Tagged: mangalorecity

ಕುಡ್ಲದ ಟವರ್‌ಗೆ ಇಟಲಿಯ ಕ್ಲಾಕ್

ಮಂಗಳೂರಿನ ಸ್ಮಾರ್ಟ್ ಸಿಟಿಯ ನಾನಾ ಯೋಜನೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟ ಕುಡ್ಲ ಸಿಟಿಯ ಕ್ಲಾಕ್ ಟವರ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಟಿಕ್ ಟಿಕ್ ಸದ್ದು ಕೇಳಿಸಲಿದೆ. ಇದಕ್ಕೆ ಇಟಲಿ ಮೂಲದ ಯಂತ್ರಗಳನ್ನು ಆಳವಡಿಸಲಾಗಿದೆ ಎನ್ನುವುದು ವಿಶೇಷ.

ಮಂಗಳೂರಿನ ಮಾರ್ನಮಿಕಟ್ಟೆಯ ನಾಯಕ್ಸ್ ಟೈಮ್ ಸಂಸ್ಥೆಯ ಸತೀಶ್ ಚಂದ್ರ ನಾಯಕ್ ಹಾಗೂ ಅವರ ಪುತ್ರ ಸಿದ್ದಾಂತ್ ನಾಯಕ್ ಅವರು ಈ ಕ್ಲಾಕ್ ಟವರ್‌ಗೆ ಅಳವಡಿಸಲಾಗುವ ಕ್ಲಾಕ್‌ನ ಹಿಂದಿನ ಶಕ್ತಿಗಳು. ಮಂಗಳೂರು ಈಗಾಗಲೇ ಸ್ಮಾರ್ಟ್ ಸಿಟಿಯ 100 ನಗರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಂಗವಾಗಿ ಮೊದಲ ಕ್ಲಾಕ್ ಟವರ್ ಯೋಜನೆ ಪೂರ್ಣವಾಗಿರುವುದು ಕುಡ್ಲದ ಜನಕ್ಕೆ ಖುಷಿ ನೀಡಲಿದೆ.

88 ಅಡಿ ಸುತ್ತಳತೆ ಹೊಂದಿರುವ ಈ ಕ್ಲಾಕ್‌ನಲ್ಲಿ ಬಳಕೆಯಾಗುವ ಯಂತ್ರೋಪಕರಣಗಳು ಎಲ್ಲವೂ ಇಟಲಿ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ವಿಶೇಷವಾಗಿ 8 ನಾನಾ ಬಗೆಯ ಬೆಲ್ ಮಾಡುವ ಸಾಮರ್ಥ್ಯ ಇರುವ ಮೈಕ್ರೋ ಪ್ರೊಸೆಸರ್ ಕೂಡ ಇದ್ದರೂ ಭಾರತೀಯ ಜನತೆಗೆ ಇಷ್ಟವಾಗುವಂತಹ ಒಂದೇ ವಿಧದ ಬೆಲ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕ್ಲಾಕ್‌ಗೆ ಅಕ್ರೇಲಿಕ್ ಶೀಟ್, ಸ್ಟೈನ್‌ಲೆಸ್ ಸ್ಟೀಲ್ ಹಾಗೂ ಎಸಿಪಿ ಶೀಟ್‌ಗಳನ್ನು ಬಳಸಿಕೊಂಡು ಸಿದ್ಧಪಡಿಸಿಕೊಂಡಿದ್ದು, ಈಗಾಗಲೇ ಗೋಪುರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಕ್ಲಾಕ್‌ನ ಮಾದರಿಗಳಿಗೆ ನಾಲ್ಕು ಯಂತ್ರಗಳನ್ನು ಆಳವಡಿಸುವ ಕೆಲಸ ಮುಂದಿನ ವಾರದಿಂದ ಸಾಗಲಿದೆ.

