Author: Team Kudla City

ಕುಡ್ಲದ ಹುಡುಗಿ ನಮ ಜಿಗ್ಗ ಫಿಯೇಟ್ !

ಕುಡ್ಲ ಸಿಟಿಯ ಹುಡುಗಿ ಮಿಹಿಕಾ ಪ್ರಿಮಿಯರ್ ಪದ್ಮಿನಿ ಫಿಯೇಟ್ ವನ್ನು ಜಿಗ್ಗ ಮಾಡಿದ್ದಾರೆ. ತುಳುವಿನ ನಮ ಜಿಗ ಎಂದರೆ ತುಂಬಾನೇ ಫೋಶ್ ಎನ್ನುವ ಅರ್ಥ.

ಹೌದು. ಮಿಹಿಕಾ ಬೇಸಿಕಲಿ ಕುಡ್ಲದ ಗೋರಿ ಗುಡ್ಡೆ ಯ ಹುಡುಗಿ ನಗರದ ಮಹಾಲಸಾದಲ್ಲಿ ವಿಶುವಲ್ ಆರ್ಟ್ ನಲ್ಲಿ ಕಲಿತು ಈಗ ಮಾಸ್ಟರ್ ಆಫ್ ವೇದಿಕ್ ಸೈನ್ಸ್ ಪದವಿಯನ್ನು ಗುಜರಾತ್ ನ ಮಹರ್ಷಿ ವೇದವ್ಯಾಸ್ ವಿವಿಯಿಂದ ಕಲಿಯುತ್ತಿದ್ದಾರೆ.

ಅಂದಹಾಗೆ ನಮ ಜಿಗ್ಗ ಎನ್ನುವುದು ಫಿಯೇಟ್ ಕಾರಿಗೆ ಮಿಹಿಕಾ ನೀಡಿದ ಹೆಸರು ಮಿಹಿಕಾ ಅಣ್ಣನಿಗೆ ಅವರ ಅಂಕಲ್ ಉಡುಗೊರೆಯಾಗಿ ಬಹಳ ವರ್ಷಗಳ ಹಿಂದೆ ನೀಡಿದ್ದರು.

ಈ ಬಳಿಕ ಅಣ್ಣ ಮದುವೆಯಾದ ಬಳಿಕ ಈ ಕಾರು ಮನೆಯ ಮೂಲೆ ಸೇರಿತು ಎಲ್ಲರೂ ಅದನ್ನು ಗುಜರಿಗೆ ಮಾರಾಟ ಮಾಡಲು ನಿರ್ಧಾರ ಮಾಡಿದರು. ಆದರೆ ಮಿಹಿಕಾಳಿಗೆ ಇದು ಇಷ್ಟ ಇರಲಿಲ್ಲ. ಅಣ್ಣನ ಪ್ರೀತಿಯ ಕಾರು ಮನೆಯಲ್ಲೇ ಇರಲಿ ಎಂದುಕೊಂಡು ತಾನೇ ತುಳುನಾಡಿನ ಯಕ್ಷಗಾನ, ಪಿಲಿವೇಶ,ಮೀನುಗಾರಿಕೆ, ತೆಂಗಿನ ಮರ ಹೀಗೆ ಹತ್ತಾರು ವಿಚಾರಗಳನ್ನು ಚಿತ್ರಿಸುವ ಮೂಲಕ ಹಳೆಯ ಫಿಯೇಟ್ ವನ್ನು ನಮ ಜಿಗ್ಗ ಆಗಿ ಬದಲಾಯಿಸಿದ್ದಾರೆ.

ಅಂದಹಾಗೆ ಮಿಹಿಕಾ ಎಂದರೆ ಅಸ್ಸಾಮೀ ಹೆಸರು. ಇದರ ಅರ್ಥ ಮುಂಜಾನೆಯ ಇಬ್ಬನಿಯಲ್ಲಿರುವ ನೀರಿನ ಬಿಂದುವಂತೆ ಮಿಹಿಕಾ ಅಜ್ಜಿ ಅದನ್ನು ಇಟ್ಟದ್ದು ಮಿಹಿಕಾ ಹೆಸರು ಮಾತ್ರ ಅಸ್ಸಾಮೀ ಆದರೆ ಮಿಹಿಕಾ ಪಕ್ಕ ತುಳುನಾಡಿನ ಪೊಣ್ಣು.

ಮಳೆಯ ಭಯಕ್ಕೆ ಮಂಗಳ ಸ್ಟೇಡಿಯಂ ಗೆ ಟರ್ಪಲ್ ಹೊದಿಕೆ

ಕುಡ್ಲದ ಅದರಲ್ಲೂ ಜಿಲ್ಲೆಯ ಪ್ರತಿಷ್ಟಿತ ಮಂಗಳ ಸ್ಟೇಡಿಯಂ ನ ಛಾವಣಿಗೆ ಭದ್ರತೆ ಯ ದೃಷ್ಟಿಯಿಂದ ಟರ್ಪಲ್ ಹೊದಿಕೆಯನ್ನು ಹಾಕಲಾಗಿದೆ. ಈಗಾಗಲೇ ಮೇಲ್ಚಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡ ಪರಿಣಾಮ ಇಂತಹ ಕಾರ್ಯಕ್ಕೆ ಕ್ರೀಡಾ ಇಲಾಖೆ ಮುಂದಾಗಿದೆ.

ಪಿಜಿ, ಹೋಮ್‌ಸ್ಟೇಗೆ ಸರಕಾರದ ಹೊಸ ರೂಲ್ಸ್ !

ರಾಜ್ಯದ ನಗರ ಪ್ರದೇಶದಲ್ಲಿರುವ ಪೇಯಿಂಗ್ ಗೆಸ್ಟ್(ಪಿಜಿ) ಮತ್ತು ಹೋಮ್ ಸ್ಟೇಗಳಿಗೆ ಏಕರೂಪದ ಹೊಸ ಪಾಲಿಸಿಯನ್ನು ತರುವ ಕುರಿತು ಈಗಾಗಲೇ ಕರಡು ಸಿದ್ಧವಾಗಿದೆ. ರಾಜ್ಯ ಸರಕಾರ ಅದನ್ನು ಶೀಘ್ರದಲ್ಲಿಯೇ ಜಾರಿಗೆ ತರುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರ ಪ್ರದೇಶದಲ್ಲಿ ಸಾಕಷ್ಟು ಪಿಜಿಗಳು ನಡೆಯುತ್ತಿದೆ. ಆದರೆ ಅದಕ್ಕೆ ಯಾವುದೇ ರೀತಿಯ ನೀತಿ-ನಿಯಮಗಳು ಇಲ್ಲ. ಭದ್ರತೆ ವಿಚಾರದಲ್ಲೂ ಅಷ್ಟೇ ಈ ಕಾರಣದಿಂದ ಪಿಜಿ ಹಾಗೂ ಹೋಮ್ ಸ್ಟೇಗೆ ಸೂಕ್ತವಾದ ನೀತಿ- ನಿಯಮಗಳನ್ನು ತರುವ ಕುರಿತು ಪಾಲಿಸಿ ಮಾಡಲಾಗುತ್ತದೆ. ಈ ಮೂಲಕ ಅಲ್ಲಿನವರಿಗೆ ಭದ್ರತೆ, ಕನಿಷ್ಟ ಮೂಲಭೂತ ಸವಲತ್ತು ನೀಡುವ ಕುರಿತು ಅದರಲ್ಲಿ ಉಲ್ಲೇಖವಾಗುತ್ತದೆ.

ನಗರದ ಪ್ರದೇಶ ವ್ಯಾಪ್ತಿಯಲ್ಲಿ ಮಾದರಿ ಪಾಲಿಸಿಯನ್ನು ತರುವ ಮೂಲಕ ಭದ್ರತೆ, ಸ್ಥಳೀಯ ಸಂಸ್ಥೆಗಳಿಗೆ ಅದರ ಮಾಹಿತಿ, ಎಷ್ಟು ಪಿಜಿಗಳಿವೆ, ಮಹಿಳಾ ಪಿಜಿಗಳಿಗೆ ಇರುವ ಭದ್ರತೆ, ರೋಡ್ ಸೈಡ್‌ನಿಂದ ಎಷ್ಟು ಒಳಭಾಗದಲ್ಲಿದೆ. ಯಾವ ಪ್ರದೇಶದಲ್ಲಿ ಪಿಜಿಗಳು ಇರಕೂಡದು, ಆರೋಗ್ಯ ವಿಚಾರ, ಪಿಜಿ ಮಾಡುವವರಿಗೆ ಇತರರ ನೀಡುವ ಕಿರುಕುಳಕ್ಕೆ ಕ್ರಮ ಹೀಗೆ ಹತ್ತಾರು ವಿಚಾರಗಳು ಇದರಲ್ಲಿ ಅಡಕವಾಗಿರುತ್ತದೆ.

