Tagged: mangalore

ಕದ್ರಿ ಬ್ರಹ್ಮಕಲಶಕ್ಕೆ ರಿಕ್ಷಾ ಚಾಲಕರ ವಿಶಿಷ್ಟ ಸೇವೆ

ವಿಶ್ವಹಿಂದೂ ಪರಿಷತ್ ಬಜರಂಗದಳ ಆಟೋ ಚಾಲಕರ ಮಾಲಕರ ಘಟಕ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ಬ್ರಹ್ಮಕಲಶದ ಅಂಗವಾಗಿ ಮೇ 9 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಉಚಿತ ಆಟೊರಿಕ್ಷಾ ಸೇವೆ ಸಿಗಲಿದೆ.
ಘಟಕದ ನೂರು ರಿಕ್ಷಾ ಚಾಲಕರು ಕೆಪಿಟಿ ಬಳಿಯಿಂದ, ಬಂಟ್ಸ್ ಹಾಸ್ಟೆಲ್‌ನಿಂದ, ಮಲ್ಲಿಕಟ್ಟೆಯಿಂದ ದೇವಸ್ಥಾನಕ್ಕೆ ಉಚಿತವಾಗಿ ಕರೆದುಕೊಂಡು ಹೋಗಿ ಬಿಡುವ ಹಾಗೂ ದೇವಸ್ಥಾನದಿಂದ ಸಮೀಪದ ಬಸ್ ನಿಲ್ದಾಣಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

ಈ ಮೂಲಕ ಮಂಗಳೂರಿನ ರಿಕ್ಷಾ ಚಾಲಕರು ಕದ್ರಿ ಶ್ರೀಮಂಜುನಾಥ ದೇವರ ಭಕ್ತರಿಗೆ ಪ್ರೀತಿಯ ಸೇವೆ ನೀಡುವ ಮೂಲಕ ವಿಶೇಷ ಸೇವೆ ಮಾಡುತ್ತಿದ್ದಾರೆ.

ಕುಡ್ಲದ ಫಿಮೇಲ್ ಫೋಟೋಗ್ರಾಫರ್ ಗೆದ್ದ ಫ್ರೈಜ್

ಪುರುಷರೇ ಪ್ರಾಧಾನ್ಯತೆ ವಹಿಸಿರುವಂತಹ ಸೃಜನಶೀಲ ಕಲೆ ಛಾಯಾಗ್ರಹಣ. ಇದರಲ್ಲಿ ಈಗೀಗೀಲಷ್ಟೆ ಮಹಿಳೆಯರು ವೈವಾಹಿಕ ಛಾಯಾಗ್ರಹಣದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಇದರ ನಡುವೆ ನಮ್ಮ ಕುಡ್ಲದ ಛಾಯಾಗ್ರಾಹಕಿ ರೊವಿನಾ ಬ್ರಿಟ್ಟೊ ಪ್ರತಿಷ್ಟಿತ ವೆಡ್ಡಿಂಗ್ ಸೂತ್ರ ಫೋಟೊಗ್ರಫಿ ಅವಾರ್ಡ್ 2019 ಪಡೆದಿದ್ದಾರೆ. ಹೌದು ಮಂಗಳೂರಿನ ಕ್ಯಾಮರೋನ್ ಸ್ಟುಡಿಯೋ ರೊವಿನಾ ಬ್ರಿಟ್ಟೊ ಪ್ರಿ ವೆಡ್ಡಿಂಗ್ ಫಿಲಂಸ್ ಆ್ಯಂಡ್ ಆಲ್ಬಂ ಡಿಸೈನ್ ವಿಭಾಗದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯುವುದರ ಮೂಲಕ ಈ ಸಾಧನೆ ಮಾಡಿದ್ದಾರೆ.
ಅಂದಹಾಗೆ ಕುಡ್ಲದ ರೊವಿನಾ ಬ್ರಿಟ್ಟೋ ಬೇಸಿಕಲಿ ಎಂಜಿನಿಯರಿಂಗ್ ವಿದ್ಯಾರ್ಥಿ. ವಾಮಂಜೂರಿನ ಸಂತ ಜೋಸೆಫ್‌ನಲ್ಲಿ ಎಂಜಿನಿಯರ್ ಮುಗಿಸಿಕೊಂಡು ತಮ್ಮ ಹವ್ಯಾಸವಾದ ಫೋಟೋಗ್ರಾಫಿಯಲ್ಲಿಯೇ ಮಿಂಚಿದವಳಿಗೆ ಈಗ ಪ್ರಶಸ್ತಿ ಸಿಕ್ಕಿದೆ. ಇದು ಕುಡ್ಲದ ಹುಡುಗಿಯ ಸಾಧನೆಗೆ ಸಿಕ್ಕ ಪ್ರಶಸ್ತಿ.

