Tagged: Kudla

ಕುಡ್ಲದ ಮಳೆಯಲ್ಲಿ ಮನಸ್ಸು ಗೆದ್ದವರು !

ಕರಾವಳಿಯ ಯಾವುದೇ ಭಾಗದಲ್ಲಿ ನೋಡಿದರೂ ಕೂಡ ಮಳೆ ಅಬ್ಬರ ಕಡಿಮೆಯಾಗುತ್ತಿಲ್ಲ. ನೆರೆ ಜತೆಗೆ ಪರಿಹಾರ ನೀಡುವ ಯುವಕರು, ಸಮಾಜದ ಜಾತಿ ಮತವನ್ನು ಲೆಕ್ಕಿಸದೇ ನೆರವಿಗೆ ಹಸ್ತ ಚಾಚುವ ಮಂದಿಯ ಮುಂದೆ ಈ ಎರಡು ತಂಡಗಳು ವಿಶೇಷವಾಗಿ ಗಮನ ಸೆಳೆದಿದೆ.
ಒಂದು ಎನ್‌ಡಿಆರ್‌ಎಫ್( ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ)ದ ಸಮರ್ಥ ಅಧಿಕಾರಿಗಳು ಹಾಗೂ ಉಳ್ಳಾಲದಲ್ಲಿ ಎಸ್‌ಕೆಎಸ್‌ಎಸ್‌ಎಫ್‌ನ ವಿಖಾಯ ತಂಡದವರು ಮಾಡುತ್ತಿರುವ ಕಾರ‍್ಯಕ್ಕೆ ಎಲ್ಲೆಡೆ ಶ್ಲಾಘನೆಯ ಮಾತುಗಳು ಕೇಳಿ ಬಂದಿದೆ. ಎನ್‌ಡಿಆರ್‌ಎಫ್ ತಂಡದವರು ನಿರಂತರರಾಗಿ ರಾತ್ರಿ ಹಗಲು ಜಿಲ್ಲೆಯ ನಾನಾ ಕಡೆ ಬೋಟಿನಲ್ಲಿ ಹೋಗಿ ನಿರಾಶ್ರಿತರನ್ನು ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ಮುಟ್ಟಿಸುವ ಕೆಲಸ ಕೈಗೊಂಡರೆ ಮತ್ತೊಂದೆಡೆ ಉಳ್ಳಾಲದಲ್ಲಿ ಬಂದ ನೆರೆಗೆ ಎಸ್‌ಕೆಎಸ್‌ಎಸ್‌ಎಫ್‌ನ ವಿಖಾಯ ತಂಡದ ಸದಸ್ಯರು ಆಂಬುಲೆನ್ಸ್ ಜತೆಗೆ ನಿರಾಶ್ರಿತರ ಸೇವೆ ಮಾಡುವ ದೃಶ್ಯಗಳು ಕಾಣಿಸಿಕೊಂಡಿದೆ.

ದ.ಕದಲ್ಲಿ ಇನ್ನು ಆ.13ಕ್ಕೆ ಶಾಲಾ ಕಾಲೇಜು ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.10ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ. ಇದರ ಜತೆಯಲ್ಲಿ ಆ.11 ಭಾನುವಾರ ಹಾಗೂ ಆ.12ರಂದು ಬಕ್ರೀದ್ ಹಬ್ಬದ ಗೌಜಿ ಇರುವುದರಿಂದ ಎಲ್ಲವೂ ಮಕ್ಕಳಿಗೆ ರಜೆಯಾಗಿ ಪರಿವರ್ತನೆಯಾಗಿದೆ ಈ ಮೂಲಕ ಆ.13ರ ಬಳಿಕ ಸರಿಯಾಗಿ ಮಳೆ ಬಿಟ್ಟರೆ ಶಾಲಾ ಕಾಲೇಜು ಆರಂಭವಾಗುವ ನಿರೀಕ್ಷೆಯಿದೆ.

ಮಂಗಳೂರಿನ ಚರ್ಚ್ ಗಳಲ್ಲೂ ಅನ್ನದಾನ !

ಮಂಗಳೂರಿಗೆ ಬಂದು ಊಟಕ್ಕೆ ಹಣ ಇಲ್ಲಹೊಟ್ಟೆಯಲ್ಲಿ ಕೂರಬೇಕಿಲ್ಲ. ಮಂಗಳೂರಿನ ಕದ್ರಿ, ಕುದ್ರೋಳಿ, ಕಟೀಲು, ಸುಂಕದಕಟ್ಟೆ ದೇವಳದಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನ ಉಚಿತ ಊಟ(ದೇವರ ಪ್ರಸಾದ)ದ ವ್ಯವಸ್ಥೆ ಇರುತ್ತದೆ. ಅದರಲ್ಲೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲೂ ಇಂತಹ ಅನ್ನದಾನದ ಕಲ್ಪನೆಯನ್ನು ಆಳವಡಿಸಿಕೊಂಡಿದ್ದಾರೆ.

