Tagged: mangalore

ಬೊಕ್ಕಪಟ್ಣದಲ್ಲಿ ಬಾಟಲ್‌ಗೊಂದು ಆರ್ಟ್ ಕ್ಯಾಂಪ್

ಮನೆ, ಹೋಟೆಲ್, ಬಾರ್, ಅಂಗಡಿ ಮಳಿಗೆ ಗಳಲ್ಲಿ ದ್ರವ್ಯ ಪದಾರ್ಥಗಳನ್ನು ಖರೀದಿಸಿ ಉಪಯೋಗ ಆದ ನಂತರ ಅದೇ ಬಾಟಲ್‌ಗಳನ್ನು ತ್ಯಾಜ್ಯ ಎಂದು ಬೀದಿ, ನದಿ, ಸಮುದ್ರಕ್ಕೆ ಎಸೆದು ಮಾಲಿನ್ಯ ಗೊಳಿಸುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಈ ಬಾಟಲ್ ಗಳು ಅಂತರ್ಜಲ ಮತ್ತು ಜಲಚರ ಜೀವಿಗಳ ನೆಮ್ಮದಿಗೆ ಸಮಸ್ಯೆ ಆಗುತ್ತಿವೆ.

ಮಂಗಳೂರಿನ ಬೊಕ್ಕ ಪಟ್ಣದ ಕಲಾವಿದೆ ಮೇಘ ಮೆಂಡನ್ ಈ ತರದ ತ್ಯಾಜ್ಯ ಬಾಟಲಿಗಳಲ್ಲಿ ಚಿತ್ರ ಬರೆದು ಅದಕ್ಕೆ ವಿದ್ಯುತ್ ಸಂಪರ್ಕ ನೀಡಿ ಅದರ ಮೇಲೆ ಹೂ ಇಟ್ಟು ಅದು ಮನೆಯ ಅಂದ ಹೆಚ್ಚಾಗುವ ರೀತಿಯಲ್ಲಿ ಹೊಸ ಒಂದು ಕಲಾ ಆವಿಷ್ಕಾರ ಮಾಡುತ್ತಾರೆ.
ಸ್ವಚ್ಛ ಭಾರತದ ಒಂದು ಪಾತ್ರವಾಗಿ ಮನೆ, ಮನೆಯ ಬಾಟಲ್ ತ್ಯಾಜ್ಯಗಳು ಮನೆ, ಮನೆಯಲ್ಲೇ ಉಪಯೋಗ ಆದರೆ ಬೀದಿ, ನದಿ, ಸಾಗರಕ್ಕೆ ಸೇರುವ ತ್ಯಾಜ್ಯ ಕಡಿಮೆ ಆಗಿ ಪರಿಸರಕ್ಕೆ ನೀಡುವ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ ಎಂಬ ಹಿತ ದೃಷ್ಟಿಯಲ್ಲಿ ಇದೀಗ ಈ ಬಾಟಲ್ ಚಿತ್ರ ಕಲೆಯ ಶಿಬಿರವನ್ನು ಬೊಕ್ಕ ಪಟ್ಣದ ಫಲ್ಗುಣಿ ನದೀ ಕಿನಾರೆಯಲ್ಲಿ ಆರಂಭಿಸಿದ್ದಾರೆ. ಮೇ 5, 12, 19, 20 ರಂದು ಬೆಳಗ್ಗೆಯಿಂದ ಮಧ್ಯಾನ ತನಕ ಈ ಶಿಬಿರ ಜರುಗಲಿದೆ.

ಮಂಗಳೂರಿಗೆ ಇರುವಷ್ಟು ಹೆಸರು ಬೇರೆ ಎಲ್ಲೂ ಇಲ್ಲ!