ಅಕ್ಷಯ ತೃತೀಯದಲ್ಲಿ ಚಿನ್ನಕ್ಕೆ ಯಾಕೆ ಡಿಮ್ಯಾಂಡ್ ?

ಅಕ್ಷಯ ತೃತೀಯ ಎಂಬುದು ಹೆಸರೇ ತಿಳಿಸುವಂತೆ ಆ ದಿನ ಕೈಗೊಂಡ ಕಾರ್ಯ ಅಕ್ಷಯ ಆಗುತ್ತದೆ. ಅಂದರೆ ಆ ದಿನದಂದು ಶಕ್ತ್ಯಾನುಸಾರ ಸುವರ್ಣವನ್ನು ದಾನ ಮಾಡಬೇಕು. ಯಾರಿಗೆ ದಾನ ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಂಡಿರಬೇಕು.
ಆ ದಿನ ನಾವು ಚಿನ್ನ ಖರೀದಿಸಿ, ನಾವೇ ಧರಿಸಬೇಕು ಎಂಬ ಉಲ್ಲೇಖ ಏನಿಲ್ಲ. ಅಂದು ದೇವತಾ ಕಾರ್ಯಗಳಿಗೆ, ದಾನಗಳಿಗೆ ಬಹಳ ಪ್ರಾಶಸ್ತ್ಯ. ಎಷ್ಟು ಶ್ರದ್ಧೆ-ಭಕ್ತಿಯಿಂದ ಅವೆಲ್ಲವನ್ನೂ ಮಾಡುತ್ತೀರೋ ಆ ಫಲಗಳು ಅಷ್ಟು ಅಕ್ಷಯ ಆಗುತ್ತವೆ.

ವಿದ್ಯಾರ್ಥಿಗಳೇ ನೀಟ್ ಎಕ್ಸಾಂ ನೀಟಾಗಿ ಬರೆಯಿರಿ

ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ 2019 ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಭಾನುವಾರ( ಮೇ 5 ರಂದು) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವಿವಿಧ ಕೇಂದ್ರಗಳು ಸೇರಿದಂತೆ ದೇಶಾದ್ಯಂತ ನಡೆಯಲಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪರೀಕ್ಷೆ ನಡೆಸಲಿದೆ. ರಾಜ್ಯದ ದ.ಕ. ಜಿಲ್ಲೆ ಸಹಿತ 9 ಜಿಲ್ಲೆಗಳ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರಾವಾಡ, ಕಲಬುರಗಿ, ಹುಬ್ಬಳ್ಳಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪರೀಕ್ಷೆ ನಡೆಯಲಿದೆ.
ನಗರದ ಸೈಂಟ್ ಅಲೋಶಿಯಸ್, ಶಾರದಾ ವಿದ್ಯಾನಿಲಯ, ಕೆನರಾ ಕಾಲೇಜು, ಬಜಪೆ ಶ್ರೀದೇವಿ ಕಾಲೇಜು ಪರೀಕ್ಷಾ ಕೇಂದ್ರಗಳಾಗಿವೆ.

ಸ್ವಚ್ಛ ಮನಸ್ಸಿನಿಂದ ಮೂಡಿತು ಮಕ್ಕಳ ಪಾರ್ಕ್

ಪಾಂಡೇಶ್ವರ ಪೋಲಿಸ್ ಲೇನ್ ನಲ್ಲಿರುವ ಚಿಣ್ಣರ ಪಾರ್ಕ್ ಹಲವು ದಿನಗಳಿಂದ ಸೂಕ್ತ ನಿರ್ವಹಣೆ ಇಲ್ಲದೇ ಪಾಳು ಬಿದ್ದ ಸ್ಥಿತಿಯಲ್ಲಿತ್ತು.
ಇದೀಗ ಅದನ್ನು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಅಡಿಯಲ್ಲಿ ಇದನ್ನು ನವೀಕರಣಗೊಳಿಸಲಾಗಿದೆ. ಇಲ್ಲಿ ಒಂದು ಕಾಲದಲ್ಲಿ ಕಸವೇ ಹಾಕಿ ಈ ಪ್ಲೇಸ್ ಗಬ್ಬು ನಾರುತ್ತಿತ್ತು. ಈಗ ಅದು ಮಕ್ಕಳ ಪಾರ್ಕ್ ಆಗಿ ಬದಲಾಗಿದೆ. ಮಂಗಳೂರಿನ ಸ್ವಚ್ಛ ಮನಸ್ಸಿನಿಂದ ಈಗ ಉತ್ತಮ ಪಾರ್ಕ್‌ವೊಂದು ನಿರ್ಮಾಣವಾಗಿದೆ ಎನ್ನೋದು ಖುಷಿಯ ವಿಷ್ಯಾ.