ವನ್ನು ತ್ರೀಡಿ ಯಲ್ಲಿ‌ ನೋಡಬೇಕಾದರೆ ನೀವು ಇಲ್ಲಿಗೆ ಬರಬೇಕು. ಚಿತ್ರದ ನೈಜತೆಯ‌ ಜತೆಯಲ್ಲಿ ಸೌಂಡ್ ಎಫೆಕ್ಟ್ ನಿಂದ ನೀವೇ ಸಿನಿಮಾದೊಳಗೆ ಎಂಟ್ರಿ ಪಡೆದುಕೊಂಡ ಅನುಭವ ಸಿಗಲಿದೆ. ನವೀಕೃತ ಈ ಸಿನಿಮಾ ಮಂದಿರದ ಉದ್ಘಾಟನೆಯಂದು ಸಿನಿಮಾ‌ಮಂದಿರಲ್ಲಿ‌ ಆವೇಂಜರ್ಸ್ ದೀ ಇನ್ಪಿನಿಟಿ ಪ್ರದರ್ಶನ ಮಾಡಲಾಗಿತ್ತು. ಈಗ ಸುಚಿತ್ರಾ ಕ್ಕೆ ಒಂದು ವರ್ಷ ತುಂಬಿದೆ ಈಗ ಆವೇಂಜರ್ಸ್ ನ ಹೊಸ ಸರಣಿಯ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಯಾಕೆ ಈಗ ರೇಟ್ ಏರುತ್ತಿದೆ ?

ಮಾರುಕಟ್ಟೆಯೊಳಗೆ ತರಕಾರಿ ರೇಟು ಕೂಡ ಏರಿಕೆಯಾಗುತ್ತಿದೆ. ಮುಖ್ಯವಾಗಿ ಬೀನ್ಸ್ ಕೆಜಿವೊಂದಕ್ಕೆ 60 ರೂ ಇದ್ದದ್ದು ಈಗ ಭರ್ತಿ 120-130ರೂಗೆ ತಲುಪಿದೆ. ಅಲಸಂಡೆ ಕೂಡ ಬೇಡಿಕೆ ಜಾಸ್ತಿ ಇದ್ದರೂ ಪೂರೈಕೆ ಸರಿಯಾಗಿ ನಡೆಯದ ಪರಿಣಾಮ 50 ರೂ ನಿಂದ 90 ರೂ.ಗೆ ಎರಡು ದಿನಗಳಲ್ಲಿ ಜಿಗಿತ ಕಂಡಿದೆ.
ಕಾಯಿ ಮೆಣಸು, ನೀರುಳ್ಳಿ, ಟೊಮೆಟೋ ಹೀರೆಕಾಯಿ, ಸ್ಥಳೀಯ ಬೆಂಡೆಗೂ ರೇಟು ಏರುಗತಿಯಲ್ಲಿದೆ. ಸ್ಥಳೀಯ ತರಕಾರಿಗಳಾದ ಬಸಳೆ ಹಾಗೂ ಅರಿವೆ ಸೊಪ್ಪಿನ ಪೂರೈಕೆ ಬೇಡಿಕೆಯಷ್ಟು ಇರುವ ಪರಿಣಾಮ ರೇಟು ಏರಿಕೆ ಕಂಡಿಲ್ಲ. ಇದರ ಜತೆಗೆ ಬಿಸಿಲಿಗೆ ಹೆಚ್ಚಾಗಿ ತರಕಾರಿ ಕಡೆಗೆ ಜನರು ಹೆಚ್ಚಿನ ಒಲವು ಹಾಗೂ ಮದುವೆ ಸಮಾರಂಭಗಳು ಕೂಡ ಇರುವುದರಿಂದ ಈ ತರಕಾರಿಗಳ ದರದಲ್ಲೂ ಏರಿಕೆ ಕಾಣಿಸಿಕೊಂಡಿದೆ ಎನ್ನುವುದು ಅವರ ಮಾತು. ಜತೆಗೆ ಹಣ್ಣು ಹಂಪಲು ದರದಲ್ಲೂ ಏರಿಕೆ ಕಾಣಿಸಿಕೊಂಡಿದೆ.
*ಮಾಂಸಹಾರಿಗಳಿಗೆ ಬರೆ:* ಬ್ಲಾಯರ್ ಕೋಳಿಯ ರೇಟು ಕೆಲವು ದಿನಗಳಿಂದ ಕೆಜಿವೊಂದಕ್ಕೆ 145 ರೂ.ನಲ್ಲಿ ಸಾಗುತ್ತಿದೆ. ಟೈಸನ್‌ಗೂ ಕೆಜಿವೊಂದಕ್ಕೆ 150 ರೂ.ಕಡೆಗೆ ಸಾಗಿದೆ. ಮುಖ್ಯವಾಗಿ ಏಪ್ರಿಲ್ ತಿಂಗಳಲ್ಲಿ ಮದುವೆ ಸಮಾರಂಭಗಳು ಜಾಸ್ತಿಯಾಗಿರುವುದರಿಂದ ಕೋಳಿ ಉದ್ಯಮ ಕೂಡ ಚುರುಕುಗೊಂಡಿದೆ. ಮತ್ತೊಂದೆಡೆ ಬನ್ನೂರು ಕುರಿಯ ದರವಂತೂ ನಿಂತಲ್ಲೇ ನಿಂತು ಉದಾಹರಣೆಗಳು ಇಲ್ಲ.
ಬನ್ನೂರು ಕುರಿಗೆ ಕೆಜಿಗೆ ಈಗ 620 ರೂ. ಇದ್ದರೆ ಆಡಿನ ಮಾಂಸಕ್ಕೆ 440 ರೂ ತಲುಪಿದೆ. ಇದರ ಜತೆಗೆ ಮೀನಿನ ದರದಲ್ಲೂ ಸಾಕಷ್ಟು ದರ ಏರಿದೆ. ಆಂಜಲ್ ಈಗ ಕೆಜಿಗೆ 1 ಸಾವಿರ ದಾಟಿದರೆ ಬೂತಾಯಿ ರೇಟು ಬಂಗುಡೆ ಮೀನಿಗಿಂತ ಜಾಸ್ತಿ.