13 ವರ್ಷ ಭರ್ತಿ 1 ಲಕ್ಷ ಗಿಡ ನೆಟ್ಟ ಜೀತ್ !

ಒಂದಲ್ಲ ಎರಡಲ್ಲ ಭರ್ತಿ 13 ವರ್ಷದಲ್ಲಿ ಜೀತ್ ಮಿಲಾನ್ ರೋಚ್ ನೆಟ್ಟ ಗಿಡಗಳ ಸಂಖ್ಯೆ ಭರ್ತಿ 1 ಲಕ್ಷಕ್ಕೂ ಮಿಕ್ಕಿದೆ. ಇದೆಲ್ಲವೂ ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ನೆಟ್ಟ ಗಿಡಗಳು.

ಮುಖ್ಯವಾಗಿ ರಸ್ತೆ ಬದಿ, ಸಶ್ಮಾನ ಹೀಗೆ ಮಂಗಳೂರಿನಲ್ಲಿ ಎಲ್ಲಿ ಖಾಲಿ ಜಾಗವಿದೆಯೋ ಅಲ್ಲಿ ಅವರು ಗಿಡ ನೆಡುವ ಕೆಲಸ ಮಾಡುತ್ತಾರೆ.

ಎಲ್ಲರಿಗೂ ಇತರ ವೃತ್ತಿ ಯ ನಡುವೆ ಗಿಡ ನೆಡುವ ಹವ್ಯಾಸ ಇದ್ದರೆ ಇವರಿಗೆ ಇದೇ ಫುಲ್ ಟೈಮ್ ಕಾಯಕ. ಪರಿಸರ ದಿನದ ಅಂಗವಾಗಿ ಕುಡ್ಲ ಸಿಟಿ ಯ ಹೆಮ್ಮೆಯ ಇಂತಹ ಕತೆಗಳನ್ನು ನಿಮ್ಮ ಮುಂದೆ ಇಡುತ್ತಿದೆ.

ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರ ಸ್ನೇಹಿ

ಕಾವೂರಿನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷ ಎಂದರೆ ಅಲ್ಲಿ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಬದಲಾಗಿ ಇಡೀ ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರದ ಕುರಿತು ಕಾಳಜಿಯನ್ನು ಇಟ್ಟುಕೊಂಡಿದೆ. ಮರ, ಗಿಡಗಳ ಜತೆಗೆ ಪರಿಸರ ಪೂರಕ ವಾತಾವರಣ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗಿದೆ.

ವಿಶೇಷವಾಗಿ ಬಿಜಿಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳುವಂತೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಗಿಡ- ಮರ ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮನೆಯಂಗಳದಿಂದ ಪ್ರಾರಂಭವಾಗಬೇಕು. ಪ್ರಕೃತಿಯು ದೇವರಿಗೆ ಸಮಾನ, ಇದನ್ನು ಕಾಪಾಡಿದರೆ ದೇವರ ಅನುಗ್ರಹ ಲಭಿಸುತ್ತದೆ. ಹೇಗೆ ಮರ, ನದಿ, ಪ್ರಾಣಿ ಪಕ್ಷಿಗಳು ಪರರಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ತವೆಯೋ ಹಾಗೆ ಮನುಷ್ಯನಾಗಿ ಹುಟ್ಟಿದ ಮೇಲೆ ಸ್ವಾರ್ಥವನ್ನು ಬಿಟ್ಟು ಮರಗಿಡಗಳನ್ನು ಬೆಳೆಸಬೇಕು.

ಜಗತ್ತಿನಾದ್ಯಂತ ಪರಿಸರ ಮಲೀನವಾಗುತ್ತಿದೆ. ಇದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಕ್ಕಳ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನೆಟ್ಟು ಬೆಳಸಬೇಕು ಎನ್ನುವುದು ಅವರ ಮಾತು. ವಿಶೇಷವಾಗಿ ಪರಿಸರದ ದಿನಾಚರಣೆಯ ಅಂಗವಾಗಿ ಈಗಾಗಲೇ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪರಿಸರ ಜಾಗೃತಿ, ಮಾಹಿತಿ ನೀಡುವ ಕಾರ‍್ಯ ಸಾಗುತ್ತಿದೆ.