Tagged: mangalore

ಕುಡ್ಲದಲ್ಲಿ ಡೆಂಗೆ ಜ್ವರಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿ

ಕುಡ್ಲದಲ್ಲಿ ಡೆಂಗೆಯ ಡಂಗುರ ಜೋರಾಗಿದೆ. ಕಳೆದ ಒಂದು ತಿಂಗಳ ಒಳಗಡೆ 320 ಕ್ಕೂ ಡೆಂಗೆ ಪಾಸಿಟಿವ್ ಪ್ರಕರಣ ಬರೀ ಕುಡ್ಲದಲ್ಲಿ ಕಾಣಿಸಿಕೊಂಡಿದೆ. ಇದರ ಜತೆಯಲ್ಲಿ ಕುಡ್ಲದಲ್ಲಿ ಯೇ ಈಗಾಗಲೇ ಮೂರು ಮಂದಿಯನ್ನು ಬಲಿ ಪಡೆದಿರುವ ಡೆಂಗೆ ಈ ಬಾರಿ ರಾಜ್ಯದಲ್ಲಿ ಯೇ ಅತೀ ಹೆಚ್ಚು ಪ್ರಕರಣ ಗಳು ಬರೀ ದಕ್ಷಿಣ ಕನ್ನಡ ಮಂಗಳೂರಿನಲ್ಲಿ ಕಾಣಿಸಿಕೊಂಡಿದೆ.
ವಿಶೇಷವಾಗಿ ಮಂಗಳೂರಿನ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುವ ವಿದ್ಯಾರ್ಥಿ ಯೊಬ್ಬರು ಬುಧವಾರ ಮೃತಪಟ್ಟರೆ ಗುರುವಾರ ಏಳನೇ ತರಗತಿ ಓದುವ ವಿದ್ಯಾರ್ಥಿನಿ ಯೊಬ್ಬರು ಮೃತ ರಾಗಿದ್ದಾರೆ. ಆರೋಗ್ಯ ಇಲಾಖೆ ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ಇಳಿಯದೇ ಇರುವುದರ ಜತೆಗೆ ಜನರಲ್ಲಿ ಆರೋಗ್ಯ ಕಾಳಜಿ ಇಲ್ಲದೇ ಇರುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ಮಳೆ, ಚಳಿಗೆ ಕಾಡುವ ಅಸ್ತಮಾಕ್ಕೆ ಆಯುರ್‌ನಲ್ಲಿ ಪೂರ್ಣ ಚಿಕಿತ್ಸೆ

ಚಳಿಗಾಲ,ಮಳೆಗಾಲ ಎರಡು ಕಾಲಗಳು ಅಸ್ತಮಾ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ಡೇಂಜರ್. ಅಸ್ತಮಾದಿಂದ ಬಳಲುವ ರೋಗಿಗಳಂತೂ ಬದುಕಿಡಿ ಕಷ್ಟ ಪಡುವ ದೃಶ್ಯಗಳನ್ನು ಅವರ ಬಹಳ ಹತ್ತಿರದ ಮಂದಿ ನೋಡಿರಬಹುದು.

ಆದರೆ ಅಸ್ತಮಾಕ್ಕೆ ಕುದ್ರೋಳಿಯಲ್ಲಿರುವ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಔಷಧಿಯನ್ನು ತೆಗೆದುಕೊಳ್ಳುವ ಮೂಲಕ ವಾಸಿ ಮಾಡಬಹುದು ಎನ್ನುವ ವಿಚಾರ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ನಿಮ್ಮ ದೇಹ ಪ್ರಕೃತಿಗೆ ಹೊಂದಾಣಿಕೆಯಾಗುವ ಚಿಕಿತ್ಸಾ ವಿಧಾನವನ್ನು ಬಳಸುವುದರ ಮೂಲಕ ಪರಿಪೂರ್ಣ ಚಿಕಿತ್ಸೆಯನ್ನು ಆಯುರ್ ಹೆಲ್ತ್ ಕ್ಲಿನಿಕ್ ನೀಡುತ್ತಿದೆ.
ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.

ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.

ಕುಡ್ಲದಲ್ಲಿ ಮಾತ್ರ ಸ್ಟೇಟ್ ಬ್ಯಾಂಕ್ ನಲ್ಲಿ ಮೀನು ಸಿಗುತ್ತೆ!

ಕುಡ್ಲದ ವಿಶೇಷ ಗಳಲ್ಲಿ ಒಂದು ಎಂದು ಪರಿಗಣಿಸಿದರೆ ಮಂಗಳೂರಿನ ಮೀನು ಪ್ರಿಯರು ಅರ್ಜೆಂಟ್ ಆಗಿ ಮೀನು ತರಬೇಕಾದರೆ ಸ್ಟೇಟ್ ಬ್ಯಾಂಕ್ ಗೆ ಹೋಗಬೇಕು. ವಿಶ್ವದ ಯಾವ ಭಾಗದಲ್ಲೂ ಇಂತಹ ವಿಚಾರ ಕಾಣಸಿಗದು.
ವಿಶೇಷವಾಗಿ ಕುಡ್ಲದ ಜನರಿಗೆ ಈ ಕುರಿತು ಯಾವುದೇ ಗೊಂದಲ ಇಲ್ಲ. ಕಾರಣ ಈ ವಿಚಾರ ಅವರಿಗೆ ಹೊಸತಲ್ಲ ಆದರೆ ಕುಡ್ಲ ಬಿಟ್ಟು ಉಳಿದ ಮಂದಿಯ ಗಮನಕ್ಕೆ ಹೇಳುವುದಾದರೆ ಸ್ಟೇಟ್ ಬ್ಯಾಂಕ್ ಅಲ್ಲಿದ್ದ ಕಾರಣ ಅದಕ್ಕೆ ಈ ಹೆಸರು ಹುಟ್ಟಿತು ಎನ್ನಲಾಗುತ್ತಿದೆ. ಇದರ ಮೂಲ ಹೆಸರು ಏನಿತ್ತು ಎನ್ನುವುದು ಇಲ್ಲಿಯ ಹಿರಿಯರಿಗೆ ಗೊತ್ತಿದೆ. ಹೊಸ ಪೀಳಿಗೆಯ ಮಕ್ಕಳಿಗೆ ಅದು ಸ್ಟೇಟ್ ಬ್ಯಾಂಕ್ ಮಾತ್ರ ಅವರಿಗೆ ಅಲ್ಲಿ ಮೀನು ಜತೆಯಲ್ಲಿ ಬಸ್ ಸಿಗುವ ತಾಣವಷ್ಟೇ.

ಆಸ್ಪತ್ರೆಗೆ ಹೋಗುವಾಗ ಜಾಗ್ರತೆ ಮಾರಾಯ್ರೆ !

ಮಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಜತೆಯಲ್ಲಿ ಆಸ್ಪತ್ರೆಗಳು ಕೂಡ ಬೇಕಾದಷ್ಟು ಹುಟ್ಟಿಕೊಳ್ಳುತ್ತಿದೆ. ವಿಶೇಷ ಎಂದರೆ ಕುಡ್ಲದ ಆಸ್ಪತ್ರೆಗಳಿಗೆ ರೋಗಿಗಳು ಬಂದಾಗ ಯಾವ ಚಿಕಿತ್ಸೆಗೆ ಬರುತ್ತಿದ್ದೇವೆ ಎನ್ನುವ ಅರಿವು ರೋಗಿಗಳಿಗೆ ಇದ್ದರೆ ಬಹಳ ಒಳ್ಳೆಯದು. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

ಕಾಸರಗೋಡಿನ ಮಹಿಳೆಯೊಬ್ಬರು ಕಾಲುನೋವಿನ ಕಾರಣಕ್ಕೆ ನಗರದ ಖ್ಯಾತ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ತಪಾಸಣೆ ನಡೆಸಿದ ವೈದ್ಯರು ಅವರ ಬಲಕಾಲನ್ನು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡುತ್ತಾರೆ. ಅದರಂತೆ ಬೆಳಗ್ಗೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗುತ್ತದೆ.

ಆದರೆ ಆಪರೇಷನ್ ಮಾಡಿ ಮರಳಿ ಬರುವಾಗ ಎಡಗಾಲಿಗೆ ಆಪರೇಷನ್ ಮಾಡಲಾಗಿತ್ತು. ಈ ಕಾರಣದಿಂದ ಮಂಗಳೂರಿನ ಖ್ಯಾತ ಆಸ್ಪತ್ರೆಯ ವೈದ್ಯರು ಎಡವಟ್ಟು ಮಾಡುವ ಮೂಲಕ ವೈದ್ಯ ಲೋಕದಲ್ಲೂ ಇಂತಹ ಘಟನೆಗಳು ನಡೆಯುತ್ತದೆ ಎನ್ನುವ ಮಾತು ಫ್ರೂವ್ ಆಗಿದೆ. ಮಾಡಿದ ತಪ್ಪಿಗೆ ಆಸ್ಪತ್ರೆಯವರು ಮಹಿಳೆಯ ಪೂರ್ಣ ಖರ್ಚು ವೆಚ್ಚವನ್ನು ಕೊಡುವ ಕೆಲಸಕ್ಕೆ ಮುಂದಾಗಿರುವ ಪರಿಣಾಮ ಪ್ರಕರಣ ರಾಜಿಯಲ್ಲಿ ಮುಗಿದಿದೆ.

ಕುಡ್ಲದ ಮಲ್ಲಿಗೆ ಮಕ್ಕಳಿಗೆ ವಿದ್ಯೆ ‌ಕೊಟ್ಟಿತು!

ಸರಕಾರಿ ಶಾಲೆಗಳಲ್ಲಿ ಸರಕಾರ ನೀಡಿದ ಶಿಕ್ಷಕರ ಸಂಖ್ಯೆ ಸಾಲದಾದಾಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾಭಿವೃದ್ಧಿ ಸಮಿತಿ ಗೌರವ ಶಿಕ್ಷಕರನ್ನು ನೇಮಿಸುತ್ತದೆ. ಆದರೆ ಹೀಗೆ ನೇಮಕ ಮಾಡುವ ಗೌರವ ಶಿಕ್ಷಕರಿಗೆ ವೇತನ ನೀಡಲು ಪರದಾಡುವಂತಹ ಪರಿಸ್ಥಿತಿ ಇದೆ. ಇದಕ್ಕೆ ಭಿನ್ನವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಶಾಲೆ ಮಲ್ಲಿಗೆ ಬೆಳೆದು ಶಿಕ್ಷಕಿಯರ ವೇತನ ಭರಿಸುತ್ತಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯ ಒಳಗೆ ವಿದ್ಯಾಭ್ಯಾಸ ನಡೆಯುತ್ತಿದ್ದರೆ ಹೊರಗೆ ಮಲ್ಲಿಗೆ ಗಿಡಗಳ ಕಂಪು ಶಾಲೆಯನ್ನು ಅಲಂಕರಿಸಿದೆ. ಈ ಮಲ್ಲಿಗೆ ಗಿಡ ನೆಟ್ಟದ್ದು ಶಾಲೆಯ ಅಲಂಕಾರಕ್ಕೆ ಅಲ್ಲ. ಈ ಶಾಲೆಯ ಗೌರವ ಶಿಕ್ಷಕಿಯರಿಗೆ ನೀಡುವ ವೇತನ ಭರಿಸಲು ಎನ್ನುವುದು ವಿಶೇಷ.

ಇಲ್ಲಿ ಇರುವ ಮಲ್ಲಿಗೆ ಗಿಡಗಳಿಂದ ದಿನಕ್ಕೆ ಒಂದು ಅಟ್ಟೆ ಮಲ್ಲಿಗೆ ಹೂಗಳು ಸಿಗುತ್ತದೆ . ಮಲ್ಲಿಗೆ ಹೂಗಳನ್ನು ಮುಂಜಾನೆ ಶಾಲೆ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳು ಶಿಕ್ಷಕರು ಕೊಯ್ದಿಟ್ಟರೆ ಶಾಲೆಯ ಸಿಬ್ಬಂದಿಯೊಬ್ಬರು ಅದನ್ನು ಪೋಣಿಸುತ್ತಾರೆ. ಹೀಗೆ ಮಲ್ಲಿಗೆ ಗಿಡಗಳಿಂದ ಸಿಗುವ ಹೂವನ್ನು ಹೂವಿನ ಅಂಗಡಿಗೆ ನೀಡುವ ಮೂಲಕ ವರುಷಕ್ಕೆ 40ರಿಂದ 50 ಸಾವಿರದವರೆಗೆ ಆದಾಯ ಬರುತ್ತದೆ. ಈ ಆದಾಯದಲ್ಲಿ ಮೂರು ಗೌರವ ಶಿಕ್ಷಕರ ಪೈಕಿ ಪೂರ್ವ ಶಿಕ್ಷಕಿಗೆ ವೇತನ ನೀಡಲು ಸಾಕಾಗುತ್ತದೆ. ಉಳಿದ ಶಿಕ್ಷಕರ ವೇತನಕ್ಕೆ ಬೇರೆ ಮೂಲಗಳನ್ನು ಅವಳ ಮೀಸಲಾಗುತ್ತದೆ ಎನ್ನುತ್ತಾರೆ ಓಜಾಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಅವರು.

ಶಾಲೆಯ ಇತರ ಶಿಕ್ಷಕರಿಗೆ ನೀಡುವ ವೇತನದ ಆದಾಯಕ್ಕಾಗಿ ಇನ್ನಷ್ಟು ಮಲ್ಲಿಗೆ ಗಿಡಗಳನ್ನು ನೀಡಬಹುದಾದರೂ ಅದರ ನಿರ್ವಹಣೆ ಕಷ್ಟ. ಆದುದರಿಂದ ಇತರ ಮೂಲದ ಆದಾಯವನ್ನು ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರಾ.

ಈ ಶಾಲೆಯಲ್ಲಿ ಸರಕಾರದ ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇಬ್ಬರು ಶಿಕ್ಷಕರು ಸಾಲದು ಎಂದು ಮೂವರು ಗೌರವ ಶಿಕ್ಷಕರನ್ನು ನೇಮಿಸಿ ಅದಕ್ಕೆ ಬೇಕಾದ ಆದಾಯವನ್ನು ಶಾಲೆಯಲ್ಲಿ ಮಲ್ಲಿಗೆ ಗಿಡಗಳನ್ನು ನೆಡುವ ಮೂಲಕ ಮಾಡಿರುವ ಪ್ರಯತ್ನ ಶ್ಲಾಘನೀಯವಾದದ್ದು