Tagged: tulu

ಪಿಲಿವೇಷ ಎಂದರೆ ಅದು ಕುಡ್ಲದವರಿಗೆ ಮಾತ್ರ ಗೊತ್ತು

ಯಾರೇ ಏನೇ ಹೇಳಿದ್ರು ಪಿಲಿವೇಷ ವಿಚಾರದಲ್ಲಿ ಕುಡ್ಲದ ಮಂದಿಯನ್ನು ಮೀರಿಸುವವವರಿಲ್ಲ ಹುಲಿವೇಷ ಎಂದಾಗ ಕರಾವಳಿ ಜನರ ಜೀವ ಕಲೆ ಎಂದೇ ಕರೆಯಲಾಗುತ್ತದೆ. ಇದೇ ಕಾರಣದಿಂದ ಮಂಗಳೂರಿನ ಪಿಲಿ ಕುಲ ಎನ್ನುವ ಪ್ರದೇಶಕ್ಕೆ ಹುಲಿಗಳಿಂದಾಗಿ ಹೆಸರು ಬಂತು.

ಬಹಳ ಹಳೆಯ ಕಾಲದಲ್ಲಿ ಪಿಲಿ ಎಂದರೆ ತುಳುವಿನಲ್ಲಿ ಹುಲಿ ಕುಲ ಎಂದರೆ ಕೆರೆ ಎಂದು ಅರ್ಥ ಕೊಡುತ್ತದೆ ಈ ಹಿಂದೆ ಹುಲಿಗಳು ನೀರು ಕುಡಿಯಲು ಕೊಳ ಅಥವಾ ಕೆರೆ ಕಡೆಗೆ‌ ಬರುವುದರಿಂದ ಇದಕ್ಕೆ ಪಿಲಿ ಕುಳ ಎಂದು ತುಳು ಜನರು ಹೆಸರು ಕೊಟ್ಟರು ಈಗ ಪಿಲಿ ಕುಳ ಎಂದರೆ ನಿಸರ್ಗ ಧಾಮವಾಗಿ ಬದಲಾಗಿದೆ. ಅಂದಹಾಗೆ ಜುಲೈ 29 ವಿಶ್ವ ಹುಲಿಗಳ ದಿನ. ಹುಲಿ ಸಂತತಿ ನಾಶದತ್ತ ಸಾಗುತ್ತಿದ್ದರೂ ಕರಾವಳಿಯಲ್ಲಿ ಹುಲಿವೇಷದ ರಂಗು ಪ್ರತಿ ಸಲನೂ ಏರುತ್ತಿದೆ.

ಸತ್ಯನಾರಾಯಣ ಪೂಜೆ ತುಳುವರ ಪ್ರತಿ ಶುಭಕಾರ್ಯಕ್ಕೂ ಬೇಕು

ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ತುಳುನಾಡಿನಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಕ್ರಮ ಅಥವಾ ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ವಿಚಾರದಲ್ಲೂ ಸತ್ಯನಾರಾಯಣ ದೇವರ ಪೂಜೆ ಯಂತೂ ಕಡ್ಡಾಯವಾಗಿ ಇರುತ್ತದೆ.
ವಿಶೇಷ ಎಂದರೆ ಕರಾವಳಿಯ ಭೂತರಾಧನೆ, ನಾಗಾರಾಧನೆಯಂತೇ ಸತ್ಯನಾರಾಯಣ ಪೂಜೆ ಕೂಡ ವಿಶಿಷ್ಟ ಪೂಜೆ,ಆರಾಧನೆಯಾಗಿ ಗಮನ ಸೆಳೆಯುತ್ತದೆ. ಪೂಜೆಯ ಸಮಯದಲ್ಲಿ‌ ಮಾಡುವ ಪ್ರಸಾದವಂತೂ ಎಲ್ಲರಿಗೂ ಬಹಳ‌ ಪ್ರಿಯ.

ಎಸ್ಸೆಸ್ಸೆಲ್ಸಿ ತುಳು ಭಾಷೆಯಲ್ಲಿ 100 ರಿಸಲ್ಟ್

ಎಸ್ಸೆಸ್ಸೆಲ್ಸಿ ಫಲಿತಾಂಶ ಈಗಾಗಲೇ ಹೊರಬಿದಿದ್ದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ ಬೋಧಿಸಲಾಗುತ್ತಿದ್ದು ಈ ಬಾರಿ ಎಸ್.ಎಲ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟು 617 ವಿದ್ಯಾರ್ಥಿಗಳು ತುಳು ಭಾಷೆ ಪರೀಕ್ಷೆ ಬರೆದಿದ್ದಾರೆ.

ಅದರಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು ಶೇ. 100 ಫಲಿತಾಶ ದಾಖಲಾಗಿದೆ. ಅದರಲ್ಲಿಯೂ 63 ವಿದ್ಯಾರ್ಥಿಗಳು ನೂರಕ್ಕೆ100 ಅಂಕ ಪಡೆದಿದ್ದಾರೆ.ಉಭಯ ಜಿಲ್ಲೆಗಳ ಒಟ್ಟು 41 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ನಡೆಯುತ್ತಿದೆ. ತುಳುವಿನಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯ ಒಟ್ಟು ಫಲಿತಾಶದಲ್ಲಿ ಏರಿಕೆ ಕಂಡುಬಂದಿದೆ.

