Author: Team Kudla City

ತುಳುನಾಡಿನ ಈಂದ್ ಹುಡಿ ಗೊತ್ತಾಂಟಾ ಮಾರಾಯ್ರೆ

ತುಳುನಾಡಿನ ಗ್ರಾಮೀಣ ಊರುಗಳಲ್ಲಿ ನೀವು ಭೇಟಿ ನೀಡಿದಾಗ ಅಲ್ಲಿಯ ಪುಟ್ಟ ಗೂಡಂಗಡಿಯ ಮುಂಭಾಗದಲ್ಲಿ ಇಲ್ಲಿ ಈಂದ್ ಹುಡಿ ಸಿಗುತ್ತದೆ ಎನ್ನುವ ನಾಮಫಲಕ ಕಾಣ ಸಿಗುತ್ತದೆ. ಬಹುತೇಕ ಮಂದಿಗೆ ಇದು ಏನೂ, ಇದರ ಲಾಭವೇನು ಎನ್ನುವ ವಿಚಾರವೇ ಗೊತ್ತಿರಲು ಸಾಧ್ಯವಿಲ್ಲ.

ಆದರೆ ತುಳುನಾಡಿನಲ್ಲಿ ಬದುಕುವ ಪ್ರತಿಯೊಬ್ಬರಿಗೂ ಈಂದ್ ಹುಡಿಯ ಪರಿಚಯವಿದೆ. ಬೈನೆ ಅಥವಾ ತಾಳೆ ಮರದಿಂದ ಈಂದ್ ಹುಡಿಯನ್ನು ಮಾಡಲಾಗುತ್ತದೆ. ಇದರ ಗುಣವಿಶೇಷತೆಯಂತೂ ಬಹಳಷ್ಟು ಇದೆ. ಒಂದು ಚಮಚ ಈಂದ್ ಹುಡಿಯನ್ನು ನೀರಿಗೆ ಅಥವಾ ಹಾಲಿಗೆ ಹಾಕಿ ಕುಡಿಯಬೇಕು. ಹೊಟ್ಟೆನೋವು, ದೇಹದ ಬಳಲಿಕೆ ಸೇರಿದಂತೆ ಹತ್ತು ಹಲವು ರೋಗಕ್ಕೆ ಇದು ಮದ್ದು. ನಾವು ಜಾಹೀರಾತು ತೋರಿಸುವ ವಸ್ತುಗಳನ್ನು ತೆಗೆದುಕೊಂಡು ಬಂದ ಪರಿಣಾಮ ಬಹಳಷ್ಟು ಇಂತಹ ಮದ್ದುಗಳ ಪರಿಚಯ ಇಲ್ಲ.

ನವ ಮಂಗಳೂರಿನ ರೂವಾರಿ ಉಳ್ಳಾಲ ಶ್ರೀನಿವಾಸ್ ಮಲ್ಯರು

ಉಳ್ಳಾಲ ಶ್ರೀನಿವಾಸ್ ಮಲ್ಯ ಆಧುನಿಕ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಾಣದ ರೂವಾರಿ. 18 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಮೂರು ಬಾರಿ ಸಂಸದರಾಗಿದ್ದರು. 1951,1957 ಹಾಗೂ 1962 ಸಂಸದರಾಗಿ ಅವರು ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಕೆಲಸವಂತೂ ಶ್ಲಾಘನೀಯ.

ಎನ್‍ಐಟಿಕೆ, ನವಮಂಗಳೂರು ಬಂದರು, ಮಂಗಳೂರು ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ 66, ಉಳ್ಳಾಲ ಸೇತುವೆ ಅವರ ಕಾಲದಲ್ಲಿ ಮಾಡಿದ ಕಾರ್ಯಗಳನ್ನು ಇಂದಿನ ದಕ್ಷಿಣ ಕನ್ನಡ ಜಿಲ್ಲೆ ಜನರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಂದು( ನ.21)ರಂದು ಅವರ 117ನೇ ಹುಟ್ಟುಹಬ್ಬ. ಮಂಗಳೂರಿನ ನಂಬರ್ ವನ್ ಸಂಸದ ಉಳ್ಳಾಲ ಶ್ರೀನಿವಾಸ್ ಮಲ್ಯ ಎನ್ನುವುದರಲ್ಲಿ ಯಾವುದೇ ಸಂದೇಹ ಮಂಗಳೂರಿನ ಜನತೆಗೆ ಇಲ್ಲ.

ಕುಡ್ಲದಲ್ಲಿ ನ. 20 ರಂದು ನಂದಿನಿಯ ಈ ಐಟಂಗಳು ಪೂರ್ಣ ಫ್ರೀ !

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಈ ಬಾರಿ ವಿಶೇಷವಾದ ಎರಡು ಐಟಂಗಳನ್ನು ಮಾರ್ಕೆಟ್‌ಗೆ ಇಳಿಸಿದೆ ಇದರ ಪರಿಣಾಮ ಎರಡು ಐಟಂಗಳು ಸ್ಟಾಕ್ ಇರುವ ವರೆಗೆ ಪೂರ್ಣವಾಗಿ ನಾಟ್ ಫಾರ್ ಸೇಲ್ ಎನ್ನುವ ಮುದ್ರೆಯ ಜತೆಯಲ್ಲಿ ನ. 20 ರಂದು ಬೆಳಗ್ಗೆ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.