90 ದಾಟಿದರೂ ರುಕ್ಮಯ್ಯ ಕೃಷಿ ಪ್ರೀತಿ ಬಿಟ್ಟಿಲ್ಲ

ರುಕ್ಮಯ್ಯ ಮೂಲ್ಯ ಅವರು ಮಂಗಳೂರು ಸುರತ್ಕಲ್ ನ ಪಾವಂಜೆ ಅವರು ಈಗ ಅವರಿಗೆ 9೦ರ ಹರೆಯ ಇನ್ನು ಅವರ ಕೃಷಿ ಪ್ರೀತಿ ಕುಗ್ಗಿಲ್ಲ. ಈಗಲೂ ಮುಂಜಾನೆ 4ಕ್ಕೆ ಎದ್ದು ಗದ್ದೆಯ ಕೆಲಸದಲ್ಲಿ ತಲ್ಲೀನರಾಗುತ್ತಾರೆ. ಇವರ ಕೃಷಿ ಪ್ರೀತಿಗೊಂದು ಸಲಾಂ

ಕರಾವಳಿಯಲ್ಲಿ ಮಳೆರಾಯ ಯಾಕೆ ಬರ‍್ತಾ ಇಲ್ಲ ?

ರಾಜ್ಯದ ಹೆಚ್ಚು ಮಳೆ ಬೀಳುವ, ಕಡಲತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕುಡಿವ ನೀರಿಗೆ ತತ್ವಾರ ಆರಂಭವಾಗಿದೆ. ಈ ನೀರಿನ ಬರ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 2018ರಲ್ಲಿ 4616.7ಮಿಮೀ ಮಳೆಯಾಗುವ ಮೂಲಕ ಒಂದು ಹೊಸ ದಾಖಲೆ ನಿರ್ಮಾಣವಾಗಿತ್ತು. ಆದರೆ ಪ್ರಾಕೃತಿಕ ವೈಪರೀತ್ಯವೋ ಎಂಬಂತೆ ಡಿಸೆಂಬರ್ ತಿಂಗಳಾಂತ್ಯಕ್ಕೆ ಜಿಲ್ಲೆಯಾದ್ಯಂತ ಭೂಮಿಯ ಒರತೆ ಕಡಿಮೆಯಾಗಿ, ಕುಡಿಯುವ ನೀರಿಗೂ ತತ್ವಾರ ಬಂದಿದೆ.

ಮಳೆಗಾಲದಲ್ಲಿ ಕರಾವಳಿ ಜಿಲ್ಲೆಗಳು ನೆರೆಯಲ್ಲಿ ಮುಳುಗಿದರೆ, ಬೇಸಗೆಯಲ್ಲಿ ಬಿಸಿಲ ಬೇಗೆಗೆ ಹೈರಾಣಾಗುತ್ತಿವೆ. ಕರಾವಳಿ ಭಾಗದಲ್ಲಿ ಗುರುವಾರ ಬಿಸಿಲ ತಾಪ 37 ಡಿಗ್ರಿಗೆ ತಲುಪಿದ್ದು, ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ.