ಉರ್ವದಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರ ವಾರ್ಷಿಕ ಹಬ್ಬ ಮತ್ತೆ ಬಂದಿದೆ. ಡಿ. 8,2019 ರಂದು ಹಬ್ಬದ ಸಂಭ್ರಮದ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ವಿಶೇಷವಾಗಿ ಮಂಗಳೂರು ನಗರದೊಳಗೆ ಇರುವ ಚರ್ಚ್ಗಳಲ್ಲಿ ಈ ಮಾತೆಯ ಪುಣ್ಯಕ್ಷೇತ್ರಕ್ಕೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ. ಅಂದಹಾಗೆ ಪೊಂಪೈ ಮಾತೆ ಯಾರು ಎಂದರೆ ಯೇಸುವಿನ ತಾಯಿ ಮರಿಯಳನ್ನು ಪೊಂಪೈ ಮಾತೆ ಎಂದು ಕರೆಯಲಾಗುತ್ತದೆ.
ಇಟಲಿಯ ಪೊಂಪೈ ಕಣಿವೆ ಪ್ರದೇಶದಲ್ಲಿ ಜನರು ದೈವಭಕ್ತಿಯಾಗಲಿ, ಪರಸ್ಪರ ಕಾಳಜಿಯಾಗಲೀ ಇಲ್ಲದೆ ಅನಾಗರಿಕರಂತೆ ಬಾಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರ ಮನಪರಿವರ್ತನೆಗಾಗಿ ಬಾರ್ತೊಲೊ ಲೊಂಗೊ ಎಂಬ ಯುವ ವಕೀಲರಿಗೆ ಮಾತೆ ಮರಿಯಳು ದರ್ಶನವಿತ್ತು ಪ್ರಾರ್ಥಿಸಲು ಕರೆ ನೀಡಿದರು. ಈ ದರ್ಶನದ ನಂತರ ಪೊಂಪೈ ಊರಿನಲ್ಲಿ ಜನರ ಮನ ಪರಿವರ್ತನೆ ಯಾಯಿತು ಮತ್ತು ಊರಿಗೇ ಊರೇ ಸರಿದಾರಿಗೆ ಬಂತು.
ಪೊಂಪೈ ನಗರದಲ್ಲಿ ಮಾತೆ ಮರಿಯಳ ದರ್ಶನವಾಗಿರುವುದರಿಂದ ಆಕೆಯನ್ನು ಪೊಂಪೈ ಮಾತೆಯೆಂಬುದಾಗಿ ಕರೆಯುತ್ತಾರೆ. ಪೊಂಪೈ ಮಾತೆಯ ಭಕ್ತಿ ಪ್ರಪಂಚಾದಾದ್ಯಂತ ಹಬ್ಬಿತು. ಉರ್ವ ಚರ್ಚ್ನಲ್ಲಿ ಪೊಂಪೈಮಾತೆಗಾಗಿ 1895 ರಲ್ಲಿ ಒಂದು ಪೀಠವನ್ನು ಸ್ಥಾಪಿಸುವುದರ ಮುಖಾಂತರ ಪೊಂಪೈ ಮಾತೆಯ ಭಕ್ತಿ ಆರಂಭವಾಯ್ತು. 1995 ರಲ್ಲಿ ಈಗಿರುವ ಪುಣ್ಯಕ್ಶೇತ್ರದ ಕಟ್ಟಡವನ್ನು ಕಟ್ಟಲಾಯಿತು.
Author: Team Kudla City
ತುಳುನಾಡಿನ ಜನರಿಗೆ ತುಳು ಕ್ಯಾಲೆಂಡರ್
ತುಳುನಾಡಿನ ಜನರಿಗೆ ಎಲ್ಲ ರೀತಿಯ ಕ್ಯಾಲೆಂಡರ್ ಗೊತ್ತು. ಆದರೆ ತುಳು ಭಾಷೆ, ತುಳು ಲಿಪಿಯನ್ನು ಹೊಂದಿರುವ ಕ್ಯಾಲೆಂಡರ್ವೊಂದು ಕಳೆದ ಏಳು ವರ್ಷಗಳಿಂದ ಹೊರ ಬರುತ್ತಿದೆ. ಅದರ ಹೆಸರು `ಕಾಲ ಕೋಂದೆ’ ಎಂದರೆ ಇದರ ಅರ್ಥ ಕಾಲ ಗೊಂಚಲು. ಇದರ ವಿಶೇಷವೇನೆಂದರೆ ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಸಮಸ್ತರಿಗೂ ಪ್ರಯೋಜನವಾಗುವ ಈ ಕ್ಯಾಲೆಂಡರ್ ಉಪಯುಕ್ತ ಪಂಚಾಂಗವೂ ಹೌದು.
ತುಳುವರ ವಿಶೇಷ ದಿನಗಳು ತುಳುವರ ಆಚರಣೆ ಹಬ್ಬ,ವಿóಶಿಷ್ಟ ತಿಂಗಳು, ಕಾಲದ ಬಗ್ಗೆ ತಿಳಿಸುವ ಅಂದರೆ ಸಂಕ್ರಾಂದಿ, ಸಿಂಗೊಡೆ, ತಿಥಿ,ನಕ್ಸತ್ರ,ಗಳನ್ನು (ಭರಣಿ, ಕಿರ್ತಿಕೆ) ಕೆಡ್ವಾಸ, ಬಲಿಲೆಪ್ಪುನ ದಿನ, ಪತ್ತನಾಜೆ, ಕೋಲ,ಕೊಡಿ, ತೇರ್,ಆಯನ, ಆಟಿ, ಸೋಣ ತಿಂಗಳ ವಿಷೇಷತೆ, ಜಾತ್ರೆಗಳ ಬಗ್ಗೆ, ಹಾಗೆಯೇ ಗ್ರಹಣ, ಮೌಢ್ಯ ಕಾಲಗಳ ಬಗೆಗೆ ನಿಖರವಾಗಿ ತಿಳಿಸಲಾಗಿದೆ.
ವಾಸ್ತವವಾಗಿ ಈ ತುಳುವಿನ ಕ್ಯಾಲೆಂಡರ್ ಪ್ರಾರಂಭವಾಗುವುದು `ಸೌರಮಾನ ಯುಗಾದಿ’ಯ ದಿನವಾದ `ಬಿಸು’ವಿನಿಂದ ಅಂದರೆ ಈ ಸಲ 2020ರ ಎಪ್ರಿಲ್ 14ರ `ಪಗ್ಗು’ವಿನಿಂದ ಹಾಗೆಯೇ ತುಳು ತಿಂಗಳು ಅಂತ್ಯವಾಗುವುದು 2021ರ ಸುಗ್ಗಿ ತಿಂಗಳಿನಲ್ಲಿ, ಪ್ರತಿ ಸಂಕ್ರಾತಿಯಂದು ತುಳುವರು ದೈವ,ದೇವರುಗಳ ಆಲಯವನ್ನು ತೊಳೆದು,ಒಪ್ಪವಾಗಿರಿಸಿ ಪೂಜೆ, ಪುನಸ್ಕಾರವನ್ನು ಕೈಗೊಳ್ಳುತ್ತಾರೆ. ಅಂದೇ ತುಳು ತಿಂಗಳು ಕೊನೆಗೊಳ್ಳುವುದು ಹಾಗೆಯೇ ಮರುದಿನ ತುಳು ತಿಂಗಳಿನ ಆರಂಭ. ಆ ದಿನವನ್ನು `ಸಿಂಗೊಡೆ’ ಎಂದು ಕರೆಯುತ್ತಾರೆ. ಅಂದಹಾಗೆ ಪ್ರತಿ ತಿಂಗಳ ಈ ದಿನ ತುಳುವರಿಗೆ ವಿಶಿಷ್ಟವಾದದ್ದು. ತುಳುನಾಡಿನ ರೈತರಿಗೂ ರಜೆಯ ದಿನ.ಅಂದು ಅವರು ಯಾವೊಂದು ಹೊಸ ಕೆಲಸವನ್ನು ಪ್ರಾರಂಭ ಮಾಡುವುದಿಲ್ಲ.ಆದುದರಿಂದ ಅವರ ಪಾಲಿಗೆ `ಸಿಂಗೊಡೆ’ ಕಾದಿರಿಸಲ್ಪಟ್ಟ ವಿಶೇಷ ದಿನ.