ಇಡೀ ದೇಶದ ಲೆಕ್ಕಚಾರ ತೆಗೆದು ನೋಡಿದರೆ ಮಂಗಳೂರಿಗೆ ಇರುವಷ್ಟು ಹೆಸರು ಬೇರೆ ಯಾರಿಗೂ ಇಲ್ಲ.
ಒಂದು ಊರಿಗೆ ಅತೀ ಹೆಚ್ಚು ಹೆಸರು ಇರೋದು ಮಂಗಳೂರಿಗೆ ಮಾತ್ರವಂತೆ. ತುಳು ಭಾಷೆಯಲ್ಲಿ ‘ಕುಡ್ಲ’, ಕನ್ನಡದಲ್ಲಿ ‘ಮಂಗಳೂರು‘, ಇಂಗ್ಲೀಷ್‌ನಲ್ಲಿ ‘ಮ್ಯಂಗಳೂರು’, ಮಲಯಾಳಂನಲ್ಲಿ ‘ಮಂಗಳಾಪುರಂ’, ಹವ್ಯಕ ಭಾಷೆಯಲ್ಲಿ ‘ಕೊಡಿಯಾಲ’,ಕೊಂಕಣಿ ಭಾಷೆಯಲ್ಲಿ ‘ಕೊಡಿಯಲ್’, ಬ್ಯಾರಿ ಭಾಷೆಯಲ್ಲಿ ‘ಮೈಕಾಲ’, ಸಂಸ್ಕೃತದಲ್ಲಿ ‘ಮಂಜುರನ್’ ಹಾಗೂ ಉರ್ದು ಭಾಷೆಯಲ್ಲಿ ಕುಡಲ್. ಇದರ ಜತೆಗೆ ಜಲಾಲಾಬಾದ್ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ ಎನ್ನುವ ಇತಿಹಾಸ ಪುಟಗಳು ವಿವರಣೆ ನೀಡುತ್ತದೆ.

ಮಂಗಳೂರಿನಲ್ಲಿ ಕಾಣಸಿಗಲಿದೆ ವಾಟರ್ ಪಾಲಿಟಿಕ್ಸ್

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯಾಗುವ ತುಂಬೆ ಡ್ಯಾಮ್‌ನಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಇದನ್ನು ಗಮನಿಸಿ ಜಿಲ್ಲಾಡಳಿತ ರೇಶನಿಂಗ್ ಮೂಲಕ ನೀರು ಪೂರೈಕೆ ಆರಂಭಿಸಿತ್ತು.

ಇಲ್ಲಿಯ ಜನಪ್ರತಿನಿಧಿಗಳು ಡ್ಯಾಮ್ ವೀಕ್ಷಿಸಿ, ತುಂಬಾ ನೀರಿದೆ ಎಂದು ಹೇಳಿ, ರೇಶನಿಂಗ್ ನಿಲ್ಲಿಸಲು ಒತ್ತಡ ತಂದರು. ನೀರಿನ ಸೋರಿಕೆ, ಪೋಲು, ದುರ್ಬಳಕೆ ತಡೆದು, ಮಿತ ವ್ಯಯ ಮಾಡಲು ಹೇಳಿ, ಬದಲಿ ವ್ಯವಸ್ಥೆಗೆ ಸಲಹೆ ಮಾಡಬೇಕಾದ ಜನಪ್ರತಿನಿಧಿಗಳು ಪ್ರತಿಪಕ್ಷದವರ ಮಾದರಿಯಲ್ಲಿ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುವ ಲಕ್ಷಣ ಕಾ ಣಿಸುತ್ತಿಲ್ಲ. ನಗರ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ನೀರಿನ ತೀವ್ರ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತೆ ರೇಶನಿಂಗ್ ಆರಂಭಿಸಿದೆ.