ಈ ಕುರಿತು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರ ಮಾತು ಕೇಳಿ ನ.20 ರಂದು ದ.ಕದಲ್ಲಿ 11,500 ಸಾವಿರ ಬಾಟಲ್ ನಂದಿನಿ ಕಷಾಯ ಹಾಗೂ ನಂದಿನಿ ಕೋಲ್ಡ್ ಕಾಫಿ ಆಯ್ದ ನಂದಿನಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಅದು ಸ್ಟಾಕ್ ಮುಗಿಯುವರೆಗೆ ಮಾತ್ರ ಉಳಿದಂತೆ ಉಡುಪಿಯಲ್ಲಿ 5,500 ಸಾವಿರ ಬಾಟಲ್ ಕಷಾಯ, ಕೋಲ್ಡ್ ಕಾಫಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಸಿಗಲಿದೆ. ಈ ಮೂಲಕ 17 ಸಾವಿರ ಬಾಟಲಿ ಕಷಾಯ, ಕೋಲ್ಡ್ ಕಾಫಿ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ.

ಕುಡ್ಲದಲ್ಲಿ ನ. 20 ರಂದು ನಂದಿನಿಯ ಈ ಐಟಂಗಳು ಪೂರ್ಣ ಫ್ರೀ !

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಈ ಬಾರಿ ವಿಶೇಷವಾದ ಎರಡು ಐಟಂಗಳನ್ನು ಮಾರ್ಕೆಟ್‌ಗೆ ಇಳಿಸಿದೆ ಇದರ ಪರಿಣಾಮ ಎರಡು ಐಟಂಗಳು ಸ್ಟಾಕ್ ಇರುವ ವರೆಗೆ ಪೂರ್ಣವಾಗಿ ನಾಟ್ ಫಾರ್ ಸೇಲ್ ಎನ್ನುವ ಮುದ್ರೆಯ ಜತೆಯಲ್ಲಿ ನ. 20 ರಂದು ಬೆಳಗ್ಗೆ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.

ಈ ಕುರಿತು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರ ಮಾತು ಕೇಳಿ ನ.20 ರಂದು ದ.ಕದಲ್ಲಿ 11,500 ಸಾವಿರ ಬಾಟಲ್ ನಂದಿನಿ ಕಷಾಯ ಹಾಗೂ ನಂದಿನಿ ಕೋಲ್ಡ್ ಕಾಫಿ ಆಯ್ದ ನಂದಿನಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಅದು ಸ್ಟಾಕ್ ಮುಗಿಯುವರೆಗೆ ಮಾತ್ರ ಉಳಿದಂತೆ ಉಡುಪಿಯಲ್ಲಿ 5,500 ಸಾವಿರ ಬಾಟಲ್ ಕಷಾಯ, ಕೋಲ್ಡ್ ಕಾಫಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಸಿಗಲಿದೆ. ಈ ಮೂಲಕ 17 ಸಾವಿರ ಬಾಟಲಿ ಕಷಾಯ, ಕೋಲ್ಡ್ ಕಾಫಿ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ.

ಕುಡ್ಲದ ದೇವಳದಲ್ಲಿ ಬಾಳೆಲೆಯಲ್ಲಿ ಪಂಚಕಜ್ಜಾಯ

ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ದಕ್ಷಿಣ ಕನ್ನಡ ಅಥವಾ ಇತರ ಕಡೆಗಳ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ಗಳಲ್ಲಿ ಪ್ರಸಾದ ಕಟ್ಟಿಕೊಡುವ ವಾಡಿಕೆಯಿದೆ. ಆದರೆ ಇವೆಲ್ಲಕ್ಕೂ ಭಿನ್ನವಾಗಿ ಗಂಜಿಮಠದ ದೇವಸ್ಥಾನದ ಪಂಚಕಜ್ಜಾಯದ ಕಟ್ಟು ಹೊಸ ಸಂಚಲನವನ್ನೇ ಮೂಡಿಸಿದೆ.

ಹೌದು ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ನಡುವೆ ಗಂಜಿಮಠ ಜಂಕ್ಷನ್‌ನಲ್ಲಿ ಇರುವ ಪುರಾತನ ಕಾಲದ ಶ್ರೀ ಗಣಪತಿ ದೇವಾಲಯದಲ್ಲಿ ಕುಟುಂಬದ ಹಿರಿ ತಲೆಮಾರಿನಿಂದಲೂ ಇಲ್ಲಿ ಬಾಳೆ ಎಲೆಯಲ್ಲಿ ಪಂಚ ಕಜ್ಜಾಯ ಹಾಕಿ, ಬಾಳೆ ನಾರಿನಲ್ಲಿ ಕಟ್ಟಿಕೊಡುವುದು ಸಂಪ್ರದಾಯವಾಗಿಯೇ ಬೆಳೆದು ಬಂದಿದೆ.

ಈ ರೀತಿಯ ಸಂಪ್ರದಾಯ ಎಲ್ಲ ಕಡೆಯೂ ಆರಂಭವಾಗಬೇಕಾಗಿರುವುದು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕಾದ ಈ ಕಾಲಘಟ್ಟದಲ್ಲಿ ಅಗತ್ಯವಾಗಿದೆ.