ತುಳು ತಿಂಗಳು ಪ್ರತಿ ವರುಷ ಪಗ್ಗು ತಿಂಗಳಿನಿಂದ ಆರಂಭವಾಗಿ ಬೇಶ, ಕಾರ್ತೆಲ್, ಆಟಿ,ಸೋಣ, ನಿರ್ನಾಲ, ಬೊಂತೆಲ್, ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ, ಸುಗ್ಗಿ ವರೆಗೆ ಒಟ್ಟು 12 ತಿಂಗಳುಗಳಿಂದ ಕೂಡಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಅಧಿಕ ಮಾಸದ ಪ್ರಭಾವದಿಂದಾಗಿ ತುಳುವಿನ ಕ್ಯಾಲೆಂಡರ್ನಲ್ಲಿ ಸಹ ಅಧಿಕ ಮಾಸದ ದಿನಗಳು ಕಂಡುಬರುತ್ತದೆ. ಅದೆಂದರೆ `ಕಾರ್ತೆಲ್’ತಿಂಗಳು ಅಂದರೆ 2020 ಜೂನ್ ತಿಂಗಳು 15 ರಿಂದ ಜುಲೈ 16 ತಾರೀಕಿನ ವರೆಗಿನ. ಈ ಅವಧಿಯು ಸುಧೀರ್ಘವಾಗಿದ್ದು ಒಟ್ಟು 32 ದಿನಗಳಿಂದ ಕೂಡಿರುತ್ತದೆ. ಇದೇ ವರ್ಷದಲ್ಲಿ ಎರಡು ತಿಂಗಳು ಕಿರು ಅವಧಿಯ ತಿಂಗಳಾಗಿರುತ್ತದೆ. ಅವುಗಳೆಂದರೆ ಪೆರಾರ್ದೆ ತುಳು ತಿಂಗಳಿನ ಅಂದರೆ 2019 ಡಿಸೆಂಬರ್ ತಿಂಗಳಿನ 17 ರಿಂದ 2019 ರ ಜನವರಿಯ 14 ರವರೆಗೆ ಹಾಗೂ 2020ರ ನವೆಂಬರ್ 17ರಿಂದ 2021 ಡಿಸೆಂಬರ್15 ವರೆಗಿನ `ಜಾರ್ದೆ’ ತುಳು ತಿಂಗಳಿನ ಈ ಅವಧಿಯು 29 ದಿನಗಳಿಂದ ಮಾತ್ರವೇ ಕೂಡಿರುವುದು ಒಂದು ವಿಶೇಷವಾಗಿದೆ.
ತುಳುನಾಡಿನ ಗೇರು ಹಣ್ಣಿಗೂ ಫಾರಿನ್ ನಲ್ಲಿ ಸೂಪರ್ ಡಿಮ್ಯಾಂಡ್ !
