ಒಂದು ಸಮಯದಲ್ಲಿ ದುರ್ಗಾಮಾತೆ ಸೂರ್ಯನ ಒಳಗೆ ವಾಸಿಸಲು ಆರಂಭಿಸುತ್ತಾಳೆ. ಆಗ ಸೂರ್ಯನಿಂದ ವಿಶ್ವಕ್ಕೆ ಶಕ್ತಿ ಬಿಡುಗಡೆಯಾಗುತ್ತದೆ. ಸೊರ್ಯನೊಳಗೆ ನೆಲೆಸುವಷ್ಟು ಪ್ರಖರವಾದ ದೇವತೆಯಾಕೆ. ಎಂಟು ಕೈಗಳಿರುವ, ಸಿಂಹದ ಮೇಲೆ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ. ಕೂಷ್ಮಾಂಡಾ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ಕಾನ್ಪುರ ನಗರದ ಜಿಲ್ಲೆಯ ಘಟಾಂಪುರದಲ್ಲಿದೆ.
Author: Team Kudla City
ಮಂಗಳೂರು ಹಿಂದಿನ ಶಕ್ತಿ ಮಂಗಳಾದೇವಿ
ಮಂಗಳೂರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಾಲಯವಿದೆ. ಈ ದೇವಾಲಯ ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ.
ಅಂದರೆ ಮಂಗಳೂರು ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ದೇವಾಲಯ ೯ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದಾಗಿದೆ. ತಮಿಳುನಾಡನ್ನು ಆಳುತ್ತಿದ್ದ ಅರಸ ಕುಂದವರ್ಮ ಈ ದೇವಾಲಯವನ್ನು ನಿರ್ಮಿಸಿದ. ದೇವಿ ಮಂಗಳಾದೇವಿ ದೇವಾಲಯದ ಪ್ರಮುಖ ದೇವತೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ.
ನವರಾತ್ರಿ ಉತ್ಸವದ ಒಂಬತ್ತನೇ ದಿನ ಬೃಹತ್ ರಥೋತ್ಸವ ಇಲ್ಲಿ ನಡೆಯುತ್ತದೆ. ದೊಡ್ಡ ಮೆರವಣಿಗೆ ಈ ಸಂದರ್ಭದಲ್ಲಿ ನಡೆಯುತ್ತದೆ. ಬೃಹತ್ ಮೆರವಣಿಗೆಯಲ್ಲಿ ದೇವಿಯನ್ನು ಹೊತ್ತು ಸಾಗುವ ದೃಶ್ಯ ಮನಮೋಹಕವಾಗಿರುತ್ತದೆ. ಉತ್ತಮ ಕಾಲಕ್ಕಾಗಿ ಈ ಸಂದರ್ಭದಲ್ಲಿ ದೇವಿಯನ್ನು ಪ್ರಾರ್ಥಿಸಲಾಗುತ್ತದೆ.
#kudla #Kudlacity #mangalore #navarathri #mangaladevi #kollur #srimokambike #tulunadu #tuluver
ನವದೇವತೆ 1- ಶೈಲಪುತ್ರಿ
ಶೈಲಪುತ್ರಿ ಎಂದರೆ ಪರ್ವತನ ಪುತ್ರಿ ಪಾರ್ವತಿ. ಪರ್ವತರಾಜನ ಮಗಳಾದ ಈಕೆಗೆ ಸತಿ,ಭವಾನಿ, ಹೇಮಾವತಿ ಎಂದು ಹೆಸರಿದೆ. ಇವರು ಪ್ರಕೃತಿಯ ಮಗಳು. ಎರಡು ಹಸ್ತಗಳನ್ನು ಹೊಂದಿರುವ ಈಕೆಗೆ ಒಂದು ಕೈಲಿ ತ್ರಿಶೂಲವನ್ನು, ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದುಕೊಂಡಿದ್ದಾರೆ. ನಂದಿ ಆಕೆಯ ವಾಹನ.
ಹಣೆಯಲ್ಲಿ ಚಂದ್ರನಿದ್ದಾನೆ. ಶೈಲಪುತ್ರಿಯ ಪ್ರಸಿದ್ಧ ದೇವಸ್ಥಾನ ವಾರಣಾಸಿಯ ಮರ್ಹಿಯಾ ಘಾಟ್ನಲ್ಲಿರುವ ಮಾ ಶೈಲಪುತ್ರಿ ದೇವಸ್ಥಾನ ಹಾಗೂ ಮುಂಬಯಿಯ ವಾಶಿಯಲ್ಲಿರುವ ಹೆಡ್ಡಾವೆ ಮಹಾಲಕ್ಷ್ಮಿ ದೇವಸ್ಥಾನ.
ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.
ಕುಡ್ಲ ದಸರಾಕ್ಕೆ ಬಣ್ಣ ಕಳೆದಕೊಂಡ ನೇಮ್ ಪ್ಲೇಟ್
ಕುಡ್ಲದ ದಸರಾಕ್ಕೆ ನಗರವೆಲ್ಲವೂ ಶೃಂಗಾರಗೊಂಡು ಪ್ರವಾಸಿಗರಿಗಾಗಿ ಕಾಯುತ್ತಿದೆ. ಆದರೆ ಈ ಪ್ರವಾಸಿಗರು ಕುಡ್ಲದ ಪ್ರವಾಸಿ ತಾಣಕ್ಕೆ ಭೇಟಿ ನೀಡಿದರೆ ಅದರ ಪೂರ್ಣ ಮಾಹಿತಿ ನೀಡಬೇಕಾದ ಕೆಲವೊಂದು ಮಾಹಿತಿ ಫಲಕದ ಬರಹವೇ ನಾಪತ್ತೆಯಾಗಿದೆ. ಒಂದೆಡೆ ಕುಡ್ಲಕ್ಕೆ ಟೂರಿಸ್ಟ್ ಗೈಡ್ಗಳಿಲ್ಲ ಮತ್ತೊಂದೆಡೆ ಮಾಹಿತಿ ನೀಡುವ ಫಲಕದ ಬರಹವೇ ಮಾಯವಾಗಿದೆ.
ಹೌದು. ಮಂಗಳೂರು ನಗರದ 38 ಕಡೆಗಳಲ್ಲಿ ಪ್ರವಾಸಿಗಳ ತಾಣಗಳ ಮಾಹಿತಿ ನೀಡುವ ಫಲಕಗಳನ್ನು ಹಾಕಲಾಗಿತ್ತು. ಇನ್ನು ಆರು ಕಡೆಯಲ್ಲಿ ಇನ್ನು ಆಳವಡಿಕೆ ಮಾಡುವ ಕೆಲಸ ಬಾಕಿಯಿದೆ. ಒಟ್ಟು 100 ಕಡೆಯಲ್ಲಿ ಫಲಕದಲ್ಲಿ ಮಾಹಿತಿ ಹಾಕುವ ಯೋಜನೆನೂ ಇದೆ. ಒಂದೊಂದು ಫಲಕಗಳಿಗೆ ಸರಿಸುಮಾರು 13 ಸಾವಿರ ರೂ. ಖರ್ಚು ಮಾಡಲಾಗಿದೆ.