ನಾಯಕ್ಸ್ ಟೈಮ್ಸ್‌ನ ಮಾಲೀಕ ಸತೀಶ್ ಚಂದ್ರ ನಾಯಕ್ ಹೇಳುವಂತೆ ಇದೊಂದು ವಿಶಿಷ್ಟವಾದ ಗಡಿಯಾರ. ಕಳೆದ ಮೂರು ತಿಂಗಳುಗಳಿಂದ ಇದರ ಕೆಲಸಗಳು ಆರಂಭವಾಗಿದ್ದು, ಮುಖ್ಯವಾದ ಕೆಲಸಗಳೆಲ್ಲವೂ ಪೂರ್ಣಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ಕುಡ್ಲದ ಜನರಿಗೆ ಸಮಯ ನೋಡುವ ಅವಕಾಶ ಸಿಗಲಿದೆ. ಇಟಲಿಯಿಂದ ಮೈಕ್ರೋ ಪ್ರೋಸೆಸರ್‌ವನ್ನು ತಂದಿರುವುದರಿಂದ ಸಮಯದ ಸದ್ದು ಕೂಡ ವಿಶಿಷ್ಟವಾಗಿ ಕೇಳಿಸಲಿದೆ. ಪ್ರತಿ ಗಂಟೆಯ ಪ್ರಕಾರ ಬೆಲ್ ಹಾಗೂ ಅರ್ಧ ಗಂಟೆಗೆ ಸಿಂಗಲ್ ಬೆಲ್ ಕೇಳಿಸಲಿದೆ. 75 ಅಡಿ ಎತ್ತರ 14 ಅಡಿ ಅಗಲದಲ್ಲಿ ಈ ಗಡಿಯಾರ ಕೂರಲಿದೆ. ಈ ಹಿಂದೆ 45 ಅಡಿ ಎತ್ತರದಲ್ಲಿ ಈ ಗಡಿಯಾರ ಕಾಣಿಸಿಕೊಂಡಿತ್ತು. ಹೊಸ ಗಡಿಯಾರಕ್ಕೆ ವಿದ್ಯುತ್ ಬೇಕಾಗುತ್ತದೆ. ಮೂರು ಬ್ಯಾಟರಿಗಳನ್ನು ಇಡಲಾಗುತ್ತದೆ. 400 ವ್ಯಾಟ್ ಸಾಮರ್ಥ್ಯ ಇರುವ ಎಲ್‌ಇಡಿ ಬಲ್ಬ್‌ಗಳನ್ನು ಗಡಿಯಾರದ ಒಳಭಾಗದಲ್ಲಿ ಅಳವಡಿಸುವ ಕೆಲಸ ಸಾಗಲಿದೆ .

ಪಂಪ್‌ವೆಲ್ ಸರ್ಕಲ್ ನಿರ್ಮಾಣಕ್ಕೆ ಎಷ್ಟು ವರ್ಷ ಬೇಕು ?

ಪಂಪ್‌ವೆಲ್ ಸರ್ಕಲ್ ಮಂಗಳೂರಿನ ಹೆಬ್ಬಾಗಿಲು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಇಡೀ ಕುಡ್ಲದ ಇತಿಹಾಸದಲ್ಲಿ ಇಂತಹ ಒಂದು ಸರ್ಕಲ್ ನಿರ್ಮಾಣ ಮಾಡುವ ಕನಸ್ಸು ಇನ್ನು ಕೂಡ ಪೂರ್ಣವಾಗಿಲ್ಲ.
ಜನಪ್ರತಿನಿಧಿಗಳನ್ನು ನೇರವಾಗಿಲ್ಲ ಕೇಳುವ ಧೈರ್ಯ ಇಲ್ಲದ ಜನರ ದಿವ್ಯ ನಿರ್ಲಕ್ಷ್ಯಕ್ಕೆ ಪಂಪ್‌ವೆಲ್ ಸರ್ಕಲ್ ಕನಸ್ಸು ಇನ್ನು ಪೂರ್ಣವಾಗಲು ಅದೆಷ್ಟೋ ವರ್ಷಗಳೇ ಬೇಕು ಮಾರಾಯ್ರೆ. ಎಂಜಿನಿಯರ್ ಡೇ ಆಚರಣೆ ಮಾಡುವಾಗ ಪಂಪ್‌ವೆಲ್ ಸರ್ಕಲ್ ಮಾಡಲು ಶ್ರಮ ಪಟ್ಟ ಎಂಜಿನಿಯರ್‌ಗಳನ್ನು ಬಿಟ್ಟು ಉಳಿದವರಿಗೆ ಹ್ಯಾಪಿ ಎಂಜಿನಿಯರ‍್ಸ್ ಡೇ.

ನಿಗರ್ತಿಕರ ಆಶಾಕಿರಣ ಜೆಪ್ಪು ಸಂತ ಆಂತೋನಿ ಆಶ್ರಮ

ಮಂಗಳೂರಿನ ಜೆಪ್ಪು ಸಂತ ಆಂತೋನಿ ಆಶ್ರಮ ಸಮಾಜದ ದುರ್ಬಲ ಹಾಗೂ ದೀನ ದಲಿತರಿಗೆ ನೆಮ್ಮದಿಯ ಬದುಕು ನೀಡುವ ನಿಟ್ಟಿನಲ್ಲಿ ಆಶ್ರಮ ಕಳೆದ 120 ವರ್ಷಗಳಿಗಿಂತಲೂ ನಿರಂತರವಾಗಿ ದುಡಿಯುತ್ತಿದೆ. ನಗರದ ಜೆಪ್ಪುವಿನಲ್ಲಿರುವ ಆಶ್ರಮದ ವಠಾರಕ್ಕೆ ಹೋದಂತೆ ಸದ್ದಗದ್ದಲದ ಪ್ರಪಂಚದಿಂದ ನೆಮ್ಮದಿ, ಶಾಂತಿ- ಸಮಾಧಾನ ತಾಣಕ್ಕೆ ಹೋಗುತ್ತಿದ್ದೇವೆ ಎನ್ನುವ ಭಾವ ಪ್ರತಿಯೊಬ್ಬನಲ್ಲಿಯೂ ಬೆಳೆಯುತ್ತದೆ. ಹಸಿರು ತೋಟ, ಮರಗಿಡ, ಹೂಗಳಿಂದ ಆಶ್ರಮದ ವಠಾರ ಹಸಿರು ಪ್ರೀತಿಗೆ ಮುನ್ನುಡಿ ಬರೆದಂತೆ ಭಾಸವಾಗುತ್ತದೆ.
ಆಶ್ರಮದಲ್ಲಿ 400ಕ್ಕೂ ಅಧಿಕ ಪುರುಷರು ಹಾಗೂ ಮಹಿಳೆಯರು ಬದುಕು ಕಟ್ಟುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಯುವಕರ ಶೈಕ್ಷಣಿಕ ಬದುಕು ಕೂಡ ಇಲ್ಲಿಯೇ ರೂಪುಗೊಳ್ಳುತ್ತಿದೆ. ಆಶ್ರಮವಾಸಿಗಳಲ್ಲಿ ಕಾಣಿಸಿಕೊಳ್ಳುವ ಶಿಸ್ತು ಅವರ ಬದುಕಿನ ಪ್ರಯಾಣಕ್ಕೊಂದು ಸುಲಭ ರಹದಾರಿಯನ್ನು ಕಲ್ಪಿಸಿಕೊಡುತ್ತದೆ. ತಮಗೆ ಬೇಕಾದ ತರಕಾರಿಯನ್ನು ತಾವೇ ಬೆಳೆಯುವ ಮೂಲಕ ಆಶ್ರಮದ ನಿವಾಸಿಗಳು ಬದುಕಿನಲ್ಲಿ ಸ್ವಾವಲಂಬನೆಯ ಪಾಠವನ್ನು ದಿನಾಲೂ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ.
ತೀರಾ ವಯಸ್ಸಾದ ಹಿರಿಯರು ಕೆಲಸ ಮಾಡಲು ಕೂಡದವರು ಕೂಡ ತಮ್ಮಲ್ಲಿ ಆಗುವ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿ ಬದುಕು ಕಲಿಸುತ್ತಿದ್ದಾರೆ. ಕಳೆದ ವರ್ಷ ಆಶ್ರಮ 120ವರ್ಷಗಳ ಆಚರಣೆಗೆ ಸಂಬಂಧಪಟ್ಟಂತೆ ನಾನಾ ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ‍್ಯಗತ ಮಾಡುವ ಕೆಲಸದಲ್ಲಿ ಮುಂದಾಗಿದೆ. ಮಾನಸಿಕ ರೋಗಿಗಳ ಚಿಕಿತ್ಸೆ ಹಾಗೂ ವಾಸಕ್ಕೆ 100 ಬೆಡ್‌ಗಳ ಸುಸಜ್ಜಿತ ಕಟ್ಟಡದ ನಿರ್ಮಾಣ ಕೆಲಸ ಸಾಗುತ್ತಿದೆ.

ತಾಮ್ರದ ಪಾತ್ರೆಯಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು !

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯೋದು ಹಳೇ ಕಾಲದ ಪದ್ಧತಿ. ಆಯುರ್ವೇದದಲ್ಲೂ ಇದರ ಉಲ್ಲೇಖವಿದೆ. ಈ ಹಳೆ ಕಾಲದ ಪದ್ಧತಿಯಿಂದಲೇ ಬೆರಗಾಗುವಂಥ ಆರೋಗ್ಯಕರ ಪರಿಣಾಮಗಳಿವೆ.
ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ 8 ಗಂಟೆಗಳ ಬಳಿಕ ಕುಡಿಯಬೇಕು. ಇದರಿಂದ ವಾತ, ಕಫ, ಪಿತ್ತ ನಿವಾರಣೆಯಾಗುತ್ತದೆ. ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಅತಿಸಾರ, ಭೇದಿ, ಕಾಮಾಲೆ ವಿರುದ್ಧವೂ ಹೋರಾಡುತ್ತದೆ.ತಾಮ್ರ ಜೀರ್ಣಕ್ರಿಯೆಗೆ ಸಹಕಾರಿ. ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
ತಾಮ್ರ ಕ್ಯಾನ್ಸರ್ ಹಾಗೂ ಅಧಿಕ ರಕ್ತದೊತ್ತಡ ತಡೆಗೂ ಉತ್ತಮ.ತಾಮ್ರ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಇದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು.ತಾಮ್ರದ ಪಾತ್ರೆಯಲ್ಲಿನ ನೀರನ್ನು ದಿನವೂ ಕುಡಿದಲ್ಲಿ ಇದು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ.
ತಾಮ್ರ ರಕ್ತಹೀನತೆಯನ್ನೂ ತಡೆಯುತ್ತದೆ.ದೇಹದಲ್ಲಿನ ಕೊಬ್ಬನ್ನು ಕರಗಿಸಲೂ ತಾಮ್ರ ಸಹಕಾರಿ. ಹೀಗಾಗಿ ತಾಮ್ರ ಉಪಯೋಗಿಸುವಿಕೆಯಿಂದ ತೂಕವೂ ಇಳಿಯುತ್ತದೆ. ತಾಮ್ರದಲ್ಲಿ ನಂಜುನಿರೋಧಕ ಗುಣಗಳಿದ್ದು ಇದು ಗಾಯಗಳನ್ನು ಗುಣಪಡಿಸುವಲ್ಲಿ ಸಹಕಾರಿ.

ಶಂಕರಪುರ ಮಲ್ಲಿಗೆ ರೇಟ್ ಭರ್ಜರಿ !

ಸುಗಂಧಯುಕ್ತ ಶ್ವೇತಪುಷ್ಪ ಶಂಕರಪುರ ಮಲ್ಲಿಗೆಗೆ ಈಗ ಚಿನ್ನದ ಬೆಲೆ ಬಂದಿದೆ. ಕಳೆದ 6 ದಿನಗಳಲ್ಲಿ 4 ಬಾರಿ ಕಟ್ಟೆಯ ಗರಿಷ್ಠ ಬೆಲೆ 1250 ರೂ. ತಲುಪಿದೆ.ವಾಡಿಕೆಗಿಂತ ಅತಿಯಾಗಿ ಸುರಿದ ನಿರಂತರ ಮಳೆಯಿಂದಾಗಿಮಲ್ಲಿಗೆ ಇಳುವರಿಯಲ್ಲಾದ ಕೊರತೆಯಿಂದ ಬೇಡಿಕೆಯಿದ್ದಷ್ಟುಹೂ ಸಿಗದ ಕಾರಣಮಾರುಕಟ್ಟೆಯಲ್ಲಿ ದರ ಏರುತ್ತಿದೆ.

ಆದರೆ ಮಾರುಕಟ್ಟೆಯಲ್ಲಿ ಹೂವಿಗೆ ಎಷ್ಟೇ ಬೇಡಿಕೆಹೆಚ್ಚಾದರೂ ಬೆಳೆಗಾರರಿಗೆ ಮಾತ್ರ 1250 ರೂ.ಗಿಂತ ಹೆಚ್ಚುಬೆಲೆ ಸಿಗುವುದಿಲ್ಲ. ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿ ದರಏರಿಕೆಯಾದಾಗ ಇದರ ಲಾಭ ಬೆಳೆಗಾರರಿಗಿಂತ ಹೆಚ್ಚಾಗಿವ್ಯಾಪಾರಿಗಳಿಗೆ ಹೋಗುತ್ತದೆ.ಕಳೆದ ಒಂದು ತಿಂಗಳಲ್ಲಿ ಕಟ್ಟೆಯಲ್ಲಿ 12 ಬಾರಿ ಮಲ್ಲಿಗೆಬೆಲೆ ನಾಲ್ಕಂಕಿ ತಲುಪಿದ್ದು 6 ಬಾರಿ ಬೆಳೆಗಾರರಿಗೆ ಗರಿಷ್ಠ ದರ 1250 ರೂ. ಸಿಕ್ಕಿದೆ. ಈ ಅವಧಿಯಲ್ಲಿ ಕನಿಷ್ಠ ದರ 280 ರೂ. ಆಗಿತ್ತು. ಕಳೆದ 30 ದಿನಗಳಲ್ಲಿ ಬೆಳೆಗಾರರಿಗೆ ಸರಾಸರಿಅಟ್ಟೆಗೆ 818ರೂ. ಬೆಲೆ ಸಿಕ್ಕಿದೆ.