ಎಳೆಯದರಲ್ಲಿ ಗೇರುಹಣ್ಣಿನಿಂದ ಬೀಜ ತೆಗೆದು ಹಣ್ಣನ್ನು ಬಿಸಾಡುತ್ತಿದ್ದೆವು. ಈಗ ಹಾಗಲ್ಲ. ಬೀಜಕ್ಕಿಂತಲೂ ಗೇರುಹಣ್ಣಿಗೆ ಭಯಂಕರ ಡಿಮ್ಯಾಂಡು. ವಿದೇಶದಲ್ಲಿ ಕೇವಲ ಮೂರು ಗೇರು ಹಣ್ಣಿನ ಬೆಲೆ ಬರೋಬ್ಬರಿ 480/- ರೂಪಾಯಿ..! ಅಂದರೆ 23.95 AED. ಗೇರುಹಣ್ಣನ್ನು ತಿಂದು ತೇಗಿ ಕೋಲಲ್ಲಿ ಪೋಣಿಸಿ ಆಟವಾಡುತ್ತಿದ್ದ ಒಂದು ಕಾಲವಿತ್ತು. ಆದರೀಗ ಅಪರೂಪ. ಗೇರು ಮರಗಳು ಕಣ್ಮರೆಯಾಗುತ್ತಿವೆ. ಗೇರುಬೀಜ ಶೇಖರಣೆ ಮರೀಚಿಕೆಯಾಗುತ್ತಿದೆ. ಆದರೆ ಹಳ್ಳಿ ಪ್ರದೇಶದಲ್ಲಿ ಈಗಲೂ ಇದೆ. ಗೇರುಮರದ ಕೂಪು ಮಾಡುವವರೂ ಇದ್ದಾರೆ. ಏನೇ ಇದ್ದರೂ ಬೀಜಕ್ಕಷ್ಟೇ ಮೌಲ್ಯವಿತ್ತು. ಮುಂದಿನ ದಿನಗಳಲ್ಲಿ ಗೇರುಹಣ್ಣನ್ನೂ ವಿದೇಶದ ಮಾರುಕಟ್ಟೆಗೆ ರಫ್ತು ಮಾಡಬಹುದು. ಅದಕ್ಕೂ ಮಾನ ಬಂದಿದೆ.
ತುಳುನಾಡಿನ ಬಸ್, ರೈಲು,ವಿಮಾನ ನಿಲ್ದಾಣದಲ್ಲಿ ತುಳು ತಿನಸ್
ಮಂಗಳೂರು: ತುಳು ಸಾಹಿತ್ಯ ಅಕಾಡೆಮಿಯು ಬೆಳ್ಳಿ ಹಬ್ಬದ ಅಂಗವಾಗಿ ಕರಾವಳಿಯ ಪ್ರಮುಖ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ತುಳುನಾಡಿನ ತಿಂಡಿ ತಿನಸುಗಳನ್ನು ಪರಿಚಯ ಮಾಡುವ ಯೋಜನೆಯೊಂದನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಅನ್ಯ ರಾಜ್ಯ ಮತ್ತು ವಿದೇಶಗಳಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಗೆ ಈ ನೆಲದ ಭಾಷೆ, ಸಂಸ್ಕೃತಿ, ತಿಂಡಿ-ತಿನಿಸು ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ವಿದೇಶಗಳಿಗೆ ನಾವು ಹೋದಾಗ ಅಲ್ಲಿನವರು ಅವರ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ಅದೇ ರೀತಿ ನಮ್ಮಲ್ಲಿಗೆ ಬರುವ ವಿದೇಶಿಗರಿಗೆ ತುಳು ನಾಡಿನ ಸಂಸ್ಕೃತಿಯ ಪರಿಚಯ ವಾಗಬೇಕು ಎಂಬ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ತುಳುನಾಡಿನ ಮಳಿಗೆಗಳಲ್ಲಿ ತುಳುನಾಡ ಮುಟ್ಟಾಳೆ, ಕಂಬಳದ ಬೆತ್ತ, ಗೆರಟೆ ಸಹಿತ ಕರಕುಶಲ ವಸ್ತುಗಳು ಅಲ್ಲದೆ ತುಳುನಾಡಿನ ಅಧ್ಯಯನದ ಪುಸ್ತಕ ಗಳೂ ಇರಲಿವೆ. ತುಳು ಲಿಪಿಯನ್ನು ಪರಿಚಯಿಸುವ ಉದ್ದೇಶದಿಂದ ಮರದ ಕೀ-ಬಂಚ್ನಲ್ಲಿ ತುಳು ಲಿಪಿಯಲ್ಲಿ ಹೆಸರು ಬರೆದುಕೊಡುವ ಸೌಲಭ್ಯವೂ ಇರುತ್ತದೆ.
ನೀರುದೋಸೆ, ಬನ್ಸ್, ಪತ್ರೊಡೆ, ಗೋಳಿಬಜೆ ಸಹಿತ ತುಳುನಾಡಿನ ಪ್ರಸಿದ್ಧ ತಿನಿಸುಗಳನ್ನು ಬಸ್, ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಹೊಟೇಲ್ಗಳಲ್ಲಿ ಸಿಗುವಂತೆ ಮಾಡಲು ಚಿಂತನೆ ನಡೆಯುತ್ತಿದೆ.