ಈಗಾಗಲೇ ಇಷ್ಟು ಫಲಕಗಳಿಗೆ 6,40,250 ರೂ. ದ.ಕ.ನಿರ್ಮಿತಿ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ವಿಶೇಷವಾಗಿ ಇಷ್ಟೊಂದು ಖರ್ಚು ಮಾಡಿದ್ರು ಕೂಡ ನಗರದ ಕೆಲವೊಂದು ಪ್ರವಾಸಿ ಫಲಕಗಳಲ್ಲಿ ಮಾಹಿತಿ ಬರಹವೇ ಕಣ್ಮರೆಯಾಗಿದೆ ಎನ್ನುವುದು ಬೇಸರದ ವಿಚಾರ.
tgas: kudla, tourism, ctravi,kudlacity,lifecity,mangalorecity, tourism dept, vedavyaskamat,mla,mangalore south
ರಸ್ತೆ ಸರಿಪಡಿಸಲು ಮೂನ್ವಾಕ್ ಮಾಡಿದಳು ಕುಡ್ಲದ ಹುಡುಗಿ
ಮಂಗಳೂರು: ಬೆಂಗಳೂರಿನಲ್ಲಿ ಬಾದಲ್ ನಂಜುಂಡಸ್ವಾಮಿ ಎಂಬ ಕಲಾವಿದ ಗಗನ ಯಾತ್ರಿಯಂತೆ ವೇಷಧರಿಸಿ ಹೊಂಡದಿಂದ ಕೂಡಿದ ರಸ್ತೆಯಲ್ಲಿ ಮೂನ್ ವಾಕ್ ಮಾಡಿದಂತೆ ಮಂಗಳೂರಿನಲ್ಲೂ 6 ತರಗತಿ ವಿದ್ಯಾರ್ಥಿನಿಯೊಬ್ಬಳು ಮೂನ್ವಾಕ್ ಮಾಡಿ ಪಾಲಿಕೆ ಗಮನ ಸೆಳೆಯಲು ಪ್ರಯತ್ನಿಸಿದ್ದಾಳೆ.
ನಗರದಲ್ಲಿ ಪ್ರಸಿದ್ಧಿ ಪಡೆದ ಎಂಸಿಸಿ ಸಿವಿಕ್ ಗ್ರೂಪ್ ಮಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಹಲವು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿತ್ತು. ಆದರೆ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರೂಪ್ನ ಪ್ರಮುಖರಾದ ಅರ್ಜುನ್ ಮಸ್ಕರೇನ್ಹಸ್ ಹಾಗೂ ಅಜೊಯ್ ಡಿಸಿಲ್ವ ಅವರು ಮೂನ್ವಾಕ್ ಪ್ರತಿಭಟನೆಗೆ ನಿರ್ಧರಿಸಿದ್ದರು.
ಅದರಂದತೆ ಸೆ. 20 ರಂದು ರಂದು ರಾತ್ರಿ 10 ಗಂಟೆ ವೇಳೆಗೆ 6 ನೇ ತರಗತಿ ವಿದ್ಯಾರ್ಥಿನಿ ಆಡ್ಲಿನ್ ಡಿಸಿಲ್ವ ಅವರು ಬಾಹ್ಯಾಕಾಶದಲ್ಲಿ ನಡೆಯುವಾಗ ಧರಿಸುವ ಬಟ್ಟೆ ಹಾಗೂ ಇತರ ಪರಿಕರಗಳನ್ನು ಧರಿಸಿ, ಮಂಗಳೂರು ಸೆಂಟ್ರಲ್ ಮಾರ್ಕೆಟ್ ಮುಂದಿನ ಹೊಂಡ ಗುಂಡಿಯಿಂದ ಕೂಡಿದ ರಸ್ತೆಯಲ್ಲಿ ಚಂದ್ರನ ಮೇಲೆ ನಡೆದಂತೆ ನಡೆದು ಅದರನ್ನು ವಿಡಿಯೋ ಚಿತ್ರೀಕರಣ ನಡೆಸಿದ್ದರು. ಬಳಿಕ 33 ಸೆಕೆಂಡ್ನ ವಿಡಿಯೋವನ್ನು ವಾಟ್ಸಾಪ್-ಫೇಸ್ಬುಕ್ನಲ್ಲಿ ವೈರಲ್ ಮಾಡಿ ಪಾಲಿಕೆಯ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.