ದಿನನಿತ್ಯದ ಊಟದ ವ್ಯವಸ್ಥೆ ಇಲ್ಲದೇ ಇದ್ದರೂ ಕೂಡ ಕೆಲವೊಂದು ವಿಶೇಷ ದಿನಗಳಲ್ಲಿ ಅನ್ನದಾನದ ವ್ಯವಸ್ಥೆಯಿದೆ. ಮಂಗಳೂರಿನ ಕೆಲವೊಂದು ಕ್ರೈಸ್ತ ಧರ್ಮದ ಪುಣ್ಯಕ್ಷೇತ್ರಗಳಾದ ಮುಡಿಪು ಸಂತ ಜೋಸೆಫ್( ಶುಕ್ರವಾರ), ಪಕ್ಷಿಕೆರೆ ಸಂತ ಜೂದ್(ಮಂಗಳವಾರ) ಬೋಂದೆಲ್ ಸಂತ ಲಾರೆನ್ಸ್ (ಮಂಗಳವಾರ), ಅಲಂಗಾರು ಬಾಲಯೇಸು ಮಂದಿರ( ಶುಕ್ರವಾರ), ಬಿಕರ್ನಕಟ್ಟೆ ಬಾಲಯೇಸು ಮಂದಿರ (ಗುರುವಾರ) ದೇವರ ಪ್ರಸಾದ(ಅನ್ನದಾನ)ದ ವ್ಯವಸ್ಥೆ ಇರುತ್ತದೆ.

ಕುಡ್ಲದಲ್ಲಿ ವಿಶಿಷ್ಟ ಮದ್ಮಲ್ ಫಿಶ್ !

ಮದ್ಮಲ್ ಎಂದರೆ ಮದುಮಗಳು ಎನ್ನುವ ಅರ್ಥ ತುಳು ಭಾಷೆಯಲ್ಲಿ ಹೇಳಲಾಗುತ್ತದೆ. ಇದು ಕುಡ್ಲದಲ್ಲಿ ಈ ಸೀಸನ್ ನಲ್ಲಿ ಕಾಣ ಸಿಗುವ ವಿಶಿಷ್ಟವಾದ ಮೀನು.
ಈಗ ಯಾವುದೇ ಹೋಟೆಲ್ ನಲ್ಲಿ ಫಿಶ್ ಪ್ರೈ ಕೇಳಿದ್ರೆ ಇದೇ ಮದ್ಮಲ್ ವಿಚಾರವನ್ನು ಹೇಳುತ್ತಾರೆ. ಕೊಂಚ ಸಿಹಿ ಜತೆಗೆ ಸುಂದರವಾದ‌‌ ಮೀನು ಇದು ಅದಕ್ಕೂ ಮುಖ್ಯ ತುಳುವರು ಶೋಧನೆ ಮಾಡಿದ ಮೀನು ಎನ್ನುವ ಹೆಗ್ಗಳಿಕೆ ಜತೆಗಿದೆ.

ಸುಷ್ಮಾ ಸ್ವರಾಜ್ ಮತ್ತು ಕುಡ್ಲದ ಮಲ್ಲಿಗೆ !

ಬಿಜೆಪಿ ನಾಯಕಿ ದಿ.ಸುಷ್ಮಾ ಸ್ವರಾಜ್ ಸಾಕಷ್ಟು ಬಾರಿ ಮಂಗಳೂರು ಸೇರಿದಂತೆ ಕರಾವಳಿಯ ಉಡುಪಿಗೂ ಬಂದಿದ್ದಾರೆ. ವಿಶೇಷ ಎಂದರೆ ಪ್ರತಿ ಸಾರಿನೂ ಬರುವಾಗ ಅವರಿಗೆ‌‌ ಕರಾವಳಿಯ ಅವರ ಅಭಿಮಾನಿಗಳು ಪ್ರೀತಿಯಿಂದ ಮಲ್ಲಿಗೆ‌ ನೀಡಲಾಗುತ್ತಿತ್ತು. ಅವರು ಅಷ್ಟೇ ಪ್ರೀತಿಯಿಂದ ಸ್ವೀಕಾರ‌‌ ಮಾಡಿ ತಲೆಗೆ‌ ಇಟ್ಟು‌ಬಿಡುತ್ತಿದ್ದರು. ಮಲ್ಲಿಗೆ ಸೂಸುವ ಪರಿಮಳದಿಂದ ಮತ್ತಷ್ಟು ಹುರುಪು ಅವರಲ್ಲಿ ಬಂದು ಬಿಡುತ್ತಿತ್ತು ಎನ್ನುವ ಮಾತನ್ನು ಅವರ ಅಭಿಮಾನಿ ಗಳು ಹೇಳುತ್ತಾರೆ.