ಮಣ್ಣಗುಡ್ಡೆಯ ಗುರ್ಜಿಗೆ 150ರ ಸಂಭ್ರಮ
ಮಂಗಳೂರಿಗೆ ಬರುವ ಮಂದಿಗೆ ಗುರ್ಜಿಯ ವಿಚಾರ ಗೊತ್ತಿರಲು ಸಾಧ್ಯವಿಲ್ಲ. ಅಂದಹಾಗೆ ಮಂಗಳೂರಿನ ಮಂಗಳಾದೇವಿ, ಉರ್ವಸ್ಟೋರ್, ಉರ್ವ ಮಾರ್ಕೆಟ್, ಬಳ್ಳಾಲ್ ಬಾಗ್ ಹಾಗೂ ಮಣ್ಣಗುಡ್ಡೆ ಇಲ್ಲಿ ಪ್ರತಿ ವರ್ಷ ಗುರ್ಜಿ ಸಂಭ್ರಮ ನಡೆಯುತ್ತದೆ. ವಿಶೇಷವಾಗಿ ಮಣ್ಣಗುಡ್ಡೆ ಗುರ್ಜಿಗೆ 150 ವರ್ಷ ತುಂಬಿದೆ.
ಇದರ ವಿಶೇಷತೆ ಏನೂ ಅಂದರೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ರೋಚಕವಾದುದು. ಭಕ್ತಿಗೆ ದೇವರು ಒಲಿಯುತ್ತಾನೆ ಎನ್ನುವುದಕ್ಕೆ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ಸಾಕ್ಷಿ. ಏನಿದು ಇತಿಹಾಸ ಮುಂದೆ ಓದಿ…
ಗುರ್ಜಿ ಅಂದ್ರೆ ಚಲಿಸದ ರಥ ಎಂದರ್ಥ. ರಥದಂತೆ ಶೃಂಗರಿಸಿದ ತಾತ್ಕಾಲಿಕ ದೇವರ ಕಟ್ಟೆ ಇದು. ಮಣ್ಣಗುಡ್ಡೆ ಗುರ್ಜಿ ಆರಂಭಿಸಿದವರು ಕೋಟೇಶ್ವರ ಬ್ರಾಹ್ಮಣ ಮನೆತನದ ಹಿರಿಯ ವಾದಿರಾಜರು. ಕುಲೋದ್ಧಾರಕ ಇಲ್ಲದ ಚಿಂತೆಯಿಂದ ಶರವು ಮಹಾಗಣಪತಿಯನು ಪ್ರಾರ್ಥಿಸಿ ಪುತ್ರ ಸಂತಾನ ಕರುಣಿಸಿದರೆ ಪ್ರತಿ ವರ್ಷ ತಮ್ಮ ಮನೆಗೆ ಕರೆಸಿ ದೀಪಾರಾಧನೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು.
ಅದರಂತೆ ದೇವರು ಆಶೀರ್ವಾದ ಮಾಡಿದ್ದಾರೆ. 1870ನೇ ಇಸವಿಯಲ್ಲಿ ಇಷ್ಟಾರ್ಥ ಸಿದ್ದಿ ನೆರವೇರಿಸಿದ ಶ್ರೀ ಶರವು ಮಹಾಗಣತಿಗೆ ಕದ್ರಿ ಕಂಬ್ಳದಲ್ಲಿದ್ದ ಮನೆಯಲ್ಲಿ ಉತ್ಸವ ಆರಂಭಿಸಿದರು. ಕ್ರಮೇಣ ಮಂಗಳೂರಿನ ಪ್ರಮುಖ ಧಾರ್ಮಿಕ ದೀಪಾರಾಧನೆ ಉತ್ಸವವಾಯಿತು. ಈ ಬಾರಿ 2019ನೇ ನವೆಂಬರ್ 24ರಂದು ಮಣ್ಣಗುಡ್ಡೆ ಗುರ್ಜಿ 150ನೇ ವರ್ಷವನ್ನು ಆಚರಿಸುತ್ತಿದೆ.