ಮಂಗಳೂರಿಗೆ ಇರುವಷ್ಟು ಹೆಸರು ಬೇರೆ ಎಲ್ಲೂ ಇಲ್ಲ!

ಇಡೀ ದೇಶದ ಲೆಕ್ಕಚಾರ ತೆಗೆದು ನೋಡಿದರೆ ಮಂಗಳೂರಿಗೆ ಇರುವಷ್ಟು ಹೆಸರು ಬೇರೆ ಯಾರಿಗೂ ಇಲ್ಲ.
ಒಂದು ಊರಿಗೆ ಅತೀ ಹೆಚ್ಚು ಹೆಸರು ಇರೋದು ಮಂಗಳೂರಿಗೆ ಮಾತ್ರವಂತೆ. ತುಳು ಭಾಷೆಯಲ್ಲಿ ‘ಕುಡ್ಲ’, ಕನ್ನಡದಲ್ಲಿ ‘ಮಂಗಳೂರು‘, ಇಂಗ್ಲೀಷ್‌ನಲ್ಲಿ ‘ಮ್ಯಂಗಳೂರು’, ಮಲಯಾಳಂನಲ್ಲಿ ‘ಮಂಗಳಾಪುರಂ’, ಹವ್ಯಕ ಭಾಷೆಯಲ್ಲಿ ‘ಕೊಡಿಯಾಲ’,ಕೊಂಕಣಿ ಭಾಷೆಯಲ್ಲಿ ‘ಕೊಡಿಯಲ್’, ಬ್ಯಾರಿ ಭಾಷೆಯಲ್ಲಿ ‘ಮೈಕಾಲ’, ಸಂಸ್ಕೃತದಲ್ಲಿ ‘ಮಂಜುರನ್’ ಹಾಗೂ ಉರ್ದು ಭಾಷೆಯಲ್ಲಿ ಕುಡಲ್. ಇದರ ಜತೆಗೆ ಜಲಾಲಾಬಾದ್ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ ಎನ್ನುವ ಇತಿಹಾಸ ಪುಟಗಳು ವಿವರಣೆ ನೀಡುತ್ತದೆ.

ಜಗತ್ತಿನ ಒಂದೇ ಚರ್ಚ್ ನಲ್ಲಿ ತುಳುವಿನಲ್ಲಿ ಪ್ರಾರ್ಥನೆ

ಕರಾವಳಿಯಲ್ಲಿ ಅದರಲ್ಲೂ ಕ್ರೈಸ್ತ ಸಮುದಾಯದವರು ಹೆಚ್ಚಾಗಿ ಪೂಜಾ ವಿಧಿಗಳು ಸಾಮಾನ್ಯವಾಗಿ ಕೊಂಕಣಿ ಭಾಷೆಯಲ್ಲೇ ನಡೆಯುವುದು ಹೆಚ್ಚು. ಕೆಲವೊಂದು ಸಲ ಕನ್ನಡ, ಇಂಗ್ಲೀಷ್ ಭಾಷೆಯಲ್ಲೂ ಪೂಜಾವಿಧಿ ನಡೆಯುವುದಿದೆ.
ಆದರೆ ತುಳು ಭಾಷೆಯಲ್ಲಿ ಮಾತ್ರ ಪೂಜಾ ವಿಧಿ ನಡೆಸುವುದು ಜಗತ್ತಿನ ಯಾವುದೇ ಮೂಲೆಯಲ್ಲೂ ಇಲ್ಲ. ಆದರೆ ಪಾವೂರು ಹೋಲಿ ಕ್ರಾಸ್ ಚರ್ಚ್ ತುಳು ಭಾಷೆಯಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದು, ಇದು ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಪರಿಗಣಿಸಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ತುಳುವರ ಒತ್ತಾಯಕ್ಕೊಂದು ಬೆಂಬಲದಂತಿದೆ.
ಕೆಲವೊಂದು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಹಾಗೂ ತುಳುವೇತರರಿಗೆ ಅರ್ಥವಾಗುವ ನಿಟ್ಟಿನಲ್ಲಿ ಕನ್ನಡದಲ್ಲಿ ಪೂಜೆಯ ಹೊರತಾಗಿ ಉಳಿದಂತೆ ವರ್ಷವಿಡೀ, ವಾರದ ಪೂಜೆ, ಸಭೆ, ಸಮಾರಂಭ, ಮದುವೆ, ಸಾವು, ತಿಂಗಳ ಪೂಜೆ, ವರ್ಷದ ಪೂಜೆ, ಬಲಿ ಪೂಜೆ ಎಲ್ಲವೂ ಪಾವೂರು ಚರ್ಚ್‌ನಲ್ಲಿ ತುಳುವಿನಲ್ಲೇ ನಡೆಯುತ್ತಿದೆ.
ಹೀಗೆ ಸ್ಥಳೀಯ ಭಾಷೆಯೊಂದರಲ್ಲಿ ಪೂಜಾ ವಿಧಿ ವಿಧಾನ ನಿರ್ವಹಿಸುವ ಈ ಪದ್ಧತಿ ನಿನ್ನೆ ಮೊನ್ನೆ ಅಥವಾ ಕೆಲ ವರ್ಷಗಳ ಹಿಂದಿನಿಂದ ನಡೆದು ಬಂದ ಸಂಪ್ರದಾಯವಲ್ಲ. ಈ ಪರಿಪಾಠ ಬರೋಬರಿ 100 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ .