ಕುಡ್ಲ ಸಿಟಿ ಸರಕಾರಿ ಕಾಲೇಜು ಪರ ಬ್ಯಾಟಿಂಗ್ ಮಾಡಿದ ರಾಹುಲ್

ಭಾರತೀಯನ ಕ್ರಿಕೆಟ್ ತಂಡದ ಸದಸ್ಯ ಕೆ.ಎಲ್.ರಾಹುಲ್ ಕುಡ್ಲ ಸಿಟಿಯೊಳಗಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ 150ರ ಸಂಭ್ರಮದಲ್ಲಿ ಭಾಗವಹಿಸಿ ಎನ್ನುವ ಪುಟ್ಟದಾದ ವಿಡಿಯೋವೊಂದು ಸಾಮಾಜಿಕ ಅಂಗಳದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಅಪ್ಪಟ ತುಳು ಹಾಗೂ ಕನ್ನಡ ಭಾಷೆಯ ಜತೆಗೆ ಇಂಗ್ಲೀಷ್‍ನ ಮಾತುಗಾರಿಕೆ ಸಾಮಾಜಿಕ ಜಾಲತಾಣದಲ್ಲಿರುವ ಮಂದಿಯಿಂದ ಲಕ್ಷಗಟ್ಟಲೆ ಲೈಕ್ಸ್ ಗಿಟ್ಟಿಸಿಕೊಂಡಿದೆ. ಹೌದು. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಎಂದೇ ಕರೆಸಿಕೊಳ್ಳುವ ಕೆ.ಎಲ್.ರಾಹುಲ್ ಮೂಲತಃ ಮಂಗಳೂರಿನವರು ಅವರ ಬಾಲ್ಯ ಎಲ್ಲವೂ ಎನ್‍ಐಟಿಕೆಯ ಅಸುಪಾಸಿನಲ್ಲಿಯೇ ನಡೆದಿದೆ. ಎನ್‍ಐಟಿಕೆ ಶಾಲೆಯಲ್ಲಿ ಹತ್ತರ ವರೆಗೆ ಅಧ್ಯಯನ ಮಾಡಿದ ಬಳಿಕ ಮಂಗಳೂರಿನ ಸಂತ ಅಲೋಶಿಯಸ್‍ನಲ್ಲಿ ಪಿಯು ಮುಗಿಸಿಕೊಂಡು ನಂತರ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದವರು. ವಿಶೇಷವಾಗಿ ಕುಡ್ಲದ ಕುರಿತು ರಾಹುಲ್ ಅಪಾರವಾದ ಪ್ರೀತಿ ಇರುವುದರಿಂದ ಕರಾವಳಿಯ ತುಳುವರು ಸಿಕ್ಕಾಗ ತುಳುವಿನಲ್ಲಿಯೇ ಮಾತಿಗಿಳಿಯುವ ಸ್ನೇಹ ಜೀವಿ. ಕನ್ನಡ ಭಾಷೆಯಲ್ಲೂ ಒಳ್ಳೆಯ ಮಾತುಗಾರಎನ್ನುತ್ತಾರೆ ಅವರ ತಾಯಿ ಪೆÇ್ರ. ರಾಜೇಶ್ವರಿ ಅವರು. ಅಮ್ಮನ ಪ್ರೀತಿಗೆ ಮಾಡಿದ ವಿಡಿಯೋ: ಮಂಗಳೂರು ವಿವಿಯ ಇತಿಹಾಸ ವಿಭಾಗದಲ್ಲಿ ಕಳೆದ 26 ವರ್ಷಗಳಿಂದ ಇತಿಹಾಸವನ್ನು ಬೋಧಿಸುತ್ತಿರುವ ಪೆÇ್ರ.ರಾಜೇಶ್ವರಿ ಅವರು ಕೆ.ಎಲ್.ರಾಹುಲ್ ಅವರ ತಾಯಿ. ಈ ಬಾರಿ ಮಂಗಳೂರು ವಿವಿ ಕಾಲೇಜು 150ರ ಸಂಭ್ರಮದಲ್ಲಿದೆ. ಫೆ.6ರಂದು ಇದರ ಕಾರ್ಯಕ್ರಮ ಕೂಡ ನಡೆಯಲಿದೆ. ಈ ವಿಚಾರದಲ್ಲಿ ಏನಾದರೂ ರಾಹುಲ್ ಅವರಿಂದ ವಿಡಿಯೋ ಮಾಡಿಸಿಬಿಡಿ ಎಂದು ಕಾಲೇಜಿನವರು ಕೇಳಿಕೊಂಡಿದ್ದರು. ಈ ಕುರಿತು ಪೆÇ್ರ. ರಾಜೇಶ್ವರಿ ಅವರು ಹೀಗೆ ಹೇಳುತ್ತಾರೆ ರಾಹುಲ್ ಸಿಕ್ಕಾಪಟ್ಟೆ ಬ್ಯುಸಿ ಇರುತ್ತಾನೆ. ತರಬೇತಿ, ಟೂರ್ನಿ ಎಂದು ಓಡಾಟ ಮಾಡುತ್ತಾ ಇರುತ್ತಾನೆ. ನನ್ನ ಕಾಲೇಜಿನ ಕಾರ್ಯಕ್ರಮವಿದೆ ಒಂದು ಪುಟ್ಟ ವಿಡಿಯೋ ಮಾಡಿ ಕೊಡು ಎಂದು ಕೇಳಿದ್ದೆ. ಅದಕ್ಕೂ ಮೊದಲು ಸಾಕಷ್ಟು ಬಾರಿ ಕಾಲೇಜಿಗೂ ಕರೆಯಲು ಪ್ರಯತ್ನ ಪಟ್ಟಿದ್ದೆ ಅದು ಸಾಧ್ಯವಾಗಲಿಲ್ಲ. ಈಗ ಪುಟ್ಟ ವಿಡಿಯೋವೊಂದನ್ನು ಮಾಡಿ ಕಳುಹಿಸಿಕೊಟ್ಟಿದ್ದಾನೆ ಎನ್ನುವುದು ಅವರ ಮಾತು. ಮಂಗಳೂರು ವಿವಿಗೆ 1993ರ ಪ್ರೊ.ರಾಜೇಶ್ವರಿ ಅವರು ಮಂಗಳೂರು ವಿವಿಯ ಇತಿಹಾಸ ವಿಭಾಗಕ್ಕೆ ಸೇರಿದ್ದರು. ರಾಹುಲ್ ಅವರ ತಂದೆ ಎನ್‍ಐಟಿಕೆ ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಾ. ಕೆ.ಎನ್.ಲೊಕೇಶ್ ಕೆಲಸ ಮಾಡುತ್ತಿದ್ದಾರೆ. ರಾಹುಲ್ ತನ್ನ ಬಾಲ್ಯದ ಬಹಳಷ್ಟು ಸಮಯವನ್ನು ಮಂಗಳೂರಿನಲ್ಲಿ ಕಳೆದಿದ್ದಾನೆ. ಎನ್‍ಐಟಿಕೆ ಹಾಗೂ ನೆಹರೂ ಮೈದಾನದಲ್ಲಿಯೇ ರಾಹುಲ್ ಅವರ ಕ್ರಿಕೆಟ್ ಆಟಗಾರನಾಗಿ ಹೊರಹೊಮ್ಮಿದ ಎನ್ನುವುದು ಅವರ ಇತಿಹಾಸದ ಪುಟಗಳು ಹೇಳುವ ಮಾತು. ರಾಹುಲ್‍ಗೆ ತುಳು ಇಷ್ಟ: ರಾಹುಲ್ ಮಂಗಳೂರಿನಲ್ಲಿದ್ದಾಗ ಹೆಚ್ಚು ಗೆಳೆಯರು ತುಳುವಿನವರು ಆಗಿದ್ದರು. ಅವರಿಂದಲೇ ರಾಹುಲ್ ತುಳುವಿನಲ್ಲಿ ಒಳ್ಳೆಯ ರೀತಿಯಲ್ಲಿ ಮಾತನಾಡುತ್ತಾನೆ. ಯಾವುದೇ ಸಮಯದಲ್ಲಿ ತುಳುವರು ಸಿಕ್ಕರೆ ತುಳುವಿನಲ್ಲಿ ಅವರ ಜತೆಗೆ ಮಾತಿಗೆ ಇಳಿಯುತ್ತಾನೆ. ಕನ್ನಡ ಕೂಡ ಒಳ್ಳೆಯದಾಗಿ ಮಾತನಾಡುತ್ತಾನೆ. ಮಂಗಳೂರಿಗೆ 6 ತಿಂಗಳ ಹಿಂದೆ ಒಂದು ಸಲ ಎನ್‍ಐಟಿಕೆ ಕ್ವಾಟ್ರಸ್ ಗೆ ಬಂದಿದ್ದ. ನಾವೆಲ್ಲರೂ ಈಗ ಬೆಂಗಳೂರಿಗೆ ಶಿಫ್ಟ್ ಆಗಿದ್ದೇವೆ. ಅವನು ಸಮಯ ಸಿಕ್ಕಾಗ ಬೆಳಗ್ಗೆ ವಿಮಾನದಲ್ಲಿ ಬಂದು ಸಂಜೆ ಮತ್ತೆ ಹೊರಡುತ್ತಾನೆ ಎನ್ನುತ್ತಾರೆ ತಾಯಿ ರಾಜೇಶ್ವರಿ. ಮಂಗಳೂರು ವಿವಿ ಕಾಲೇಜಿನ ಪ್ರಿನ್ಸಿಪಾಲ್ ಪೆÇ್ರ.ಉದಯ ಕುಮಾರ್ ಇರ್ವತ್ತೂರು ಹೇಳುವಂತೆ ರಾಜ್ಯದಲ್ಲಿಯೇ ಮಂಗಳೂರು ವಿವಿ ಕಾಲೇಜು ಎರಡನೆ ಅತೀ ಪುರಾತನ ಕಾಲೇಜು. ಮೊದಲ ಸ್ಥಾನದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿದೆ. 150ರ ಸಂಭ್ರಮದ ಕ್ಷಣದಲ್ಲಿ ರಾಹುಲ್ ಅವರಿಂದ ಒಂದು ಆಮಂತ್ರಣ ವಿಡಿಯೋ ಮಾಡಿಸುವ ಯೋಚನೆ ಬಂತು. ಅವರ ತಾಯಿಯಲ್ಲಿ ಹೇಳಿಸಿದೇವು ವಿಡಿಯೋ ಮಾಡಿಕೊಟ್ಟಿದ್ದಾರೆ ನೋಡುವಾಗ ಖುಷಿಯಾಗುತ್ತಿದೆ ಎನ್ನುತ್ತಾರೆ ಅವರು.

Share