ಮತ್ತೆ ರೇಶನಿಂಗ್: ಮೇ 1ರ ಬೆಳಗ್ಗೆ 6 ಗಂಟೆಯಿಂದ ಮೇ 3ರ ಬೆಳಗ್ಗೆ 6 ಗಂಟೆಯ ವರೆಗಿನ 48 ತಾಸುಗಳ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮೇ 3ರ ಬೆಳಗ್ಗೆ 6 ಗಂಟೆಯಿಂದ ಮೇ 7ರ ಬೆಳಗ್ಗೆ 6 ಗಂಟೆ ವರೆಗಿನ 96 ಗಂಟೆ ನೀರು ಸರಬರಾಜು ನಡೆಯಲಿದೆ. ಮೇ 7ರ ಬೆಳಗ್ಗೆ 6ರಿಂದ ಮೇ 9ರ ತನಕ ಬೆಳಗ್ಗೆ 6ರ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮೇ 9ರ ಬೆಳಗ್ಗೆ 6ರಿಂದ ಮೇ 13ರ ಬೆಳಗ್ಗೆ 6ರ ತನಕ 96 ಗಂಟೆ ಕಾಲ ನೀರು ಪೂರೈಕೆ ನಡೆಯಲಿದೆ. ಮೇ 13ರ ಬೆಳಗ್ಗೆ 6ರಿಂದ ಮೇ 15ರ ಬೆಳಗ್ಗೆ 6ರ ತನಕ 48 ಗಂಟೆ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಮೇ 15ರ ಬೆಳಗ್ಗೆ 6ರಿಂದ ಮೇ 19ರ ಬೆಳಗ್ಗೆ 6 ಗಂಟೆ ತನಕ 96 ಗಂಟೆ ನೀರು ಪೂರೈಕೆ ನಡೆಯಲಿದೆ. ಮೇ 19ರ ಬೆಳಗ್ಗೆ 6ರಿಂದ ಮೇ 21ರ ಬೆಳಗ್ಗೆ 6 ಗಂಟೆ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಮಂಗಳೂರು ಹೆಸರಿನ ಹಿಂದಿನ ಆದಿಶಕ್ತಿ ಈ ದೇವತೆ !

ಮಂಗಳೂರು ಎನ್ನುವ ಹೆಸರಿನ ಹಿಂದೆ ಈ ಅಧಿದೇವತೆ ಯ ಶಕ್ತಿಯಿದೆ.
ಹೌದು. ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ಬೋಳಾರಿನಲ್ಲಿ ನೆಲೆಸಿದ್ದು ಮಂಗಳೂರಿನ ಮಧ್ಯಪ್ರದೇಶದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ.
ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ “ಮಂಗಳಾಂಬೆ”ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ ಎನ್ನುವುದು ಕುಡ್ಲದ ಇತಿಹಾಸ ಪುಟ ಹೇಳುತ್ತಿದೆ.

6 ಕಿಮೀ ನಡೆದು ಶಾಲೆಗೆ ಹೋಗಿ ಗೆದ್ದು ಬಂದಳು

22 ಕಿ. ಮೀ ದೂರ ಶಾಲೆ. ದಿನಾ ಆರು ಕಿ.ಮೀ ನಡಿಗೆ. ಆಗಾಗ ಕೈಕೊಡುವ ವಿದ್ಯುತ್. ಇಂತಹ ಪರಿಸ್ಥಿತಿಯಲ್ಲೂ ಛಲದಿಂದ ಓದಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿದ ಸುಬ್ರಹ್ಮಣ್ಯ ಸಮೀಪದ ಕೇನ್ಯದ ಕೃಪಾ ಕೆ. ಆರ್. ಅವರ ಸಾಧನೆ ಸಿಟಿಯಲ್ಲಿ ಓದುವ ಮಕ್ಕಳಿಗೆ ಮಾದರಿಯಾಗಿದ್ದಾರೆ. ಸಿಟಿಯಲ್ಲಿ ಶಾಲೆಗೆ ಬಸ್, ರಿಕ್ಷಾದಲ್ಲಿ ಕರೆದುಕೊಂಡು ಹೋದರೂ ಇಂತಹ ಮಾರ್ಕ್ಸ್ ಪಡೆದುಕೊಂಡಿಲ್ಲ.